Posts

Showing posts from May, 2018

ಯತಿ ಸ್ವಂತೀ -151

31-05-2018 ಮೈಸೂರಿನ ಎರಡು ವಿಶೇಷಗಳು ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದವು. ಒಂದು ವಿಜಯದಶಮಿಯಂದು ಮಹಾರಾಜರ ಜಂಬೂ ಸವಾರಿ. ಇನ್ನೊಂದು ದಸರಾ ವಸ್ತು ಪ್ರದರ್ಶನ. ದಸರಾ ವಸ್ತು ಪ್ರದರ್ಶನ ರೈಲು ನಿಲ್ದಾಣ ದಾಟಿ ಎಡಗಡೆ ತಿರುಗಿ ರೈಲ್ವೇ ಆಫೀಸಸ್ ದಾಟಿದರೆ ಬೆಂಗಳೂರಿಗೆ ಹೋಗುವ ರಸ್ತೆ ದಾಟಿದರೆ ಇದ್ದ ಕಟ್ಟಡವೇ ಆಗ ದಸರಾ ವಸ್ತು ಪ್ರದರ್ಶನ ನಡೆಯುತ್ತಿದ್ದ ಕಟ್ಟಡ.  ಎರಡು ಭಾಗವಿದ್ದ ಟಿಕೆಟ್. ಎರಡನೇ ಭಾಗದ ಟಿಕೆಟ್ ಜೀವಣ್ಣ ರಾಯನ ಕಟ್ಟೆಯಲ್ಲಿ ಕೆಲವು ಅಂಗಡಿಗಳು, ಸಾಹಸಿಗಳು, ವಿಶೇಷಗಳು ಇರುತ್ತಿದ್ದವು.  ಮುಖ್ಯ ಕಟ್ಟಡದ ವೇದಿಕೆಯ ಮೇಲೆ ಶಾಂತಿ ನಿವಾಸ ನಾಟಕ ನೋಡಿದ್ದೆ. ಅಶ್ವತ್ಥ್ ಪಂಢರೀಬಾಯಿ ಗಂಡ ಹೆಂಡತಿ. ಪಂಢರೀಬಾಯಿ ಅತ್ತೆ ರಮಾದೇವಿ. ಈಕೆ ಸಿನಿಮಾಗಳಲ್ಲಿ ಪರ್ಮನೆಂಟ್ ದುಷ್ಟ ಅತ್ತೆ. ಅಶ್ವತ್ಥ್ ತಂಗಿ ಬಿ. ಜಯಾ. ಈ ಅತ್ತೆ ನಾದಿನಿ ಸೇರಿ ಪಂಢರೀಬಾಯಿಯನ್ನು ಗೋಳು ಹುಯ್ದುಕೊಳ್ಳುತ್ತಾರೆ.  ಮತ್ತೊಂದು ನಾಟಕ ಕಿತ್ತೂರು ಚೆನ್ನಮ್ಮ. ಅವಳ ರಾಜ್ಯಕ್ಕೆ ದ್ರೋಹ ಬಗೆಯುವ ಕಿತ್ತೂರ ಜನರಿಗೆ ಬ್ರಿಟಿಷ್ ಅಧಿಕಾರಿಗಳು ವಿಚಿತ್ರ ಆಕ್ಸೆಂಟ್‌ನಲ್ಲಿ 'ನಮಗೆ ಕಿತ್ತೂರು ಕೊಡಿಸಿ. ನಿಮಗೆ ನಾವು ಬಹುನಾಮಗಳನ್ನು ಕೊಡುತ್ತೇವೆ' ಎಂದ ಡಯಲಾಗ್ ಈವತ್ತಿಗೂ ಮರೆತಿಲ್ಲ.  ಜೀವಣ್ಣ ರಾಯನ ಕಟ್ಟೆಯಲ್ಲಿ ಸಾವಿನ ಬಾವಿ ಇರುತ್ತಿತ್ತು. ಒಂದು ಸಿಲಿಂಡರ್ ಆಕಾರದ ಹದಿನೈದು ಅಡಿ ಆಳ ಮತ್ತು ಹತ್ತಡಿ ವ್ಯಾಸದ ಬಾವಿ. ಅದರ ಒಳ ಮೇಲ್ಮೈ ಮೇಲೆ ಝುಂಯ...

ಯತಿ ಸ್ವಂತೀ -150

30-05-2018 ತಾರೆಯರ ನೋಟ ನಮ್ಮ ಮೈಸೂರು ರೈಲ್ವೆ ಲೋಕೋ ಕಾಲೋನಿ ಮನೆಯ ಬಳಿ ನಡುರಾತ್ರಿ ಇದ್ದಕ್ಕಿದ್ದಂತೆ ಅನೇಕಾನೇಕ ವಾಹನಗಳು ಬಂದವು.  ನಮ್ಮ ಮನೆಯ ಬಳಿ ರೈಲು ಕಂಬಿಗಳ ಆಚೆ ಈಚೆ ಮುರಿದು ಬಿದ್ದಿದ್ದ ರೈಲಿನ ಬೋಗಿಗಳನ್ನು ಬಳಸಿಕೊಂಡರು ಅಲ್ಲಿಗೆ ವಾಹನಗಳಲ್ಲಿ ಬಂದಿದ್ದ ಸಿನಿಮಾದವರು.  ಕಲಾ ನಿರ್ದೇಶಕರ ಸುಫರ್ದಿಯಲ್ಲಿ ಒಡೆದು ಬಿದ್ದಿದ್ದ ಬೋಗಿಗಳಲ್ಲಿ ಅಲ್ಲಲ್ಲೇ ಜನರನ್ನು ಸತ್ತಂತೆ ಮಲಗಿಸಿ, ಕೆಂಪು ಪೆಯಿಂಟ್ ಸುರಿಸಿ, ಬ್ರೂಟ್ (ಬ್ರೂಟಸ್?) ಎನ್ನುವ ಪ್ರಖರ ದೀಪ ಹಾಕಿ ಶೂಟಿಂಗ್. ಮುಖ್ಯ ನಟರು ಪ್ರಣಯರಾಜ ಶ್ರೀನಾಥ್ ಮತ್ತು ತಮಿಳು ನಟ ವಿಜಯ್ ಕುಮಾರ್ ({ಈಗ ಇವರು ಚರಿತ್ರ ನಟ. ಸಿಂಗಂ ಚಿತ್ರಗಳಲ್ಲಿ ಗೃಹಮಂತ್ರಿ} ಇವರ ಪತ್ನಿ, ಹೆಣ್ಮಕ್ಕಳು ಮತ್ತು ಮಗ ಅರುಣ್ ವಿಜಯ್ ಎಲ್ಲರೂ ನಟರು) ಬಂದಿದ್ದರು. ಅಪಘಾತದ ದೃಶ್ಯ ಚಿತ್ರೀಕರಣ ನಡೆಸಿದರು. ದ್ವಿಭಾಷಾ ಚಿತ್ರಗಳಾದ ನಿರೀಕ್ಷೆ ಮತ್ತು ತೆನ್ನಂಕೀಟ್ರು. ಶ್ರೀನಾಥ್  ನೋಡುವುದೇ ಖುಷಿ ಆಗ ನಮಗೆ. ಬಹಳ ದಿನಗಳ ನಂತರ ನಮ್ಮ ಮನೆ ಬಳಿ ಶೂಟಿಂಗ್!  ಅಮ್ಮ ಹೇಳಿದ್ದರು. ಬಹಳ ಹಿಂದೆ ನಮ್ಮ ರೈಲ್ವೇ ಕ್ವಾರ್ಟರ್ಸ್ ಮನೆಯ ತಾರಸಿಯ ಮೇಲೆ ಧರ್ಮೇಂದ್ರ ಮೊದಮೊದಲು ನಟಿಸಿದ ಶೋಲಾ ಔರ್ ಶಬ್ನಂ ಶೂಟಿಂಗ್ ನಡೆದಿತ್ತಂತೆ. ವಿಲನ್ ನಾಯಕಿಯ ಬೆನ್ನಟ್ಟುವ ದೃಶ್ಯ.  ಇನ್ನೊಮ್ಮೆ ಕುಂಟು ಕಾಲು ಮಾಡಿಕೊಂಡಿದ್ದ ರಾಜಶೇಖರ ನಟಿಸಿದ 'ಅನಿರೀಕ್ಷಿತ' ಸಿನಿಮಾದ ದೃಶ್ಯ ರೈಲ್ವೆ ನಿಲ್ದಾಣದಲ್ಲಿ ನಡೆ...

ಯತಿ ಸ್ವಂತೀ -149

29-05-2018 ಅಜ್ಜಿ ಮನೆ... ನಮ್ಮ ತಾಯಿಯವರ ತಂದೆ ನಮ್ಮ ತಾಯಿಯವರ ತಾಯಿಗಿಂತ ಹೆಚ್ಚು ಕಾಲ ಬದುಕಿದ್ದರೂ ಅವರ ಮನೆ ಅಂದರೆ ನಮಗೆ ಅಜ್ಜಿ ಮನೆ.  ಒಂಟಿಕೊಪ್ಪಲ್ ಐದನೆಯ ಮುಖ್ಯ ರಸ್ತೆಯಲ್ಲಿತ್ತು ನಮ್ಮ ಅಜ್ಜಿ ಮನೆ. ದೊಡ್ಡ ಕಾಂಪೌಂಡ್. ಮಾವು ಹಲಸಿನ ಮರಗಳಿದ್ದವೆಂದು ನೆನಪು. ಸುತ್ತಲೂ ಜಾಗವಿತ್ತು. ಒಂದು ಕಡೆ ಹಸುಗಳನ್ನು ಸಾಕಿದ್ದರು. ಗಂಗಾ, ಯಮುನಾ, ಕಾವೇರಿ, ಗೋದಾವರಿ ಅನ್ನೋ ಹೆಸರಿನ ಹಸುಗಳು. ಹಸುಗಳು ಗಬ್ಬವಾಗಿ, ಅವು ಕರು ಹಾಕುವಾಗ ವೀಕ್ಷಿಸಿದ್ದೆವು. ಕರು ಹಸುವಿನಿಂದ ಹೊರಬಿದ್ದು ಏಳಲಾರದೇ ಎದ್ದು ಓಡಾಡಲು ನೋಡಿದ್ದು ಕಂಡು ಖುಷಿ ಪಟ್ಟಿದ್ದೆವು. ಗಿಣ್ಣು ಹಾಲು ಕುಡಿಯುವುದು, ಅದರಲ್ಲಿ ಮಾಡಿದ ಸಿಹಿ ತಿನ್ನುವುದು.. ಆಹಾ ಸಖತ್.  ಕೋಳಿಗಳನ್ನು ಕೂಡ ಸಾಕಿದ್ದರು ನನ್ನ ಸೋದರಮಾವ. ಅವುಗಳ ಮೊಟ್ಟೆಗಳನ್ನು ಇನ್ಕುಬೇಟರ್‌ನಲ್ಲಿಟ್ಟು ದಿನವೂ ಪರ್ಯಾಯವಾಗಿ ಶಾಖ ನೀಡಲಾಗುತ್ತಿತ್ತು. ಒಂದು ರಾತ್ರಿ ಚೀಂವ್ ಚೀಂವ್ ಸದ್ದು ಕೇಳಿ ಓಡಿ ಹೋಗಿ ನೋಡಿದರೆ ಪುಟ್ಟ ಪುಟ್ಟ ಕೋಳಿಮರಿಗಳು ಮೊಟ್ಟೆಗಳನ್ನು ಒಡೆದು ಹೊರಬಂದು ಒಂದರ ಮೇಲೊಂದು ಬಿದ್ದು ಓಡಾಡುತ್ತಿದ್ದವು! ಎಂತಹ ರಮಣೀಯ ದೃಶ್ಯ!  ಇವೆಲ್ಲವೂ ನನ್ನ ಚಿಕ್ಕಂದಿನ ನೆನಪಿನ ಸಂಪುಟದಲ್ಲಿ ಭದ್ರವಾಗಿ ಉಳಿದಿರುವ ಅಣಿಮುತ್ತುಗಳು.

ಯತಿ ಸ್ವಂತೀ -148

28-05-2018 ನಮ್ಮ ಅಜ್ಜಿಯ ಮನೆಯನ್ನು ಐದನೇ ಮುಖ್ಯರಸ್ತೆಯ ಆಖೈರು ಮನೆಗೆ ಬದಲಾಯಿಸಿದರು. ಪಾಪಾರಾಂ ಹೌಸ್ ಇದ್ದ ಗೋಕುಲಂ ರಸ್ತೆ ದಾಟಿದರೆ ಉದಯರವಿ. ರಾಷ್ಟ್ರಕವಿ ಕುವೆಂಪು ಅವರ ಮನೆ. ಅವರನ್ನು ಅನೇಕ ಸಲ ಅವರ ಮನೆಯ ಗೇಟಿನಲ್ಲಿ ಕಂಡಿದ್ದೇನೆ. ಕೆಲವೊಮ್ಮೆ ಗರಿಗರಿಯಾದ ಶ್ವೇತವಸ್ತ್ರಧಾರಿಯಾಗಿ ಗೋಕುಲಂ ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನು ಕಂಡಿದ್ದೇನೆ.  ಶರಪಂಜರದ ನಾಯಕ ಗಂಗಾಧರ್ ಮತ್ತು ಕೆ.ಎಸ್.ಅಶ್ವತ್ಧ್ ಅಭಿನಯದ 'ಬಾಂಧವ್ಯ' ಚಿತ್ರದ ಒಂದು ದೃಶ್ಯದ ಚಿತ್ರೀಕರಣ ಕಂಡಿದ್ದೇನೆ. ಅಶ್ವತ್ಥ್ ಒಂದು ಗಾಡಿಯನ್ನು ಅಪ್‍ನಲ್ಲಿ ಎಳಕೊಂಡು ಹೋಗುವಾಗ ಹಿಂದಿನಿಂದ ಗಂಗಾಧರ್ ಅದನ್ನು ತಳ್ಳುತ್ತಾರೆ. ಅಬ್ಬಬ್ಬಾ ಅದೇನು ಮೇಕಪ್ ಕೆಲವು ನಟರ ಮುಖಕ್ಕೆ! ಬೆಂಗಳೂರು ಸಂಪಿಗೆ ದೇವರ ಪೂಜೆಗೆ ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ ಕಮ್ಮಿ ಬೆಲೆ ಮಾರಿಗೆ ಕೊಳ್ಳೇ ಬನ್ನಿ ಇಲ್ಲಿಗೆ, ಎಲ್ಲಾದರೂ ಹೋಗು ಮರೆಯಾಗು ಮೊರೆಹೋಗು ನಿನ್ನನು ಬಿಡದು ಬಾಂಧವ್ಯ ಬಿಡದೋ ಮಮತೆಯ ಬಾಂಧವ್ಯ ಈ ಎರಡೂ ಹಾಡುಗಳು ಇವತ್ತಿಗೂ ಕೇಳುತ್ತಿರುತ್ತೀರಿ. ಇನ್ನೊಮ್ಮೆ ಕಲ್ಯಾಣಕುಮಾರ್, ವಂದನಾ ಮತ್ತು ಒಂದು ಬೈಕ್. 'ಮೈಸೂರು ಟಾಂಗ' ಚಿತ್ರದ ಚಿತ್ರೀಕರಣ ನೋಡಿದ್ದೇನೆ. ಹ್ಞಾಂ... ಅಜ್ಜಿಯ ಮನೆಗೂ ಉದಯರವಿಗೂ ನಡುವೆ ಹದಿನಾರು ಒಂದೇ ರೀತಿಯ ಮನೆಗಳನ್ನು ಕಟ್ಟಿದ್ದರು ಸರ್ಕಾರದವರು. ಇನ್ನೂ ಯಾರೂ ಅವಕ್ಕೆ ವಾಸಕ್ಕೆ ಬಂದಿರಲಿಲ್ಲ.  ನಮ್ಮ ಅಜ್ಜಿಯ ಮನೆ ಎತ್ತರದಲ್ಲಿ ...

ಯತಿ ಸ್ವಂತೀ -147

27-05-2018 ಸೋದರಮಾವನ ಸ್ಟಂಟ್!  ನನ್ನ ತಾಯಿಗೆ ಮೂವರು ತಮ್ಮಂದಿರು. ಮೂರನೆಯ ಮಾವ ಕೃಷ್ಣ ಕುಮಾರ್ ನನಗಿಂತ ಆರು ವರ್ಷ ದೊಡ್ಡವನು. ಮಹಾ ಚೇಷ್ಟೆ ಅವನದು. ಅವನನ್ನು ಕಣ್ಣ ಎಂದು ಕರೆಯುತ್ತಿದ್ದೆವು. ನನ್ನ ದೊಡ್ಡ ಸೋದರಮಾವನ ಮಗ ವಿನಯ್ ನನಗಿಂತ ನಾಲ್ಕು ವರ್ಷ ಚಿಕ್ಕವನು. ನಾನು ಲೋಕೋ ಕಾಲೋನಿ ಮನೆಯಿಂದ ಒಂಟಿಕೊಪ್ಪಲ್‌ಗೆ ಶಾಲೆಗೆ ಬರುತ್ತಿದ್ದೆ ಅಲ್ಲವಾ? ನಾನು ಓದುತ್ತಿರಲಿಲ್ಲ ಎಂಬುದು ನನ್ನ ತಾಯಿಯವರಿಗೆ ಚಿಂತೆ ಹತ್ತಿಸಿತ್ತು! ಅದಕ್ಕೇ ನನ್ನನ್ನು ಪ್ರತಿ ವರ್ಷ ಜನವರಿ ತಿಂಗಳಲ್ಲಿ ನನ್ನ ಅಜ್ಜಿ ಮನೆಗೆ ಕಳುಹಿಸುತ್ತಿದ್ದರು. ಅಲ್ಲಿ ಸೋದರಮಾವನ ಬಗ್ಗೆ ನನಗಿರುವ ಹೆದರಿಕೆಯಿಂದಲಾದರೂ ಓದಲಿ ಅನ್ನೋದು ಅವರ ಅಭಿಲಾಷೆ! ನನಗೆ ಅಲ್ಲಿ ಹೋಗುವುದಕ್ಕೆ ಬೇಸರ ಇರಲಿಲ್ಲ. ಶಾಲೆಗೆ ಹತ್ತಿರ. ಅಜ್ಜಿ ಮತ್ತು ಮಾಮಿ ಇಬ್ಬರ ಅಡುಗೆ ಉಣ್ಣುವ ಭಾಗ್ಯ! ಅಜ್ಜಿ ಮಾಡುತ್ತಿದ್ದ ರುಚಿ ರುಚಿ ಬಿಸ್ಕೆಟ್ ರೊಟ್ಟಿ ಬೇರೆ ಯಾರೂ ಮಾಡಿಕೊಟ್ಟಿಲ್ಲ! ಅವರದು ದೊಡ್ಡ ಮನೆ.  ಗೇಟಿನಿಂದ ಇಪ್ಪತ್ತು ಅಡಿ ನಡೆದರೆ ಬಾಗಿಲು. ವರಾಂಡಾ. ಅದರಲ್ಲಿ ಬಲಗಡೆಗೆ ದೊಡ್ಡ ಸೋದರಮಾವನ ರೂಂ. ಎಡಗಡೆ ಬೀರೂಗಳನ್ನಿಟ್ಟು ಅದರ ಆ ಬದಿಯಲ್ಲಿ ನನ್ನ ಅತಿ ಕಿರಿಯ ಸೋದರಮಾವನ ಮೇಕ್ ಶಿಫ್ಟ್ ರೂಂ. ನಂತರ ದೊಡ್ಡ ಹಾಲ್. ಬಲಗಡೆ ಅಜ್ಜಿ ತಾತನ ರೂಂ. ಎಡಗಡೆ ಉದ್ದಕ್ಕೂ ಹಲಗೆಗಳ 'ಗೋಡೆ' ಇಟ್ಟು ಆಚೆಬದಿಗೆ ಸ್ಕ್ರೀನ್ ರೂಂ. ಮತ್ತೆ ಒಂದು ಮೊಗಸಾಲೆ. ಅದರ ಬಲಗಡೆ ಊಟದ ದೊಡ್ಡ ಕೊಠಡಿ. ಅದರಿಂದ ಕೆ...

ಯತಿ ಸ್ವಂತೀ -146

26-05-2018 ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದವನು ರಮೇಶ್. ವನಿತ್ ಮತ್ತು ಅರುಣ್ ಮಹಾ ತುಂಟರು. ಒಮ್ಮೆ ನಮ್ಮ ಎಸ್ ಡಿ ಮಿಸ್ ತರಗತಿ ಇತ್ತು. ಪಾಠದ ನಡುವೆ ಅರುಣ್ ಇದ್ದಕ್ಕಿದ್ದಂತೆ 'ನಿನ್ನೆ ನಿಮ್ಮನ್ನು ಗಣೇಶ ಟಾಕೀಸ್‌ನಲ್ಲಿ ನೋಡ್ದೆ ಮಿಸ್' ಅಂದ. 'ಹೌದಪ್ಪ ಮೆಕೆನಾಸ್ ಗೋಲ್ಡ್ ನೋಡಕ್ಕೆ ಹೋಗಿದ್ದೆ' ಎಂದರು. ತುಂಟ ಅರುಣ್ ಬಹುಶಃ ಆಗ 14 ವರ್ಷದವನು. 'ಮಿಸ್ ಅಂಡರ್ ವಾಟರ್ ಸೀನ್ ಹೆಂಗಿತ್ತು ಮಿಸ್?' ಎಂದ. ಆಕಿ ಕೂಡ ಆಗ ಕುಮಾರಿ. ನಮಗಿಂತ ಕೆಲವು ವರ್ಷಗಳಿಂದ ದೊಡ್ಡವರಿದ್ದಾರು. ಮುಖ ಕೆಂಪಾಗಿ 'ಥೂ ಹೋಗಪ್ಪ ನೀನು ತುಂಬಾ ಕೆಟ್ಟ ಹುಡುಗ. ವೀಣಂಗೆ ಹೇಳ್ತೀನಿ 'ಅಂದರು! ವೀಣಾ ಅರುಣ್ ಅಕ್ಕ. ನಾವು ಒಂಬತ್ತನೇ ಕ್ಲಾಸು. ಅವಳು ಹತ್ತನೇ ಕ್ಲಾಸ್. ಅಂಜನಕುಮಾರಿ ಬಯಾಲಜಿ ತಗೊಳ್ಳೋರು. ವಾಟ್ ಈಸ್ ಎ ಸೆಲ್ ಅನ್ನೋ ಪ್ರಶ್ನೆಗೆ ನಮ್ಮ ಸಹಪಾಠಿ ಒಬ್ಬ ಎ ಸೆಲ್ ಈಸ್ ಎ ಸೆಲ್ ಬಿಕಾಸ್ ಇಟ್ ಈಸ್ ಎ  ಸೆಲ್ ದೇರ್‌ಫೋರ್ ಇಟ್ ಈಸ್ ಎ  ಸೆಲ್. ಸಿನ್ಸ್ ಇಟ್ ಈಸ್ ಎ ಸೆಲ್ ಹೆನ್ಸ್ ಇಟ್ ಈಸ್ ಎ ಸೆಲ್ ಅಂತ ಬರೆದು ಅವರ ಹತ್ತಿರ ಸಿಗಾಕ್ಕೊಂಡು ಇಡೀ ತರಗತಿಗೆ ಸಹಸ್ರ ನಾಮಾರ್ಚನೆ ಆಗಿತ್ತು. ಅಂಜನಕುಮಾರಿ ಹಾಡು ಎಂದಾಗ ಒಮ್ಮೆ ಜಯತು ಜಯ ವಿಠಲಾ ನಿನ್ನ ನಾಮವು ಹಾಡಿದ್ದೆ. ಇನ್ನೊಮ್ಮೆ ನಗುತ ಹಾಡಲೇ ಅಳುತ ಹಾಡಲೇ ಅಂತ ಹಾಡಿದಾಗ ಹುಡುಗರು ತಲೆ ಮೇಲೆ ಕೈ ಹೊತ್ತು ಕುಳಿತರು. ಒಬ್ಬ ಮೇಷ್ಟರಿಗೆ ಕಿವಿ ಕೇಳುತ್ತಿರಲಿಲ್ಲ. ತುಂಟ ಹುಡುಗ...

ಯತಿ ಸ್ವಂತೀ -145

25-05-2018 ನಮಗೆ ಸೋಷಿಯಲ್ ಸ್ಟಡೀಸ್ ಮತ್ತು ಇಂಗ್ಲೀಷ್ ತೆಗೆದುಕೊಳ್ಳುತ್ತಿದ್ದವರು ಅನಸೂಯ ಮೇಡಂ. ಗಿಣಿ ಮೂಗಿನ ಆ ಮೇಡಂ ಕೈಯಲ್ಲಿ ಪುಸ್ತಕಗಳನ್ನು ಹಿಡಿದು ನಡೆದು ಬರುತ್ತಿದ್ದರೆ ಅವರ ಸೀರೆಯ ಸೆರಗು ಏರುತಿಹುದು ಹಾರುತಿಹುದು ಬಾನಿನಗಲ ಪಟಪಟ ಎನ್ನುವಂತೆ ಅಷ್ಟೆತ್ತರದಲ್ಲಿ ಹಾರಾಡುತ್ತಿತ್ತು. ತರಗತಿಯಲ್ಲಿ ಬಾಯ್ತೆರೆದರೆ ಇಂಗ್ಲೀಷ್ ಭಾಷೆ ಪಟಪಟನೆ ಉದುರುತ್ತಿತ್ತು. ನನ್ನ ಜೊತೆಗೆ ರಮೇಶ (ಕಪ್ಪೆ ಎನ್ನುತ್ತಿದ್ದರು ಇವನನ್ನು. ಯಾಕೆಂದು ತಿಳಿಯದು) ಮತ್ತು ಬಾಬ್ಬಿ ಸ್ಟೀವನ್‍ಸನ್. ರಮೇಶ ಅವರ ತಂದೆ ರೈಲ್ವೇಯಲ್ಲಿ ದೊಡ್ಡ ಕೆಲಸದಲ್ಲಿದ್ದರು. ನಮ್ಮ ತಂದೆಯವರ ತಂದೆ ಹಿಂದೆ ಇದ್ದ ದೊಡ್ಡ ಮನೆಯಲ್ಲಿ ಅವನಿದ್ದ. ಆ ಮನೆಯ ಮುಂದೆ ನಮ್ಮ ಮೊದಲ ಸೋದರತ್ತೆಯ ಮೊದಲ ಮಗ ರಾಜಸಿಂಹ ಒಂದು ವರ್ಷದವನಾಗಿದ್ದಾಗ ತೆಗೆದ ಪಟಗಳು ಇವೆ ಮನೆಯಲ್ಲಿ. ಅವೆಲ್ಲವೂ 1957ಕ್ಕೆ ಮುಂಚಿನದು; ಅಂದರೆ ನಾನು ಹುಟ್ಟುವುದಕ್ಕೆ ಮೊದಲಿನವು. ರಮೇಶ ಮಹಾ ತರಲೆ. ಒಂಬತ್ತನೇ ಕ್ಲಾಸಿಗೆ ಹೋಗದೇ ಎಂಟರಲ್ಲಿ ಎರಡನೇ ವರ್ಷ ಇದ್ದ ಎಂದು ನೆನಪು. ನನ್ನ ಚಿಕ್ಕಪ್ಪ ಒಬ್ಬ ಇದ್ದ. ಅಂದರೆ ನನ್ನ ತಂದೆಯ ತಾಯಿಯ ತಂಗಿಯ ಕೊನೆಯ ಮಗ. ಅವನೂ ನನ್ನ ತರಗತಿ! ಪಾಪ, ಇತ್ತೀಚೆಗೆ ಈ ಲೋಕ ಬಿಟ್ಟು ತೆರಳಿಬಿಟ್ಟ. ಹ್ಞಾಂ... ಈ ಅನಸೂಯ ಮೇಡಂ ಬಹಳ ಸ್ಟೈಲಾಗಿ ‘ಪಾಡನ್’ ಎನ್ನುತ್ತಿದ್ದರು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರಿಗೆ ಅರ್ಥವಾಗಿರದಿದ್ದರೆ. ಅವರ ಈ ಪಾಡನ್(ಪಾರ್ಡನ್) ನಮಗೆಲ್ಲಾ ಖುಷಿ ಕೊಡ್ತಿ...

ಯತಿ ಸ್ವಂತೀ -144-

24-05-2018 ಅಮ್ಮ ನಮಗೆ ಎಂದಿಗೂ ಯಾವ ತರಕಾರಿಯನ್ನೂ ತಿನ್ನಬೇಡ ಎಂದಿಲ್ಲ. ಮಕ್ಕಳು ಎಲ್ಲವನ್ನೂ ತಿಂದು ಅರಗಿಸಿಕೊಳ್ಳಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು. “ಏ... ಇದು ತಿನ್ನಲ್ಲ ಅದು ತಿನ್ನಲ್ಲ ಅಂದರೆ ಸರಿಯಿಲ್ಲ. ಎಲ್ಲ ತಿನ್ಬೇಕು” ಎನ್ನುತ್ತಿದ್ದರು. ನಮಗೆ ಆಲೂಗೆಡ್ಡೆ, ಕಾಳುಗಳ ಕೊಳಂಬ್ (ಹುಳಿಗೆ ನಮ್ಮ ಭಾಷೆಯ ಪದ) ನಮಗೆ ಇಷ್ಟ. ಅಮ್ಮ ಇವನ್ನು ತಿನ್ನುತ್ತಿರಲಿಲ್ಲ. ಅವು ‘ವಾಯು’ ತರುವ ಪದಾರ್ಥ ಎಂದು ಅವರ ಅಭಿಪ್ರಾಯ. ಅದಕ್ಕೇ ನಾವು ಹಟ ಮಾಡಿ ಇವನ್ನು ಮಾಡಿಸಿಕೊಂಡು ತಿಂದಾಗ, ಅವರು ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅವರ ಅಮ್ಮನ ಮನೆಗೆ ಹೊರಟುಹೋಗುತ್ತಿದ್ದರು. ಒಂಟಿಕೊಪ್ಪಲ್ (ವಿವಿ ಪುರಂ) ಐದನೇ ಮೆಯಿನ್‍ನಲ್ಲಿತ್ತು ನನ್ನ ಅಜ್ಜನ ಮನೆ. ಅಲ್ಲಿ ಹೋಗಲು ಬಸ್. ನಂಬರ್ 2 ಅಂದುಕೊಳ್ತೇನೆ. ಬಸ್‍ಸ್ಟಾಂಡ್ ಇಂದ ಪಾಪಾರಾಂ ಹೌಸ್. ಕೊನೆಯ ನಿಲ್ದಾಣದ ಹಿಂದಿನ ಸ್ಟಾಪ್ 8ನೇ ಕ್ರಾಸ್. ಬಸ್ಸು ಆರನೇ ಮೆಯಿನ್‍ನಲ್ಲಿ ಹೋಗುತ್ತಿತ್ತು. ಮೊದಲು 5ನೇ  ಮೆಯಿನ್‍ನಲ್ಲಿ ಬರುತ್ತಿತ್ತೆಂಬ ನೆನಪು.  ಅಜ್ಜಿ ಮನೆ 5 ನೇ ಮೆಯಿನ್ ಅಂದೆನಲ್ಲವಾ? ಬಸ್ ಟಿಕೆಟ್ ದರ 5 ಪೈಸೆಗಳು ಎಂದು ನೆನಪು.  ಅಮ್ಮ 6ನೇ ಮೆಯಿನ್ ಎಂಟನೇ ಕ್ರಾಸ್‍ನಲ್ಲಿ ಇಳಿದು, 8ನೇ ಕ್ರಾಸ್‍ನಲ್ಲಿ ಕೆಲವು ಗಜ ನಡೆದು ಎಡಕ್ಕೆ ತಿರುಗಿದರೆ ಮೊದಲನೆಯದು ಅಪ್ಪಳಾಚಾರ್ ಅವರ ಮನೆ. ಆ ಹೆಸರು ಕೇಳಿದರೆ ನಗು. ಈಗಲೂ ಅದು ಹೇಗೆ ಅಪ್ಪಳಾಚಾರ್ ಎಂದು ಹೆಸರಿಟ್ಟುಕೊಳ್ಳುವರೆಂಬ ಆಶ್ಚ...

ಯತಿ ಸ್ವಂತೀ -143

23-05-2018 ನಾನು ಎಂಟನೆಯ ತರಗತಿಗೆ ಬರುವ ವೇಳೆಗೆ ಬಹಳವೇ ಆಟದ ಬುದ್ಧಿಯವನಾಗಿಬಿಟ್ಟಿದ್ದೆ. ಅಮ್ಮನಿಗೆ ಏನೋ ಕಳವಳ. ಇವನನ್ನು ಹೀಗೇ ಆಟವಾಡಲು ಬಿಟ್ಟರೆ ಹತ್ತನೇ ತರಗತಿಯನ್ನೂ ಮುಟ್ಟಲಾರ ಎಂದೆನಿಸಿಬಿಟ್ಟಿದೆ. ಅದನ್ನು ಅವರು ಬಾಯಿ ಬಿಟ್ಟು ಹೇಳಿದ್ದರು ಕೂಡ. ಡಿಸೆಂಬರ್ ಮೂವತ್ತೊಂದು ಬಂದಾಗ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿದರು ಅಮ್ಮ. ಜನವರಿ ಒಂದರಂದು ನಾನು ಮಹಾಜನಾ ಹೈಸ್ಕೂಲಿಗೆ ಅಜ್ಜಿ ಮನೆಯಿಂದ ಹೋಗಲು ಶುರು ಮಾಡಿದೆ. ಅಂದ ಹಾಗೆ ಏಳನೇ ಕ್ಲಾಸನ್ನೂ ಆಟವಾಡಿಕೊಂಡು ಪಾಸ್ ಮಾಡಿದ್ದೆ. 64 ಪರ್ಸೆಂಟ್ ತೆಗೆದುಕೊಂಡಿರಬಹುದೆಂದು ನೆನಪು. ಮಹಾಜನಾ ಪ್ರೌಢಶಾಲೆಗೆ ನನ್ನನ್ನು ಸೇರಿಸಿದರು. ಈಗ ಲೋಕೋ ಕಾಲೋನಿಯ ಮನೆಯಿಂದ ಕಾಳಿದಾಸ ರಸ್ತೆಯಲ್ಲಿ ನಡೆದು ಮಹಾಜನಾ ಹೈಸ್ಕೂಲು ತಲುಪುತ್ತಿದ್ದೆ. ನನ್ನ ಜೊತೆ ಓದಿದ ರಘುನಾಥ್, ಶ್ರೀಧರ್ ಇಲ್ಲಿಗೂ ಬಂದರು. ಜೊತೆಗೆ ನನ್ನ ಬಾಲ್ಯದ ಗೆಳೆಯ ಎನ್ ಆರ್ ಮೊಹಲ್ಲಾದಲ್ಲಿ ನನ್ನಜ್ಜಿಯ ಅಣ್ಣನ ಮನೆಯ ಬಳಿ ಇದ್ದ ನರಸಿಂಹ ಒಂಟಿಕೊಪ್ಪಲ್ ಹದಿನಾರನೇ ಕ್ರಾಸ್ ಮನೆಗೆ ಬಂದಿದ್ದ. ಅವನ ತಂದೆಯವರೂ ರೈಲ್ವೇಯಲ್ಲಿ ಕೆಲಸ. ಅವನ ತಾಯಿ ಗುಡ್‍ಷೆಪರ್ಡ್ ಕಾನ್ವೆಂಟ್‍ನಲ್ಲಿ ಟೀಚರ್. ನರಸಿಂಹನಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು. ಅವನ ಮನೆಗೆ ಸಮಯ ಸಿಕ್ಕಾಗ ಹೋಗುತ್ತಿದ್ದೆ. ಜನವರಿ ತಿಂಗಳಿನಿಂದ ದಿನವೂ ಹೋಗುತ್ತಿದ್ದ ನೆನಪು. ಏಕೆಂದರೆ ಹೈಸ್ಕೂಲ್ ಮೇಷ್ಟರು ಕೆಜಿ ಆರ್ ಮನೆಯಲ್ಲಿ ಸುಧಾ ಪತ್ರಿಕೆ, ನರಸಿಂಹನ ಮ...

ಯತಿ ಸ್ವಂತೀ -142

22-05-2018 ನಮ್ಮ ರೈಲ್ವೇ ಸ್ಟೇಷನ್‍ನಲ್ಲಿ ಒಂದು ವಿಶೇಷವಿತ್ತು. ಬೆಂಗಳೂರು ಮತ್ತು ಅರಸೀಕೆರೆಯಿಂದ ಬರುತ್ತಿದ್ದ ರೈಲುಗಾಡಿಗಳ ಎಂಜಿನ್‍ಗಳು ದಕ್ಷಿಣ ದಿಕ್ಕಿಗೆ ತಿರುಗಿಕೊಂಡು ಮೈಸೂರು ತಲುಪುತ್ತಿದ್ದವು. ಚಾಮರಾಜನಗರದ ರೈಲು ಉತ್ತರಕ್ಕೆ ಮುಖ ಮಾಡಿಕೊಂಡಿರುತ್ತಿತ್ತು. ಇವನ್ನು ಮತ್ತೆ ಆಯಾ ಯಥಾಸ್ಥಿತಿಗೆ ತರಲು ಅವುಗಳ ‘ಮುಖ’ವನ್ನು ತಿರುಗಿಸಬೇಕಿತ್ತು. ಅದಕ್ಕೆ ಒಂದು ಟರ್ನ್ ಟೇಬಲ್ ಇತ್ತು. ಅದೊಂದು ವೃತ್ತಾಕಾರದ ವೇದಿಕೆ. ಅದನ್ನು ಒಂದು ಹಳ್ಳದಲ್ಲಿ ಒಂದು ಉಕ್ಕಿನ ಕಂಬಿಯ ಆಧಾರದಿಂದ ನಿಲ್ಲಿಸಿದ್ದರು. ಆ ವೇದಿಕೆಗೆ ಎರಡು ಕಡೆ ಲಂಬವಾಗಿದ್ದ ಕಂಬಿಗಳು ಬೆಸುಗೆ ಹಾಕಲ್ಪಟ್ಟಿದ್ದವು. ಎಂಜಿನ್ ಅನ್ನು ಅದರ ಮೇಲೆ ನಿಲ್ಲಿಸಿ ಇಬ್ಬರು ರೈಲ್ವೇ ಉದ್ಯೋಗಿಗಳು ಅದನ್ನು ತಿರುಗಿಸುತ್ತಿದ್ದರು. ಸಲೀಸಾಗಿ ತಿರುಗುವ ವೇದಿಕೆಯದು. ಚೆನ್ನಾಗಿ ಎಣ್ಣೆ ಪಣ್ಣೆ ಹಾಕಿರುತ್ತಿದ್ದರು.  ಅದೋ ಮತ್ತೆ ಚಾಮರಾಜನಗರದ ಎಂಜಿನ್ ದಕ್ಷಿಣಕ್ಕೂ, ಬೆಂಗಳೂರು ಅರಸೀಕೆರೆ ಎಂಜಿನ್ನುಗಳು ಉತ್ತರಕ್ಕೂ ತಿರುಗಿಕೊಂಡವು! ಇದಕ್ಕೆ ಪರ್ಯಾಯವಾಗಿ ಒಂದು ‘ತ್ರಿಕೋಣ’ವಿತ್ತು. ಅದು ನಮ್ಮ ಮನೆಯ ಮುಂದಿನ ಫೀಲ್ಡ್ ದಾಟಿದರೆ ಅಲ್ಲಿತ್ತು. ದಕ್ಷಿಣಕ್ಕೆ ಮುಖ ಮಾಡಿದ ಎಂಜಿನ್ ಉತ್ತರದಿಂದ ಪೂರ್ವ ದಿಕ್ಕಿಗೆ ಬಂದಾಗ ಅಲ್ಲೊಂದು ಪಾಯಿಂಟ್ ಸನ್ನೆ ಇತ್ತು. ಅದನ್ನು ಇನ್ನೊಂದೆಡೆಗೆ ಎಳೆದರೆ ಕಂಬಿಗಳು ಮತ್ತೊಂದು ಜೊತೆ ಕಂಬಿಗಳೊಂದಿಗೆ ಹೊಂದಿಕೊಳ್ಳುತ್ತಿದ್ದವು. ಆಗ ಎಂಜಿನ್ ಪಶ್ಚಿಮ ದಿಕ್ಕಿ...

ಯತಿ ಸ್ವಂತೀ -141

21-05-2018 ನಾನು, ನನ್ನ ದೊಡ್ಡ ತಂಗಿ ನಮ್ಮ ಮನೆಯ, ಬಂಧುಗಳ ಸಮಾರಂಭಗಳಲ್ಲಿ ಹಾಡುತ್ತಿದ್ದೆವು. ನಮ್ಮೂರ್‍ನಾಗ್ ನಾನೊಬ್ನೆ ಜಾಣ, ವಹರೆ ಮೇರ ಮುರುಗ ಈ ಎರಡು ಹಾಡುಗಳು ಬಹಳ ಸಲ ಹಾಡಿದ್ದೇವೆ. ಹಾಡು, ಹಾಡು ಎನ್ನುತ್ತಿದ್ದರು ಎಲ್ಲ. ನಮ್ಮ ತಾಯಿಯ ತಂದೆಯವರ 70ನೇ ಹುಟ್ಟುಹಬ್ಬದಲ್ಲಿ ಬಸ್‍ನಲ್ಲಿ ಬೃಂದಾವನ ಉದ್ಯಾನವನಕ್ಕೆ ನಮ್ಮ ತಾಯಿಯ ಕಡೆಯ ಹೆಚ್ಚು ಕಡಿಮೆ ಎಲ್ಲರೂ ಹೋಗಿದ್ದೆವು. ಆಗ ನಮ್ಮಿಬ್ಬರದೇ ಮುಖ್ಯ ಮನರಂಜನೆ. ಇಬ್ಬರಿಗೂ ನೋ ಹ್ಯಾಂಗಪ್ಸ್. ಹಾಡು ಎಂದೊಡನೆ ಹಾಡಿಬಿಡೋದೇ! ಇದೇ ಬುದ್ಧಿ ನನಗೆ ಎಲ್ಲೆಲ್ಲೂ ಇತ್ತು. ನನ್ನ ದೊಡ್ಡಮ್ಮನ ಮಗನ 60ನೇ ವಯಸ್ಸಿನಲ್ಲೂ ಯತ್ರಾಜ್ ಮಾಮಾ ಹಾಡೂ ಎಂದೊಡನೆ ಬಾನಿಗೊಂದು ಎಲ್ಲೆ ಎಲ್ಲಿದೇ ಹಾಡಿದ್ದೆ. ಹಿಂದೊಮ್ಮೆ ರೋಟರಾಕ್ಟ್ ಕ್ಲಬ್‍ನಲ್ಲಿ ಕ್ಲಬ್‍ಸರ್ವಿಸಸ್ ಡೈರೆಕ್ಟರ್ ಮತ್ತು ಮಾಸಪತ್ರಿಕೆ ‘ಡೆಡಿಕೇಶನ್’ ಸಂಪಾದಕನಾಗಿದ್ದಾಗ ನನ್ನ ಹುಟ್ಟು ಹಬ್ಬದಂದು ಶಾಂತಿನಗರದ ‘ವಾತ್ಸಲ್ಯ’ದಲ್ಲಿ ಹಾಡಿದ್ದೆ ಮರೆಯದಿರೂ ಸ್ನೇಹ ಎಂದು. ನಮ್ಮ ಕಂಪೆನಿ ಮಂತ್ರ ಶುರುವಾದ ದಿನ ‘ಮೈ ಶಾಯರ್ ತೋ ನಯೀ’ ಹಾಡಿದ್ದೆ. ಟ್ಯಾಲಿಯಲ್ಲಿದ್ದಾಗ ಒಮ್ಮೆ ಶಮ್ಮಿಕಪೂರ್ ಮತ್ತೊಮ್ಮೆ ಮುಖೇಶನ ಹಾಡುಗಳಿಗೆ ‘ಕುಣಿ’ದಿದ್ದೆ. ಮಂಜಣ್ಣ ಡಿವಿಜಿ ಹುಟ್ಟು ಹಬ್ಬ ಮಾಡಿದಾಗ ಮತ್ತೆ ಮುಖೇಶ್ ಹಾಗೂ ಹಳೆಯ ಹಾಡುಗಳಿಗೆ ಮತ್ತೆರಡು ಸಲ ಥೈಥಕ! ನಾಟಕ, ನೃತ್ಯ ಕೂಡ ರಂಗಸ್ಥಳದಲ್ಲಿ ಮಾಡಿದ್ದುಂಟು. ಗಂಡ್ಸಲ್ವೇ ಗಂಡ್ಸು ನಾಟಕ ನನಗೆ ...

ಯತಿ ಸ್ವಂತೀ -140

20-05-2018 1968ರಲ್ಲಿ ಅಯ್ಯ ಮತ್ತೊಂದು ಟೂರ್ ಹೋಗಲು ಸಿದ್ಧತೆ ನಡೆಸಿದರು. ಈ ಸಲ ದೆಹಲಿ ಎಂದು ನಿರ್ಧರಿಸಿದ್ದರು. ನಮ್ಮ ಅಯ್ಯನ ತಾಯಿ ಅಂದರೆ ನನ್ನ ಅಜ್ಜಿ ಕೂಡ ಈ ಸಲ ನಮ್ಮೊಂದಿಗೆ ಟೂರ್ ಬರುವ ವಿಷಯ ತಿಳಿಯಿತು.  ನನ್ನ ಎರಡನೆಯ ತಂಗಿಗಾಗ ಒಂದೂವರೆ ವರ್ಷಗಳು. ಈ ಸಲ ಅವಳನ್ನು ನಮ್ಮ ತಾಯಿಯ ದೊಡ್ಡ ಅಕ್ಕನ ಮನೆಯಲ್ಲಿ ಬಿಡುವ ತೀರ್ಮಾನವಾಯಿತು. ಬಹಳ ಚಿಕ್ಕವಳು ಎಂದು. ಹಿಂದಿನ ಸಲ ನನ್ನ ದೊಡ್ಡ ತಂಗಿಗೆ ದಕ್ಷಿಣ ಭಾರತ ಮಿಸ್ ಆಗಿತ್ತು. ಈಗ ಅವಳಿಗೆ ಒಂಬತ್ತು ವರ್ಷಗಳಾದ್ದರಿಂದ ಅವಳನ್ನು ಈ ಟೂರ್‍ಗೆ ಕನ್ಸಿಡರ್ ಮಾಡಿದರು! ಅಮ್ಮ, ನಾನು, ಅಯ್ಯ, ದೊಡ್ಡ ತಂಗಿ ಮತ್ತು ಅಜ್ಜಿ ಊರಿಗೆ ಹೊರಟೆವು. ನನ್ನ ಚಿಕ್ಕ ತಂಗಿಯನ್ನು ರೈಲ್ವೇ ನಿಲ್ದಾಣಕ್ಕೆ ಕರೆತಂದಿದ್ದರು ನಮ್ಮ ದೊಡ್ಡಮ್ಮ. ಇಷ್ಟು ಹೊತ್ತಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ದೊಡ್ಡದಾಗಿ ಕಟ್ಟಲ್ಪಟ್ಟಿತ್ತು. ನಮ್ಮ ದೊಡ್ಡಪ್ಪನಿಗೆ ಬೇರೆ ಮನೆಯನ್ನು ಕೊಡಲಾಗಿತ್ತು. ನನ್ನ ಪುಟ್ಟ ತಂಗಿ ಟಾಟಾ ಮಾಡಿದಳು! ಅಲ್ಲಿ ಗ್ರ್ಯಾಂಡ್ ಟ್ರಂಕ್ ಎಕ್ಸ್‍ಪ್ರೆಸ್ (ಜಿ.ಟಿ) ಹತ್ತಿ ದೆಹಲಿಗೆ ಹೋದೆವು. ಅಮ್ಮ ದಿನವೂ ಎರಡು ಸಲ ಕಾಫಿ ಮಾಡುತ್ತಿದ್ದರು ರೈಲಿನಲ್ಲಿ. ಮನೆಯಿಂದ ನೆಸ್‍ಕೆಫೆ ಕಾಫಿ ಪುಡಿ ಮತ್ತು ನೆಸ್ಲೆ ಮಿಲ್ಕ್‍ಮೆಯ್ಡ್ ತಂದಿದ್ದರು. ರೈಲುಗಾಡಿಯ ಪ್ಯಾಂಟ್ರಿಯಿಂದ ಬಿಸಿನೀರು ತರಿಸಿ, ಅದಕ್ಕೆ ಕಾಫಿಪುಡಿ ಮತ್ತು ಮಿಲ್ಕ್‍ಮೆಯ್ಡ್ (ಸಕ್ಕರೆ ಹಾಕಿದ ಥಿಕ್ ಮಿಲ್ಕ್) ಬೆರೆಸಿ ಕಾಫ...

ಯತಿ ಸ್ವಂತೀ -139

19-05-2018 ನಾನು ಐದನೇ ಕ್ಲಾಸಿನಲ್ಲಿದ್ದಾಗ ನಮ್ಮ ಶಾಲೆಯಿಂದ ಒಂದು ಟ್ರಿಪ್ ಹೋಗಿದ್ದೆವು. ಅದೊಂದು ಹೊಸ ಅನುಭವ ನಮಗೆ. ತಿರುಮಕೂಡ್ಲು ನರಸೀಪುರ, ಸೋಮನಾಥಪುರ, ತಲಕಾಡು ಮತ್ತು ಬ್ಲಫ್ಫು (ಶಿವನಸಮುದ್ರ). ಏನೋ ಖುಷಿ. ಬಸ್ಸಿನಲ್ಲಿ ಕೂಗಾಡುತ್ತಾ ಹೋಗಿದ್ದೆವು. ನನ್ನ ತರಗತಿಯ ಕೆಲವರ ಹೆಸರು ನೆನಪಿದೆ. ಶ್ರೀಧರ, ರಘುನಾಥ್, ವಾಯ್‍ಚಲ್, ಬಾಬ್ಬಿ ಸ್ಟೀವನ್‍ಸನ್. ಉಪ್ಪಿಟ್ಟು ಮಾಡಿಸಿದ್ದರು ಶಾಲೆಯವರು. ಅದನ್ನು ತಿಂದೆ ವು. ಮಧ್ಯಾಹ್ನ ಸಾಂಬಾರ್ ಅನ್ನ, ಮೊಸರನ್ನ, ಮೈಸೂರು ಪಾಕ್ (?) ಎಲ್ಲವೂ ಇದ್ದವು. ನರಸೀಪುರ ಅಷ್ಟು ನೆನಪಿಲ್ಲ. ಸೋಮನಾಥಪುರದ ಹೊಯ್ಸಳ ರೀತಿಯ ಶಿಲ್ಪದ ನೆನಪಿದೆ. ಏಕೆಂದರೆ ಇನ್ನೊಮ್ಮೆ ಹೋಗಿದ್ದೆ. ತಲಕಾಡು ಕೂಡ ಮತ್ತೊಮ್ಮೆ ಹೋಗಿದ್ದರಿಂದ ನೆನಪಿದೆ. ಆದರೆ ತಲಕಾಡಿನಲ್ಲಿ ಯಾವ ದೇವಸ್ಥಾನವನ್ನೂ ನೋಡಲಾಗಿರಲಿಲ್ಲ ಮೊದಲ ಸಲ. ಏಕೆಂದರೆ ಮರಳಿನಲ್ಲಿ ಮುಚ್ಚಿಹೋಗಿತ್ತು. ಮೈಸೂರು ಅರಸರಿಗೆ ಅಲಮೇಲಮ್ಮನ (ಶ್ರೀರಂಗಮ್ಮನ?)ಶಾಪ ಎನ್ನುತ್ತಾರೆ. ತಲಕಾಡು ಮರಳಾಗಿ.... ಮತ್ತೊಮ್ಮೆ ನಾನು, ನನ್ನ ಪತ್ನಿ, ಇಬ್ಬರು ಮಕ್ಕಳು, ಮಾವ ಮತ್ತು ಅತ್ತೆ ಹೋಗಿದ್ದೆವು. ಆಗ ತಲಕಾಡು ದೇವಸ್ಥಾನಗಳಿಗೆ ಭೇಟಿ ನೀಡಿದ್ದೆವು. ಕೀರ್ತಿನಾರಾಯಣ, ವೈದ್ಯನಾಥೇಶ್ವರ. ಬ್ಲಫ್‍ನಲ್ಲಿ ನೀರು ನೋಡಿ ಖುಷಿ ಆದೆವು. ಇನ್ನೊಮ್ಮೆ ಹೋದಾಗ ಒಂದೇ ಒಂದು ತೊಟ್ಟು ನೀರು ಕೂಡ ಇರಲಿಲ್ಲ! ಮತ್ತೊಮ್ಮೆ ಹೋದಾಗ ನಾನೊಬ್ಬ ಮಾತ್ರ ಭರಚುಕ್ಕಿಗೆ ಇಳಿಯಲಿಲ್ಲ. ಉ...

ಯತಿ ಸ್ವಂತೀ -138

18-05-2018 ಮಿಡ್ಲ್ ಸ್ಕೂಲಿನಲ್ಲಿ ಕುಮುದವಲ್ಲಿ ಮೇಡಂ, ಅವರ ತಂದೆ ಶೆಲ್ವಪಿಳ್ಳೆ ಅಯ್ಯಂಗಾರ್, ಶ್ರೀನಿವಾಸ ಐಯಂಗಾರ್ ಮತ್ತು ನನ್ನ ಪ್ರೈಮರಿ ಶಾಲೆಯಿಂದ ಬಂದ ನಾಗಲಕ್ಷ್ಮಮ್ಮ ಮಿಸ್ ನೆನಪಿದ್ದಾರೆ. ಈ ಎಲ್ಲ ಮೇಷ್ಟರು ಮತ್ತು ಮೇಡಂಗಳು ಬೋರ್ಡ್ ಮೇಲೆ ಬರೆದಾದ ಏನಾದರೂ ಅಕ್ಷರ ತಪ್ಪಿದ್ದರೆ ಮೇಲೆದ್ದು ಡಸ್ಟರ್‍ನಲ್ಲಿ ಅಳಿಸಿ, ಚಾಕ್‍ಪೀಸ್ ತೆಗೆದುಕೊಂಡು ತಿದ್ದಿಬಿಡುತ್ತಿದ್ದೆ. ಸುಮ್ಮನೆ ನಕ್ಕುಬಿಡುತ್ತಿದ್ದರು. ಯಾರೂ ನನ್ನನ್ನು ತಲೆಹರಟೆ ಎನ್ನಲಿಲ್ಲ. ಗಂಗಣ್ಣ ಮೇಷ್ಟರು ಬಂದರು. ಅವರ ಮೇಲೂ ಅದೇ ಪ್ರಯೋಗ ಮಾಡಿದೆ. ಬಿಳಿಯ ಚಾಕ್‍ಪೀಸ್ ಪುಡಿ ಅಂಟಿಕೊಂಡಿದ್ದ ಕೈಯಲ್ಲೇ ನನ್ನ ಕೆನ್ನೆಯ ಮೇಲೊಂದು, ಕೈ ಮೇಲೊಂದು ಮತ್ತು ತೊಡೆಯ ಮೇಲೊಂದು ಬಾರಿಸಿದರು. ಆಗೆಲ್ಲ ನಾನು ಚಡ್ಡಿ ಹಾಕಿ ಸ್ಕೂಲಿಗೆ ಹೋಗುತ್ತಿದ್ದೆ. ನನಗಾಗ ಪಿತ್ಥದ ಗಂಧೆ ಆಗುತ್ತಿತ್ತು. ಎಲ್ಲಿ ಗೀರಿದರೆ, ಎಲ್ಲಿ ಏಟು ಬಿದ್ದರೆ ಆ ಜಾಗ ಅದೇ ಶೇಪ್‍ನಲ್ಲೇ ಊದಿಕೊಳ್ಳುತ್ತಿತ್ತು. ಇದು ನನ್ನ ಸಹಪಾಠಿಗಳಿಗೆ ಗೊತ್ತಿತ್ತು. ಆದರೆ ಗಂಗಣ್ಣ ಹೊಸಬರು. ನನ್ನ ಮೈಮೇಲಿನ ಊತಗಳನ್ನೂ, ನನ್ನ ಅಳುವನ್ನೂ ಕಂಡು ಬೆದರಿ ಮೆತ್ತಗಾದರು. ಇನ್ಮೇಲೆ ಹೊಡೆಯಲ್ಲ ಅಂದರು! ತಮಾಷೆ ಎಂದರೆ ಈ ಪ್ರೂಫ್ ರೀಡಿಂಗ್ ಕೆಲಸ ನನ್ನ ಜೀವನದಲ್ಲಿ ಇಂದಿನವರೆಗೂ ಮುಂದುವರಿದಿದೆ. 1993ರಲ್ಲಿ ನನ್ನದೇ ಪ್ರಕಾಶನ ಸಂಸ್ಥೆಗಳನ್ನು ಆರಂಭಿಸಿದಾಗ ಅವುಗಳಲ್ಲಿ ಪ್ರಕಟವಾದ ಪುಸ್ತಕಗಳ ತಿದ್ದುಪಡಿ ನಾನೇ ಮಾಡಿದೆ. ಕೆ...

ಯತಿ ಸ್ವಂತೀ -136

16-05-2018 ನಾನು 5ನೇ ತರಗತಿ ಸೇರಿದಾಗ ಸುಧಾ ಪತ್ರಿಕೆ ಆರಂಭವಾಗಿತ್ತು. ಚಂದಮಾಮ ಅದಕ್ಕೆ ಮುಂಚೆಯೇ ಬೆರಗುಗಂಗಳಿಂದ ನೋಡಿ ಓದಲು ಪ್ರಯತ್ನ ಮಾಡುತ್ತಿದ್ದೆ. 'ವಪ' ಅವರ ಮುಖಚಿತ್ರಗಳಲ್ಲಿ ಪುರುಷರ ಮತ್ತು ಸ್ತ್ರೀಯರ ಒಡವೆಗಳಲ್ಲಿ ಒಂದು ಫಳಫಳ ಇಷ್ಟ ಆಗುತ್ತಿತ್ತು. ವಿಕ್ರಮಾದಿತ್ಯನ ಬೆನ್ನ ಮೇಲಿನ ದೆವ್ವ ನೋಡಿ ಹೆದರಿದರೂ ಓದುವಾಸೆ..! ಬಹಳ ಸಲ ಅಂದುಕೊಳ್ಳುತ್ತಿದ್ದೆ ಈ ಛಲ ಬಿಡದ ತ್ರಿವಿಕ್ರಮನಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇಲ್ಲವಾ ಅಂತ. ಎಷ್ಟೋ ವರ್ಷಗಳ ನಂತರ ಪಂಚ ವಿಂಶತಿ ಕಥೆಯನ್ನು ಓದಿದೆ. ತಮಿಳು ಭಾಷೆಯಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಸಿನಿಮಾ ಕೂಡ ಬಂದವು ವಿಕ್ರಮನಿಗೆ ಉತ್ತರ ತಿಳಿಯದ ಪ್ರಶ್ನೆ ಬಗ್ಗೆ! ಸುಧಾ ಪತ್ರಿಕೆಯಲ್ಲಿ ಬಾಲವಿಹಾರ ಓದುವ ಆಸೆ. ಆಗ ಸುಧಾ ಬೆಲೆ ನಲವತ್ತು ಪೈಸೆ ನನಗೆ ನೆನಪಿರುವ ಮಟ್ಟಿಗೆ. ಒಮ್ಮೆ ಯಾದವಗಿರಿಯ ಕಡೆಯಿಂದ ಹೊರಟು ಧೋಭಿಘಾಟ್ ಪಕ್ಕ ಹೋಗುವಾಗ ಜೋರಾಗಿ ಹಾಡು  'ಹೂವೂ ಚೆಲುವೆಲ್ಲಾ ನಂದೆಂದಿತು'. ಹಣ್ಣೆಲೆ ಚಿಗುರಿದಾಗ ಚಿತ್ರದ ಹಾಡಿನ ಚಿತ್ರೀಕರಣ... ಕಲ್ಪನಾಳೇ ಬಹುಶಃ ನಾನು 3ಡಿ ಆಯಾಮದಲ್ಲಿ ಕಂಡ ಮೊದಲ ಜನಪ್ರಿಯ ಚಿತ್ರತಾರೆ. ಮನೆಯ ಬಳಿ ರೈಲ್ವೆ ಗಾರ್ಡ್ ಆಗಿದ್ದ ಚನ್ನಬಸಪ್ಪ ಮೊದಲ ನಟ. ಸಿನಿಮಾದಲ್ಲಿ ನಿರಂಜನ್. ಮಣ್ಣಿನ ಮಗ ಚಿತ್ರದಲ್ಲಿ ಕಲ್ಪನಾ ತಂದೆಯಾಗಿ, ಪುಣ್ಯ ಪುರುಷ ಚಿತ್ರದಲ್ಲಿ ಚಂದ್ರಕಲಾ ತಂದೆಯಾಗಿ ನಟಿಸಿದ್ದರು ಎಂದು ನೆನಪು ಹ್ಞಾಂ ಕೋಗಿಲೆಯು ಗಾನದ...

ಯತಿ ಸ್ವಂತೀ -136

16-05-2018 ನಾನು 5ನೇ ತರಗತಿ ಸೇರಿದಾಗ ಸುಧಾ ಪತ್ರಿಕೆ ಆರಂಭವಾಗಿತ್ತು. ಚಂದಮಾಮ ಅದಕ್ಕೆ ಮುಂಚೆಯೇ ಬೆರಗುಗಂಗಳಿಂದ ನೋಡಿ ಓದಲು ಪ್ರಯತ್ನ ಮಾಡುತ್ತಿದ್ದೆ. 'ವಪ' ಅವರ ಮುಖಚಿತ್ರಗಳಲ್ಲಿ ಪುರುಷರ ಮತ್ತು ಸ್ತ್ರೀಯರ ಒಡವೆಗಳಲ್ಲಿ ಒಂದು ಫಳಫಳ ಇಷ್ಟ ಆಗುತ್ತಿತ್ತು. ವಿಕ್ರಮಾದಿತ್ಯನ ಬೆನ್ನ ಮೇಲಿನ ದೆವ್ವ ನೋಡಿ ಹೆದರಿದರೂ ಓದುವಾಸೆ..! ಬಹಳ ಸಲ ಅಂದುಕೊಳ್ಳುತ್ತಿದ್ದೆ ಈ ಛಲ ಬಿಡದ ತ್ರಿವಿಕ್ರಮನಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇಲ್ಲವಾ ಅಂತ. ಎಷ್ಟೋ ವರ್ಷಗಳ ನಂತರ ಪಂಚ ವಿಂಶತಿ ಕಥೆಯನ್ನು ಓದಿದೆ. ತಮಿಳು ಭಾಷೆಯಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಸಿನಿಮಾ ಕೂಡ ಬಂದವು ವಿಕ್ರಮನಿಗೆ ಉತ್ತರ ತಿಳಿಯದ ಪ್ರಶ್ನೆ ಬಗ್ಗೆ! ಸುಧಾ ಪತ್ರಿಕೆಯಲ್ಲಿ ಬಾಲವಿಹಾರ ಓದುವ ಆಸೆ. ಆಗ ಸುಧಾ ಬೆಲೆ ನಲವತ್ತು ಪೈಸೆ ನನಗೆ ನೆನಪಿರುವ ಮಟ್ಟಿಗೆ. ಒಮ್ಮೆ ಯಾದವಗಿರಿಯ ಕಡೆಯಿಂದ ಹೊರಟು ಧೋಭಿಘಾಟ್ ಪಕ್ಕ ಹೋಗುವಾಗ ಜೋರಾಗಿ ಹಾಡು  'ಹೂವೂ ಚೆಲುವೆಲ್ಲಾ ನಂದೆಂದಿತು'. ಹಣ್ಣೆಲೆ ಚಿಗುರಿದಾಗ ಚಿತ್ರದ ಹಾಡಿನ ಚಿತ್ರೀಕರಣ... ಕಲ್ಪನಾಳೇ ಬಹುಶಃ ನಾನು 3ಡಿ ಆಯಾಮದಲ್ಲಿ ಕಂಡ ಮೊದಲ ಜನಪ್ರಿಯ ಚಿತ್ರತಾರೆ. ಮನೆಯ ಬಳಿ ರೈಲ್ವೆ ಗಾರ್ಡ್ ಆಗಿದ್ದ ಚನ್ನಬಸಪ್ಪ ಮೊದಲ ನಟ. ಸಿನಿಮಾದಲ್ಲಿ ನಿರಂಜನ್. ಮಣ್ಣಿನ ಮಗ ಚಿತ್ರದಲ್ಲಿ ಕಲ್ಪನಾ ತಂದೆಯಾಗಿ, ಪುಣ್ಯ ಪುರುಷ ಚಿತ್ರದಲ್ಲಿ ಚಂದ್ರಕಲಾ ತಂದೆಯಾಗಿ ನಟಿಸಿದ್ದರು ಎಂದು ನೆನಪು ಹ್ಞಾಂ ಕೋಗಿಲೆಯು ಗಾನದ...

ಯತಿ ಸ್ವಂತೀ -135

15-05-2018 ಮೊಹರಂ ಬಂದರೆ ಮುಸ್ಲಿಮರ ಮನೆಗಳಲ್ಲಿ ಸಿಹಿ ಪೂರಿ, ಖೀರು. ಕ್ರಿಸ್ಮಸ್  ಬಂದರೆ ಕೇಕ್, ಬಿಸ್ಕತ್ತು ಆ್ಯಂಗ್ಲೋ ಇಂಡಿಯನ್ ಮತ್ತು ಕ್ರಿಶ್ಚಿಯನ್ನರ ಮನೆಗಳಲ್ಲಿ. ಕೃಷ್ಣ ಜಯಂತಿ ಬಂದರೆ ಚಕ್ಕುಲಿ, ಮುಚ್ಚೋರೆ, ತೇಂಗೊಳಲು ಇತ್ಯಾದಿ ಕರಿದ ತಿಂಡಿಗಳನ್ನೂ, ಹಣ್ಣು ಮತ್ತು ತರಕಾರಿಗಳನ್ನೂ ದೇವರ ವಿಗ್ರಹ ಇಟ್ಟ ಜಾಗದ ಮೇಲ್ಭಾಗದಲ್ಲಿ ಚೌಕಗಳಿರುವ ಮರದ ಪಟ್ಟಿಗಳಿಗೆ ಹೊಡೆದಿರುವ  ಮೊಳೆಗಳಿಗೆ ದಾರದ ಸಹಾಯದಿಂದ ಜೋತಾಡಿಸುತ್ತಿದ್ದೆವು. ಇದಕ್ಕೆ ಫಲವಸ್ತ್ರ ಎನ್ನುವ ಹೆಸರಿದೆ. ಇಂದಿಗೂ ಈ ಪದ್ಧತಿ ನಮ್ಮ ಮನೆಯಲ್ಲಿದೆ. ನಾಲ್ಕನೆಯ ಇಯತ್ತೆ ಮುಗಿದಾಗ ನನಗೆ ಎಂಟು ವರ್ಷಗಳು ತುಂಬಲು ನಾಲ್ಕು ತಿಂಗಳು ಇದ್ದವು. ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆಗೆ ನನ್ನನ್ನು ಸೇರಿಸಿದರು. ಮನೆಯಿಂದ ಹೊರಟು ಬಲಕ್ಕೆ ತಿರುಗಿ ಎಂಟೊಂಬತ್ತು ಮನೆಗಳನ್ನು ದಾಟಿದರೆ ಮುಖ್ಯ ರಸ್ತೆ. ಅಲ್ಲಿ ಬಲಕ್ಕೆ ತಿರುಗಿದರೆ ಯಾದವಗಿರಿಗೆ ದಾರಿ. ಎಡಕ್ಕೆ ಹದಿನೈದು ಅಡಿ ಹೋಗಿ ಎಡಕ್ಕೆ ತಿರುಗಿದರೆ ಸಿಟಿಗೆ ದಾರಿ. ಬಲಗಡೆಗೆ ತಿರುಗಿದರೆ ಕೃಷ್ಣರಾಜಸಾಗರಕ್ಕೆ ದಾರಿ. ಸ್ವಲ್ಪ ದೂರದಲ್ಲಿ ಎಡಕ್ಕೆ ಚೆಲುವಾಂಬ ಪಾರ್ಕ್. ರಸ್ತೆಯ ಇನ್ನೊಂದು ಬದಿ ಮೈಸೂರು ಆಕಾಶವಾಣಿ. ನಮ್ಮ ಶಾಲೆಗೆ ಹೋಗಲು ಇವುಗಳನ್ನು ದಾಟಿ ಮುಂದೆ ಹೋದರೆ ಎಡಕ್ಕೆ ರಾಮಕೃಷ್ಣ ಆಶ್ರಮ. ಬಲಕ್ಕೆ ರೈಲ್ವೆ ಅತ್ಯುನ್ನತ ಅಧಿಕಾರಿಗಳ ಬಂಗಲೆಗಳು. ಅದರಾಚೆ ಭಾರತೀ ಸ್ತ್ರೀ ಸಮಾಜ ಶಾಲೆ. ನನ್ನ ದೊಡ್ಡ ತಂಗಿ ಅಲ್ಲಿ...

ಯತಿ ಸ್ವಂತೀ -134

14-05-2018 ರಾಮೇಶ್ವರಂನ ಪಾಂಬನ್ ಬ್ರಿಡ್ಜ್ ಆಗ ಕಬ್ಬಿಣದ್ದಿತ್ತು. ನಾವು ಊರಿಗೆ ಬಂದು ಒಂದು ತಿಂಗಳೊಳಗೆ ಸುನಾಮಿ ಬಂದು ಅದು ಮುಳುಗಿ ಹೋಯಿತು. ಪ್ರಕೃತಿಯ ವಿಕೋಪಕ್ಕೆ ಸಿಕ್ಕರೆ ಯಾವ ರೀತಿಯ ದೊಡ್ಡ ಸ್ಟ್ರಕ್ಚರ್ ಕೂಡ ಅದರ ಮುಂದೆ ಇಲ್ಲವಾಗುವುದೆಂಬ ಪಾಠ ನನಗೆ 2004ರ ಡಿಸೆಂಬರ್‍ನಲ್ಲಿ ಬಂದ ಸುನಾಮಿಯ ಕೆಲವು ದುರಂತಮಯ ಚಿತ್ರಗಳನ್ನೂ, ವೀಡಿಯೋ ತುಣುಕುಗಳನ್ನೂ ಕಂಡಾಗ ತಿಳಿಯಿತು.  ನಂತರ ಇನ್ನೂ ಎರಡು ಸಲ ಅದರ ಸೇತುವೆ ಕಟ್ಟಲ್ಪಟ್ಟಿರಬೇಕು. 2008ರಲ್ಲಿ ನಾವು ಮತ್ತೆ ರಾಮೇಶ್ವರಂಗೆ ಹೋದಾಗ ಆ ಸೇತುವೆ ಮೇಲೆ ಹೋದೆವು. ಆ ಸೇತುವೆ ಕಟ್ಟಲು ಬಳಸಲ್ಪಟ್ಟಿರುವ ಸಿಮೆಂಟ್ ಕಂಪೆನಿಯು ಹೆಮ್ಮೆಯಿಂದ ‘ಇದು... ಸಿಮೆಂಟಿನಲ್ಲಿ ಕಟ್ಟಿದ ಸೇತುವೆ’ ಎಂದು ಜಾಹೀರಾತು ನೀಡುತ್ತಿತ್ತು. ರಾಮೇಶ್ವರಂನಲ್ಲಿ 1964 ಜೂನ್ ತಿಂಗಳ ಪ್ರವಾಸದ ಇನ್ನೇನೂ ನೆನಪಿಲ್ಲ. ಅಲ್ಲಿಂದ ನಾವು ಕುಟ್ರಾಲಂ ಜಲಪಾತಕ್ಕೆ ಹೋದ ನೆನಪಿದೆ. ಇದರದೂ ಒಂದು ಪಟ ಇರೋದ್ರಿಂದ ನೆನಪಿದೆಯೇನೋ! ಜಲಲ ಜಲಲ ಜಲಧಾರೆ ಎಂದು ದುಡುದುಡು ಬೀಳುವ ನೀರು, ಪಕ್ಕದಲ್ಲಿ ಸ್ನಾನ ಮಾಡಲಿಕ್ಕಾಗಿಯೇ ಎಂದು ಸಣ್ಣ ಧಾರೆಯಂತೆ ಬೀಳುವ ಈ ಜಲಪಾತಕ್ಕೂ ಎರಡನೇ ಸಲ ಹೋದ ನೆನಪಿದೆ. ಆದರೆ 2004ರಲ್ಲಿ ಹೋದಾಗ ಜಲದ ಪಾತವಿರಲಿಲ್ಲ. ಗೈರಾಗಿತ್ತು ಜಲ! ಮೂವತ್ತು ರೂಪಾಯಿ ಕೊಟ್ಟರೆ ಮೇಲೆ ಹತ್ತಿ ಅಲ್ಲಿಂದ ನೀರು ಸುರಿಯುವೆ, ನೀವು ನೋಡಬಹುದು ಎಂದಿದ್ದ ಅಲ್ಲಿನವನೊಬ್ಬ! ರೋಜಾ ಎನ್ನುವ ಸಿನಿಮಾದಲ್ಲಿ ಇದರ ಅಡಿ...

ಯತಿ ಸ್ವಂತೀ -133

13-05-2018 ನನಗೆ ಒಂದೇ ಉದ್ವೇಗ ಆಗಿತ್ತು. ನನ್ನ ಸ್ವಂತೀಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತೇನೆ. ಆಗ ನನಗೆ 7 ವರ್ಷಗಳಾಗಲು ಒಂದು ತಿಂಗಳು ಬಾಕಿ ಇತ್ತು.  ಅಯ್ಯ ‘ನಾವು ಟೂರ್ ಹೋಗ್ತಿದ್ದೀವಿ’ ಎಂದರು! ಟೂರ್ ಎಂದರೆ ನಮಗೆ ತಿಳಿದದ್ದೆಲ್ಲಾ ಮೈಸೂರಿನಿಂದ ಬೆಂಗಳೂರು. ಬೆಂಗಳೂರಿನಿಂದ ಮೈಸೂರು. ನಾನು, ನನ್ನ ಅಯ್ಯ, ನನ್ನ ಅಮ್ಮ ಮತ್ತು ನನ್ನ ಐದನೆಯ ಮತ್ತು ಕೊನೆಯ ಸೋದರತ್ತೆ. ಮತ್ತೆ ತಂಗಿ? ಉಹೂಂ... ಅವಳಿಗಿನ್ನೂ ಐದು ವರ್ಷಗಳೆಂದು ಅವಳನ್ನು ನಮ್ಮ ದೊಡ್ಡ ದೊಡ್ಡಮ್ಮನ ಮನೆಯಲ್ಲಿ ಬಿಟ್ಟೆವು. ಬೆಂಗಳೂರಿನಿಂದ ತಿರುಚಿನಾಪಳ್ಳಿ. ಶ್ರೀರಂಗಕ್ಕೆ ಹೋಗಿ ರಂಗನಾಥನ ದರ್ಶನ. ಆಗ ನನಗಿನ್ನೂ ಏಳು ವರ್ಷಗಳೂ ಆಗಿರದಿದ್ದುದರಿಂದ ಹನ್ನೊಂದು ವರ್ಷಗಳ ಹಿಂದೆ ಮತ್ತೆ ಹೋದಾಗ ಹಿಂದಿನ ಶ್ರೀರಂಗ ಟ್ರಿಪ್ ನೆನೆಸಿಕೊಂಡೆ. ಅರೆರೆ, ಇನ್ನೂ ಒಂದು ಸಲ 1999ರಲ್ಲಿ ಹೋಗಿದ್ದೆ ಶ್ರೀರಂಗಕ್ಕೆ. ಆದರೆ ಕೇವಲ ರಾತ್ರಿ ಒಂಬತ್ತರ ನಂತರ ಒಂದು ವಿಶೇಷ ಸೇವೆ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಒಳಗಿದ್ದೆವು. 1964ಕ್ಕೆ ಮರಳಿ ಬಂದರೆ, ಗೋಲ್ಡನ್ ರಾಕ್ ಅಥವಾ ಉಚ್ಚಿ ಪಿಳ್ಳೈಯಾರ್ ಗುಡಿಗೆ ಹೋದ ನೆನಪಿದೆ. ಇದು ಗೋಕರ್ಣದ ಗಣೇಶ, ರಾವಣ ಮತ್ತು ಆತ್ಮಲಿಂಗದ ಕಥೆಯನ್ನೇ ಹೋಲುವ ಕಥೆ. ಇಲ್ಲಿ ಶ್ರೀರಂಗನಾಥನನ್ನು ವಿಭೀಷಣ (ರಾವಣನ ತಮ್ಮ ಈ ಕಥೆಯಲ್ಲಿ ಪಾತ್ರವಾಗಿರುವುದು ಕಾಕತಾಳೀಯ?) ಲಂಕೆಗೆ ಒಯ್ಯುವಾಗ ಗಣೇಶ ಅವನನ್ನು ತಡೆದು ರಂಗನಾಥನು ಶ್ರೀರಂಗದಲ್ಲಿ ಉಳಿದುಕೊಳ್ಳ...

ಯತಿ ಸ್ವಂತೀ -122

12-05-2018 ಹಸಿರು ತೋರಣ ನೋಡಿದ ನೆನಪಿದೆ. ಅದರಲ್ಲಿ ರಾಜ್ ತಮ್ಮ ‘ನಾರಾಯಣ, ವೈಕುಂಠ’ ಅಂತ ಕಾಗದವನ್ನು ಅಂಚೆ ಡಬ್ಬಕ್ಕೆ ಹಾಕೋಕ್ಕೆ ಪ್ರಯತ್ನಿಸೋದು. ಭಾರತಿಯ ತಂದೆ ಅಶ್ವತ್ಥ್ ಅದನ್ನು ಪೋಸ್ಟ್ ಮಾಡಿ, ಅಂಚೆ ಕಛೇರಿಯಲ್ಲಿ ಅದನ್ನು ಪಡೆದು ಆ ಹುಡುಗನ ಅಭಿಲಾಷೆಗಳನ್ನು ತೀರಿಸಲು ಯತ್ನಿಸೋದು, ನರಸಿಂಹರಾಜುವಿನ ಹನುಮಂತನ ಪಾತ್ರ, ಒಳ್ಳೊಳ್ಳೆಯ ಹಾಡುಗಳು (ನೀ ಯಾರೋ ಏನೋ ಸಖಾ, ಒಂದು ದಿನ ಎಲ್ಲಿಂದಲೋ ನೀ ಬಂದೆ) ನೆನಪಿದೆ. ಮನೆಯ ಬಳಿ ಇದ್ದ ನನ್ನ ತಂಗಿಯ ಗೆಳತಿ ಪದ್ದುವಿನ ಮನೆಯಲ್ಲಿ ಬಹಳ ಸಿನಿಮಾ ನೋಡುತ್ತಿದ್ದರು. ಅವರ ಮನೆಯಲ್ಲೇ ನಾನು ಸಿನಿಮಾ ಪುಸ್ತಕಗಳನ್ನು ಕಂಡಿದ್ದು. ಎಂಟು ಪುಟಗಳ ಪುಟ್ಟ ಪುಸ್ತಕ. ಅದರಲ್ಲಿ ಮುಂದೆ ಸಿನಿಮಾದ ಹೆಸರು, ಕಲಾವಿದರ ಫೋಟೋಗಳು. ಎರಡನೇ ಪುಟದಲ್ಲಿ ತಾರಾಗಣ. ಮೂರನೆ ಪುಟ ಮತ್ತು ನಾಲ್ಕನೆ ಪುಟದಲ್ಲಿ ಪುಟ್ಟದಾಗಿ ಮೊದಲಾರ್ಧದ ಕಥೆ. ಆಮೇಲೆ... ಮುಂದಿನದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿ ಎಂದು ಬರೆದಿರುತ್ತಿತ್ತು. ಆಮೇಲೆ ಆ ಸಿನಿಮಾದ ಹಾಡುಗಳು. ಬರೆದೋರು, ಹಾಡಿರೋರು ವಿವರಗಳು. ಅವರ ಮನೆಗೆ ಎರಡು ವಾರಗಳಿಗೊಮ್ಮೆ ಹೋಗಿ ಇವನ್ನು ಓದುತ್ತಿದ್ದೆ. ನನ್ನ ಇನ್ನೊಬ್ಬ ಗೆಳೆಯ ಪ್ರಸಾದ್. ಅವನ ಮನೆ ನಮ್ಮ ಮನೆಯಾಚೆ ರೈಲ್ವೇ ಸ್ಟೇಷನ್‍ನ ಬಳಿಯ ರೈಲ್ವೇ ಷೆಡ್ ಬಳಿ ಇತ್ತು. ನಮ್ಮ ಮನೆಗೆ ಅವರ ಮನೆ ಕಾಣುತ್ತಿತ್ತು. ಬಹಳ ಜನ ಪ್ರಸಾದ್‍ಗಳು ಗೊತ್ತಿದ್ದರಿಂದ ಅವನು ಮಹಡಿ ಪ್ರಸಾದ್ ಆಗಿದ್ದ. ಅವರು ಮನೆಯಲ್ಲ...

ಯತಿ ಸ್ವಂತೀ -131

11-05-2018 ನಮ್ಮ ಅಮ್ಮನ ಜೊತೆ ತೆರೆ ಘರ್ ಕೆ ಸಾಮ್ನೇ ಸಿನಿಮಾಗೆ ಹೋದ ಅಸ್ಪಷ್ಟ ನೆನಪಿದೆ. ಅದರಲ್ಲಿ ತೂ ಕಹಾಂ ಯೆ ಬತಾ, ತೆರೆ ಘರ್ ಕೆ ಸಾಮ್ನೆ ಹಾಡುಗಳ ನೆನಪು ಮಾತ್ರ ಇದೆ. ಮೊನ್ನೆ ಮೊನ್ನೆ ಈ ಸಿನಿಮಾವನ್ನು ಯೂಟ್ಯೂಬ್‍ನಲ್ಲಿ ನೋಡಿ ಎಂಜಾಯ್ ಮಾಡಿದೆ. ತಮಿಳು ಸಿನಿಮಾ ಪಾಸಮಲರ್ (ಕನ್ನಡದ ವಾತ್ಸಲ್ಯ), ಪಾಲುಂ ಪಳಮುಂ (ಕನ್ನಡದ ಬೆರೆತ ಜೀವ), ವಾನಂಬಾಡಿ (ಏನೂ ನೆನಪಿಲ್ಲ) ಅಮ್ಮ ಕರೆದೊಯ್ದಿದ್ದರು. ನನ್ನ ನಾಲ್ಕನೆಯ ಸೋದರತ್ತೆ ಮಹಾರಾಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಅವರಿಗೆ ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗವಾಯಿತು. ಆಗ ಅವರ ಮೂರು ವರ್ಷಗಳ ಮಗನೊಂದಿಗೆ ಮೈಸೂರಿಗೆ ಬಂದು ನಮ್ಮ ಮನೆಯಲ್ಲೇ ತಂಗಿದ್ದರು. ಕಾಲೇಜು ಕೂಡ ಅವರಿಗೆ ಹತ್ತಿರವೇ. ನಡೆದು ಹೋಗಬಹುದಿತ್ತು. ಅವರ ಮಗ ಅಭಿ ನನಗೂ ನನ್ನ ತಂಗಿಗೂ ಆಟದ ಗೊಂಬೆಯಂತಾಗಿದ್ದ. ಗುಂಗುರು ಕೂದಲಿನ ಬಲು ಮುದ್ದಾದ ಮಗು ಅವನು. ಈಗ ಅಮೆರಿಕದಲ್ಲಿ ವೈದ್ಯನಾಗಿದ್ದಾನೆ. ನನಗೂ, ನನ್ನ ಪತ್ನಿಗೂ ಬಹಳ ಪ್ರೀತಿಯ ಗೆಳೆಯನಾಗಿದ್ದಾನೆ. ಹ್ಞಾಂ... ನನ್ನ ಸೋದರತ್ತೆ ನನ್ನನ್ನು ಪ್ರಭುದೇವ ಥಿಯೇಟರ್‍ನಲ್ಲಿ(ಪದ್ಮಾ ಟಾಕೀಸ್) ಮಂತ್ರಾಲಯ ಮಹಾತ್ಮೆ ಅಥವಾ ಶ್ರೀ ರಾಘವೇಂದ್ರ ವಿಜಯ ಸಿನಿಮಾಗೆ ಕರೆದೊಯ್ದರು. ಅದೇ ನನಗೆ ಹೆಚ್ಚುಕಡಿಮೆ ಪೂರ್ತಿ ನೆನಪಿರುವ ಮೊದಲ ಸಿನಿಮಾ. ನನಗಾಗ ಒಂಬತ್ತು ವರ್ಷಗಳು. ಥಿಯೇಟರ್ ಮುಂದೆ ರಾಘವೇಂದ್ರ ಸ್ವಾಮಿಗಳ ಕಟ್‍ಔಟ್ ಇಟ್ಟು ಗೋಲಕ ಕೂಡ ಇಟ್ಟಿದ್ದರು! ಇದ...

ಯತಿ ಸ್ವಂತೀ -130

10-05-2018 ಒಮ್ಮೆ ಬೆಂಗಳೂರಿಗೆ ಬಂದಿದ್ದವರು ಮೈಸೂರಿಗೆ ರೈಲುಗಾಡಿಯಲ್ಲಿ ಹಿಂದಿರುಗಲು ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದೆವು. ಅಮ್ಮನಿಗೆ ಕಣ್ಣು ನೋವು ಬಂದು ಕರವಸ್ತ್ರವನ್ನು ಕಣ್ಣಿಗೆ ಅಡ್ಡಲಾಗಿ ಇಟ್ಟುಕೊಂಡು ಕುಳಿತರು. ನಾನು, ನನ್ನ ತಂಗಿ ಮತ್ತು ನನಗಿಂತ ನಾಲ್ಕು ವರ್ಷ ಹಿರಿಯವಳಾದ ನನ್ನ ದೊಡ್ಡಮ್ಮನ ಮಗಳು. ಬಹುಶಃ ನನಗಾಗ ಆರು ವರ್ಷಗಳು. ರಾಮನಗರ ಸ್ಟೇಷನ್ ತಲುಪಿತ್ತು ರೈಲು. ನಾನೋ, ನನ್ನ ತಂಗಿಯೋ ನೆನಪಿಲ್ಲ, ‘ಬಾಯಾರಿಕೆ, ನೀರು ಬೇಕು’ ಎಂದು ಶುರು ಮಾಡಿದೆವು. ಅಮ್ಮನಿಗೆ ಇಳಿಯಲು ಆಗದು. ದೊಡ್ಡಮ್ಮನ ಮಗಳಿಗೆ ರೈಲು ಪ್ರಯಾಣ ಹೊಸತು. ಅವಳೇ ಸುಮಾರು ಹತ್ತು ವರ್ಷದವಳಿರಬೇಕು ಆಗ. ‘ರಾಮನಗರ ಸ್ಟೀಮ್ ಎಂಜಿನ್‍ಗೆ ವಾಟರಿಂಗ್ ಸ್ಟೇಷನ್’ ಎಂದರು ಅಮ್ಮ. ಅವೆಲ್ಲವೂ ಅವರಿಗೆ ತಿಳಿದಿದ್ದ ವಿಷಯಗಳು. ಬಹಳ ವರ್ಷ ಅವರು ರೈಲಿನಲ್ಲಿ ಅಯ್ಯನೊಂದಿಗೆ ಮತ್ತು ಒಂಟಿಯಾಗಿ ಓಡಾಡಿದೋರು. ನಾವು ಇನ್ನೂ ಚಿಕ್ಕವರಿದ್ದಾಗ ಎತ್ತಿಕೊಂಡು ಓಡಾಡಿದೋರು. ಅಂದರೆ ರಾಮನಗರದಲ್ಲಿ ರೈಲು ಸ್ವಲ್ಪ ಹೆಚ್ಚು ಹೊತ್ತು ನಿಲ್ಲುತ್ತದೆ ಎಂದು ನಿರ್ಧರಿಸಿ, ‘ಹೋಗಿ ಮೂವರೂ. ಅಲ್ಲಿ ನಲ್ಲಿಯಲ್ಲಿ ನೀರು ಬರ್ತಿದೆ. ಕುಡಿದು ಬನ್ನಿ’ ಎಂದರು ಅಮ್ಮ. ಮೂವರೂ ಇಳಿದೆವು. ನಲ್ಲಿಯ ಬಳಿ ಹೋದರೆ ಡಬಲ್ ನಿರಾಸೆ. ಅಲ್ಲಿ ನೀರು ಬಹಳ ಕಡಿಮೆ ಬರುತ್ತಿತ್ತು. ಆ ಊರಿನ ಜನ ನೀರು ಹಿಡಿದುಕೊಳ್ಳಲು ಸಾಲಾಗಿ ಕೊಡಗಳನ್ನು ಇಟ್ಟುಕೊಂಡಿದ್ದರು. ನಮಗೋ ಕೇಳಲು ಸಂಕೋಚ (ಭ...

ಯತಿ ಸ್ವಂತೀ -129

09-05-2018 ಅಮ್ಮನ ಸಂಗೀತದ ಪ್ರೀತಿ ನನಗೂ, ನನ್ನ ತಂಗಿಗೂ ಹರಡಿತು. ಇಬ್ಬರೂ ಹಾಡುಗಳನ್ನು ಇಷ್ಟ ಪಟ್ಟೆವು. ನಮ್ಮಿಬ್ಬರಿಗೂ ಭರತನಾಟ್ಯ ಕಲಿಸಬೇಕೆಂದು ನಿಶ್ಚಯಿಸಿದ ಅಮ್ಮ ನಮ್ಮನ್ನು ಒಬ್ಬರು ಡ್ಯಾನ್ಸ್ ಮೇಡಂ ಬಳಿ ಕರೆದೊಯ್ದರು. ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದ ನಾನು, ನನ್ನ ತಂಗಿ ಈ ಡ್ಯಾನ್ಸ್ ಮೇಡಂ ವಿಷಯದಲ್ಲಿ ಏಕಾಭಿಪ್ರಾಯ ವ್ಯಕ್ತಪಡಿಸಿದೆವು. ನಾವು ಕಲಿಯಲ್ಲ, ಆ ಟೀಚರ್ ನೋಡಿದರೆ ಭಯ ಆಗುತ್ತೆ ಅಂದೆವು. ಅಮ್ಮ ಆಶ್ಚರ್ಯಕರವಾಗಿ ಸುಮ್ಮನಾಗಿಬಿಟ್ಟರು. ನಾವು ನೆಮ್ಮದಿಯ ನಿಟ್ಟುಸಿರಿಟ್ಟೆವು. ನನ್ನ ಗೆಳೆಯ ಮಖ್‍ಬೂಲ್ ಬಹಳವೇ ತರಲೆ. ನಮ್ಮ ಮನೆಯ ಎದುರಿನ ಫೀಲ್ಡ್‍ನಲ್ಲಿದ್ದ ಒಂದೇ ಮರ ಗುಲ್‍ಮೊಹರ್ ಹೂಗಳದ್ದು. ಅದರ ಹೂಗಳನ್ನು ಕಿತ್ತು ಅದರ ನಡುವಿನ ಕೇಸರವನ್ನು ಕಿತ್ತು ಇಬ್ಬರೂ ಅವುಗಳ ಫೈಟಿಂಗ್ ನಡೆಸುತ್ತಿದ್ದೆವು. ಹುಂಜಗಳ ಜಗಳವೋ ಎನ್ನುವ ರೇಂಜಿನಲ್ಲಿರುತ್ತಿತ್ತು ಆ ಫೈಟು. ಕೊನೆಗೆ ಒಬ್ಬರ ಕೇಸರದ ತುದಿ ಬಿದ್ದಾಗ ಔಟ್! ಹೀಗೇ ಒಂದು ದಿನ ಆ ಮರದ ಮೇಲೆ ನೋಡ್ತೀವಿ ಜೇನು ಗೂಡು ಕಟ್ಟಲು ಹೊಂಚು ಹಾಕುತ್ತಿದ್ದವು. ಮಖ್‍ಬೂಲ್ ಅದರ ಬಳಿಗೆ ಹೋದ. ರಾಜೂ, ನೋಡು ಬಾ ನನ್ನ ಕೆಲಸಾನ ಎಂದ. ನಾನು, ನನ್ನ ತಂಗಿ ಇಬ್ಬರೂ ಹೋದೆವು. ಏನೋ ಮಾಡುವನೆಂಬ ಕುತೂಹಲ. ಒಂದು ಕಲ್ಲು ತೆಗೆದುಕೊಂಡು ಜೇನುಗಳಿದ್ದ ಜಾಗಕ್ಕೆ ರೊಂಯ್ಯೆಂದು ಎಸೆದ. ಅವು ಚೆದುರಿತೋ ಇಲ್ಲವೋ, ಆ ಕಲ್ಲು ನ್ಯೂಟನ್ನನ ಮೂರನೆಯ ನಿಯಮದಂತೆ ನೇರವಾಗಿ ಭೂಮಿಯತ್...

ಯತಿ ಸ್ವಂತೀ -128

08-05-2018 ನನ್ನ ಅಮ್ಮ ಮತ್ತು ಮೂರನೇ ದೊಡ್ಡಮ್ಮ ಇಬ್ಬರನ್ನೂ ನಮ್ಮ ತಾತ 40ರ ದಶಕಗಳಲ್ಲಿ ಹಿಂದೀ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದರಂತೆ. ಪಂಕಜ್ ಮಲ್ಲಿಕ್... ಕೆ ಎಲ್ ಸೈಗಲ್... ನೂರ್ ಜಹಾನ್...ಸಿ ಎಚ್ ಆತ್ಮ.. ಸುರೈಯ್ಯ... ಮುಂತಾದವರ ಹಾಡುಗಳನ್ನು ಅಮ್ಮ ಗುನುಗುತ್ತಿದ್ದರು. ನನಗೆ ಬುದ್ಧಿ ತಿಳಿದಾಗಿನಿಂದ ನಮ್ಮ ಮನೆಯಲ್ಲಿ ಮರ್ಫಿ ರೇಡಿಯೋ ಹಚ್ಚುತ್ತಿದ್ದುದು ನೆನಪಿದೆ. ನನಗೆ ಸುಮಾರು 1962ರಿಂದ ಹಿಂದೀ ಸಿನಿಮಾಗಳ ಹಾಡುಗಳನ್ನು ಕೇಳಿದ ನೆನಪಿದೆ. ಬೆಹನೋ ಔರ್ ಭಾಯಿಯೋ ಎಂದು ಅಮೀನ್ ಸಯಾನಿಯ ಖಣೀರೆಂಬ ಕಂಚಿನ ಕಂಠ ಬಹಳ ವರ್ಷಗಳ ಹಿಂದೆಯೇ ಕೇಳಿದ ಜ್ಞಾಪಕ. ಅದಲ್ಲದೇ ಅರವತ್ತರ ದಶಕದ ಕನ್ನಡ ಚಿತ್ರಗೀತೆಗಳು ಕೇಳುತ್ತಿದ್ದೆ. ನನ್ನ ತಂದೆ ಮತ್ತು ಅವರ ತಾಯಿ (ನನ್ನ ವೇಂಗಡಮ್ಮ ಅಜ್ಜಿ) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದರು. ಅಮ್ಮನಿಗೆ ಅದೂ ಇಷ್ಟ. ಆ ಸಂಗೀತ ಕೇಳುವ ಅಭ್ಯಾಸ ಕೂಡ ಆಯಿತು. ದಿನಾ ಬೆಳಗ್ಗೆ ಭೂಲೆ ಬಿಸರೇ ಗೀತ್... ಕೊನೆಯ ಹಾಡು ಸೈಗಲ್. ಆಮೇಲೆ ಆಪ್ ಹೀ ಕೆ ಗೀತ್... ಮೈಸೂರು ಆಕಾಶವಾಣಿಯ ಕನ್ನಡ ಚಿತ್ರ ಗೀತೆಗಳು ಇವನ್ನು ಕೇಳಿ ಬೆಳೆದೆ. ನನ್ನ ಸೋದರತ್ತೆಯ ಪುರಂದರದಾಸರ ದೇವರನಾಮಗಳು ರೇಡಿಯೋದಲ್ಲಿ ಬಂದರೆ ಥ್ರಿಲ್ಲೋ ಥ್ರಿಲ್ಲು. ವಿಶೇಷವಾಗಿ ಬಾರೆ ಗೋಪಿ ಬಾಲಕನಳುತಾನೆ ಹಾಡನ್ನು ದುರ್ಗಾ ರಾಗದಲ್ಲಿ ಅದ್ಭುತವಾಗಿ ಹಾಡುತ್ತಿದ್ದರು. ಈಗ  ದುರ್ಗಾ ರಾಗದಲ್ಲಿ ಯಾವ ಹಾಡು ಬಂದರೂ ಕಂಡು ಹಿಡಿಯಬಲ್ಲೆ. ಆಗ ಅದ...

ಯತಿ ಸ್ವಂತೀ -127

07-05-2018 ಒಂದು ಚಿಕ್ಕ ಗುಂಡಿ ತೋಡಿ ಅದರ ಮೇಲೆ ಔಟಾದವನ ಕೋಲನ್ನು ಅಡ್ಡಡ್ಡಲಾಗಿಟ್ಟು ನಮ್ಮ ಕೈಲಿನ ಕೋಲಿನಿಂದ ನೂಕಬೇಕು. ಆಮೇಲೆ ಕೈಲಿರೋ ಕೋಲಿನಿಂದ ಅದನ್ನು ತಳ್ಳುತ್ತಾ ಹೋಗಬೇಕು. ಚುಜೀಪ್ ಅನ್ನೋ ಶಬ್ದ ಹೇಳುತ್ತಿದ್ದ ನೆನಪು. ಅದಕ್ಕಿಂತ ಹೆಚ್ಚಿಗೆ ನೆನಪಿಲ್ಲ. ನಮ್ಮ ಮನೆ ಮುಂದೆ ಇದ್ದ ಫೀಲ್ಡ್‌ನಲ್ಲಿ ಕೇವಲ ಒಂದು ಮರವಿತ್ತು. ಗುಲ್ ಮೊಹರ್ ಅಥವಾ ಮೇ ಫ್ಲವರ್ ಮರ. ಅದರ ಹೂವುಗಳನ್ನು ಕಿತ್ತು ಅದರಲ್ಲಿನ ಐದು ದಳಗಳಲ್ಲಿ ಒಂದು ಬಿಳಿ ಮಿಶ್ರಿತ ಕೆಂಪು ದಳ, ಉಳಿದವು ಕೆಂಪು ದಾಳಗಳು. ಬಿಳಿ ಕೆಂಪು ದಳ ತಿನ್ನುತ್ತಿದ್ದೆವೆಂದು ನೆನಪು. ತುಂಬೆ ಗಿಡ ಮನೆಯ ಮುಂದೆ ಇತ್ತು. ಅದರ ಹೂ ಕಿತ್ತು ಅದರ ಹಿಂದಿನ ಭಾಗವನ್ನು ಬಾಯಲ್ಲಿ ಇಟ್ಟುಕೊಂಡು ಗಾಳಿ ಎಳೆದುಕೊಂಡರೆ ಸಿಹಿಯಾಗಿರುತ್ತಿತ್ತು. ಬೆಟ್ಟದ ನೆಲ್ಲಿಕಾಯಿ ಮರವಿದ್ದವರ ಮನೆಯಲ್ಲಿ ಕಾಯಿ ಪಡೆದು (ಕದ್ದು?) ತಿಂದು ನೀರು ಕುಡಿದರೆ ಬಾಯಿ ಸೀ  ಸೀ ಆಗುತ್ತಿತ್ತು. ಕಿರುನೆಲ್ಲೀಕಾಯಿಗೆ ಉಪ್ಪು ಖಾರ ಹಾಕಿಕೊಂಡು ತಿಂದರೆ ಆಹಾ... ಏನು ರುಚಿ... ಮಾವು ಸಪೋಟ ಹಲಸು ಹೀಗೆ ಎಲ್ಲ ಮರಗಳೂ ಕ್ವಾರ್ಟರ್ಸ್‌ನ ಯಾವುದಾದರೊಂದು ಮನೆಯಲ್ಲಿ ಇರುತ್ತಿದ್ದವು. ಅಮ್ಮ ನಮಗೆ ಎಲ್ಲ ತರಕಾರಿಗಳನ್ನೂ ತಿನ್ನುವ ಅಭ್ಯಾಸ ಮಾಡಿಸಿದ್ದರು. ಈಗಿನ ಮಕ್ಕಳು ಇದಿಷ್ಟ ಇಲ್ಲ ಅದು ಬೇಡ ಎಂದು ಮೂಗೆಳೆಯುವುದನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ನಾಟ್ ಎನಫ್ ಪರ್ಸುಯೇಶನ್... ನಾವೇನು ಕೊಟ್ಟೊಡನೆ ಒಪ್ಪುತ್ತಿರಲಿಲ್ಲ. ಚತ...

ಯತಿ ಸ್ವಂತೀ -126

06-05-2018 ರವೀಂದ್ರ, ಶ್ರೀಕಂಠ, ಕಣ್ಣ, ನಾನು ಸಹಪಾಠಿಗಳು. ನಮ್ಮ ತಂಗಿಯರು ಎಲ್ಲರೂ ಸಹಪಾಠಿಗಳು. ಸಂಜೆ ಆಡೋಕ್ಕೆ ಎಲ್ಲಾ ಸೇರುತ್ತಿದ್ದೆವು. ಐಸ್‌ಪೈಸ್ (ಇದರ ನಿಜವಾದ ಹೆಸರು ಐ ಸ್ಪೈ ಯು ಅಂತ ಗೊತ್ತಾಗಿದ್ದು ಬಹಳ ತಡವಾಗಿ!) ಆಟ. ಗೋಡೆ ಕಡೆ ಮುಖ ಮಾಡಿ ಒಬ್ಬರು ನೂರು ಎಣಿಸೋದು. ಉಳಿದೋರು ಅವಿತುಕೊಳ್ಳೋದು. ಎಣಿಸಿದೋರು ಉಳಿದವರಲ್ಲಿ ಒಬ್ಬರನ್ನು ಕಂಡು ಹಿಡಿದು ಓಡಿ ಮುಖ ಮುಚ್ಚಿ ನೂರು ಎಣಿಸಿದ್ದ ಗೋಡೆಯ ಮೇಲೆ ಹೋಗಿ... '... ಐಸ್‌ಪೈಸ್' ಎಂದರಚಬೇಕು. ಎಲ್ಲ ಹೊರಗೆ ಬರೋದು. ಸಿಕ್ಕಾಕೊಂಡೋರು ಎಣಿಸೋದು. ಒಂದು ವೇಳೆ ಬೇರೆ ಯಾರಾದರೂ ಬಂದು ಆ ಗೋಡೆ ಮುಟ್ಟಿ '... ಎಣಿಸೋನು ಐಸ್‌ಪೈಸ್' ಅಂದುಬಿಟ್ಟರೆ ಅವನೇ ಮತ್ತೆ ಔಟ್. ಪುನರಾಯಾನ್... ಗುಲ್ಟೋರಿಯಾ. ಇದರಲ್ಲಿ ಒಬ್ಬರು ನೂರು ಪುಟ್ಟ ಕಲ್ಲುಗಳನ್ನೋ, ಗಂಟೆ ಗಿಡದ ನೂರು ಎಲೆಗಳನ್ನು ಕಿತ್ತೋ ಸಂಗ್ರಹಿಸಿಕೊಳ್ಳಬೇಕು. ಉಳಿದವರು ಫುಲ್ ಸ್ಕ್ಯಾಟರ್. ನಮ್ಮ ಮನೆಯ ಎದುರು ಫೀಲ್ಡ್. ಅದರಾಚೆ ವ್ಯಾಗನ್ನುಗಳು ಕಂಬಿಯಿಂದ ಹೊರಗೆ ಬಿದ್ದಿರುತ್ತಿದ್ದವು. ಅವನ್ನು ಕಂಡೆಮ್ಡ್ ವ್ಯಾಗನ್ ಅನ್ನೋರು. ವರ್ಷಕ್ಕೊಮ್ಮೆ ಅವನ್ನು ಹರಾಜು ಹಾಕುತ್ತಿದ್ದರು. ಅವನ್ನು ಲಾರಿ ಬಾಡಿ ಬಿಲ್ಡರುಗಳು ಕೊಳ್ಳುತ್ತಿದ್ದರು. ಪ್ರಸ್ತುತ ಅವು ನಮ್ಮ ಬೈತಿಟ್ಟುಕೊಳ್ಳುವ ಜಾಗಗಳು. ಔಟಾದೋನು ನಮ್ಮನ್ನು ಹುಡುಕುತ್ತಾ ಬಂದು ಯಾರಾದರೊಬ್ಬರನ್ನು ಕಂಡು '... ಗುಲ್ಟೋರಿಯಾ' ಎಂದು ಕಿರುಚಿಕೊಂಡಾಗ ...

ಯತಿ ಸ್ವಂತೀ -125

  05-05-2018 ನಾಗರತ್ನಮ್ಮ ಮಿಸ್ ಒಬ್ಬರ ನೆನಪಿದೆ.  ನಾನು ಮಿಡ್ಲ್ ಸ್ಕೂಲಿಗೆ ಹೋದಾಗ ಅವರೂ ಅಲ್ಲಿಗೆ ವರ್ಗವಾಗಿ ಬಂದರು. ಮನೆಯಲ್ಲಿ ನಮ್ಮಿಬ್ಬರ ಕಾಟ ತಡೆಯಲಾಗದೇ ಅಮ್ಮ ನಮ್ಮನ್ನು ನಮ್ಮ ಮನೆಯ ಹಿಂದಿನ ಮೂರನೇ ಅಥವಾ ನಾಲ್ಕನೇ ರಸ್ತೆಯಲ್ಲಿದ್ದ ಶ್ರೀ ನಾಗಾನಂದ ಅವರ ಮನೆಗೆ ಬೆಳಗ್ಗೆ ಕಳಿಸಲಾರಂಭಿಸಿದರು. ನಾಗಾನಂದ ಅವರು ಅನೇಕ ಶ್ಲೋಕ ಮತ್ತು ಭಜನೆಗಳನ್ನು ಹೇಳಿಕೊಟ್ಟರು. ಹಾಗೇ ಭಗವದ್ಗೀತೆ ಕೂಡ. ಅದಕ್ಕೇ ಅವರಿಗೆ ಗೀತೆ ಮಾಮಾ ಎನ್ನುತ್ತಿದ್ದೆವು. ಅವರ ಪತ್ನಿ ಮಣಿ ಮಾಮಿ.  ನಮ್ಮನ್ನೆಲ್ಲ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಮಗೆ ಬಹಳ ಸಲ ಅನೇಕ ರೀತಿಯ ಚರುಪು ಕೊಟ್ಟಿದ್ದು ನೆನಪಿದೆ. ನಮ್ಮ ಫೇವರಿಟ್ ಕಡಲೇಹಿಟ್ಟು. ಅದಕ್ಕೆ ಸಕ್ಕರೆ ಹಾಕಿರುತ್ತಿದ್ದರು. ಅದನ್ನು ಬಾಯಿಗೆ ಹಾಕಿಕೊಂಡು ಜೋರಾಗಿ ಬೂಬಮ್ಮ ಎನ್ನುತ್ತಿದ್ದೆವು. ಭುಸ್ ಎಂದು ಹಿಟ್ಟಿನ 'ಹೊಗೆ' ಹೊರಗೆ ಹಾರುತ್ತಿತ್ತು. ಅದೊಂದು ವಿನೋದ ನಮಗೆ. ಕೃಷ್ಣಾನಂತ ಮುಕುಂದ ಮುರಾರೇ... ರಾಧೇ ರಾಧೇ ರಾಧೆ ಗೋವಿಂದ... ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಈ ಭಜನೆಗಳನ್ನು ನಮಗೆ ಕಲಿಸಿದರು ಗೀತೆ ಮಾಮಾ. ಬಹಳ ಸಲ ಬಾಯಿಪಾಠ ಮಾಡಿಸುತ್ತಿದ್ದರು. ನಾವು ಸರಿಯಾಗಿ ಉಚ್ಚರಿಸದಿದ್ದರೆ ಟರ್ಕಿ ಟವೆಲ್ ಒಂದನ್ನು ಅದರ ಎರಡು ತುದಿ ಹಿಡಿದು ತಿರುಗಿಸಿ ತಿರುಗಿಸಿ ಎರಡೆಳೆಯ ಕೋಲು ಮಾಡಿಕೊಂಡು ಸರಿಯಾಗಿ ಹೇಳದಿದ್ದರೆ ಅಂಡಿನ ಮೇಲೆ ಅಥವಾ ಕಾಲಿನ ಮೇಲೆ ಒಂದು ಏಟು ಹಾಕ...

ಯತಿ ಸ್ವಂತೀ -124

04-05-2018 ಸುಮಾರು ನಾಲ್ಕು ವರ್ಷಗಳ ವರೆಗಿನ ಬಾಲ್ಯದ ನೆನಪಿಲ್ಲ. ಪುಟ್ಟ ತಂಗಿ ಇದ್ದಾಳೆಂಬ ತಿಳಿವಳಿಕೆ ನಾಲ್ಕು ವರ್ಷಗಳಿಗೆ ಬಂದಿರಬಹುದು. ಐದು ವರ್ಷಗಳು ಆಗುವ ಮೊದಲೇ ಅಂದರೆ ಐದಾಗಲು ಎರಡೂವರೆ ತಿಂಗಳುಗಳಿರುವಾಗಲೇ ಗೌರ್ನಮೆಂಟ್ ಮಿಕ್ಸೆಡ್ ಪ್ರೈಮರಿ ಸ್ಕೂಲ್‌ಗೆ ಸೇರಿಸಿದರು. ಕೆಲವು ಸಹಪಾಠಿಗಳ ಹೆಸರುಗಳ ನೆನಪಿವೆ. ಮಕ್‌ಬೂಲ್ - ಇವನು ನಮ್ಮ ಎದುರು ಮನೆ ಹುಡುಗ. ಮಹಾ ತರಲೆ. ಬಾಬ್ಬಿ ಸ್ಟೀವನ್‌ಸನ್ - ಒಂಟಿಕೊಪ್ಪಲ್ ರೈಲ್ವೆ ಕ್ವಾರ್ಟರ್ಸ್‌ನಿಂದ ಬರುತ್ತಿದ್ದ. ನನ್ನ ಜೊತೆ ಮಿಡ್ಲ್ ಸ್ಕೂಲಿಗೂ ಬಂದ. ಜೈಪಾಲ್, ರವಿ, ಶ್ರೀನಿವಾಸ್ ರಂಗಾಚಾರ್, ಕೃಷ್ಣಮೂರ್ತಿ (ಕೊನೆಯವರಿಬ್ಬರೂ ಅನ್ಯಾಯವಾಗಿ ಬೇಗನೆ ತೀರಿಕೊಂಡರು) ಮನೋಹರ ಮತ್ತು ಮನೋರಮ ಎಂಬ ನಾಲ್ಕನೇ ಕ್ಲಾಸ್ ವಿದ್ಯಾರ್ಥಿಗಳ ಬಗ್ಗೆ ಏನೇನೋ ಮಾತಾಡಿದ ನೆನಪು. ಬಹುಶಃ ನಾನು ಮೂರರಲ್ಲಿ ಇದ್ದೆನಾ? ತಿಳಿಯದು. ಎಂ ಎಂ ಯೂ ಎಂ ಎನ್ನುತ್ತಿದ್ದೆವು ನಾನು ಮಕ್‌ಬೂಲ್. ನಾನು ಮೂರು ದಿನ ಊಟ ಮಾಡಿಲ್ಲ ಕಣೇ ಎಂದಿದ್ದ ಮನೋಹರ. ಅದಕ್ಕೆ ಕೋಡ್ ವರ್ಡ್ ಮನೋಹರ ಮೂರ್ದಿನ ಊಟ ಮಾಡಿಲ್ಲ ಎನ್ನುವುದಕ್ಕೆ ಎಂ ಎಂ ಯೂ ಎಂ ಕೋಡ್ ವರ್ಡ್. ಇನ್ನೂ ಒಂದಿದೆ... ಬೇಡ ಬಿಡಿ... ಇದು ಮೂರನೇ ಕ್ಲಾಸ್ ಹುಡುಗನ ಮಾತಾ ಅನ್ನುವಿರಿ! ಯಾವ ಕ್ಲಾಸೋ ನೆನಪಿಲ್ಲ. ಪಿಕ್ನಿಕ್ ಪಾಠ ಇತ್ತು. ಮನೆಯಿಂದ ದೋಸೆ ತಂದೆ. ಬಹಳ ಬೇಗ ದಿವಂಗತ ಆಗಿರುವ ಕೃಷ್ಣಮೂರ್ತಿ ಹದ್ದು. ನನ್ನ ದೋಸೆ ಎಗರಿಸಿಕೊಂಡು ಹೋದ. ನಮ್ಮ ಮೇಡಂ ಜೊತೆಗ...

ಯತಿ ಸ್ವಂತೀ -123

03-05-2018 ನಮ್ಮ ಅಯ್ಯ ಬೆಳಗ್ಗೆ 6.50ಕ್ಕೆ ಮನೆ ಬಿಡುತ್ತಿದ್ದರು. ಅಷ್ಟರಲ್ಲಿ ತಿಂಡಿ ತಿಂದು ಊಟದ ಬುತ್ತಿ ತಗೊಂಡು ಹೊರಡುತ್ತಿದ್ದರು. ಮನೆಗೆ ಜೋರಾಗಿ ಕೇಳಿಸುತ್ತಿತ್ತು ಸೈರನ್. ಅದು ದಿನಕ್ಕೆ ಎರಡು ಸಲ ಕೂಗುತ್ತಿತ್ತು. ಬೆಳಗ್ಗೆ ಏಳು ಮತ್ತು ಸಂಜೆ ಐದು ಗಂಟೆ. ಇದರ ನೈಜ ಉಪಯೋಗ ಯಾವುದಾದರೂ ರೈಲು ಅಪಘಾತ ಆದಾಗ. ಏಕೆಂದರೆ ರೈಲುಗಳಿಗೆ ಸಂಬಂಧ ಪಟ್ಟವರೆಲ್ಲ ಅಪಘಾತದ ಸ್ಥಳ ತಲುಪಲು ಮನೆಯಿಂದ ರೈಲ್ವೇ ನಿಲ್ದಾಣಕ್ಕೆ ಧಾವಿಸುತ್ತಿದ್ದರು. ಜನರಿದ್ದ ರೈಲಿಗೆ ಅಪಘಾತವಾದರೆ ಒಂಬತ್ತು ಸಲ ಮತ್ತು ಗೂಡ್ಸ್ ರೈಲಾದರೆ ಏಳು ಸಲ ಕೂಗುತ್ತಿತ್ತು. ಆದರೆ ಬಳಸದೇ ಬಳಸದೇ ಅದಕ್ಕೆ 'ಗಂಟಲು' ಕಟ್ಟಿ ತುರ್ತು ಸಮಯದಲ್ಲಿ ಒಮ್ಮೆ ಕೂಗಲಿಲ್ಲ. ಅದಕ್ಕೇ 7 ಮತ್ತು 5 ಗಂಟೆಗೆ ಕೂಗಿಸುವ ಪರಿಪಾಠ ಆರಂಭವಾಗಿತ್ತು. ಅಯ್ಯ ಅವರ ರೈಲು ಏಳು ಗಂಟೆಗೆ ಹೊರಡುತ್ತಿತ್ತು. ಅದೊಂದು ವಿಶೇಷ ರೈಲು. ಮೈಸೂರು, ಚಾಮರಾಜಪುರಂ ಆದ ನಂತರ ಅಶೋಕಪುರಂ. ಅಲ್ಲಿ ಇದ್ದ ವರ್ಕ್‌ಶಾಪ್‌ನಲ್ಲಿ ನಮ್ಮ ಅಯ್ಯ ಎಲೆಕ್ಟ್ರಿಕಲ್ ಛಾರ್ಜ್‌ಮನ್ ಆಗಿದ್ದರು. ಇಂಟರ್‍‌ನಲ್ಲಿ (ಪಿಯುಸಿ)ಬಾಟನಿ ಓದಿದ ಅಯ್ಯ ಎಲೆಕ್ಟ್ರಿಕಲ್ ಕೆಲಸ ಕಲಿತು ಉದ್ಯೋಗಕ್ಕೆ ಸೇರಿದ್ದರು. ನನ್ನ ಅಯ್ಯ ಅವರ ಅಯ್ಯ ರಾಮಾನುಜಂ ವೀರಾಂಬುಧಿ. ಅವರ ಹೆಸರೇ ನನ್ನದು. ನನ್ನ ಜನ್ಮ ನಾಮ. ಆಮೇಲೆ  ರಾಮಾನುಜಾಚಾರ್ಯರ (ನಮ್ಮ ಗುರುಗಳು) ಮತ್ತೊಂದು ಹೆಸರಾದ ಯತಿರಾಜ್ ಎಂದು ಇಟ್ಟರು. ಇತ್ತೀಚೆಗೆ ರಾಮಾನುಜಾಚಾರ್ಯರ ಸಾವಿರ ...

ಯತಿ ಸ್ವಂತೀ -122

02.05.2018 ಪ್ರೈಮರಿ ಶಾಲೆಗೆ ಬಹಳ ದೂರ ಹೋಗಬೇಕಿರಲಿಲ್ಲ. ಸಮವಸ್ತ್ರ ಇತ್ತೋ ಇಲ್ಲವೋ ನೆನಪಿಲ್ಲ. ಬಹುಶಃ ರೈಲ್ವೇ ಉದ್ಯೋಗಿಗಳ ಮಕ್ಕಳೆಲ್ಲಾ ಅಲ್ಲೇ ಬರುತ್ತಿದ್ದರು. ನನ್ನ ಬಾಲ್ಯ ಮತ್ತು ಕಿಶೋರಾವಸ್ಥೆ ಒಂದೇ ಮನೆಯಲ್ಲಿ ಕಳೆಯಿತು. ಕೆಲವು ಶಬ್ದಗಳನ್ನು ನಾವು ಕೇಳದೇ ಇದ್ದ ದಿನವಿಲ್ಲ. ವೈಪೀ ವೈಡೀ ಸ್ಟೀಂ ಎಂಜಿನ್‌ಗಳು ಬಿಎಂಶ್ರೀ ಅವರ ವಸಂತ ಬಂದ ಹಾಡಿನ 'ಕೂವು ಝಗ್ ಝಗ್' ಸದ್ದು ಮಾಡುತ್ತಿದ್ದವು. ಹೆಚ್ಚಿನ ಆವಿಯನ್ನು ಬ್ಲೋ ಡೌನ್ ಮಾಡುತ್ತಿದ್ದರು. ಡಭಾರ್ ಎನ್ನುವ ಸದ್ದು ಮನೆಯ ವರೆಗೆ ಕೇಳಿಸುತ್ತಿತ್ತು. ಸಾಮಾನ್ಯವಾಗಿ ಬ್ಲೋ ಡೌನ್ ನಮ್ಮ ಶಾಲೆಯ ಮುಂದೆ ಆಗುತ್ತಿತ್ತು. ಶಾಲೆಯ ಮುಂದೆಯೇ ಅರಸೀಕೆರೆ ಮತ್ತು ಬೆಂಗಳೂರಿನ ರೈಲುಗಳು ಹಾದು ಹೋಗುತ್ತಿದ್ದವು. ಎಬಿಸಿ.. ಅಂದರೆ ಅರಸೀಕೆರೆ ಬೆಂಗಳೂರು ಮತ್ತು ಚಾಮರಾಜನಗರ. ಅದು ಈ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ಅಂದರೆ ದಕ್ಷಿಣಕ್ಕೆ ಹೋಗುತ್ತಿತ್ತು. ನಂಜನಗೂಡು, ಕಡಕೊಳ ಆ ಹಾದಿಯಲ್ಲಿನ ಎರಡು ನಿಲ್ದಾಣಗಳು. ಮನೆಯ ಮುಂದೆ ಒಂದು ಫೀಲ್ಡ್. ಅದರಾಚೆ ರೈಲು ಕಂಬಿಗಳು. ಒಂದು ಮೋರಿ (ನಮ್ಮ ಮನೆಯ ಮೀನುಗಳ ತವರುಮನೆ!) ಒಂದು ಅಪ್ ಹತ್ತಿದರೆ ದೊಡ್ಡ ಫೀಲ್ಡ್. ಅದರ ಆಚೆ ನಮ್ಮ ರೈಲ್ವೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ. ಸ್ವಲ್ಪ ಬಲಗಡೆಗೆ ಡಿಸ್ಪೆನ್ಸರಿ. ಅದರಾಚೆ ಸೆಂಟ್ರಲ್ ಫುಡ್  ಟೆಕ್ನಲಾಜಿಕಲ್ ರೀಸರ್ಚ್ ಇನ್ಸ್‌ಟಿಟ್ಯೂಟ್ (ಸಿ ಎಫ್ ಟಿ ಆರ್ ಐ). ಅದರ ಮುಂದಿನ ರಸ್ತೆ ಕೆ. ಆರ...

ಯತಿ ಸ್ವಂತೀ -121

01-05-2018 ನನಗೆ ನೆನಪಿರುವ ಮಟ್ಟಿಗೆ ದಾಖಲೆ ಮಾಡುತ್ತಿರುವ ಈ ಯತಿ ಸ್ವಂತೀಯಲ್ಲಿ ರಿಪಿಟಿಶನ್ ಇದ್ದರೆ ಪಾಪ ವಯಸ್ಸಾಯ್ತು ಅಂತ ದೊಡ್ಡ ಮನಸ್ಸು ಮಾಡಿ ಕ್ಷಮಿಸಿಬಿಡಿ..! ನನ್ನ ಬಹಳ ಮೊದಲ ನೆನಪು ರೈಲ್ವೇ ಕಾಲೋನಿಯ ಮನೆಯ ಬಗ್ಗೆ. ಒಂದು ಓಪನ್ ವರಾಂಡಾ (ಆಮೇಲೆ ಅದಕ್ಕೆ ಕ್ರಿಸ್ ಕ್ರಾಸ್ ಬಿದಿರಿನ ಟ್ರೆಲ್ಲಿಸ್ ಹಾಕಿ ಮುಚ್ಚಿದರು). ಒಂದು ಹಾಲ್... ಹಾಲ್ ಪಕ್ಕದಲ್ಲಿ ರೂಂ, ಹಾಲ್‌ನಿಂದ ಮುಂದೆ ಪ್ಯಾಸೇಜ್, ಎಡಗಡೆಗೆ ಬಾತ್ ರೂಮ್, ಬಲಗಡೆಗೆ ಸ್ಟೋರ್ ರೂಂ, ಅದರ ಪಕ್ಕದಲ್ಲೇ ಅಡುಗೆ ಮನೆ. ಪ್ಯಾಸೇಜಿಗೆ ಚೌಕಾಕಾರದ ತೂತುಗಳ ಗಟ್ಟಿ ಮರದ 'ಗೋಡೆ'. ಹಿಂದೆ ಖಾಲಿ ಜಾಗ ಎಡ ಅಂಚಿನಲ್ಲಿ ಟಾಯ್ಲೆಟ್. ಹೊರಬಾಗಿಲಿನಿಂದ ಹಿತ್ತಿಲಿನ ವರೆಗೆ ರೈಲಿನ ಹಾಗೆ ಹಾದಿ. ಕೊನೆಯಲ್ಲಿ ಮರದ ಬಾಗಿಲು. ಆರಡಿ ಗೋಡೆ. ಅದರಾಚೆ ಕನ್ಸರ್ವೆನ್ಸಿ. ಇಪ್ಪತ್ತು ಅಡಿಗಳಾಚೆ ಇನ್ನೊಂದು ಮನೆಯ ಹಿಂಬಾಗಿಲು. ಹಿತ್ತಿಲಲ್ಲಿ ನೀರಿನ ದೊಡ್ಡ ತೊಟ್ಟಿ. ಒಗೆಯುವ ಕಲ್ಲು. ನಲ್ಲಿ. ಇಪ್ಪತ್ನಾಲ್ಕು ಗಂಟೆ ಕಾವೇರಿ ನೀರು. ಕಾಲೋನಿ ಪಕ್ಕದ ವಾಟರ್ ವರ್ಕ್ಸ್‌ನಲ್ಲಿ ಶುದ್ಧಗೊಂಡು ಬರುತ್ತಿದ್ದಳು ಕಾವೇರಿ. ಕೆಂಪು ಮತ್ತು ಬಿಳಿ ಹಣ್ಣಿನ ಸೀಬೆ ಮರಗಳು. ಹುಳಿ ಮತ್ತು ಸಿಹಿ ದಾಳಿಂಬೆ ಮರಗಳು. ಒಂದೆರಡು ಗುಲಾಬಿ ಗಿಡಗಳು. ಕಾಕಡ ಗಿಡ. ಹತ್ತಿರದ ಗಲೀಜು ನೀರಿನ ಮೋರಿಯಿಂದ ಗಪ್ಪಿ ಮೀನುಗಳನ್ನು ತಂದು ತೊಟ್ಟಿಯಲ್ಲಿ ಬಿಟ್ಟೆವು. ಅವಕ್ಕೆ ಆಟ ಆಡಲಿಕ್ಕೆ ಕಲ್ಲುಗಳಲ್ಲಿ ಗುಹೆಗಳು, ಜಲ...