Posts

Showing posts from April, 2018

ಯತಿ ಸ್ವಂತೀ -120

30-04-2018 ಅಮ್ಮನನ್ನು ಕಾರಿನಲ್ಲಿ ಕರೆದೊಯ್ದು ಇಂಪ್ರೆಸ್ ಮಾಡಲು ನೋಡಿದೆ. ‘ರಾಜು, ನಿನಗಿಂತ ಉಷಾನೇ ಚೆನ್ನಾಗಿ ಕಾರೋಡಿಸ್ತಾಳೆ’ ಎಂದುಬಿಟ್ಟರು! ನನ್ನ ಪತ್ನಿ ಉಷಾ ಮಾರುತಿ ಆಮ್ನಿಯನ್ನು ಓಡಿಸುತ್ತಿದ್ದಳು. ಅವಳೊಂದಿಗೆ ಇವರೂ ಎಲ್ಲೆಡೆ ಹೋಗುತ್ತಿದ್ದರು. ಅದಕ್ಕೇ ಅವಳಿಗೆ ಕಾಂಪ್ಲಿಮೆಂಟು! ನನ್ನಮ್ಮನೇ ಹಾಗೆ. ಗುಣಕ್ಕೆ ಮತ್ಸರ ಇಲ್ಲ! ಅಂತೂ ಇಂತೂ ಎರಡು ತಿಂಗಳು ಇದ್ದರು. ಆರು ತಿಂಗಳಾದರೂ ಇರಲಿ ಎನ್ನುವುದು ನನ್ನ ಇಚ್ಛೆಯಾಗಿತ್ತು. ಆದರೆ ಅಷ್ಟರಲ್ಲಿ ನಮ್ಮ ದೊಡ್ಡಮ್ಮನ ಮೊಮ್ಮಗನ ಮುಂಜಿ ಎನ್ನುವ ಸುದ್ದಿ ಬಂದಿತು. ‘ನಾನು ಹೋಗಬೇಕು. ನಮ್ಮ ಎಲ್ಲ ನೆಂಟರನ್ನೂ ಒಂದು ಕಡೆ ನೋಡಬಹುದು’ ಎಂದು ಹೇಳತೊಡಗಿದರು. ಇನ್ನು ಅವರನ್ನು ಇರು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಅವರನ್ನು ಕಳಿಸುವ ಏರ್ಪಾಡು ಮಾಡಿದೆ. ನಾನು ಮಸ್ಕತ್‍ಗೆ ಹೋದ ಹೊಸತರಲ್ಲಿ ಯಾವುದೋ ಒಂದು ಕನ್ನಡದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಒಬ್ಬ ತಮಿಳು ಯುವಕನ ಪರಿಚಯವಾಗಿತ್ತು. ಆಗ ನಾನು ಬೆಳ್ಳಗೆ, ಸ್ಥೂಲವಾಗಿ, ಮೀಸೆ ಇಲ್ಲದವನಾಗಿದ್ದೆ. ಒಂದು ವರ್ಷದಲ್ಲಿ ಕಪ್ಪಾಗಿ, ಸಣ್ಣಗಾಗಿ, ಮೀಸೆ ಬಿಟ್ಟಿದ್ದೆ. ಎರಡನೇ ಅವತಾರದಲ್ಲಿದ್ದಾಗ ದಯಾನಂದ ಅವರ ಕಾಮಿಡಿ ಷೋಗೆ ಹೋಗಿದ್ದೆ. ಆತ ಒಬ್ಬರೇ ಅದೇ ಮೊದಲ ಸಲ ಬಂದಿದ್ದಂತೆ. ಅಬ್ಬಾ, ನಗಿಸಿ ಹೊಟ್ಟೆ ಹುಣ್ಣಾಗಿಸಿದರು. ಹೊರಗೆ ಬರುತ್ತಿದ್ದಾಗ ‘ಯತಿರಾಜ್’ ಎಂದ ಒಬ್ಬಾತ. ಅವನೇ! ಹಿಂದೊಮ್ಮೆ ನೋಡಿದ್ದ ತಮಿಳು ಯುವಕ.  ಆದರೆ ಅನುಮಾ...

ಯತಿ ಸ್ವಂತೀ -119

29-04-2018 ಅಮ್ಮನನ್ನು ನೋಡಿ ಸ್ವಲ್ಪ ಗಾಬರಿಯಾಯಿತು. ಬಹಳ ನಿಧಾನವಾಗಿ ನಡೆಯುತ್ತಿದ್ದರು. ಪಾದರಸದಂತೆ ಇರುತ್ತಿದ್ದ ನನ್ನ ಅಮ್ಮ ಇವರೇನಾ? ಎಂದುಕೊಂಡೆ. ಅಂದ ಹಾಗೆ ನಾನು ಆಫೀಸಿನ ಮೇಲಿನ ರೂಮಿನಿಂದ ಹತ್ತಿರದ ಸ್ಟಾರ್ ಸಿನಿಮಾ ಥಿಯೇಟರ್ ಪಕ್ಕದ ಫ್ಲ್ಯಾಟ್‍ನಲ್ಲಿ ಒಂದು ರೂಮು ಬಾಡಿಗೆಗೆ ಪಡೆದೆ. ನನಗೆ 80 ರಿಯಾಲ್ ಸಂಬಳ ಇದಕ್ಕೆಂದೇ ಹೆಚ್ಚು ಕೊಟ್ಟರು. ಅದೊಂದು ನಾಲ್ಕು ರೂಮುಗಳ ಒಂದು ಬಾತ್‍ರೂಮ್, ಒಂದು ಕಿಚೆನ್ ಇದ್ದ ಪ್ಲ್ಯಾಟ್. ನಾಲ್ಕನೇ ಮಹಡಿ ಎಂದು ನೆನಪು. ಆ ಫ್ಲ್ಯಾಟ್ ಒಳಗೆ ಕಾಲಿಡುತ್ತಿದ್ದಂತೆ ಒಂದು ರೂಮು. ಅದು ಕೇರಳದ ಶಂಶುದ್ದೀನ್ ರೂಮ್. ಅದರ ಪಕ್ಕದ್ದು ಉತ್ತರ ಭಾರತದ ಅಷ್ಫಾಕ್‍ನ ರೂಮು. ನಡುವೆ ಒಂದು ಕಿಚೆನ್. ಆಮೇಲೆ ಬಾತ್‍ರೂಮ್. ಅದರ ಎದುರಿಗೆ ನನ್ನ ರೂಮು. ನನ್ನ ರೂಮಿನ ಬಾಗಿಲ ಪಕ್ಕದಲ್ಲಿದ್ದ ರೂಮು ಮುಂಬೈನ ರಾಜ್‍ಶೆಟ್ಟಿಯದು. ಮೊದಲೇ ಹೋಗಿ ‘ನನ್ನ ತಾಯಿ ಬರುತ್ತಿದ್ದಾರೆ. ಇಲ್ಲಿದ್ದರೆ ಪರವಾಗಿಲ್ವಾ?’ ಎಂದು ಕೇಳಿದೆ. ಎಲ್ಲರೂ ಕೆಲಸಕ್ಕೆ ಹೋಗುವವರು. ಇದ್ದಿದ್ದು ಒಂದು ಬಾತ್‍ರೂಮ್. ಪಾಪ ಅಮ್ಮ ಅಡ್ಜೆಸ್ಟ್ ಮಾಡಿಕೊಂಡರು. ಎಂಟೂವರೆ ಹೊತ್ತಿಗೆ ಎಲ್ಲರೂ ಹೊರಟುಬಿಡುತ್ತಿದ್ದೆವು. ಆಮೇಲೆ ಕೇವಲ ಅಮ್ಮ ಮಾತ್ರ ಆ ಫ್ಲ್ಯಾಟ್‍ನಲ್ಲಿ. ಊಟ ತರಿಸುತ್ತೇನೆಂದೆ. ನನಗೆ ಬೋರಾಗುತ್ತೆ. ಅಡಿಗೆ ಮಾಡ್ತೀನಿ ಎಂದರು. ಕಿಚೆನ್ ಕ್ಲೀನ್ ಮಾಡಿ ಸಾಮಾನುಗಳನ್ನು ತಂದೆ. ಈ ನಡುವೆ ನನಗೆ ಲೈಟಿಂಗ್ ಷೋ ರೂಮ್‍ನಿಂದ ಹೆಡ್ ಆಫೀಸ್‍ಗೆ ವ...

ಯತಿ ಸ್ವಂತೀ -118

28-04-2018 ಹೇಗಪ್ಪಾ ನನ್ನ ಕಾರು ಹೊರಗೆ ತರುವುದು ಎಂದು ಚಿಂತಿಸುತ್ತಿದ್ದಂತೆ ದೇವತೆಗಳು ಪ್ರತ್ಯಕ್ಷವಾಗಿದ್ದರು! ಹೌದು, ಆ ವಿಲ್ಲಾದ ಒಳಗಿನಿಂದ ಸುಮಾರು ಐದಾರು ಜನ ಭಾರತೀಯರು ಹೊರಬರುತ್ತಿದ್ದರು. ಬನ್ನಿ ಎಂದು ಹಿಂದಿಯಲ್ಲಿ ಕೂಗಿದೆ. ಬಂದರು. ಅವರ ಮುಖಗಳ ಮೇಲೆ ಗಾಬರಿ. ಅವರು ಆ ವಿಲ್ಲಾ ಕಟ್ಟುತ್ತಿದ್ದ ಕಾರ್ಮಿಕರು. ನನ್ನ ಕಾರಿನ ಬಂಪರ್ ಅವರ ಅರ್‍ಬಾಬ್(ಮಾಲೀಕ) ವಿಲ್ಲಾದ ಕಾಂಪೌಂಡು ಗೋಡೆಗೆ ಮುತ್ತಿಕ್ಕಿದೆ! ಹಿಂದೊಮ್ಮೆ ನಾನು ನಮ್ಮ ಮನೆಯಲ್ಲಿದ್ದ ಮಾರುತಿ ಆಮ್ನಿ ಕಾರು ಹಳ್ಳವೊಂದರಲ್ಲಿ ಸಿಕ್ಕಿಕೊಂಡಾಗ ಅದನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದು ನೆನಪಾಯಿತು. ಕೇವಲ ಮೂರು ಜನ ಅದನ್ನು ಎತ್ತಿದ್ದೆವು. ಈಗ ಅವರನ್ನು ಕೇಳಿದೆ. ಇದನ್ನು ರಸ್ತೆಗೆ ತರಲು ನಿಮಗೆ ಸಾಧ್ಯವೇ? ಆಗುತ್ತದೆ ಎಂದರು. ಆದರೆ ನಾನು ಹಣ ಕೊಡಲಾರೆ ಎಂದೆ. ಅವರಿಗೆ ನನ್ನ ಕಾರು ಅಲ್ಲಿಂದ ಹೋದರೆ ಸಾಕಿತ್ತು ಎನ್ನುವ ಭಾವನೆ ಇದ್ದಿದ್ದು ನನಗೆ ಕಾಣಿಸುತ್ತಲೇ ಇತ್ತು. ಒಳಗೆ ಕೂರೆಂದರು. ರಿವರ್ಸ್‍ಗೇರ್ ಹಾಕೆಂದರು. ಹಾಕಿದೆ. ಆರು ಜನರೂ ಸೇರಿ ಕಾರನ್ನೆತ್ತಿ ರಸ್ತೆಯಲ್ಲಿ ಇಟ್ಟುಬಿಟ್ಟರು. ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟುಬಿಟ್ಟೆ. ನಂತರ ಮತ್ತೆ ನಿಲ್ಲಿಸಿ ಪಿಆರ್‍ಓಗೆ ಕಾರನ್ನು ತೆಗೆದಾಯಿತೆಂದೆ. ಅವನಿಗೆ ಏಕೋ ಸಿಟ್ಟು ಬಂದಿರಬೇಕು. ಅವನ ಸಹಾಯವಿಲ್ಲದೇ ಕಾರನ್ನು ತೆಗೆದೆನೆಂದಿರಬಹುದು. ಪ್ರತಿಯೊಬ್ಬರಿಗೂ ನನ್ನ ಆಫೀಸಿನ ಪ್ರತಿಯೊಬ್ಬರಿಗೂ ನನ್ನ ಆಕ್ಸಿಡೆಂಟಿನ ವಿಷಯ ...

ಯತಿ ಸ್ವಂತೀ -117

27-04-2018 ಲಕ್ನೋದಲ್ಲಿ ಮಧ್ಯಾಹ್ನ ಊಟ ಮಾಡಿ ತಣ್ಣಗಿನ ಲಸ್ಸಿ ಕುಡಿದೆವು. ನನಗೆ ಮೊಸರಿಗೆ ಸಕ್ಕರೆ ಎಂದರೆ ಆಗುತ್ತಿರಲಿಲ್ಲ. ವ್ಯಾ ಎನ್ನುತ್ತಿದ್ದೆ. 1979ರಲ್ಲಿ ಬಿರುಬಿಸಿಲಿನಲ್ಲಿ ಚೆನ್ನೈಗೆ ಆಲ್ ಇಂಡಿಯಾ ಟೂರ್‍ನಲ್ಲಿ ಬಂದಾಗ ಎಲ್ಲರೂ ಕುಡಿಯುತ್ತಿದ್ದ ಲಸ್ಸಿಯನ್ನು ನಾನೂ ಕಷ್ಟಪಟ್ಟು ಕುಡಿಯೋಣವೆಂದು ಕೇಳಿ ಪಡೆದೆ. ಆದರೆ ಇಷ್ಟಪಟ್ಟು ಕುಡಿದೆ. ಆಮೇಲೆ ಕಲ್ಕತ್ತಾ, ಡೆಲ್ಲಿ, ಬಾಂಬೆ ಎಲ್ಲ ಕಡೆ ಕುಡಿದ ನೆನಪು. ‘ಬ್ರಿಜ್, ನಾನು 1979ರಲ್ಲಿ ಇಲ್ಲಿಗೆ ಬಂದಿದ್ದಾಗ ಇಲ್ಲಿನ ಒಂದು ಅರಮನೆಗೆ ಹೋಗಿದ್ದೆ. ಭೂಲ್‍ಭುಲೈಯ್ಯಾ ಅಂತ. ಅದಕ್ಕೆ ಕರೆದೊಯ್ಯುವೆಯಾ?’ ಎಂದು ಕೇಳಿದೆ. ಇಬ್ಬರೂ ಅಲ್ಲಿಗೆ ಹೊರಟೆವು. ಬಾಬಿ ಎನ್ನುವ ಜಬರ್ದಸ್ತ್ ಹಿಟ್ ಮೂವಿ ಬಂದಿತ್ತು. ಅದರಲ್ಲಿ ಡಿಂಪಲ್ ಕಪಾಡಿಯಾ ಲತಾಳ ದನಿಯಲ್ಲಿ, ‘ತೆರೆ ನೈನೋಂಕಿ ಭೂಲ್‍ಭುಲೈಯ್ಯಾಮೇ ಬಾಬಿ ಖೋ ಜಾಯೆ’ ಎಂದೆನ್ನುತ್ತಾಳೆ. ಆ ಅರಮನೆಯ ವೈಶಿಷ್ಟ್ಯವೇ ಅದು. ಒಳಗೆ ಹೋಗಲು ಜೊತೆಗೆ ಮಾರ್ಗದರ್ಶಿ ಬೇಕು. ಇಲ್ಲದಿದ್ದರೆ ಕಳೆದುಹೋಗಿಬಿಡುತ್ತೇವೆ. ನಾವಿದ್ದೆವು ಎಂದು ಯಾರಿಗಾದರೂ ಮೆರೆತುಹೋಗುತ್ತದೆ. ಮಾರ್ಗದರ್ಶಿ ಕರೆದೊಯ್ದ. ಅನೇಕ ಬಾಗಿಲುಗಳು, ಸುರಂಗಗಳು. ಶತ್ರುಗಳ ಆಗಮನವಾದರೆ ಮುಖ್ಯಗೇಟನ್ನು ಆ ಅರಮನೆಯ ನೆಲಮಾಳಿಗೆಯಿಂದ ನೋಡಬಹುದು! ನಿಜಕ್ಕೂ ಭೂಲ್‍ಭುಲೈಯ್ಯಾ ಎನ್ನುವ ಹೆಸರು ಸಾರ್ಥಕವಾಗುವಂತಹ ಕಟ್ಟಡ. 1979ರಲ್ಲಿ ಹೋಗಿದ್ದೆ. ಮತ್ತೆ 1987. ಮತ್ತೊಮ್ಮೆ 2011ರಲ್ಲಿ ಹೋಗಿದ್ದೆ. ಅ...

ಯತಿ ಸ್ವಂತೀ -116

26-04-2018 ಪ್ರವೀಣ ಊರಿಗೆ ಹೋದೊಡನೆ ನನಗೆ ಅವನ ಕಾರು ಕೊಟ್ಟಿದ್ದರಲ್ಲ! ಮೊದಲ ದಿನವೇ ಅದನ್ನು ಪಕ್ಕದ ಕಾರಿಗೆ ಮುತ್ತಿಕ್ಕಿಸಿದ್ದೆನಲ್ಲಾ! ಈಗ ನನ್ನ ಎಲ್ಲ ಕಸ್ಟಮರುಗಳ ಬಳಿಯೂ ಅದೇ ಕಾರಲ್ಲಿ ಓಡಾಡುತ್ತಿದ್ದೆ. ಶುಕ್ರವಾರ ಬೆಳಗ್ಗೆ ಐದೂವರೆಗೇ ಎದ್ದು ಬೆಂಗಳೂರಿನ ಮನೆಗೆ ಫೋನ್ ಮಾಡುತ್ತಿದ್ದೆ. ಅಲ್ಲಿ ಐದೂವರೆ ಎಂದರೆ ಬೆಂಗಳೂರಿನಲ್ಲಿ ಏಳು ಗಂಟೆ. ಮಕ್ಕಳು ಶಾಲೆಗೆ ಹೊರಡಲು ಸಿದ್ಧವಾಗಿ ತಿಂಡಿ ತಿನ್ನುವ ವೇಳೆ. ಶುಕ್ರವಾರ ಎಂದರೆ ನಮ್ಮೂರಿನ ಭಾನುವಾರ. ಮಕ್ಕಳಿಗಾಗಿ ಬೇಗನೆ ಏಳುತ್ತಿದ್ದೆ. ನಂತರ ನಿದ್ರೆ ಬರುತ್ತಿರಲಿಲ್ಲ. ಏನು ಮಾಡುವುದೋ ತೋಚುತ್ತಿರಲಿಲ್ಲ ಎಂಟುಗಂಟೆಗೆಲ್ಲ ತಿಂಡಿ ತಿಂದು ಮೊದಲ ಮಹಡಿಯಲ್ಲಿದ್ದ ಆಫೀಸಿಗೆ ಬರುತ್ತಿದ್ದೆ. ಒಂದು ದಿನ ಅಲ್‍ಖ್ವೈರ್ ಎನ್ನುವ ಜಾಗಕ್ಕೆ ಹೋದೆ. ಅಲ್ಲಿನ ಗ್ರಾಹಕ ಜಾನ್ ಒಂದು ರೀತಿ ಗೆಳೆಯನಂತಾಗಿಬಿಟ್ಟಿದ್ದ. ಬಹಳ ಹೊತ್ತು ಮಾತಾಡಿ ಅಲ್ಲಿಂದ ಹೊರಟೆ. ಅವತ್ತು ನನ್ನ ಎರಡನೆಯ ಆಕಸ್ಮಿಕ ಜರುಗಲಿತ್ತು ಎಂದು ಆ ಕ್ಷಣದಲ್ಲಿ ನನಗೆ ಹೊಳೆದಿರಲಿಲ್ಲ! ಕಾರು ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಸಿಂಗಲ್ ಟ್ರ್ಯಾಕ್ ಅದು. ಎದುರಿಗೆ ಒಂದು ಕಾರು ವೇಗವಾಗಿ ಬಂದಾಗ ತಬ್ಬಿಬ್ಬಾಗಿ (ಕಾರು ಡ್ರೈವಿಂಗ್ ಇನ್ನೂ ಹೊಸದೆಂದು ನೆನಪಿದೆ ಅಲ್ಲವೇ?) ಪಕ್ಕಕ್ಕೆ ತಿರುಗಿಸಿದೆ. ಅಷ್ಟೇ! ಕಾರು ಫುಟ್‍ಪಾತ್ ಮೇಲಿದ್ದ ಅನೇಕ ದೊಡ್ಡ ದೊಡ್ಡ ಕಲ್ಲುಗಳ ಮೇಲೆ ಹಾರಿ ಅಲ್ಲಿಯೇ ಕಟ್ಟಲ್ಪಡುತ್ತಿದ್ದ ಹೊಸ ವಿಲ್ಲಾ ಒಂದರ...

ಯತಿ ಸ್ವಂತೀ -115

25-04-2018 ಕಾನ್‍ಪುರದಲ್ಲಿ ಒಂದು ವೈಶಿಷ್ಟ್ಯ ಕಂಡೆ. ಟ್ರಾಫಿಕ್ ಸಿಗ್ನಲ್‍ನಲ್ಲಿ ಬಹಳ ರಷ್ ಇದ್ದರೆ ಮೀಡಿಯನ್ ಬಳಿ ರಸ್ತೆಯ ಆ ಕಡೆಗೆ ಹೋಗಿಬಿಡುತ್ತಿದ್ದರು ವಾಹನ ಚಾಲಿಸುವವರು. ನಮ್ಮ ಊರಲ್ಲಿ ಈಗ ಫ್ಲೈ ಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸರ್ವತೋಮುಖ ದಿಕ್ಕುಗಳಲ್ಲಿ ವಾಹನಗಳು ಚಲಿಸುವುದಿಲ್ಲವೇ ಹಾಗೆ! ‘ನಿಮ್ಮ ಟ್ರಾಫಿಕ್ ರೂಲ್‍ಗಳು ನನಗೆ ಇಷ್ಟ ಆದವು’ ಎಂದೆ ಬ್ರಿಜ್‍ಗೆ. ಅವನು ಸುಮಾರು ಇಪ್ಪತ್ತೈದರ ಯುವಕ. ಕಾನ್‍ಪುರದನನ್ನ ಹೊಟೇಲ್‍ಗೆ ಬಂದ. ಅವನ ಆಫೀಸ್ ಕಾನ್‍ಪುರದಲ್ಲೇ ಇತ್ತು. ‘ಇಲ್ಲಿ ರೂಲ್ಸೇ ಇಲ್ಲವಲ್ಲಾ’ ಎಂದ ಅಚ್ಚರಿಯಿಂದ. ‘ಅದೇ ನನಗೆ ಇಷ್ಟ ಆಗಿದ್ದು’ ಎಂದೆ. ಮುಂಬೈನ ಟ್ರಾಫಿಕ್ ನೆನಪಾಯಿತು. ಎಷ್ಟು ಜನರಿದ್ದರೂ ಸಿಗ್ನಲ್‍ನಲ್ಲಿ ಮರ್ಯಾದೆಯಿಂದ ನಿಲ್ಲುತ್ತಿದ್ದರು. ಒಂದು ವೇಳೆ ಕೊನೆಯ ಗಳಿಗೆಯಲ್ಲಿ ಯಾರಾದರೂ ರಸ್ತೆ ದಾಟಲು ಬಂದರೆ ಕಾರು ನಿಲ್ಲಿಸಿ ಹೋಗು ಎನ್ನುತ್ತಿದ್ದರು. ಕಾನ್‍ಪುರದ ಆಫೀಸಿಗೆ ಹೋದೆ. ಕೆಲವರೊಂದಿಗೆ ಹಿಂದೆ ಮಾತಾಡಿದ್ದೆ. ಮತ್ತೆ ಕೆಲವರ ಜೊತೆ ಆಫೀಸ್ ವಿಷಯವಾಗಿ ಪತ್ರ ವ್ಯವಹಾರ ಇತ್ತು. ಮರುದಿನ ಬೆಳಗ್ಗೆ ಲಕ್ನೋಗೆ ಹೋಗಬೇಕಿತ್ತು. ಆ ದಿನ ನನಗೆ ಕಾನ್‍ಪುರದ ದರ್ಶನ ಮಾಡಿಸಿದ ಬ್ರಿಜ್‍ಮೋಹನ್ ಮೆಹ್ರೋತ್ರಾ. ಮ್ಯಾಟಡಾರ್ ವ್ಯಾನ್‍ಗಳು ನಮ್ಮೂರಿನ ಆಟೋಗಳಂತೆ ಕೆಲಸ ಮಾಡುತ್ತಿದ್ದವು. ಆದರೆ ಒಂದು ವಿಶೇಷ ಗಮನಿಸಿದೆ. ಒಂದು ಕಡೆ ನಿಂತು ಗೋಲ್‍ಛೋರಾ ಎಂದು ಚಾಲಕ ಕೂಗುತ್ತಿದ್ದ. ಅದರಲ್ಲಿ ಹತ್ತಿ ಒಂ...

ಯತಿ ಸ್ವಂತೀ -114

24-04-2018 ಏನೋ ಒಂದು ಉದ್ವೇಗ ನನ್ನಲ್ಲಿ ಮನೆ ಮಾಡಿಕೊಂಡಿತ್ತು. ಜನವರಿಯಲ್ಲಿ ನನ್ನ ಸಹೋದ್ಯೋಗಿ ಪ್ರವೀಣ ಭಾರತಕ್ಕೆ ಹೋದ.  ನನ್ನ ಮನೆಗೆ ಹೋಗಲು ಹೇಳಿದ್ದೆ. ಹಿಂದಿನ ಸಲ ಹೋಗಿ ನನ್ನ ಮನೆಯವರೆಲ್ಲರ ಫೋಟೋ ತೆಗೆದುಕೊಂಡು ಬಂದಿದ್ದ. ಮೊಬೈಲ್ ಕೇವಲ ಮಾತಾಡಲು ಬಳಸುತ್ತಿದ್ದ ಕಾಲವದು. ಮನೆಯವರೆಲ್ಲರೂ ನನಗೆ ಪತ್ರ ಬರೆಯುತ್ತಿದ್ದರು. ನಾನು ನಮ್ಮ ಆಫೀಸ್ ಬಾಯ್‍ನಿಂದ ಎರಡು ಫರ್ಲಾಂಗ್ ದೂರದಲ್ಲಿದ್ದ ಅಂಚೆ ಕಛೇರಿಯ ನಮ್ಮ ಆಫೀಸಿನ ಪೋಸ್ಟ್ ಬಾಕ್ಸ್ ಬೀಗದಕೈ ತೆಗೆದುಕೊಂಡಿದ್ದೆ. ನಾನೇ ಎಲ್ಲರ ಕಾಗದಗಳನ್ನೂ ಹೊತ್ತು ತರುತ್ತಿದ್ದೆ. ಒಂಟಿತನ ಭಯಾನಕವಾಗಿ ಕಾಡುತ್ತಿದ್ದ ಕಾಲವದು. ರಾತ್ರಿ ಅರುಣಾ ಸಾಯಿರಾಮ್ ಅವರ ಮಾ ಸ್ತುತಿ ಕೇಳಿ ಮಲಗುತ್ತಿದ್ದೆ. ಅಥವಾ ಕಿಶೋರ್, ರಫಿ ಮುಂತಾದವರ ಹಿಂದೀ ಹಾಡುಗಳು, ರಾಜ್, ಎಸ್ಪಿ, ಪಿಬಿಎಸ್ ಅವರ ಕನ್ನಡ ಹಾಡುಗಳು. ಒಮ್ಮೆ ಕಿಶೋರ್ ಕುಮಾರ್ ‘ದುಃಖಿ ಮನ್ ಮೇರೆ ಸುನ್ ಮೇರ ಕೆಹನಾ ಜಹಾಂ ನಹೀ ಚೈನಾ ವಹಾಂ ನಹೀ ರೆಹನಾ’ ಎಂದು ಹಾಡಿದಾಗ ನನ್ನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದು ದಿಂಬನ್ನು ತೋಯಿಸಿತ್ತು. ಎಲ್ಲಿ ನೆಮ್ಮದಿ ಇಲ್ಲವೋ ಅಲ್ಲಿರಬೇಡ ಎಂದು ಅವನು ಸುಲಭವಾಗಿ ಹೇಳಿಬಿಟ್ಟ. ನಾನಿಲ್ಲಿ ಹಣ ಸಂಪಾದನೆ ಮಾಡಿ ಕುಟುಂಬವನ್ನು ನಡೆಸಲು ಬಂದಿದ್ದವನು. ನಡುವೆ ಹೋಗಲು ಕೂಡ ಆಗದು. ಅಬ್ಬಾ ನರಕ ಯಾತನೆ ಅದು! ಆಗಾಗ ರೂಮ್‍ಮೇಟ್‍ಗಳೊಂದಿಗೆ, ಬಹಳ ಸಲ ಒಬ್ಬನೇ ಸಿನಿಮಾಗೆ ಹೋಗುತ್ತಿದ್ದೆ. ವಚ್ಚುವಿನ ಮನೆಗೆ ಮೂ...

ಯತಿ ಸ್ವಂತೀ -113

23-04-2018 ರಾಜಧಾನಿ ಎಕ್ಸ್‍ಪ್ರೆಸ್ ವೇಗವಾಗಿ ಬಂದು ವಾರಾಣಸಿ ಸ್ಟೇಷನ್‍ನಲ್ಲಿ ನಿಂತಿತು. ಅನ್‍ರಿಸರ್ವ್‍ಡ್ ಕಂಪಾರ್ಟ್‍ಮೆಂಟ್ ಬಳಿಗೆ ಹೋದೆ. ಕಷ್ಟ ಪಡದೇ ಒಳಗೆ ದೂಡಲ್ಪಟ್ಟಿದ್ದೆ! ನನ್ನ ಬಳಿ ಒಂದು ಚಿಕ್ಕ ಸೂಟ್‍ಕೇಸ್, ಒಂದು ಏರ್‍ಬ್ಯಾಗ್ ಇದ್ದವು. ಎದುರೆದುರು ಇದ್ದ ಟಾಯ್ಲೆಟ್‍ಗಳ ನಡುವೆ ನಿಂತೆ. ಕಾಲ್ಗಳ ಬಳಿ ನನ್ನ ಲಗೇಜು. ರಾತ್ರಿ ಒಂಬತ್ತಕ್ಕೆ ನಾನು ರೈಲು ಹತ್ತಿದ್ದು. ಸ್ವಲ್ಪ ಹೊತ್ತು ಒಂದು ಕಾಲಿನ ಮೇಲೆ ನಿಂತೆ. ನಂತರ ಮತ್ತೊಂದು ಕಾಲಿನ ಮೇಲೆ. ಕೊನೆಗೆ ಸುಸ್ತು, ನಿದ್ರೆ ತಡೆಯಲಾಗಲಿಲ್ಲ. ಬೋಗಿಯ ಕೊನೆಯಲ್ಲಿದ್ದ ಆ ಟಾಯ್ಲೆಟ್‍ಗಳ ಬಾಗಿಲಲ್ಲಿ ಮಲಗಿದ್ದ ಒಬ್ಬ ಕುಡುಕ. ಅವನ ಪಕ್ಕದಲ್ಲಿ ಪವಡಿಸಿಬಿಟ್ಟೆ! ನನ್ನ ಸೂಟ್‍ಕೇಸ್ ಮೇಲೆ ಒಬ್ಬ ಕೂತಿದ್ದ. ಅವನು ನಾನು ಇಳಿದ ನಂತರ ಇಳಿಯುವನೆಂದು ಅರಿತು ಮಲಗಿಬಿಟ್ಟೆ. ಆದರೂ ಒಂದು ಯೋಚನೆ ಇತ್ತು. ಕಾನ್‍ಪುರ ಮಧ್ಯದ ಸ್ಟೇಷನ್. ರಾತ್ರಿ ಮೂರು ಗಂಟೆಗೆ ಈ ರೈಲು ಕಾನ್‍ಪುರ ಸೇರಲಿತ್ತು. ಸ್ವಲ್ಪ ದೂರದಲ್ಲಿ ಬಹಳವೇ ವಿದ್ಯುದ್ದೀಪಗಳು ಕಂಡಿದ್ದರಿಂದ ಅದೇ ಕಾನ್‍ಪುರ ಎಂದು ನಿರ್ಧರಿಸಿ ಎದ್ದೆ. ನನ್ನ ಲಗೇಜುಗಳನ್ನು ತೆಗೆದುಕೊಂಡು ಕೆಳಗಿಳಿದೆ. ಹೊರಗೆ ಹೋಗಲು ಭಯ. ಅಪರಿಚಿತ ಊರು. ಕತ್ತಲಲ್ಲಿ ಯಾಕೆ ಹೋಗಿ ಪರದಾಡಬೇಕೆಂದುಕೊಂಡು ಅಲ್ಲಿಯೇ ಇದ್ದ ಬೆಂಚಿನ ಮೇಲೆ ನಿದ್ರಿಸಿದೆ. ಕಾಲುಗಳ ನಡುವೆ ಸೂಟ್‍ಕೇಸ್. ತಲೆಯನ್ನು ಮಡಿಲಲ್ಲಿಟ್ಟುಕೊಂಡ ಏರ್‍ಬ್ಯಾಗ್ ಮೇಲೆ ಇಟ್ಟೆ. ಸ್ವಲ್ಪ ಬೆಳಕು ಕಂಡಿತು....

ಯತಿ ಸ್ವಂತೀ -112

22-04-2018 ಮಸ್ಕತ್‍ನಲ್ಲಿ ನನ್ನ ಮುಂದಿನ ತಿಂಡಿ ಬ್ರೆಡ್ ಆಯಿತು. ಟೋಸ್ಟರ್ ಕೊಂಡು ತಂದೆ. ಅದರಲ್ಲಿ ಬ್ರೆಡ್ ‘ಸುಟ್ಟು’ಕೊಳ್ಳುವುದು. ಹಿಂದಿನ ದಿನ ಹುಳಿ ಮಾಡಿದ್ದರೆ ಬೇಯಿಸಿದ್ದ ತರಕಾರಿಗಳನ್ನು ಎತ್ತಿಟ್ಟಿರುತ್ತಿದ್ದೆ. ಅದನ್ನು ಎರಡು ಬ್ರೆಡ್ ಟೋಸ್ಟ್‍ಗಳ ನಡುವೆ ಇಟ್ಟುಕೊಂಡು ತಿನ್ನುವುದು. ಒಂದಿಷ್ಟು ಉಪ್ಪು, ಕಾಳುಮೆಣಸಿನ ಪುಡಿಯನ್ನು ಉದುರಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಪಲ್ಯವನ್ನು ಮಾಡಿದ್ದರೆ ಅದನ್ನೇ ಎರಡು ಬ್ರೆಡ್‍ಟೋಸ್ಟ್‍ಗಳ ನಡುವೆ ಇಟ್ಟು ತಿನ್ನುವುದು ಮಾಡುತ್ತಿದ್ದೆ. ಇದು ಸುಮಾರು ದಿನಗಳ ಕಾಲ ನಡೆಯಿತು. ನಾನು ಯಾವ ಹುಳಿ ಮಾಡಿದರೂ ಒಂದು ಹಿಡಿ ಕಡಲೇಕಾಯಿ ಬೀಜಗಳನ್ನು ಅದಕ್ಕೆ ಹಾಕುತ್ತಿದ್ದೆ. ಅಲ್ಲಿ ನನಗೆ ಗುಜರಾತಿನ ಕಡಲೇಕಾಯಿ ಸಿಗುತ್ತಿತ್ತು. ಕೆಲವೊಮ್ಮೆ ಒಂದೊಂದು ಕಾಯಿಯಲ್ಲಿ ಐದು ಕಾಳುಗಳಿರುತ್ತಿದ್ದವು. ಕನಿಷ್ಠ ನಾಲ್ಕಂತೂ ಇರುತ್ತಿದ್ದವು. ಒಮ್ಮೆಯಂತೂ ಅದನ್ನು ಕುಕ್ಕರ್‍ನಲ್ಲಿ ಬೇಯಿಸಿದೆ. ಬೆಂದಿರಲಿಲ್ಲ. ನಂತರ ಪ್ರತಿಯೊಂದು ಕಾಯಿಯ ‘ಮೂಗು’ ಸೀಳಿ ಬೇಯಿಸಿದೆ. ಬೇಯಲಿಲ್ಲ. ನಂತರ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಬೇಯಿಸಿ ತಿಂದೆ. ನನ್ನ ಅಡುಗೆಯ ಬಗ್ಗೆ ಅನೇಕರು ‘ಇವತ್ತೇನು ಅಡುಗೆ?’ ಎಂದು ವಿಚಾರಿಸುತ್ತಿದ್ದರು. ಯಾವ ತರಕಾರಿಯೂ ಇಲ್ಲದಿದ್ದ ಒಂದು ದಿನ ಕಡಲೇಕಾಯಿ ಬೀಜಗಳ ಹುಳಿ ಮಾಡಿದೆ. ಅದಂತೂ ಉಳಿದವರಿಗೆ ಆಶ್ಚರ್ಯ! ಈಗಲೂ ನಾನು ಯಾವತ್ತಾದರೂ ನನ್ನ ಶ್ರೀಮತಿಗೆ ಈ ಬೇಡಿಕೆ ಮುಂದಿಡುತ್ತೇನೆ...

ಯತಿ ಸ್ವಂತೀ -111

21-04-2018 ನನ್ನ ಡ್ರೈವಿಂಗ್ ಲೈಸೆನ್ಸ್‍ನ್ನು ಒಂದು ಶುಭದಿನ ನಮ್ಮ ಪಿ.ಆರ್.ಓ. ಫಹಾದ್ ಅಲ್ ಸುಭಿ ತಂದುಕೊಟ್ಟ. ಏನೋ ಒಂದು ರೀತಿ ಥ್ರಿಲ್. ಭಾರತದ ಲೈಸೆನ್ಸ್ ತಗೊಂಡಾಗ ಇಷ್ಟೊಂದು ಖುಷಿ ಇರಲಿಲ್ಲ. ಅದು ಎರಡನೇ ಪ್ರಯತ್ನದಲ್ಲೇ ಸಿಕ್ಕಿಬಿಟ್ಟಿತ್ತು. ಇದು ಕಷ್ಟದಿಂದ ಪಡೆದ ಲೈಸೆನ್ಸ್. 2013ರ ವರೆಗೆ ಅದು ಜಾರಿಯಲ್ಲಿತ್ತು. ಆದರೆ ನಾನು 2005ಕ್ಕೆ ಭಾರತಕ್ಕೆ ಮರಳಿ ಬಂದುಬಿಟ್ಟೆ. ಮತ್ತೆ ಇದುವರೆಗೂ ಯಾವ ಪರದೇಶವನ್ನೂ ಮೆಟ್ಟಿಲ್ಲ. ಮೂರು ತಿಂಗಳು ಕಾರು ಓಡಿಸಬೇಡವೆಂದರು ಆಫೀಸಿನಲ್ಲಿ. ಮೂರು ತಿಂಗಳ ಒಳಗೆ ಏನಾದರೂ ಆಕ್ಸಿಡೆಂಟ್ ಮಾಡಿದರೆ ಲೈಸೆನ್ಸ್ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ ಎಂದರು. ಸರಿ, ಮೂರು ತಿಂಗಳು ಕಾರೋಡಿಸುವ ವಿಷಯವನ್ನೇ ಮನದಲ್ಲಿ ಮಂಡಿಗೆಯಂತೆ ತಿನ್ನುತ್ತಾ ಕಾಲ ನೂಕಿದೆ. ಅಲ್ಲಿ ಇನ್ನೂ ಒಂದು ಪ್ರಶ್ನೆ ಇತ್ತು. ಯಾವ ಕಾರು ಕೂಡ ಇರಲಿಲ್ಲ. ಎಷ್ಟು ಜನ ಲೈಸೆನ್ಸ್ ಉಳ್ಳವರೋ ಅಷ್ಟೂ ಜನಕ್ಕೆ ಒಂದೊಂದು ಕಾರು ಈಗಾಗಲೇ ಇತ್ತು. ನನಗೆ ಅಲ್ಲಿ ಕೆಲಸ ಸಿಗಲು ಕಾರಣ ಈಗಾಗಲೇ ಕೆಲಸದಲ್ಲಿದ್ದಾತ ಬಿಟ್ಟುಹೋಗಿದ್ದು. ಬಹುಶಃ ಒಂದು ನಿಯಮಿತ ಸಂಖ್ಯೆಯ ವರ್ಕ್ ಪರ್ಮಿಟ್‍ಗಳನ್ನು ಪ್ರತಿಯೊಂದು ಕಂಪೆನಿಗೆ ಕೊಡುವರೇನೋ! ಆತನ ಕಾರು ನನ್ನ ರೂಮ್ ಮೇಟ್ ಪ್ರವೀಣನಿಗೆ ಕೊಡಲ್ಪಟ್ಟಿತ್ತು. ಅವನೇ ನನ್ನನ್ನು ನಾನು ಮಸ್ಕತ್‍ನ ಸೀಬ್ ವಿಮಾನ ನಿಲ್ದಾಣದಲ್ಲಿದ್ದಾಗ ಪಿಕ್ ಅಪ್ ಮಾಡಿದ್ದು. ಅವನು ಬೆಂಗಳೂರಿಗೆ ಹೊರಟ. ಅವನು ಹೊರಟೊಡನೆ ಅವನ ಕಾರು ಮಾ...

ಯತಿ ಸ್ವಂತೀ -110

20-04-2018 ನಾನು ಬೆಂಗಳೂರಿನಿಂದ ಸತ್ನಾಗೆ ಹೋಗುವಾಗ ಯಥಾಪ್ರಕಾರ ರೈಲಿನಲ್ಲಿ ಕೆಲವರನ್ನು ಪರಿಚಯಿಸಿಕೊಂಡೆ. ಮಾತಿನ ನಡುವೆ ನನಗೆ ಮದುವೆ ಆಗಿ ಎರಡು ತಿಂಗಳುಗಳಾದವು ಎಂದು ಹೇಳಿದೆ. ‘ಹೇ, ಹಾಗಾದರೆ ನೀನು ವಾರಾಣಸಿಯಲ್ಲಿ ಗಂಗೆಯಲ್ಲಿ ಸ್ನಾನ ಮಾಡಕೂಡದು’ ಎಂದು ಎಚ್ಚರಿಸಿದರು. ಅದನ್ನು ಯಾಕೆ? ಹೇಗೆ? ಎಂದು ಪ್ರಶ್ನಿಸಲು ಹೋಗಲಿಲ್ಲ ನಾನು. ವಾರಾಣಸಿ ತಲುಪಿದ ಮರುದಿನ ರಾತ್ರಿ ಕಾನ್‍ಪುರಕ್ಕೆ ಬರುವೆನೆಂದು ನನ್ನ ಕಾನ್‍ಪುರ ಶಾಖೆಯ ಸಹೋದ್ಯೋಗಿಗೆ ಹೇಳಿದ್ದೆ. ಅದಕ್ಕೇ ಸಾಂಚಿ ನೋಡಿದ ಮರುದಿನ ಬೆಳಗ್ಗೆ ಗಂಗಾದರ್ಶನಕ್ಕೆ ಹೊರಟೆ. ಆಟೋ ಒಂದರಲ್ಲಿ ಚಾಲಕ ‘ಗಂಗಾ ಘಾಟ್, ಗಂಗಾ ಘಾಟ್’ ಎಂದು ಕೂಗುತ್ತಿದ್ದ. ಆ ಆಟೋ ಹತ್ತಿದೆ. ಅವನು ಇನ್ನೂ ಕೂಗಿ ಕೂಗಿ ಅನೇಕ ಪ್ರಯಾಣಿಕರನ್ನು ಒಟ್ಟುಗೂಡಿಸಿದ. ಚಾಲಕನ ಆ ಕಡೆ ಈ ಕಡೆ ಇಬ್ಬರು. ಹಿಂದಿನ ಸೀಟಿನಲ್ಲಿ ನನ್ನನ್ನು ಸೇರಿಸಿ ಐದು ಜನ! ಅಂತೂ ಆಟೋ ಗಂಗಾ ತಟವನ್ನು ತಲುಪಿತು. ಆದರೆ ಜೇಮ್ಸ್‍ಬಾಂಡ್ ಸಿನಿಮಾ ಆಕ್ಟೋಪುಸಿಯಲ್ಲಿ ವಿಜಯ್ ಅಮೃತ್‍ರಾಜ್ ಆಟೋ ಡ್ರೈವರ್ ಆಗಿ ಜೈಪುರದಲ್ಲಿ ಓಡಿಸಿದ ಯಮ ವೇಗದಲ್ಲಲ್ಲ, ನಿಧಾನವಾಗಿ ತುಂಬು ಗರ್ಭಿಣಿಯಂತೆ! ನದಿ ತೀರದಲ್ಲಿ ಇಳಿದೆ. ಪಂಡಾಗಳು ಸುತ್ತಿಕೊಂಡರು. ಎಲ್ಲರನ್ನೂ ನಿವಾರಿಸಿದೆ. ಒಬ್ಬ ಮಾತ್ರ ಛಲಬಿಡದ ತ್ರಿವಿಕ್ರಮನಂತೆ ನನ್ನ ಹಿಂದೆ ಬರುತ್ತಲೇ ಇದ್ದ. ಯಾರ ತಿಥಿ ಮಾಡಬೇಕು ಹೇಳಿ ಅಂತ ಪ್ರಾಣ ತಿನ್ನುತ್ತಿದ್ದ. ‘ನನ್ನದೇ ಮಾಡಯ್ಯಾ’ ಎಂದೆ ಹಿಂದಿಯಲ್ಲಿ. ಆಗ ನನ...

ಯತಿ ಸ್ವಂತೀ -109

19-04-2014 ಈಗ ನನ್ನ ಮುಂದಿನ ಊರು ಲಕ್ನೋ. ಸಿಂಗ್ರೌಲಿ ಕೋಲ್ ಮೈನ್ಸ್‍ನಿಂದ ನಾನು ಹೇಗಾದರೂ ವಾರಾಣಸಿ ತಲುಪಿದರೆ ಅಲ್ಲಿಂದ ಲಕ್ನೋಗೆ ರೈಲುಗಾಡಿ ಇದೆ. ಹಾಗೇ ನಾನು ಕಾನ್‍ಪುರ್‍ಗೆ ಕೂಡ ಹೋಗಬೇಕಿತ್ತು. ನನ್ನ ಆ ಸಹೋದ್ಯೋಗಿ ಮತ್ತು ಆತನ ಬಾಸ್ ಇಬ್ಬರೂ ಕಾರಿನಲ್ಲಿ ಹೋಗುತ್ತೇವೆ ಕಾಶಿಗೆ ಎಂದರು, ಜಾಗವಿದೆ ಬಾ ಎಂದರು. ವೈದ್ಯನು ರೋಗಿ ಬಯಸಿದ್ದನ್ನೇ ಹೇಳಿದರೆ ಅದರ ಆನಂದವೇ ಬೇರೆ! ಸರಿ, ಅವರೊಂದಿಗೆ ಹೊರಟೆ. ಅದು 1987. ದೂರವಾಣಿ ಸಂಪರ್ಕ ವ್ಯವಸ್ಥೆ ಇವತ್ತಿನಷ್ಟು ಕೈಗೆಟಕುವಂತೆ ಇರಲಿಲ್ಲ. ಒಂದು ವಿಧದಲ್ಲಿ ನಾನು ಫೋನ್ ಇಲ್ಲದೇ ಜೀವಿಸಿದ್ದ ಕಾಲದಿಂದ ಈಗಿನ ಸ್ಮಾರ್ಟ್ ಫೋನ್‍ಗಳ ವರೆಗೂ ಎಲ್ಲವನ್ನೂ ನೋಡಿರುವುದು ಒಂದು ಅದೃಷ್ಟವೇ ಸರಿ. ಲ್ಯಾಂಡ್‍ಲೈನ್, ಟೆಲೆಕ್ಸ್, ಟೆಲಿಪ್ರಿಂಟರ್, ಫ್ಯಾಕ್ಸ್, ಕಾರ್ಡ್‍ಲೆಸ್, ಮೊಬೈಲ್... ವಾಹ್! ಗ್ರಹಾಂಬೆಲ್‍ನ ಒಂದು ಆವಿಷ್ಕಾರ ಅದೆಷ್ಟು ರೂಪಗಳನ್ನು ಪಡೆದುಕೊಂಡಿದೆ! ವಿಷಯಕ್ಕೆ ಮರಳೋಣ. ಅದು ಭಯಾನಕ ಬಿಸಿಲು ಬೇಸಗೆಯ ತಿಂಗಳು. ಕಪ್ಪು ಬಣ್ಣದ ಕಾರು. ಆಗಿನ ಕಾಲದಲ್ಲಿ ಎ.ಸಿ. ಇರದ ಕಾರಲ್ಲಿ ಕಪ್ಪು ಬಣ್ಣದ ಕಾರಿನಲ್ಲಿ ಮಧ್ಯಾಹ್ನ ಒಂದೂವರೆಗೆ ಆ ಬಿಸಿಲು ಪ್ರದೇಶದಲ್ಲಿ ಪ್ರಯಾಣ. ನಿಜಕ್ಕೂ ನಾನು ಸೀಟಿನ ಮೇಲೆ ಕೂರಲಿಕ್ಕೇ ಆಗಲಿಲ್ಲ. ಸೀಟು ಭಗಭಗ ಎಂದು ಸುಡುತ್ತಿತ್ತು. ಎಗರಿ ಎಗರಿ ಕೂರುವುದೋ ಬಿಡುವುದೋ ಆಗದ ಡೋಲಾಯಮಾನ ಪರಿಸ್ಥಿತಿಂiÀiಲ್ಲಿ ವಾರಾಣಸಿಯ ಕಡೆಗೆ ಹೋದೆ. ಮಧ್ಯದಲ್ಲಿ ಮೊಟ್ಟ ಮೊದಲ ಬಾರ...

ಯತಿ ಸ್ವಂತೀ -108

18-04-2018 ಬೆಂಗಳೂರಿನಲ್ಲಿ ನನಗಿಷ್ಟವಿರದಿದ್ದ ಸಹೋದ್ಯೋಗಿ ಇಲ್ಲಿ ಇಷ್ಟವಾದ. ಅವನೊಂದಿಗೆ ಸತ್ನಾದ ಮಾರುಕಟ್ಟೆಗ ಹೋದೆ. ಬೇರೊಂದು ಹೊಟೇಲ್‍ನಲ್ಲಿ ಊಟ ಕೂಡ ಮಾಡಿದೆವು. ಆತ ಹೊರಟುಹೋದ. ನನ್ನ ನಿರೀಕ್ಷೆ ಕೊನೆಗೂ ಮುಗಿದಿತ್ತು. ರವಿ ಇಂಗ್ಳೆ ಬಂದ! ನನಗಿಂತ ಬಹಳವೇ ಚಿಕ್ಕವನು. ಇಪ್ಪತ್ತೈದಿದ್ದೀತು. ನನಗೆ ಮೂವತ್ತು. ಟ್ಯಾಕ್ಸಿ ಒಂದನ್ನು ಬಾಡಿಗೆಗೆ ಪಡೆದು ಇಬ್ಬರೂ ಹೊರಟೆವು. ರಾತ್ರಿಯೆಲ್ಲಾ ಪ್ರಯಾಣ. ‘ಇದೋ ನೋಡು, ಥಾಕುರ್ ಅರ್ಜುನ್ ಸಿಂಗ್ ಅರಮನೆ’ ಎಂದು ತೋರಿಸಿದ. ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿಯಾಗಿದ್ದರು ಕೇಂದ್ರ ಸರ್ಕಾರದಲ್ಲಿ ಆತ. ಥಾಕುರ್ ಎಂದರೆ ರಾಜ. ಥಾಕುರ್ ಎನ್ನುವುದನ್ನು ಶ್ರೀಕೃಷ್ಣನಿಗೂ ಬಳಸುತ್ತಾರೆ. ಕೊನೆಗೂ ಸಿಂಗ್ರೌಲಿ ಕಲ್ಲಿದ್ದಲ ಗಣಿ ತಲುಪಿದೆವು. ಎಲ್ಲೆಲ್ಲಿಯೂ ಮಣ್ಣಿನ ಬೆಟ್ಟಗಳು. ಆಗಾಗ ಹೋಗುತ್ತಿದ್ದ ಗೂಡ್ಸ್ ರೈಲುಗಳು. ನಾವು ನೇರವಾಗಿ ಗೆಸ್ಟ್‍ಹೌಸ್‍ಗೆ ಹೋದೆವು. ಬೆಳಗ್ಗೆ ಕಣ್ಣೆಳೆಯುತ್ತಿತ್ತು. ಇಡೀ ರಾತ್ರಿ ಪ್ರಯಾಣ. ಆದರೆ ಬಂದಿರುವ ಕೆಲಸ ಆರಂಭಿಸಬೇಕಲ್ಲ! ಆ ಗೆಸ್ಟ್ ಹೌಸ್‍ನ ಕಿಚೆನ್‍ನಲ್ಲೇ ನಮಗೆ ತಿಂಡಿ ತಯಾರು ಮಾಡಿದ ಅಲ್ಲಿನ ಅಡುಗೆಯಾಳು. ಬ್ರೆಡ್, ಬೆಣ್ಣೆ, ಎರಡು ಮೂರು ರೀತಿಯ ಪಲ್ಯಗಳು (ಉತ್ತರ ಭಾರತೀಯ ಶೈಲಿಯದು) ಮೇಜಿನ ಮೇಲಿದ್ದವು. ಬಿಸಿ ಬಿಸಿ ರೋಟಿ ಮಾಡಿ ಮಾಡಿ ತಂದು ಕೊಡುತ್ತಿದ್ದ. ಸಾಸಿವೆ ಎಣ್ಣೆಯ ವಾಸನೆ ಮಾತ್ರ ಮಹಾ ಕಷ್ಟವಾಗುವಂತಿತ್ತು ನನಗೆ. ಒಂದೇ ಸಮನೆ ರೋಟಿ ಕೊಡುತ್ತಿದ್...

ಯತಿ ಸ್ವಂತೀ -107

17-04-2018 ಟ್ಯಾಲಿ ಸೇರಿ ಒಂದು ವರ್ಷದೊಳಗೆ ರೀಜಿನಲ್ ಆಫೀಸಿಗೆ ರಹೇಜ ಆರ್ಕೇಡ್‍ಗೆ ವರ್ಗವಾಗಿದ್ದೆ. ಇಲ್ಲಿ ಸ್ವಲ್ಪ ದಿನ ನನ್ನ ಪಾತ್ರವೇನೆಂದೇ ತಿಳಿದಿರಲಿಲ್ಲ. ಹಾಯಾಗಿ ಆಫೀಸಿನಲ್ಲಿ ಎಲ್ಲ ಕಾಗದಪತ್ರಗಳನ್ನು ನೋಡುತ್ತಾ, ಟ್ಯಾಲಿ ಉತ್ಪನ್ನದ ಬಗ್ಗೆ ಸ್ಟಡೀ ಮಾಡುತ್ತಾ ಕಾಲ ಕಳೆದೆ.  ರತ್ನಗಳಂತಹ ಸಹೋದ್ಯೋಗಿಗಳು. ನನ್ನ ವಯಸ್ಸು ನಲವತ್ತೊಂಬತ್ತು ಆಗಿದ್ದರೂ ಮೂವತ್ತರ ಹರೆಯದ ಅವರೆಲ್ಲರ ಜೊತೆಗೆ ಸೇರಿಸಿಕೊಳ್ಳುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಒಂದು ತಮಿಳುನಾಡು ಹೊಟೇಲಿನಲ್ಲಿ ಬಾಳೆ ಎಲೆ ವೆಜ್ ಊಟ. ಅನ್‍ಲಿಮಿಟೆಡ್ ಫುಡ್. ಅದನ್ನು ತಿನ್ನಲು ಅವರೊಂದಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಇಲ್ಲದಿದ್ದರೆ ಸ್ವಲ್ಪ ಹೆಚ್ಚು ದೂರದಲ್ಲಿದ್ದ ವೆಜ್ ಪಂಜಾಬಿ ಧಾಭಾಕ್ಕೆ ಹೋಗುತ್ತಿದ್ದರು. ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದರು. ಕೊನೆಗೂ ಒಬ್ಬ ಪಾರ್ಟ್‍ನರ್ ಜೊತೆ ಕೆಲಸ ಮಾಡಲು ಹೇಳಿದರು. ಇಂದಿರಾನಗರದ ಆಚೆ ದಿನವೂ ಹೋಗುತ್ತಿದ್ದೆ. ಅವರ ಬಳಿ ಲೀಡ್‍ಗಳನ್ನು ಪಡೆದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿನ ಕಸ್ಟಮರುಗಳಿಗೆ ಟ್ಯಾಲಿ ಮಾರಲು ಯತ್ನಿಸುತ್ತಿದ್ದೆ. ಆಮೇಲೆ ನಾನು ಮತ್ತೊಬ್ಬ ಪಾರ್ಟ್‍ನರ್ ಬಳಿ ಹೋದೆ. ತಿಪ್ಪಸಂದ್ರದಲ್ಲಿ ಆಫೀಸ್. ಕೋರಮಂಗಲದ ನಮ್ಮಾಫೀಸಿನಿಂದ ತಿಪ್ಪಸಂದ್ರ. ಆ ಸಮಯದಲ್ಲಿ ಮನೆಯ ಮುಂದೆ ಇದ್ದ ನೀರಿನಲ್ಲಿ ಜಾರಿ ಬಿದ್ದೆ. ಎಡಪಾದ ಭಯಾನಕ ನೋವು. ಈಗಾಗಲೇ ಲಿಗಮೆಂಟ್ ಟೇರ್ ಆಗಿದ್ದ ಪಾದವದು. ಮನೆಯ ಬಳಿ ...

ಯತಿ ಸ್ವಂತೀ -106

16-04-2018 ಮತ್ತೊಮ್ಮೆ ಟೆಸ್ಟ್ ತೆಗೆದುಕೊಂಡೆ. ಈ ಸಲ ಬೆಳಗ್ಗೆ ಏಳಕ್ಕೇ ಟೆಸ್ಟ್. ಇಡೀ ಮಸ್ಕತ್‍ನಲ್ಲಿ ಎಲ್ಲರೂ ಆಫೀಸಿಗೆ ಧಾವಿಸುವ ಸಮಯ. ಅಲ್ಲಿ ಸರ್ಕಾರಿ ಕಛೇರಿಗಳು ಏಳಕ್ಕೆ ಶುರು. ನಮಗೆ 8 ಗಂಟೆಗೆ. ಸರ್ಕಾರಿ ಕಛೇರಿಯ ಆ ಜನ ಮಧ್ಯಾಹ್ನದ ಮೇಲೆ ಬೇರೊಂದು ಕೆಲಸ ಮಾಡಲು ಅನುಮತಿ ಇತ್ತೆಂದು ತೋರುತ್ತದೆ. ಕೆಲವರು ಟ್ಯಾಕ್ಸಿ ಓಡಿಸುತ್ತಿದ್ದರು. ಕೆಲವರು ಮಹಮ್ಮದ್‍ನಂತೆ ಕಾರು ಕಲಿಸುತ್ತಿದ್ದರು. ಹ್ಞಾಂ... ಈಗ ನನಗೆ ಅಲಿ ಎನ್ನುವ ಹೊಸ ಗುರು ಬಂದಿದ್ದ. ಇವನಿಗೆ ಇಂಗ್ಲೀಷ್ ಬರುತ್ತಿತ್ತು. ‘ಯಾಕೀ’ ಎನ್ನುತ್ತಿದ್ದ ನನ್ನನ್ನು. ಅದರ ಅರ್ಥ ಅರಾಬಿಕ್‍ನಲ್ಲಿ ಗೆಳೆಯಾ ಅಂತೆ. ಟೆಸ್ಟ್ ಶುರುವಾಯಿತು. ಕಾರು ಸಿಗ್ನಲ್‍ನಲ್ಲಿ ನಿಲ್ಲಿಸಿದೆ. ಇಳಿಜಾರಿನ ರಸ್ತೆ. ಈ ಇನ್ಸ್‍ಪೆಕ್ಟರ್ ಮಹಾರಾಯ ಕಣ್ಮುಚ್ಚಿ ಮಲಗಿದ್ದ. ಮುಂದಿನ ಕಾರು ಇದ್ದಕ್ಕಿದ್ದಂತೆ ನನ್ನ ಕಾರಿನೆಡೆಗೆ ಜಾರಿಕೊಂಡಿತು. ಅಯ್ಯಯ್ಯೋ ಮಿನಿಮಮ್ ಡಿಸ್ಟನ್ಸ್ ಇಡಲು ಸಾಧ್ಯವಿಲ್ಲವಲ್ಲಾ ಎಂದು ನಾನು ಹಿಂದಕ್ಕೆ ಹೋಗಲು ನೋಡಿದೆ. ಹಿಂದೆ ಆಗಲೇ ಕಾರುಗಳ ಸಾಲು. ಈಗ ಕಣ್ಬಿಟ್ಟ ಇನ್ಸ್‍ಪೆಕ್ಟರ್, ಡಿಸ್ಟನ್ಸ್ ನಾಟ್ ಮೆಯಿನ್‍ಟೈನ್ಡ್. ಸೋ ಫೆಯ್ಲ್ ಎಂದ. ಅಲಿ ಬಹಳ ಸೀರಿಯಸ್ಸಾಗಿ ಆ ನಂತರ ಹೇಳಿದ. ಯಾಕೀ, ನಿನಗೆ ಚೆನ್ನಾಗಿ ಕಾರೋಡಿಸಲು ಬರುತ್ತದೆ. ನಿನಗೆ ದುಡ್ಡು ಜಾಸ್ತಿ ಇದೆಯಾ ಎಂದ. ಏನು ಮಾಡಲಿ ಮೆಂಟಲ್‍ಬ್ಲಾಕ್. ಒಂಬತ್ತು ಟೆಸ್ಟ್ ಆಗಿತ್ತು. ಮತ್ತೊಂದು ಟೆಸ್ಟ್. ಈ ನಡುವೆ ಸಾಕಷ್ಟು ಸಲ ಬ...

ಯತಿ ಸ್ವಂತೀ -105

15-04-2018 ನನ್ನ ಮದುವೆಯಾಯಿತು. ಫಿಜಿಕಲೀ ಪ್ರೆಸೆಂಟ್ ಎಂದು ನನಗೆ ಕೆಲವು ದಿನ ಕೇವಲ ಆಫೀಸ್ ಕೆಲಸ ನೀಡಿದರು. ಆದರೆ ಮೊದಲೇ ಹೇಳಿದ್ದರು. ಯತಿರಾಜ್, ನಿನ್ನ ಟ್ಯಾಲೆಂಟ್‍ನ ಕಸ್ಟಮರ್‍ಗಳಿಗೆ ಕೇವಲ ಜನರೇಟರ್ ಕೊಡುವುದಕ್ಕೆ ಮಾತ್ರ ಅಲ್ಲ, ನೆಗೋಸಿಯೇಷನ್‍ಗಳು, ಬಿಡ್‍ಗಳು, ಟೆಂಡರ್‍ಗಳು, ಜನರೇಟರ್ ಸ್ಟಡೀ ಎಲ್ಲವನ್ನೂ ನೀನು ಮಾಡಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದರು ಬಾಸ್. ಅವರ ಮಾತಿನಂತೆ ಏಪ್ರಿಲ್ ತಿಂಗಳಲ್ಲಿ ನನ್ನನ್ನು ಸಿಂಗ್ರೌಲಿ ಕೋಲ್ ಮೈನ್ಸ್‍ಗೆ ಕಳಿಸಿದರು. ಅಲ್ಲಿದ್ದ ಸಿಂಕ್ರೋನಸ್ ಮೋಟರ್ ಅನ್ನು ಸ್ಟಡೀ ಮಾಡಿಕೊಂಡು ಬಾ ಎಂದರು. ಏನೋ ಒಂದು ರೀತಿ ತಳಮಳ. ನವ ವಿವಾಹಿತ. ಆದರೆ ಹೋಗಲೇಬೇಕಾದ ಅನಿವಾರ್ಯ. ಟ್ರೈನಿನಲ್ಲಿ ಸತ್ನಾ ಎನ್ನುವ ಊರಿಗೆ ಬಾ. ಅಲ್ಲಿಗೆ ನಾನು ಬಂದು ನಿನ್ನನ್ನು ಮುಂದಕ್ಕೆ ಕರೆದೊಯ್ಯುತ್ತೇನೆ ಎಂದ   ಭೋಪಾಲ್ ಶಾಖೆಯ ಸಹೋದ್ಯೋಗಿ. ಅವನ ಹೆಸರು ರವಿ ಇಂಗ್ಳೆ. ನನಗಿಂತ ಚಿಕ್ಕವನು. ನನಗಾಗ ಹತ್ತಿರ ಹತ್ತಿರ ಮೂವತ್ತು ವರ್ಷಗಳು. ಅವನಿಗೆ ಇಪ್ಪತ್ತೈದಿದ್ದೀತು. ಆಗಿನ್ನೂ ಅವನನ್ನು ನೋಡಿರಲಿಲ್ಲ. ಸತ್ನಾ ಎನ್ನುವ ಮಧ್ಯಪ್ರದೇಶದ ಊರಿನಲ್ಲಿ ನಡುರಾತ್ರಿ ಇಳಿದೆ. ಒಂದು ಕುದುರೆಗಾಡಿಯೋ, ಸೈಕಲ್ ರಿಕ್ಷಾವೋ ಮರೆತಿದ್ದೇನೆ. ಅದರಲ್ಲಿ ಹೊಟೇಲ್ ನಟರಾಜ್ ತಲುಪಿದೆ. ಇಂಗ್ಳೆ ಬಂದಿರಲಿಲ್ಲ. ಅಲ್ಲಿಯೇ ಉಳಿದುಕೊಂಡೆ. 1987, ಆಗೆಲ್ಲಾ ಕೇವಲ ಲ್ಯಾಂಡ್‍ಲೈನ್ ಕಾಲ್‍ಗಳು. ಒಂಥರಾ ಎರಡು ರೀತಿಯ ಸಂವಹನ ಕಾಲದಲ್ಲಿದ್ದ ...

ಯತಿ ಸ್ವಂತೀ -104

14-04-2018 ಮಹಮ್ಮದ್ ಬಳಿ ನನಗೆ ಕಾರು ಡ್ರೈವಿಂಗ್ ಪಾಠ ಮುಂದುವರಿದಿತ್ತು. ಒಮ್ಮೆ ‘ನಿನಗೆ ಡ್ರೈವಿಂಗ್ ಬರೋದಿಲ್ಲ’ ಎಂದು ಅಣಕಿಸಿದ. ಟಕ್ಕನೆ ಅವನ ಕಾರಿನ ಬಾಗಿಲು ತೆರೆದು ಹೊರಗೆ ಕಾಲಿಟ್ಟೆ. ಕಾರಿನ ಬಾಗಿಲ ಬೀಗ ಮುರಿದಿತ್ತು. ನಾನು ನಡೆದು ಹೋಗುತ್ತಿದ್ದರೆ, ಹಿಂದೆಯೇ ಕಾರಲ್ಲಿ ಬಂದು ‘ಹೇ ಬಾ’ ಎಂದು ಕೂಗತೊಡಗಿದ! ಬೀಗವನ್ನು ಮತ್ತೆ ಹಾಕಿಸಲು ನನಗೆ ಮತ್ತೆ ಕೆಲವು ರಿಯಾಲ್ ಒಮಾನಿಗಳು ಖರ್ಚಾದವು. ಪ್ರತಿ ಸಲ ಟೆಸ್ಟ್‍ಗೆ 5 ರಿಯಾಲ್ ಒಮಾನಿಗಳು. ಅಂದರೆ ಸುಮಾರು ಐದು ದಿನಗಳ ಊಟ. ಒಮ್ಮೆ ನನ್ನನ್ನು ಟೆಸ್ಟ್ ಫೀಲ್ಡ್‍ನಲ್ಲಿ ನಿಲ್ಲಿಸಿ, ಈಗ ಬರುತ್ತೇನೆ ಎಂದು ಹೋದವನು ಬರಲಿಲ್ಲ. ನನ್ನ ಹೆಸರನ್ನು ಆ ಪರೀಕ್ಷಕರು ಕರೆದಿದ್ದರೂ ನನಗೆ ಅದು ಅರ್ಥವಾಗಿರಲಿಕ್ಕಿಲ್ಲ. ಕೊನೆಗೆ ಎಲ್ಲರೂ ಹೊರಟುಹೋದರು. ನನ್ನ ಕಾರು ಗುರು ಮಾತ್ರ ಬರಲಿಲ್ಲ. ನಾನೊಬ್ಬನೇ ನಿಂತಿದ್ದಾಗ ಬಂದವನು ‘ಎಲ್ಲಿ ಎಲ್ಲರೂ’ ಎಂದವನು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದ. ಅಲ್ಲಿ ಹೋಗಿ ಅರಾಬಿಕ್ ಭಾಷೆಯಲ್ಲಿ ಕೂಗಾಡಿದ. ಒಬ್ಬ  ಎತ್ತರದ ಯುವ ಪೊಲೀಸ್ ಉರಿಯುವ ಸೂರ್ಯನಂತೆ ಕೆಂಪಾಗಿ ಬಂದು ನನ್ನ ಕಾರಿನಲ್ಲಿ ಕೂರಲು ಹೋದ. ಆಗ ಅವನ ತಲೆಯು ಕಾರಿನ ಮೇಲ್ಭಾಗಕ್ಕೆ ದಬ್ಬೆಂದು ಹೊಡೆಯಿತು. ಆಗಲೇ ಗೊತ್ತಾಯಿತು ನಾನು ಫೆಯ್ಲ್ ಎಂದು. ಮುಂದೆ ಹೋಗೆಂದ. ಅದೊಂದು ದೊಡ್ಡ ಬಯಲು. ಎಲ್ಲೆಡೆ ಸಿಮೆಂಟ್ ಹಾಕಲ್ಪಟ್ಟಿತ್ತು. ರಸ್ತೆಯೇ ಇರಲಿಲ್ಲ. ಆ ಕಡೆಯ ಪಕ್ಕದಲ್ಲಿ ಸ್ಲೋಪ್ ಟೆಸ್ಟ್ ಮುಗಿಸಿ...

ಯತಿ ಸ್ವಂತೀ -103

13-04-2018 1987ರ ಫೆಬ್ರವರಿಯಲ್ಲಿ ನನಗೆ ಮದುವೆಯಾಯಿತು.  ಡಿಸೆಂಬರ್ 1986ಕ್ಕೆ ನಮಗೆ ಹೊಸ ಬಾಸ್ ಬಂದರು. ಅವರು ನನ್ನಿಂದ ಮಾಡಿಸಿದ ಕೆಲಸ ಏನು ಗೊತ್ತೇ? ಬೆಳಗ್ಗೆ ಎಂಟಕ್ಕೆ ನನ್ನನ್ನು ಅವರ ಛೇಂಬರ್‍ಗೆ ಕರೆಸಿಕೊಳ್ಳುತ್ತಿದ್ದರು. ಆ ದಿನದ ಗ್ರಾಹಕರ ಪತ್ರಗಳು, ಇಂಟರ್‍ನಲ್ ಮೆಮೋಗಳು ಎಲ್ಲವನ್ನೂ ನಮ್ಮ ಆಫೀಸ್‍ಬಾಯ್ ತಂದು ಅವರ ಟೇಬಲ್ ಮೇಲಿಡುತ್ತಿದ್ದ. ನನಗೆ ಪ್ರತಿಯೊಂದು ಪತ್ರವನ್ನೂ ತೋರಿಸಿ ಇದು ಎಲ್ಲಿಗೆ ಹೋಗಬೇಕು? ಇದು ಯಾರಿಗೆ ಮಾರ್ಕ್ ಮಾಡಬೇಕು? ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಅಷ್ಟು ಹೊತ್ತಿಗೆ ಆ ಡಿಪಾರ್ಟ್‍ಮೆಂಟಿನಲ್ಲಿ ವೆಟೆರನ್. ಅಂದರೆ ನಾನು ಅಲ್ಲಿಗೆ ಮಾರ್ಚ್ 1983ರಲ್ಲಿ ಸೇರಿದ್ದೆ. ಸೋ, ನನಗೆ ಹೆಚ್ಚು ಕಡಿಮೆ ಎಲ್ಲ ವಿಷಯಗಳೂ ಗೊತ್ತಿದ್ದವು! ಅವರು ನಮ್ಮ ಮೂರನೆಯ ಯೂನಿಟ್ಟಿನಿಂದ ಬಂದವರು. ಇಲ್ಲಿನ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ನನ್ನನ್ನು ನೇಮಿಸಿಕೊಂಡರು! ಇದು ಇವರಿಗೆ ಹೋಗಬೇಕು, ಇದು ಅವರಿಗೆ ಹೋಗಬೇಕು... ಹೀಗೆ ಬಹಳ ಖುಷಿಯಿಂದ ಹೇಳುತ್ತಾ ಹೋದೆ. ನಾನು ಬಂದ ಹೊಸತರಲ್ಲಿ ನಮ್ಮ ಇಬ್ಬರು ಬಾಸ್‍ಗಳು ತಮ್ಮ ಸೀಟ್‍ನಲ್ಲಿ ಕುಳಿತೇ ಸಿಗರೇಟ್ ಹೊಡೆಯುತ್ತಿದ್ದರು. ಆಮೇಲೆ ಸ್ವಲ್ಪ ದಿನಕ್ಕೆ ಯಾರೇನು ದೂರಿದರೋ ಎಲ್ಲರೂ ಕೆಳಗೆ ಟಾಯ್ಲೆಟ್‍ಗೆ ಬಂದು ಅಲ್ಲಿ ಒಟ್ಟಿಗೇ ಸೇದಿ ಹೊಗೆ ಬಿಡುತ್ತಿದ್ದರು. ಈ ಹೊಸ ಬಾಸ್ ಸ್ವಲ್ಪ ಈ ವಿಷಯದಲ್ಲಿ ಸ್ಟ್ರಿಕ್ಟ್. ಈತ ತಾನು ಸಿಗರೇಟ್ ಸೇದುವುದು, ಗುಂಡು ಹಾಕ...

ಯತಿ ಸ್ವಂತೀ -102

12-04-2018 ಹುಚ್ಚು ಮಳೆ  ಮಾರ್ಚ್ 30ರಂದು ಬಂದಿತ್ತು.  ಆಗ ನನಗೆ ಮಳೆಯಲ್ಲಿ ನೆನೆದ ಎರಡು ಮೂರು ಘಟನೆಗಳು ನೆನಪಾದವು. ಒಮ್ಮೆ ವೊಕ್ಹಾರ್ಡ್ ಆಸ್ಪತ್ರೆಯಲ್ಲಿ (ಈಗಿನ ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‍ಹ್ಯಾಂ ರಸ್ತೆ) ನನ್ನ ಗೆಳೆಯನ ತಂದೆಗೆ ಹೃದಯದ ಆಪರೇಷನ್ ಆಗಿದ್ದಾಗ ನೋಡಲು ನಾನು, ನನ್ನ ಪತ್ನಿ ಹೋದೆವು. ಕೈನೆಟಿಕ್ ಹೊಂಡಾ ಸ್ಕೂಟರ್. ಆಸ್ಪತ್ರೆಯಿಂದ ಹೊರಟೆವು. ಹುಚ್ಚು ಮಳೆ. ನಿಲ್ಲಲು ಎಲ್ಲಿಯೂ ಜಾಗ ಸಿಗಲಿಲ್ಲ. ಊರ್ವಶಿ ಥಿಯೇಟರ್ ಮುಂದೆ ನೀರು ಚಿಮ್ಮಿಸಿದಾಗ ಬಸ್ ಸ್ಟಾಂಡ್‍ನಲ್ಲಿ ಇದ್ದವರೆಲ್ಲಾ ಏಯ್ ಎಂದು ಕೂಗಿಕೊಂಡಿದ್ದು ನೆನಪಿದೆ. ಎಲ್ಲಿಯೂ ನಿಲ್ಲಲಿಲ್ಲ. ಎಡಿಯೂರು ಕೆರೆಯ ಪಕ್ಕದ ರಸ್ತೆಯಲ್ಲಿದ್ದ ಮನೆಯನ್ನು ತಲುಪುವ ವರೆಗೆ ಸ್ಕೂಟರನ್ನು ನಿಲ್ಲಿಸಿರಲಿಲ್ಲ. ಸೋಕ್ಡ್ ಟು ದ ಸ್ಕಿನ್ ಅಂತಾರಲ್ಲ... ಮತ್ತೊಮ್ಮೆ ನಾನು, ನನ್ನ ಪತ್ನಿ ಮಲ್ಲೇಶ್ವರಂ ಹನ್ನೊಂದನೇ ಅಡ್ಡರಸ್ತೆಯಲ್ಲಿದ್ದ ಶ್ರೀಕೃಷ್ಣನ ದೇವಸ್ಥಾನದಲ್ಲಿ ಸುಧಾ ರಘುನಾಥನ್ ಅವರ ಕಛೇರಿಗೆ ಹೋದೆವು. ಸುಧಾ ನನ್ನ ಪತ್ನಿಯ ಅಚ್ಚುಮೆಚ್ಚಿನ ಗಾಯಕಿ. ಹಾಡು ಕೇಳುತ್ತಿರುವಾಗಲೇ ಚಿಟಿಚಿಟಿ ಮಳೆ ಶುರುವಾಯಿತು. ಮಳೆಹುಳುಗಳು ನಮ್ಮ ಸುತ್ತಲೂ ಓಡಾಡುತ್ತಿದ್ದವು. ನನಗೆ ಆಗ ಒಂದು ಕಥೆ ಹೊಳೆದಿತ್ತು. ಮನೋಧರ್ಮ ಎನ್ನುವ ಆ ಕಥೆಯು ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಛೇರಿ ಮುಗಿಯಿತು. ಅದೇ ಕೈನೆಟಿಕ್ ಹೊಂಡಾ. ವಿಜಯನಗರದವರೆಗೂ ಸ್ವಲ್ಪ ಕಡಿಮೆ ಮಳೆ ಇತ್ತು. ಆಮೇಲೆ ...

ಯತಿ ಸ್ವಂತೀ -101

11-04-2018 ನಾವು ನಾಲ್ಕರಲ್ಲೋ ಮೂರರಲ್ಲೋ ಇದ್ದಾಗ ಒಂದು ಪಾಠವಿತ್ತು. ಅದರಲ್ಲಿ ಹುಡುಗರೆಲ್ಲ ಪಿಕ್‍ನಿಕ್‍ಗೆ ಹೋಗುವ ಪಾಠವೊಂದಿತ್ತು. ನಮ್ಮ ಮೇಡಂ ಇದನ್ನು ಶಾಲೆಯಲ್ಲಿ ಅಭಿನಯಿಸೋಣವೆಂದರು. ಎಲ್ಲರೂ ಅವರವರ ಮನೆಯಿಂದ ತಿಂಡಿಗಳನ್ನು ತೆಗೆದುಕೊಂಡು ಹೋದೆವು. ಕೃಷ್ಣಮೂರ್ತಿ ಎನ್ನುವ ಹುಡುಗ ಹದ್ದಿನ ಪಾತ್ರ ವಹಿಸಿದ್ದ. ‘ರಾಮನ ದೋಸೆಯನ್ನು ಹದ್ದು ಹಾರಿಸಿಕೊಂಡು ಹೋಯಿತು’ ಎಂದೋ ಏನೋ ಒಂದು ವಾಕ್ಯವಿತ್ತು. ಅದಕ್ಕೇ ಅವನು ದೋಸೆಯನ್ನು ಎತ್ತಿಕೊಂಡು ಹೋಗುವ ದೃಶ್ಯವನ್ನು ಮೇಡಂ ಅಳವಡಿಸಿದ್ದರು! ಸರತಿಯ ಸಾಲು ಎನ್ನುವ ಪಾಠ ಬಂದಾಗ ಅದರಲ್ಲಿ ‘ಸಾಕಪ್ಪಾ ಸಾಕು, ಸಿನಿಮಾ ನೋಡುವುದೇ ಬೇಡ’ ಎನ್ನುವ ವಾಕ್ಯ ಇಂದಿಗೂ ನೆನಪಿದೆ. ನಮ್ಮ ಮನೆಯಂತೂ ಶಾಲೆಯಿಂದ ಕೇವಲ ಎರಡು ಫರ್ಲಾಂಗ್ ದೂರ. ದಿನವೂ ಮನೆಗೆ ಓಡಿ ಬಂದು ಸರಸರನೆ ಉಂಡು ಮತ್ತೆ ಶಾಲೆಗೆ ಓಡುತ್ತಿದ್ದೆವು. ಒಂದು ದಿನ ಅಮ್ಮನಿಗೆ ದುಂಬಾಲು ಬಿದ್ದು, ‘ಅಮ್ಮ ಅಮ್ಮ, ನಮಗೂ ಟಿಫನ್ ಕ್ಯಾರಿಯರ್ ಕೊಡು’ ಎಂದು ನಾನು ನನ್ನ ತಂಗಿ ಹೇಳಿದಾಗ, ಅಮ್ಮ ‘ನಾನೇ ತರುತ್ತೇನೆ’ ಎಂದು ಹೇಳಿ ಊಟದ ಬುತ್ತಿಯನ್ನು ಶಾಲೆಗೆ ತಂದರು. ಎಂತಹ ಖುಷಿ ಅಂತೀರಿ ನಮಗೆ! ಶಾಲೆಯಲ್ಲಿ ಕುಳಿತು ಊಟ ಮಾಡುವುದು! ಶಾಲೆಯ ಮುಂದೆಯೇ ರೈಲ್ವೇ ಕಂಬಿಗಳು. ಆಗೆಲ್ಲಾ ಸ್ಟೀಮ್ ಎಂಜಿನ್. ಕೂ, ಝುಗ್ ಝುಗ್ ಎನ್ನುತ್ತಾ ಅನೇಕ ರೈಲುಗಳು ಓಡಾಡುತ್ತಿದ್ದವು. ಅರಸೀಕೆರೆ ಮತ್ತು ಬೆಂಗಳೂರಿಗೆ ರೈಲುಗಳು ನಮ್ಮ ಶಾಲೆಯ ಮುಂದೆಯೇ ಹೋಗುತ್ತಿದ್ದವು. ...

ಯತಿ ಸ್ವಂತೀ -100

10-04-2018 ಮಹಮ್ಮದ್ ಎಂಬ ಸುಮಾರು ಅರವತ್ತರ ವ್ಯಕ್ತಿ ನನಗೆ ಕಾರು ಡ್ರೈವಿಂಗ್ ಕಲಿಸಲು ಬಂದ. ನಮ್ಮ ಪಿಆರ್‍ಓಗೆ ತಿಳಿದಿದ್ದ ವ್ಯಕ್ತಿ. ಆತನನ್ನು ನೋಡಿದರೆ ಬೈಬಲ್‍ನಲ್ಲಿ ಬರುವ ಬಿಳಿ ದಾಡಿಯ ಮುಖ ಮುದುರಿದ್ದ ಪಾತ್ರದ ನೆನಪಾಗುತ್ತಿತ್ತು. ಅಥವಾ ಟೆನ್ ಕಮ್ಯಾಂಡ್‍ಮೆಂಟ್ಸ್‍ನ ಒಂದು ಪಾತ್ರ ಎನ್ನಬಹುದೇನೋ! ಆತನಿಗೆ ಇಂಗ್ಲೀಷ್ ಬಿಟ್ಟರೆ ಬೇರೆ ಭಾಷೆ ತಿಳಿಯದು. ಎಲಾಂಟ್ರಾ ಕಾರು ಆತನದು. ಅದರಲ್ಲಿ ನನಗೆ ಡ್ರೈವಿಂಗ್ ಕಲಿಸಲಾರಂಭಿಸಿದ. ನಮ್ಮಲ್ಲಿ ಜಯನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ, ಇಂದಿರಾನಗರ ಆರ್‍ಟೀಓಗಳಿದ್ದಂತೆ ಅಲ್ಲಿಯೂ ಬೇರೆ ಬೇರೆ ಜಾಗಗಳಿದ್ದವು. ಎಲ್ಲೆಡೆಯೂ ನನ್ನನ್ನು ಕರೆದೊಯ್ದ. ರಸ್ತೆಯ ಸಿಗ್ನಲ್‍ಗಳು, ಫಲಕಗಳನ್ನು ತೋರಿಸಿ ಮನನ ಮಾಡಿಸಿದ. ಮರೆತು ಎಡಗಡೆಗೆ ಹೋಗಿಬಿಟ್ಟಿದ್ದೆ ಒಂದು ಸಲ. ಮತ್ತೊಮ್ಮೆ ಮೆಯಿನ್ ರೋಡಿನಲ್ಲಿ ಹೋಗುತ್ತಿದ್ದಾಗ ಸೈಡ್ ರೋಡ್ ಬಂದಾಗ ಥಟ್ಟನೆ ಕಾರನ್ನು ಸ್ಲೋ ಮಾಡಿದೆ. ಆ ತಾತ ನನ್ನ ಕೈ ಮೇಲೆ ಫಟಾರನೆ ಹೊಡೆದೇ ಬಿಟ್ಟ. ಮುಖ್ಯರಸ್ತೆಯಲ್ಲಿರುವವರಿಗೆ ಮೊದಲ ಆದ್ಯತೆ. ಉಳಿದವರೆಲ್ಲ ಕಾಯಬೇಕು. ಒಂದು ವೇಳೆ ಯಾವನಾದರೂ ಪಕ್ಕದ ರಸ್ತೆಯಿಂದ ಬಂದು ನಿನಗೆ ಹೊಡೆದಿದ್ದರೆ ಏನು ಮಾಡುತ್ತಿದ್ದೆ? ಎಂದು ದಬಾಯಿಸಿದ. ಬೆಳಗ್ಗೆ, ಮಧ್ಯಾಹ್ನ ಕಾರೋಡಿಸಿದ ನಂತರ ‘ರಾತ್ರಿ ಕೂಡ ಓಡಿಸೋದು ಕಲಿಯಬೇಕು’ ಎಂದೆ. ಕರೆದೊಯ್ದ. ಬೆಂಗಳೂರಿನ ಅನುಭವವನ್ನು ನೆನೆದು, ರಿವರ್ಸ್ ಗೇರ್ ಕಲಿಸಿಕೊಡೆಂದೆ. ಪಾರ್ಕಿಂಗ್...

ಯತಿ ಸ್ವಂತೀ -99

09-04-2018 ಮಿಡ್ಲ್ ಸ್ಕೂಲಿನಲ್ಲಿ ಓದುವಾಗ ಬರೀ ಹುಡುಗರ ಪಾಳ್ಯ. ಬಾಯ್ಸ್ ಮಿಡ್ಲ್ ಸ್ಕೂಲ್ ಅಲ್ಲವೇ? ಸಖತ್ ಆಗಿತ್ತು ಆ ಸಮಯ. ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ನಾನು ಅನ್ನುವಂತಿರಲಿಲ್ಲ. ಈ ಮೊದಲೇ ಹೇಳಿದಂತೆ ನನ್ನ ತಾಯಿ ನನ್ನನ್ನು ಪ್ರತಿ ತಿಂಗಳು ಜನವರಿಗೆ ಅವರ ತಂದೆಯ ಮನೆಗೆ ಕಳಿಸಿಬಿಡುತ್ತಿದ್ದರು. ನನ್ನ ಸೋದರಮಾವನ ಹೆದರಿಕೆಯಿಂದಲಾದರೂ ಓದಿ ಪಾಸಾಗಬಹುದೆಂಬ ದೂರದ ಆಸೆ ನಮ್ಮಮ್ಮನದು! ಅಜ್ಜನ ಮನೆ ವಿವಿಪುರಂ ಐದನೇ ಮೆಯಿನ್‍ನಲ್ಲಿತ್ತು. ಹತ್ತಿರದ ಎಂಟನೇ ಕ್ರಾಸ್‍ನಲ್ಲಿ ಗಣೇಶೋತ್ಸವಕ್ಕೆ ಸಂಗೀತ, ಆರ್ಕೆಸ್ಟ್ರಾ ಏರ್ಪಡಿಸುತ್ತಿದ್ದರು. ನಮ್ಮ ಅಜ್ಜನ ಮನೆಯಲ್ಲಿ ಅಜ್ಜ, ಅಜ್ಜಿ, ಮೂವರು ಸೋದರ ಮಾವಂದಿರು, ಮೊದಲ ಸೋದರ ಮಾವನ ಪತ್ನಿ ಇದ್ದರು. ಆ ನಂತರ ಮೊದಲ ಮಾವನ ಇಬ್ಬರು ಮಕ್ಕಳು ಕೂಡ. ಅಜ್ಜಿಯ ಮನೆಯ ಎದುರು ಮನೆಯಲ್ಲಿ ಮೈಸೂರಿನ ಆಗಿನ ಮುನಿಸಿಪಲ್ ಕೌನ್ಸೆಲ್ಲರ್ ಇದ್ದರು. ಅವರ ಮಗಳೊಬ್ಬರು ಮದ್ರಾಸಿನಲ್ಲಿದ್ದರು (ಈಗಿನ ಚೆನ್ನೈ). ಅವರ ಮಗ ಶ್ರೀವತ್ಸ (ವಚ್ಚು) ನನ್ನ ಓರಗೆಯವನೇ. ಅವನು ಅಜ್ಜಿಯ ಮನೆಗೆ ರಜೆಗೆ ಬರುತ್ತಿದ್ದ. ಅದು ಹೇಗೋ ನನಗೂ ಅವನಿಗೂ ಗೆಳೆತನ ಬೆಳೆಯಿತು. ಬಹುಶಃ ಒಂದೇ ವಯಸ್ಸಿನವರೆಂದೂ ಇರಬಹುದು. ಇತ್ತೀಚೆಗೆ ನನಗೆ ಮಾತಿನ ಮಲ್ಲ ಎನ್ನುವ ಬಿರುದು ನೀಡಿದರು ಫೇಸ್‍ಬುಕ್ ಮಿತ್ರೆ. ಆದರೆ ಆಗಲೂ ಒಂದಿಷ್ಟು ಮಾತಾಡುತ್ತಿದ್ದೆ. ನಮ್ಮ ನೆಂಟರು ಸೇರಿದರೆ ನಾನು, ನನ್ನ ದೊಡ್ಡ ತಂಗಿ ಇಬ್ಬರೂ ಹಾಡುಗಳನ್ನು ಹೇಳುತ್ತಿ...

ಯತಿ ಸ್ವಂತೀ -98

08-04-2018 ನರೇಂದ್ರ ಕಂಪೆನಿಯಲ್ಲಿ ಸೇರಿದ ಮೇಲೆ ಪಾಲಿಬೆಟ್ಟದಲ್ಲಿ ಕಾಫಿ ಪಲ್ಪಿಂಗ್ ಪ್ಲ್ಯಾಂಟ್ ಸಿದ್ಧವಾಯಿತು. ಅನೇಕ ಸಲ ಅಲ್ಲಿಗೆ ಹೋದೆ. ಒಳ್ಳೆಯ ಕಂಪೆನಿ ಇರುತ್ತಿತ್ತು. ನಮ್ಮ ಬಾಸ್, ಇಬ್ಬರು ಮೂವರು ಹುಡುಗರು ಜೊತೆಗಿರುತ್ತಿದ್ದರು. ಒಂದು ದಿನ ಒಂದು ಕಡೆ ಹಣ್ಣು ಹಾಕಿ ಮತ್ತೊಂದು ಕಡೆ ಬೀಜವೂ, ಸಿಪ್ಪೆಯೂ ಬೇರೆ ಆಗುವುದನ್ನು ಕಂಡೆವು. ಆ ಸಿಪ್ಪೆ ಬಹಳ ಟಾಕ್ಸಿಕ್. ಯಾವ ಗಿಡಕ್ಕೂ ಗೊಬ್ಬರದಂತೆ ಬಳಸಕೂಡದಾಗಿತ್ತು. ಅದಕ್ಕೇ ಒಂದು ಮೋರಿ ಮಾಡಿ ಅದನ್ನು ಹರಿಯಬಿಡುತ್ತಿದ್ದರು. ಒಂದು ರೀತಿಯ ಕೊಳೆತ ಹಣ್ಣಿನ ದುರ್ವಾಸನೆ ಅಲ್ಲೆಲ್ಲಾ ಅಡರಿಕೊಳ್ಳುತ್ತಿತ್ತು. ಚಿಕ್ಕಮಗಳೂರಿಗೆ ಹೋಗುವ ಅವಕಾಶ ಬಂದಿತು. ಕೇವಲ ಜಾಗದ ಸ್ಟಡೀ ಮಾಡುವ ಕೆಲಸ ಮೊದಲು. ಜೀಪ್‍ನಲ್ಲಿ ನಮ್ಮ ಬಾಸ್ ಜೊತೆ ಹೋಗುವಾಗ ಏನೋ ಥ್ರಿಲ್ಲು. ಓಪನ್ ಜೀಪ್. ಗಾಳಿ ಚೆನ್ನಾಗಿ ಬೀಸುತ್ತಿರುತ್ತಿತ್ತು. ಚಿಕ್ಕಮಗಳೂರಿನ ಪ್ಲ್ಯಾಂಟರ್ಸ್ ಕೋರ್ಟ್ ನಮ್ಮ ರೆಗ್ಯುಲರ್ ಅಡ್ಡಾ. ಅಲ್ಲಿಯೇ ಬೆಳಗಿನ ಉಪಾಹಾರ. ರಾತ್ರಿ ಊಟ. ಮಧ್ಯಾಹ್ನದ್ದು ನಮಗಿರಲಿ, ಆ ದೇವರಿಗೂ ತಿಳಿಯುತ್ತಿರಲಿಲ್ಲವೇನೋ! ಎಲ್ಲಿ ಹಸಿವಾದರೆ ಅಲ್ಲಿ ಯಾವ ಚಿಕ್ಕ ಹೊಟೇಲ್ ಕಂಡರೆ ಅಲ್ಲಿಯೇ ಊಟ, ತಿಂಡಿ ಇತ್ಯಾದಿ. ಒಮ್ಮೆ ಚಿಕ್ಕಮಗಳೂರಿಗೆ ನನ್ನನ್ನು ಬರಹೇಳಿದರು ನಮ್ಮ ಬಾಸ್. ಯಾವುದೋ ಸಾಮಾನು ತೆಗೆದುಕೊಂಡು ಹೋಗಬೇಕಿತ್ತು. ರಾತ್ರಿ ಬಸ್ ಹತ್ತಿದೆ. ಬೆಳಗಿನ ಝಾವ ನಾಲ್ಕೂವರೆಗೆ ಇಳಿದೆ. ಆಟೋ ಬೇಕಾ ಸಾರ್? ಎಂದ ಒಬ್ಬ ಹದಿನಾರ...

ಯತಿ ಸ್ವಂತೀ -97

07-04-2018 ಮಸ್ಕತ್‍ನಲ್ಲಿ ನನ್ನ ಡ್ರೈವಿಂಗ್ ಕಲಿಯುವಿಕೆಯೇ ಒಂದು ಗಾಥೆಯಷ್ಟು ದೊಡ್ಡದು. ನನಗೆ ಇಲ್ಲಿ 1992ರಲ್ಲಿ ಲೈಸೆನ್ಸ್ ಸಿಕ್ಕಿತ್ತು.  ಸ್ಟೀರಿಂಗ್ ಚಕ್ರದ ಪಕ್ಕವಿದ್ದ ಹ್ಯಾಂಡ್ ಗೇರ್ ಅಂಬಾಸೆಡರ್‍ನಲ್ಲಿ ನಾನು ಇಲ್ಲಿ ಒಮ್ಮೆ ಫೆಯ್ಲ್ ಆಗಿ ಎರಡನೇ ಸಲ ಒಂದು ವರ್ಷದ ನಂತರ ಲೈಸೆನ್ಸ್ ತಗೊಂಡಿದ್ದೆ. ಆಗ ನನಗೆ ಅಮೆರಿಕದಲ್ಲಿ ಎಂ.ಎಸ್. ಮಾಡಬೇಕೆಂಬ ‘ಹುಚ್ಚು’ ಹಿಡಿದು ಅದಕ್ಕಾಗಿ ಅಪ್ಲೈ ಮಾಡಿದ್ದೆ. ಮರಗಳ ನಡುವೆ ಓದಬೇಕೆಂಬ ಬಲು ಚಿಕ್ಕ ಆಸೆ ನನ್ನದು. ಅದಕ್ಕಾಗಿಯೇ ಡ್ರೈವಿಂಗ್ ಕಲಿತಿದ್ದು. ಇಲ್ಲದಿದ್ದರೆ ಕಾರು ಕೊಂಡುಕೊಳ್ಳಲಾಗದ ಆರ್ಥಿಕ ಸ್ಥಿತಿ ನನ್ನದಾಗಿದ್ದಾಗ ನನಗೇಕೆ ಬೇಕಿತ್ತು ಡ್ರೈವಿಂಗ್ ಕಲಿಕೆ? ಮಸ್ಕತ್‍ನಲ್ಲಿ ಕೆಲಸ ಸಿಕ್ಕಿತೆಂದೊಡನೆ ಇಲ್ಲಿ ನನ್ನ ಶ್ರೀಮತಿ ಓಡಿಸುತ್ತಿದ್ದ ಮಾರುತಿ ಆಮ್ನಿಯನ್ನು ತೆಗೆದುಕೊಂಡು ಹೊರಟೆ. ಮನೆಯ ಬಳಿ ಒಬ್ಬರು ಅಂಕಲ್ ನನಗೆ ಗುರು! ಲೈಸೆನ್ಸ್ ಇದ್ದವನಲ್ಲವೇ! ಕಾರನ್ನು ಎರಡು ಕಡೆ ಮೋರಿಯೊಳಗಿಳಿಸಿ ಅಂಕಲ್ ಅವರಿಗೂ ಸುಸ್ತು ಹೊಡೆಸಿದ್ದೆ! ಸರಿ, ವಿಮಾನ ಏರಿ ಮಸ್ಕತ್ ತಲುಪಿದೆ. ರಣಬಿಸಿಲು! ರಾತ್ರಿ ಎಂಟೂವರೆಯಲ್ಲಿ 45 ಡಿಗ್ರೀ ಸೆಲ್ಷಿಯಸ್. ಕಾರು ಡ್ರೈವಿಂಗ್ ಕಲಿಯದಿದ್ದರೆ ಅಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ವಿಷಯ ಅರಿತು ಚಿಂತಿತನಾದೆ. ಮರುದಿನ ಬೆಳಗ್ಗೆ ನಮ್ಮ ಎರಡನೇ ಬಾಸ್ ಭೇಟಿ ಆದಾಗ ಮೊದಲ ಬಾಸ್ ಬರೋವರೆಗೂ ನಾನು ಕಾರು ಕಲಿಯುವಂತಿಲ್ಲ ಎನ್ನುವ ವಿಷಯ ಅರಿತು ನೆಮ್ಮದಿ ಕ...

ಯತಿ ಸ್ವಂತೀ -96

06-04-2018 ಮಸ್ಕತ್‍ನಲ್ಲಿ ಒಂದು ವರ್ಷವಿದ್ದು ಮರಳಿದೆ. ಸಿಕ್ಕಾಪಟ್ಟೆ ಬಿಸಿಲಲ್ಲಿ ನಡೆದು ಬೆಣ್ಣೆಯಂತೆ ಕರಗಿಹೋದೆ. 2002ರ ಮೇ ತಿಂಗಳಲ್ಲಿ 78 ಕೆ.ಜಿ. ಇದ್ದೆ. ಮನೆಯವರನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಕೊರಗು ನನ್ನ ತೂಕವನ್ನು 74ಕ್ಕೆ ಇಳಿಸಿತು. ಜೂನ್ 20ಕ್ಕೆ ನಾನು ಮಸ್ಕತ್‍ಗೆ ಹೊರಟಾಗ ನನ್ನ ತೂಕ ಅಷ್ಟಿತ್ತು. ಅಲ್ಲಿ ಒಂದು ವರ್ಷ ರಜೆ ಇರಲಿಲ್ಲ. ಜೂನ್ ಕೊನೆಯಲ್ಲಿ ಹೊರಟಾಗ ನನ್ನ ತೂಕ 64 ಕೆ.ಜಿ. ಆಗಿತ್ತು. ಮನೆಯವರನ್ನು ಬಿಟ್ಟು ಇತರರು ಯಾರೂ ನನ್ನನ್ನು ಗುರುತಿಸಲಿಲ್ಲ. ಎಲ್ಲ ಪ್ಯಾಂಟುಗಳೂ ದೊಗಳೆ ಆಗಿದ್ದವು! ಬಂದೆ, ಮನೆಯವರ ನಡುವೆ ಇದ್ದೆ. ಅವರ ಪ್ರೀತಿ ಆದರಗಳು, ಆರೈಕೆಗಳಿಂದ ನನ್ನ ತೂಕ 70ಕ್ಕೆ ಏರಿತ್ತು. ಈ ಸಲ ನಾನೇ ಅಡುಗೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಕೆಲವು ವಸ್ತುಗಳನ್ನು ಇಲ್ಲಿಂದ ಸಾಗಿಸಿದೆ. ವಿಶೇಷವಾಗಿ ಸಾಂಬಾರ್ ಪುಡಿ, ಸಾರಿನ ಪುಡಿ, ವಾಂಗಿಭಾತ್ ಪುಡಿಗಳನ್ನು ಮಾಡಿಸಿಕೊಂಡು ತೆಗೆದುಕೊಂಡು ಹೊರಟೆ. ಅಡುಗೆ ತರಬೇತಿಯನ್ನು ನನ್ನ ಶ್ರೀಮತಿ ಮತ್ತು ಅಮ್ಮ ಇಬ್ಬರೂ ಕೊಟ್ಟರು! ಸರಿ, ಶುರುವಾಯಿತು ನನ್ನ ನಳಪಾಕ! ಅಥವಾ ಭೀಮಪಾಕ!! ಅನ್ನವನ್ನು ಪ್ರೆಷರ್ ಕುಕ್ಕರ್‍ನಲ್ಲಿ ಮಾಡತೊಡಗಿದೆ. ರೂಮಿನಲ್ಲಿ ಪುಟ್ಟ ಟಿವಿಯೊಂದನ್ನು ಇಟ್ಟುಕೊಂಡಿದ್ದೆ. ಅದನ್ನು ನೋಡುತ್ತಾ ತರಕಾರಿ ಹೆಚ್ಚುವುದು ಮಾಡುತ್ತಿದ್ದೆ. ನನ್ನ ಟಿವಿ ಶಬ್ದದ ನಡುವೆಯೂ ಕುಕ್ಕರ್ ಮೂರು ಸಲ ಕೂಗೋದನ್ನ ಕೇಳಿಸಿಕೊಳ್ಳಬೇಕಿತ್ತು. ಸಾಂಬಾರು ಅಥವಾ ಕೊ...

ಯತಿ ಸ್ವಂತೀ -95

05-04-2018 ನರೇಂದ್ರ ಕಂಪೆನಿಯಲ್ಲಿ ಸೇರಿದ ದಿನವೇ ಬೇಗನೆ ಬಾ ಎಂದರು. ಎರಡು ವರ್ಷಗಳಿಂದ ಪ್ರಕಾಶನ ಸಂಸ್ಥೆಯನ್ನು ನಡೆಸಿ, ಕೆಲಸಕ್ಕೆ ಹೋಗುವುದನ್ನೇ ಮರೆತಿದ್ದೆ! ಪ್ರಕಾಶನ ಸಂಸ್ಥೆಗಳ ಪುಸ್ತಕಗಳು ಆ ವರ್ಷ ಸರ್ಕಾರದ ಲೈಬ್ರರಿಗೆ ಒಂದು ಕೂಡ ಆಯ್ಕೆಯಾಗದೇ ಕೈ ಸುಟ್ಟು ಹೋಯಿತು! ಒಳಗಿನ ಗಾಯ ಕಣ್ರೀ... ಕಾಣಿಸೋದಿಲ್ಲ ಹೊರಕ್ಕೆ! ಇಂಟವ್ರ್ಯೂಗೆ ಹೋದೆ. ಆಯ್ಕೆಯಾದೆ. ಕಾಫಿ ಮತ್ತು ಟೀ ಎಸ್ಟೇಟುಗಳಿಗೆ ಆಧುನಿಕ ಯಂತ್ರಗಳ ಮಾರಾಟ. ಅಂದರೆ ಕಾಫಿ ಹಣ್ಣುಗಳ ಮೇಲಿನ ಸಿಪ್ಪೆಯನ್ನು ಬಿಡಿಸುವ ಒಂದು ಯಂತ್ರ ಸಮೂಹ. ಕಾಫಿ ಬೀಜವನ್ನು ಒಣಗಿಸುವ ಯಂತ್ರ ಸಮೂಹ. ಕಾಫಿ ಬೀಜಗಳನ್ನು ಬೇರೆ ಬೇರೆ ಮಾಡುವ ಯಂತ್ರ. ಕಾಫಿ ಹಣ್ಣುಗಳನ್ನು ಗಿಡದಿಂದ ಬಿಡಿಸುವ ಯಂತ್ರ. ಕಾಫಿ ಗಿಡಗಳನ್ನೂ, ಅದಕ್ಕೆ ನೆರಳು ಕೊಡುವ ಮರಗಳ ಕೊಂಬೆಗಳನ್ನು ಮಳೆಗಾಲದಲ್ಲಿ ಕತ್ತರಿಸುವ ಗಾಳಿಯಿಂದ ನಡೆಯುವ ಗರಗಸ, ಟೀ ಎಲೆಗಳನ್ನು ಒಂದು ಮೊಗ್ಗು ಎರಡು ಎಲೆ ಎಂದು ಕಿತ್ತುವ ಯಂತ್ರ, ಕಾಳು ಮೆಣಸನ್ನು ಅದರ ಕಡ್ಡಿಯಿಂದ ಬೇರೆ ಮಾಡುವ ಯಂತ್ರ.... ಯಂತ್ರ ಸಮೂಹವನ್ನು ಸ್ಥಾಪನೆ ಮಾಡಿ ಅದನ್ನು ನಡೆಯುವಂತೆ ಮಾಡಲು ಒಂದು ಟೀಂ. ಅದರಲ್ಲಿ ನಾನೊಬ್ಬ. ಸರಿ, ಮೊದಲ ದಿನವೇ ಬೇಗನೆ ಎದ್ದು ಬಸ್ ಹಿಡಿದು ಮೈಸೂರು ರಸ್ತೆಯ ಗುಡ್ಡದಹಳ್ಳಿಯ ಬಳಿಯ ಆಫೀಸಿಗೆ ಬಂದೆ. ಆಗ ನನ್ನ ಬಳಿ ಇನ್ನೂ ಯಾವುದೇ ಸ್ವಂತ ವಾಹನವಿರಲಿಲ್ಲ. ಆರೂವರೆಗೇ ಹೊರಡಬೇಕು ಎಂದಿದ್ದರು. ಏಳೂ ಮುಕ್ಕಾಲಾದರೂ ಒಬ್ಬರೂ ಬಂದಿರಲಿಲ್ಲ. ಯಾರನ್ನು...

ಯತಿ ಸ್ವಂತೀ -94

04-04-2018 ನನ್ನ ಹೊಸ ಲೇಖನಮಾಲೆ నవ్య ವಾರಪತ್ರಿಕೆಯಲ್ಲಿ ಧಾರಾವಾಹಿ ಆಗುತ್ತಿದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡೆಂದರು. ಖುಷಿಯಿಂದ ವಿಜಯವಾಡದ ಅವರ ಪ್ರಕಾಶಕರಿಗೆ ಫೋನ್ ಮಾಡಿದೆ. ನನ್ನ ಬಳಿ ಅವರ ಇನ್ನೊಂದು ಪುಸ್ತಕ ಸಿದ್ಧವಾಗಿದೆ ಎಂದರು. ಮತ್ತೆ ಯಂಡಮೂರಿ ಸರ್ ಅವರಿಗೆ ಫೋನ್ ಮಾಡಿದೆ. ಸರಿ ಅದನ್ನೇ ಅನುವಾದಿಸು ಎಂದರು! ಅದೇ ಕನ್ನಡಪ್ರಭ ಪತ್ರಿಕೆಯ ಬೈ ಟು ಕಾಫಿ ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಣಿವೆಯಿಂದ ಶಿಖರಕ್ಕೆ ಪುಸ್ತಕ. ಆ ಸಮಯದಲ್ಲಿ ಅವರು ಬೆಂಗಳೂರಿಗೆ ಬಂದರು. ಅವರನ್ನು ಯಶವಂತಪುರ ಸ್ಟೇಶನ್‌ನಲ್ಲಿ ಭೇಟಿ ಆದೆ. ಅವರೊಂದಿಗೆ ವಾಗ್ದೇವಿ ವಿಲಾಸ್ ಶಾಲೆಗೆ ಹೋದೆ. ಅಂದು ಶಿಕ್ಷಕರ ದಿನ, 2015. ಅವರು ಹೊಸೂರಿಗೆ ಹೊರಟಿದ್ದರು. ಅಂದು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ನಾನೇ ಅವರ ಫೋಟೋ ತೆಗೆದೆ. ಇದಾಗಿ ಕೆಲವು ದಿನಗಳ ನಂತರ ಬೆಂಗಳೂರಿಗೆ ಬಂದರು. ಚಿತ್ರಕಥೆಯೊಂದರ ಅನುವಾದ ಮಾಡೆಂದರು. ನಂತರ ಸ್ವಲ್ಪ ದಿನ ಗ್ಯಾಪ್. ಮತ್ತೆ ನನಗೆ ಕರೆ ಮಾಡಿದರು. ವಾಗ್ದೇವಿ ವಿಲಾಸ್ ಶಾಲೆಯ ಮುಖ್ಯಸ್ಥರ ಮಗನೊಂದಿಗೆ ಮದನಪಲ್ಲಿ ಬಳಿ ಇರುವ ಹಾರ್ಸ್ ಲೀ ಹಿಲ್ಸ್‌ಗೆ ಬಾ ಎಂದು. ಅಲ್ಲಿ ನಾನು ಅವರ ಪುಸ್ತಕ ನಾನೇ ನನ್ನ ಆಯುಧದ ನಾಯಕ ಡಾ. ಚಿರಂಜೀವಿ ಅವರನ್ನು ಭೇಟಿ ಆದೆ. ಅಂದು ಅವರು ಅವರ ನಿರ್ದೇಶನದ ಮಾಡಲಿರುವ ಚಿತ್ರದ ಕಥೆ ಹೇಳಲಾರಂಭಿಸಿದರು. ಅಬ್ಬಾ... ಎಂತಹ ಥ್ರಿಲ್ ಎನಿಸಿತು. ಮಧ್ಯೆ ತಿಂಡಿ ಕಾಫಿಗೆಂದು ಅವರು ಕಥೆ...

ಯತಿ ಸ್ವಂತೀ - 93

03-04-2018 ನನ್ನ ಉದ್ಯೋಗವು ನನ್ನನ್ನು ಆಂಧ್ರಪ್ರದೇಶಕ್ಕೆ(ಮತ್ತು ಈಗಿನ ತೆಲಂಗಾಣಕ್ಕೆ) ಒಯ್ದಿತು. ಅದು 2009. ಸರಿಸುಮಾರು 15 ದಿನಗಳಲ್ಲಿ ಹೈದರಾಬಾದ್, ವಾರಂಗಲ್, ಕರೀಂನಗರ್, ಆದಿಲಾಬಾದ್, ವಿಜಯವಾಡ, ಗುಂಟೂರು, ಖಮ್ಮಮ್, ವಿಶಾಖಪಟ್ಟಣಂ ನಗರಗಳಿಗೆ ಹೋದೆ. ವಿಶಾಖಪಟ್ಟಣಂನ ಹೊಟೇಲ್ ದಸಪಲ್ಲದಲ್ಲಿ ಇಳಿದುಕೊಂಡೆ. ಮರುದಿನ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹೋದಾಗ ಅಲ್ಲಿ ಕಂಡಿದ್ದರು ಯಂಡಮೂರಿ ಸರ್! ನಮಸ್ಕಾರ ವೀರೇನ್ ಜೀ ಎಂದೆ. ಓ ನೀನಾ ಯಾವಾಗ ಬಂದೆ ಎಲ್ಲಿದ್ದೆ ಎಂದರು. ವಿಪರ್ಯಾಸ ಏನೆಂದರೆ ಹಿಂದಿನ ರಾತ್ರಿ ನಾವಿಬ್ಬರೂ ಪಕ್ಕ ಪಕ್ಕದ ರೂಮಿನಲ್ಲಿ ಒಂಟಿಯಾಗಿದ್ದು ಬೋರ್ ಹೊಡೆಸಿಕೊಂಡಿದ್ದೆವು! ಬಹಳ ದಿನಗಳ ನಂತರ ಅವರೊಂದಿಗೆ ಮಾತಾಡುತ್ತಾ ಕಾಲ ಕಳೆಯಬಹುದಿತ್ತೆಂಬ ವಿಷಯವೇ ನನಗೆ ದುಃಖ ತಂದಿತ್ತು. ಆದರೆ ಅವರೊಂದಿಗೆ ಕೆಲವು ತಿಂಗಳು ಕಳೆಯುವ ಸಮಯ ಸನ್ನಿಹಿತವಾಗಿದೆಯೆಂದು ನನಗೆ ಆ ಕ್ಷಣದಲ್ಲಿ ತಿಳಿದಿರಲಿಲ್ಲ!  ನಾನೂ ಶ್ರೀಕಾಕುಳಂಗೆ ಹೊರಟಿದ್ದೆ. ಅವರು ಬ್ಯುಸಿ ಇದ್ದರು. ಹೊಸ ಪುಸ್ತಕವನ್ನು ಅನುವಾದ ಮಾಡುವೆಯಾ ಎಂದರು. ನಾನು ಶ್ರೀಕಾಕುಳಂನಲ್ಲಿದ್ದಾಗ ಫೋನ್ ಮಾಡಿ ತೆಲುಗು ಟು ಕನ್ನಡ ಕಷ್ಟ ಇಲ್ವಾ ಎಂದು ಕೇಳಿದರು. ಇಂಗ್ಲಿಷ್ ಭಾಷೆಯ ಅನುವಾದ ಹೆಚ್ಚು ಕಡಿಮೆ ಮೂರು ಸಲ ಮಾಡಿ ಕನ್ನಡ ಭಾಷೆಗೆ ತರಬೇಕು. ತೆಲುಗು ಮತ್ತು ಕನ್ನಡ ವಾಕ್ಯ ರಚನೆ ಒಂದೇ ರೀತಿ ಇವೆ ಎಂದೆ. ಅದು ನನಗೆ ಸಿಗಲಿಲ್ಲ ಅನ್ನೋದು ಬೇರೆ ವಿಷಯ. ವಿಜಯನಗರಂ ಭೇಟಿ ಮು...

ಯತಿ ಸ್ವಂತೀ -92-

02-04-2018 ಅನೇಕ ತಿಂಗಳುಗಳು ನಾನು ಮನೆಯಿಂದ ಹೊರಗೆ ಇದ್ದರೂ ಮೂರು ವಾರಗಳಲ್ಲಿ ಒಮ್ಮೆ ಬಂದು ಹೋಗಿ ರೂಢಿ ಇತ್ತು. ಈಗ ಮಸ್ಕತ್ನಲ್ಲಿ ಒಂಟಿತನ ಭಯಾನಕವೆನಿಸಿತು. ಅಲ್ಲಿ ಒಂದು ಅಂಗಡಿಯಲ್ಲಿ ಭಾರತೀಯ ಪತ್ರಿಕೆಗಳು ಮಾರಲ್ಪಡುತ್ತಿದ್ದವು. ಕನ್ನಡ ಪತ್ರಿಕೆಗಳನ್ನು ಕಂಡು ನಿಧಿ ಕಂಡಂತಾಗಿತ್ತು. ನನ್ನ ಅನೇಕ ಕಥೆಗಳು ಅಲ್ಲಿದ್ದಾಗ ಪ್ರಕಟವಾದವು. ತುಷಾರ ತರಂಗ ಸುಧಾ. ಆ ಸಮಯದಲ್ಲಿ ಆರ್ ವಿ ಕಟ್ಟೀಮನಿ ತಡಕಲ್ ಅವರು ಅನುವಾದ ಮಾಡಿದ್ದ ಯಂಡಮೂರಿ ಅವರ ಮಳೆಗಾಲದ ಒಂದು ಸಂಜೆ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿ ಆಗುತ್ತಿತ್ತು. ಮೂಲ ಓದಲು ಬೆಂಗಳೂರು ತಲುಪಬೇಕು. 2005ರಲ್ಲಿ ನಾನು ಅಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದೆ. ನನ್ನ ಗೆಳೆಯನ ಪತ್ನಿಯ ಬಳಿ ఒక వర్షాకాలపు సాయంత్రం ಮತ್ತು రెండు గుండెల చప్పుడు ತರಿಸಿದೆ. ಎರಡನೇ ಪುಟದಲ್ಲಿಯೇ ಅವರ ಫೋನ್ ನಂಬರ್ ಇತ್ತು. ಆ ಕ್ಷಣದಲ್ಲಿಯೇ ಫೋನ್ ಮಾಡಿ 'ಯತಿರಾಜ್' ಅಂದೆ. 'ಲಾಂಗ್ ಟೈಮ್' ಎಂದರು. ನಾನು ಇಲ್ಲಿ ಕೆಲಸಕ್ಕೆ ಸೇರಿದ ಕೆಲವು ದಿನಗಳಲ್ಲಿ ಅವರಿಂದ ಫೋನ್ ಬಂತು. ಗ್ರೀನ್ ಹೌಸ್ಗೆ ಬಾ ಎಂದರು. ಏನೋ ಉದ್ವೇಗ. ಸುಮಾರು ವರ್ಷಗಳ ಮಾತಾಡಿದೆವು. ದ ಹಿಂದು ಪತ್ರಿಕೆಯ ವಿಶಾಖಪಟ್ಟಣಂ ಎಜುಕೇಷನ್ ಪ್ಲಸ್ ಪುರವಣಿಯಲ್ಲಿ ದ ರೈಟ್ ಟರ್ನ್ ಎನ್ನುವ ಲೇಖನ ಮಾಲೆ ಬರೆಯುತ್ತಿದ್ದರು. ಅದನ್ನು ಕನ್ನಡಕ್ಕೆ ತರುವೆನೆಂದೆ. ಒಪ್ಪಿಗೆ ನೀಡಿದರು. ಈ ವಿಷಯ ಹಾಯ್ ಬೆಂಗಳೂರು ಪ...