Posts

Showing posts from September, 2018

ಯತಿ ಸ್ವಂತೀ-271

  30-09-2018 ಒಮ್ಮೆ ಮನೆಗೆ ಸಂಜೆ ಬಂದೆ. ಸಾಮಾನ್ಯವಾಗಿ ಆ ಸಮಯದಲ್ಲಿ ನಾನು ವಾಪಸ್ ಬರುತ್ತಿರಲಿಲ್ಲ. ಮನೆಯಲ್ಲಿ ಅಮ್ಮ ಇರಲಿಲ್ಲ. ಎದೆ ಧಸಕ್ಕೆಂದಿತು. ಎಲ್ಲಿ ಹೋದರು ಈ ಅಮ್ಮ? ಯಾರನ್ನು ಕೇಳಬೇಕು? ವಿಚಾರಿಸೋಣ ಎಂದರೆ ನನ್ನ ಫ್ಲ್ಯಾಟ್ ಮೇಟ್‌ಗಳು ಮೂವರೂ ಇರಲಿಲ್ಲ. ಬೇರೆ ಯಾರ ಪರಿಚಯವೂ ಇಲ್ಲ. ಫೋನ್ ಇಲ್ಲ. ಅಯ್ಯೋ... ಎಲ್ಲಪ್ಪಾ ಹೋದರು ಎಂದು ತಲೆ ಕೆಡಿಸಿಕೊಂಡು ನನ್ನ ರೂಮಿನ ಕಿಟಕಿಗೆ ಬಂದೆ. ಅದು ನಾಲ್ಕನೇ ಮಹಡಿ. ನಮ್ಮ ಬಿಳ್ಡಿಂಗ್ ಹಿಂಭಾಗದಲ್ಲಿ ಒಂದು ಆಕೃತಿ ಮೆಲ್ಲ ನಡೆಯುತ್ತಿತ್ತು. ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ. ಅಮ್ಮ ಅಲ್ಲಿ ಮೆಲ್ಲನೆ ನಡೆದಾಡುತ್ತಿದ್ದರು. ನಾನು ಬರೋದು ತಡವಾಗಬಹುದೆಂದು ಲಿಫ್ಟ್ ಬಳಸಿ ಕೆಳಗೆ ಹೋಗಿ ಅಲ್ಲಿನ ಖಾಲಿ ಜಾಗದಲ್ಲಿ ವಾಕಿಂಗ್ ಮಾಡುತ್ತಿದ್ದರು. ಅಮ್ಮನಿಗೆ ಕಡ್ಡಾಯ ಆರ್ಡರ್ ಮಾಡಿದೆ. ಒಬ್ಬಳೇ ಲಿಫ್ಟ್ ಬಳಸಕೂಡದು. ನಮ್ಮ ಫ್ಲ್ಯಾಟ್ ಮೊಗಸಾಲೆಯಲ್ಲಿ ಓಡಾಡೆಂದು. ಅವರಿಗೆ ಊಟ ಮಾಡುವಾಗ ಫ್ಯಾನ್ ತಿರುಗಬಾರದು. ಏ. ಸಿ. ಆಗುವುದಿಲ್ಲ ಎಂದು ಹೇಳಿ ಆಫ್ ಮಾಡಿಸಿದ್ದರು. ಫ್ಯಾನ್ ಕೊಂಡು ತಂದಿದ್ದೆ. ಊಟ ಮಾಡುವಾಗ ಮಾತ್ರ ಬಹಳ ಕಷ್ಟ. ಸೆಖೆ ತಡೆಯಲು ಆಗುವುದಿಲ್ಲ. ಆದರೆ ಅಮ್ಮನಿಗೆ ಫ್ಯಾನ್ ಬೇಡ! ಅಂತೂ ಎರಡು ತಿಂಗಳು ಬಹಳ ಚೆನ್ನಾಗಿತ್ತು. ಪರದೇಶದಲ್ಲಿ ಅಮ್ಮನ ಕೈಯಡುಗೆ! ಒಂದಿಷ್ಟು ಜಾಗಗಳಿಗೆ ಸುಮ್ಮನೆ ಡ್ರೈವ್ ಮಾಡಿ ಕರೆದೊಯ್ದೆ. ಬಹಳ ಎನ್ಜಾಯ್ ಮಾಡಿದರು. ನನ್ನ ಭಾವ ಅಮ್ಮನಿಗೆ ವೀಸಾ ಅಪ್ಲೈ ಮಾ...

ಯತಿ ಸ್ವಂತೀ -270

29-09-2018 ಸುಮಾರು 13 ವರ್ಷಗಳು ಆದವು ನಾನು ವಾಪಸ್ ಬೆಂಗಳೂರಿಗೆ ಬಂದು. ನಿಧಾನವಾಗಿ ಅಲ್ಲಿನ ಸಂಗತಿಗಳು ಮರೆತು ಹೋಗುತ್ತಿದೆ. ಅಮ್ಮ ಮಸ್ಕತ್‌ಗೆ ಬಂದ ವಿಷಯಕ್ಕೆ ಬರ್ತೀನಿ. ಅವರು ಬರುವ ಮುಂಚೆಯೇ ನಾನು ಮನೆ ಬದಲಾಯಿಸಿದ್ದೆ. ಅಷ್ಫಾಕ್, ರಾಜ್ ಶೆಟ್ಟಿ ಮತ್ತು ಶಂಸುದ್ದೀನ್ ನನ್ನ ಫ್ಲ್ಯಾಟ್ ಮೇಟುಗಳು. ಅವರಿಗೆ ಮೊದಲೇ ಹೇಳಿದ್ದೆ ಅಮ್ಮ ಬರುವರೆಂಬ ವಿಷಯ. ಅಮ್ಮ ಬರುವ ಮೊದಲೇ ನಾನು ಆ ರೂಮು ಸೇರಿದ್ದೆ. ಉಳಿದ ಮೂವರಿಗೆ ತೊಂದರೆ ಆಗಬಾರದೆಂದು ಬೆಳಗ್ಗೆ ನಾಲ್ಕೂವರೆಗೆ ಸ್ನಾನ ಮುಗಿಸಿ ಐದು ಗಂಟೆಗೆ ಕೃಷ್ಣನ ದೇವಸ್ಥಾನ ತಲುಪುತ್ತಿದ್ದೆ. ಟ್ರಾಫಿಕ್ ಸಿಗ್ನಲ್ ಒಂದು ವೈಶಿಷ್ಟ್ಯ ಹೊಂದಿತ್ತು. ನನ್ನ ಕಾರನ್ನು ಸೆನ್ಸ್ ಮಾಡಿ ಹಸಿರು ದೀಪವಾಗಿ ಬದಲಾವಣೆ ಆಗುತ್ತಿತ್ತು ಸಿಗ್ನಲ್. ಕೃಷ್ಣನ ಗುಡಿ ತೆರೆದೊಡನೆ ಒಳಗೆ ಹೋಗಿ ಕಾಳಿಂಗ ಮರ್ದನದ ಫೋಟೋ ಕೆಳಗೆ ಕೂತು ಆ ದೇಶದಲ್ಲಿ ಕೊಂಡಿದ್ದ ಗೀತೆ ಮತ್ತು ವೇದಾಂತದ ಪುಸ್ತಕ ಓದುತ್ತಿದ್ದೆ. ಮೂವರು ಓಲ್ಡ್ ಮೆನ್ ಹೊರಗೆ ನಿಂತು ಶ್ರೀ ವಿಷ್ಣು ಸಹಸ್ರ ನಾಮ ಪಠಿಸುತ್ತಿದ್ದರು. ಆಮೇಲೆ ಕೃಷ್ಣನಿಗೆ ಮಂಗಳಾರತಿ ಆಗುತ್ತಿತ್ತು. ಅದನ್ನು ಮುಗಿಸಿ ಹೊಟೇಲ್‌ಗೆ ಬಂದು ತಿಂಡಿ ತಿಂದು ಆಫೀಸಿಗೆ ಏಳು ಗಂಟೆ ಸುಮಾರಿಗೆ ಹೋಗುತ್ತಿದ್ದೆ. ಎಂಟಕ್ಕೆ ಆಫೀಸ್‌ ಶುರು. ಅಮ್ಮ ಬಂದರು. ಹೊಟೇಲ್ ಊಟ ತರಿಸ್ತೀನಿ ಅಂದೆ. ಬೇಡ ಬೋರ್ ಆಗತ್ತೆ ಅಡುಗೆ ಮಾಡ್ತೀನಿ ಅಂದರು. ಆ ಮನೆಯಲ್ಲಿದ್ದ ಉಳಿದವರು ಅಡುಗೆ ಮಾಡುತ್ತಿರಲಿಲ್ಲ. ಅವರು ಮೂವರ...

ಯತಿ ಸ್ವಂತೀ -269

28-09-2018 ಕಥೆ ಸ್ವಲ್ಪ ಹಿಂದೆ ಮುಂದೆ ಆಗುತ್ತಿದೆ. ಜೂನ್ 2003ರ ಕೊನೆಯಲ್ಲಿ ಭಾರತಕ್ಕೆ ಬೆಂಗಳೂರಿಗೆ ನಮ್ಮ ಮನೆಗೆ ಬಂದೆ! ಏನೋ ಥ್ರಿಲ್ಲು. ಮಕ್ಕಳು ಖುಷಿ. ಪತ್ನಿ ಖುಷಿ. ಅಮ್ಮ ಖುಷಿ. ನಾನೂ ಖುಷಿ. ನನ್ನ ಗುರುತು ನನ್ನ ಮನೆಯವರಿಗೆ ಬಿಟ್ಟರೆ ಬೇರೆ ಯಾರಿಗೂ ಸಿಕ್ಕಲಿಲ್ಲ. ಪೂರಾ 'ಹೂಲಿಯಾ' ಬದಲಾಗಿತ್ತು. ನನ್ನ ಅಮ್ಮನನ್ನು ಅವರ ಹಲ್ಲು ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದೆ. ನೀವು ನಿಮ್ಮ ತಾಯಿಯವರ ಎರಡನೇ ಮಗಾನಾ? ಎಂದರು. ನಾನು ನಕ್ಕು ನಾನೊಬ್ಬನೇ ಮಗ ಎಂದೆ. ಅವರ ಮುಖದಲ್ಲಿ ಕಂಡ ಶಾಕ್ ಇಂದಿಗೂ ನನಗೆ ನಗೆ ತರಿಸುತ್ತದೆ. ನಿಮ್ಮ ಬಣ್ಣ, ಆಕಾರ ಮತ್ತೆ ನಿಮ್ಮ ಆತ್ಮ ವಿಶ್ವಾಸ ಬಹಳ ಆಶ್ಚರ್ಯ ತರುತ್ತಿದೆ ಎಂದರು. ಮನೆಗೆ 64 ಕೇಜಿ ಇದ್ದವನು 40 ದಿನಗಳಲ್ಲಿ 70 ಕೇಜಿ ಆದೆ. ಈ ಸಲ ನನ್ನ ಮನೆಯಿಂದ ಪಾತ್ರೆ ಕುಕ್ಕರ್ ಎಲ್ಲಾ ತಗೊಂಡು ಮಸ್ಕತ್‌ ತಲುಪಿದೆ. ಅಡುಗೆ ಮಾಡಿಕೊಂಡು ತಿನ್ನುವ ಇರಾದೆ ಅದು. ಉಪ್ಪು ತೆಗೆದ ನೀರು ಟ್ಯಾಂಕ್ ಮೂಲಕ ಬರುತ್ತಿತ್ತು. ಗ್ಯಾಸ್ ಸಿಲಿಂಡರ್ ತರಿಸಿಕೊಂಡೆ. ಬೆಳಗ್ಗೆ ಗುಜರಾತಿ ತೇಪ್ಲಾ ತರಿಸಿ ತಿಂದೆ. ಪಲ್ಯ ಮಾಡಿದರೆ ಒಂದಿಷ್ಟು ಎತ್ತಿಟ್ಟು ಬ್ರೆಡ್ ಸ್ಲೈಸ್ ನಡುವೆ ಇಷ್ಟು ಬೆಳಗ್ಗೆ ತಿನ್ನುತ್ತಿದ್ದೆ. ಹುಳಿ ಮಾಡುವ ಮುಂಚೆ ತರಕಾರಿ ತೆಗೆದಿಟ್ಟು ಬ್ರೆಡ್ಡು ನಡುವೆ ಇಟ್ಟು ತಿನ್ನುತ್ತಿದ್ದೆ. ದಿನವೂ ಕಡಲೇಕಾಯಿ ಬೀಜ ಸಾಂಬಾರಿಗೆ ಹಾಕುತ್ತಿದ್ದೆ. ಅದು ಎಲ್ಲರಿಗೂ ಆಶ್ಚರ್ಯ ತರುತ್ತಿತ್ತು. ನಾನು ಕ್ಯಾಪ...

ಯತಿ ಸ್ವಂತೀ -268

27-09-2018 ನಮ್ಮ ಪಿ ಆರ್ ಓ ಗೆ ಫೋನ್ ಮಾಡಿದೆ. ರಸ್ತೆಯ ಹೆಸರು ತಿಳಿಯದು. ಜಾಗದ ಹೆಸರು ಅಲ್ ಖ್ವೈರ್ ಅಂತ ತಿಳಿದಿತ್ತು. ದೂರದಲ್ಲಿ ಮಸ್ಕತ್ ಮೆಯಿನ್ ರೋಡಲ್ಲಿ ಕಾಣಿಸಿದ ಒಂದು ಲ್ಯಾಂಡ್ ಮಾರ್ಕ್ ಹೇಳಿ, ಕ್ರೈನ್ ಕಳಿಸು ಎಂದೆ...  ಮರೆತಿದ್ದೆ! ಈ ದೇಶದಲ್ಲಿ ಅಂಚೆಯ ಅಣ್ಣ ಇಲ್ಲ. ಅಂಚೆ ಕಚೇರಿಯಲ್ಲಿ ಪೋಸ್ಟ್ ಬಾಕ್ಸ್ ನಂಬರ್ ಇದೆ. ಆಗಿನ್ನೂ ಈ ಮೇಲ್ ದಾಳಿ ನಮ್ಮ ಮನೆವರೆಗೆ ಬಂದಿರಲಿಲ್ಲ. ಅದಕ್ಕೇ ಮನೆಯವರೆಲ್ಲ ಪತ್ರಗಳನ್ನು ಬರೆಯುತ್ತಿದ್ದರು. ನನಗೂ ಅದೇ ಪಾಸ್ಟೈಮ್. ನಮ್ಮ ಆಫೀಸ್ ಬಾಯ್ ಗೋವಿಂದ ದಿನಾ ಪೋಸ್ಟ್ ಆಫೀಸ್‌ಗೆ ಹೋಗಿ ಪತ್ರಗಳನ್ನು ತರುತ್ತಿದ್ದ. ನನಗೆ ನನ್ನ ಮನೆ ಅದೆಷ್ಟು ಮಿಸ್ ಆಗಿತ್ತೆಂದರೆ ಗೋವಿಂದನಿಂದ ಪೋಸ್ಟ್ ಬಾಕ್ಸ್ ಬೀಗದಕೀಲಿ ಪಡೆದು ನಾನೇ ಪತ್ರಗಳನ್ನು ತರಲಾರಂಭಿಸಿದೆ. ಉಳಿದವರು ನಗಲಿಲ್ಲ. ಎಲ್ಲರೂ ಅದೇ ರೀತಿಯ ಒಂಟಿತನದ ಬೇಗೆಯಲ್ಲಿ ಬೆಂದವರೇ. ಬಹಳ ವರ್ಷಗಳ ನಂತರ ಕೆಲವರು ಕುಟುಂಬದವರನ್ನು ಕರೆಸಿಕೊಂಡಿದ್ದರು. ಬಹಳ ಜನ ಒಂಟಿಜೀವನ + ಪತ್ರ + ಟೆಲಿಫೋನ್ ಕರೆ + ನಲವತ್ತು ದಿನಗಳ ವಾರ್ಷಿಕ ರಜೆ... ಇವನ್ನು ರೂಢಿಸಿಕೊಂಡಿದ್ದರು. ದಿನವೂ ಪತ್ರ ಬರೆದ ದಿನಗಳು ನಿಧಾನವಾಗಿ ಮೂರು ದಿನಗಳಿಗೊಂದು, ವಾರಕ್ಕೊಮ್ಮೆ ಎಂದಾದವು. ಆಫೀಸ್‌ನಲ್ಲಿ ಮೊಬೈಲ್ ನೀಡಿದ್ದರು. ದಿನಾ ರಾತ್ರಿ ಒಮ್ಮೆ ರಿಂಗ್ ಮಾಡುತ್ತಿದ್ದೆ. ಓ ನಾನು ಹುಷಾರಾಗಿದ್ದೀನಿ ಎಂದು ಮನೆಗೆ ಅದು ಸಿಗ್ನಲ್. ಶುಕ್ರವಾರ ಬೆಳಗ್ಗೆ ಕರೆ ಇದ್ದೇ ಇರುತ್ತಿತ್ತು......

ಯತಿ ಸ್ವಂತೀ -268

26-09-2018 ಲೈಸೆನ್ಸ್ ತಗೊಂಡು ಆಯ್ತು. ಇನ್ನು ಕಾರು? ಈಗಲೇ ಸದ್ಯಕ್ಕೆ ಬೇಡ ಎಂದರು ಸಹೋದ್ಯೋಗಿಗಳು. ಮೊದಲ ಮೂರು ತಿಂಗಳು ಯಾವುದಾದರೂ ಅಪಘಾತಕ್ಕೆ ಒಳಗಾದರೆ, ಆಕಸ್ಮಿಕ ನಾವೇ ಮಾಡಿದರೂ ಕೂಡ ಲೈಸೆನ್ಸ್ ಗೋವಿಂದ! ಅಂದ ಹಾಗೆ ಅಲ್ಲಿ ನಮ್ಮ ಆಫೀಸ್ ಬಾಯ್ ಹೆಸರು ಗೋವಿಂದ. ನಾವೆಲ್ಲ... ಎಲ್ಲ ಗುಂಪಿನ ಜನರೂ ಅವನ ನಾಮಜಪ ಮಾಡಿದ್ದೇವೆ. ಎಲ್ಲದಕ್ಕೂ 'ಗೋವಿಂದ ಗೋವಿಂದ' ಎಂದು ಅವನನ್ನು ದಿನಕ್ಕೆ ನೂರು ಸಲವಾದರೂ ಕೂಗಿ(ಕೊಂಡಿ)ದ್ದೇವೆ. ನಾವೆಲ್ಲ ಬಹುಶಃ ನೇರ ವೈಕುಂಠ ತಲುಪಬಹುದು!! ಸಾರಿ... ವಾಪಸ್ ಬರ್ತೀನಿ. ಮೂರು ತಿಂಗಳು ಕಾರು ಬಳಸುವ ಅವಕಾಶ ಸಿಗಲಿಲ್ಲ. ಮಾಜ್ದಾ 323 ಅನ್ನೋ  ಕಾರು ಉಪಯೋಗಿಸುತ್ತಿದ್ದ ಪ್ರವೀಣ್ ಪಾಟೀಲನ ಕಾರು ನನಗೆ ನೀಡಿದರು. ವಾಹ್... ಫುಲ್ ಖುಷ್ ನಾನು. ಅಷ್ಟರಲ್ಲಿ ನನಗೆ ಹೆಡ್ ಆಫೀಸಿಗೆ ವರ್ಗ ಆಯಿತು. ನನ್ನ ಜಾಗಕ್ಕೆ ಗುರುದಾಸ್ ಶಾನ್‌ಭಾಗ್ ಹೋದ. ಒಂದು ರೀತಿಯಲ್ಲಿ  ಇಂಟರ್‌ಛೇಂಜ್ ಆದೆವು ಎನ್ನಬಹುದು. ಕಾರು ಬರುವ ಮೊದಲೇ ವರ್ಗಾವಣೆ ಆಗಿತ್ತು. ಗ್ರಾಹಕರನ್ನು ಭೇಟಿ ಮಾಡಿ ಎಲೆಕ್ಟ್ರಿಕ್ ಕೇಬಲ್ ಮಾರಬೇಕಿತ್ತು. ನನ್ನದು ಟ್ರೇಡಿಂಗ್ ಕಂಪೆನಿ. ಕೇಬಲ್‌ಗಳು ಮಾರುಕಟ್ಟೆಯಲ್ಲಿ ಇದ್ದರೆ ನಾವು ಕೊಂಡ ಬೆಲೆಗಿಂತ ಸ್ವಲ್ಪವಾದರೂ ಹೆಚ್ಚಿನ ಬೆಲೆಗೆ... ಒಂದು ವೇಳೆ ಪ್ರತಿಸ್ಪರ್ಧಿಗಳ ಬಳಿ ಇಲ್ಲದೇ ನಮ್ಮ ಬಳಿ ಮಾತ್ರ ಇದ್ದರೆ ನಾವು ಹೇಳಿದ್ದೇ ಬೆಲೆ! ನನ್ನ ಗ್ರಾಹಕರು ಸುಮಾರು ಐವತ್ತು ಕಿಮೀ ದೂರದಲ್ಲಿಯೂ... ಸುಮಾರು ಎ...

ಯತಿ ಸ್ವಂತೀ -267

25-09-2018  ಮತ್ತೆ ಮತ್ತೆ ಪರೀಕ್ಷೆಗಾಗಿ ಕಾರೋಡಿಸುತ್ತಿದ್ದ ನಾನು ನಿಪುಣನಾದೆ. ಒಮ್ಮೆ ನನ್ನನ್ನು ಮೊಹಮ್ಮದ್ ಕೆಣಕಿದ್ದಕ್ಕೆ ಕಾರಿನ ಬಾಗಿಲನ್ನು ದಢಾರನೆ ತೆರೆದೆ. ಲಾಕ್ ಹಾಕಿದ್ದರಿಂದ ಕಾರಿನ ಪಿಡಿ ಮುರಿಯಿತು. ಬಿರಬಿರನೆ ರಸ್ತೆಯಲ್ಲಿ ನಡೆದೆ. ರಾಜ್ ರಾಜ್ ಎಂದು ಪಕ್ಕದಲ್ಲೇ ಡ್ರೈವ್ ಮಾಡುತ್ತಾ ಬಂದ. ಮೂರು ರಿಯಾಲ್ ದಂಡ ನನಗೆ ಬಾಗಿಲ ಪಿಡಿ ಮುರಿದಿದ್ದಕ್ಕೆ! ಮತ್ತೊಮ್ಮೆ ಟೊಯೋಟಾ ಕಾರು ತಂದ. ನನಗೆ ಅದರ ಹ್ಯಾಂಡ್‌ ಬ್ರೇಕ್ ತೆಗೆಯಲಾಗಲಿಲ್ಲ. ಅಭ್ಯಾಸ ಇಲ್ಲದ ಕಾರು. ಫೆಯ್ಲ್. ನನಗೆ ಡ್ರೈವಿಂಗ್ ಬರಲ್ಲ ಅಂತ ತೀರ್ಮಾನ ಮಾಡಿ ಮೊಹಮ್ಮದ್ ಬೈ ಬೈ ಹೇಳಿದ. ಮತ್ತೊಬ್ಬ ಬಂದ. ಅವನಿಗೆ ಕೇವಲ ಅರಾಬಿಕ್ ಬರುತ್ತಿತ್ತು. ಸೋ ಒಂದೆರಡು ಕ್ಲಾಸಿನ ನಂತರ ಬೇಡ ಎಂದೆ. ಮೂರನೆಯ ಗುರು ಅಲಿ. ನನ್ನನ್ನು ಯಾಕೀ (ಅಂದರೆ ಗೆಳೆಯ ಅಂತೆ ಅರಾಬಿಕ್ ಭಾಷೆಯಲ್ಲಿ) ಅಂತಿದ್ದ. ಅವನಿಗೆ ಇಂಗ್ಲಿಷ್ ಬರುತ್ತಿತ್ತು. ನನಗಿಂತ ಅಗಲ, ಎತ್ತರ ಮತ್ತು ದಪ್ಪ. ಅವನೊಂದಿಗೆ ಮೊದಲ ಟೆಸ್ಟ್‌ನಲ್ಲಿ ಫೆಯ್ಲ್. ಎರಡನೇ ಸಲ ಅಪ್‍ನಲ್ಲಿ ನಿಲ್ಲಿಸಿದ್ದೆ. ಪೊಲೀಸ್ ಕಣ್ಮುಚ್ಚಿ ಕುಳಿತಿದ್ದ. ನನ್ನ ಮುಂದಿನ ಕಾರು ಹಿಂದಕ್ಕೆ ಜಾರಿತ್ತು. ದೂರ ಮೆಯಿನ್‌ಟೈನ್ ಮಾಡಲು ನಾನು ಹಿಂದೆ ಹೋಗಲಾಗಲಿಲ್ಲ. ಏಕೆಂದರೆ ಅಲ್ಲೊಂದು ಕಾರಿತ್ತು. ಕಣ್ಣು ಬಿಟ್ಟ ಪೊಲೀಸ್ ಫೆಯ್ಲ್ ಅಂದ. ಅಲಿ ಅಂದ. 'ಯಾಕೀ ನಿನಗೆ ಡ್ರೈವಿಂಗ್ ಚೆನ್ನಾಗಿ ಬರುತ್ತೆ. ಯಾಕೆ ಫೆಯ್ಲ್ ಆಗ್ತಿದ್ದೀ?' ಅಂದ. ಪ್ರತಿ ...

ಯತಿ ಸ್ವಂತೀ -266

24-09-2018 ನನಗೆ ಮೈ ಉರಿಯಿತು. ಆದರೆ ತಪ್ಪು ಮಾಡಿದ್ದೆ. ಸುಮ್ಮನಾದೆ. ಇಲ್ಲಿನ ಯಶವಂತಪುರ ಜಯನಗರ ಕೋರಮಂಗಲ ರಾಜಾಜಿನಗರ ಆರ್ ಟಿ ಓಗಳ ರೀತಿ ಅಲ್ಲೂ ಬೇರೆ ಬೇರೆ ಡ್ರೈವಿಂಗ್ ಟೆಸ್ಟ್ ಜಾಗಗಳಿವೆ. ಅಲ್ಲೆಲ್ಲಾ ಟ್ರೈನಿಂಗ್ ನೀಡಿದರು ಮೊಹಮ್ಮದ್. ನಂತರ ಟೆಸ್ಟ್ ಶುರು ಆಯಿತು. ಡ್ರಮ್ ಟೆಸ್ಟ್. ಇದನ್ನೂ ಕಲಿಸಿದ್ದರು ನಮ್ಮ ಗುರು. ಹುಂಡೈ ಎಲಂಟ್ರ ನನ್ನ ಕಾರು. T ಆಕಾರದಲ್ಲಿ ಡ್ರಮ್‌ಗಳು. ಅವುಗಳ ನಡುವೆ ರಿವರ್ಸ್ ಗೇರ್‌ನಲ್ಲಿ L ಆಕಾರದಲ್ಲಿ ಹೋಗಬೇಕು. ನಂತರ ಮತ್ತೊಂದು ಕಡೆಯಿಂದ ಇನ್ನೊಮ್ಮೆ. ಕಾರಿನ ಯಾವ ಭಾಗವೂ ಡ್ರಮ್‌ಗಳಿಗೆ ತಾಕಕೂಡದು. ಮೊದಲ ಸಲ ಫೆಯ್ಲ್! ಎರಡನೇ ಸಲ ಅದು ಪಾಸ್. ಸ್ಲೋಪ್ ಟೆಸ್ಟ್ ಎರಡನೆಯದು. ಕಾರನ್ನು ಒಂದು ಇಳಿಜಾರಿನಲ್ಲಿ ನಿಲ್ಲಿಸಿ ಹಸಿರು ದೀಪಕ್ಕೆ ಕಾದು, ಹಸಿರು ದೀಪ ಬಂದೊಡನೆ ಹಿಂದಕ್ಕೆ ಬರದೇ ಮುಂದಕ್ಕೆ ಹೋಗಬೇಕು. ಇದೂ ಮೊದಲ ಬಾರಿಗೆ ಫೆಯ್ಲ್. ಎರಡನೇ ಸಲ ಇದೂ ಪಾಸ್. ನಂತರ ರೋಡ್ ಟೆಸ್ಟ್. ಮೊದಲ ಸಲ ಪಾಸ್ ಆಗಲಿಲ್ಲ. ಪಕ್ಕದಲ್ಲಿ ಪೊಲೀಸ್, ಹಿಂದೆ ಗುರು. ಎರಡನೇ ಸಲ ನನ್ನನ್ನು ಟೆಸ್ಟ್ ಸ್ಥಳದಲ್ಲಿ ಬಿಟ್ಟು ಗುರು ಎಲ್ಲೋ ಹೋದ. ನನ್ನ ಹೆಸರು ಕೂಗಿದ್ದರೆ ನನಗೆ ಅದು ತಿಳಿಯಲಿಲ್ಲ. ಎಲ್ಲರೂ ಹೊರಟುಹೋದ ನಂತರ ಗುರು ಬಂದ. ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದ. ಅಲ್ಲಿ ಹೋಗಿ ಯಾರ ಹತ್ತಿರವೋ ಕೂಗಾಡಿದ. ಒಬ್ಬ ಎತ್ತರದ ಯುವಕ ಪೊಲೀಸ್ ಉರಿಮೊಗದೊಂದಿಗೆ ಬಂದ. ನನ್ನ ಕಾರು ಹತ್ತುವಾಗ ಅವನ ತಲೆ ಕಾರಿನ ಬಾಗಿಲಿನ ಕಟ್ಟಿಗೆ...

ಯತಿ ಸ್ವಂತೀ - ೨೬೫

೨೩-೦೯-೨೦೧೮ ನಮ್ಮ ಕಂಪೆನಿಯ ಹಿರಿಯ ಸಹೋದ್ಯೋಗಿ ಒಬ್ಬರು ಇದೆಲ್ಲಾ ಬೇಡ. ನಿನಗೆ ಉದ್ಯೋಗವೇ ಮುಖ್ಯ ಅಂತ ಎಲ್ಲರಿಗೂ ತಿಳೀಬೇಕಾದ್ರೆ ಇವು ಅಡ್ಡ ಬರ್ತವೆ. ಬೇರೆ ಯಾರೂ ಇದು ವರೆಗೆ ಇಂಥವೆಲ್ಲ ಬರೆದಿಲ್ಲ ಎಂದರು. ನನ್ನ ಮುಖ್ಯ ಗುರಿ ಎಂದರೆ ಹಣ ಸಂಪಾದನೆ ಮತ್ತು ನನ್ನ ಮನೆಯವರ ದೇಖ್‌ಪಾಲ್. ಸೋ ಇನ್ನು ನಾನು ಬರೆಯಲಿಲ್ಲ. ವಿಚಿತ್ರವೆಂದರೆ ನಾನು ಎರಡು ಸಾವಿರದ ಇಸವಿಯಿಂದ ಬರೆಯುವುದನ್ನು ಬಿಟ್ಟಿದ್ದೆ. ಒಂಟಿಯಾಗಿ ಇರೋದನ್ನು ಅಭ್ಯಾಸ ಮಾಡಿಕೊಳ್ಳತೊಡಗಿದೆ. ಕೆಲಸ ಅದರ ಪಾಡಿಗೆ ನಡೆಯುತ್ತಿತ್ತು. ಒಂದು ದಿನ ಬಹಳ ಬಿಸಿಲಿತ್ತು. ಮಧ್ಯಾಹ್ನ ನಡೆದು ಹೋಗುತ್ತಿದ್ದಾಗ ತಲೆ ತಿರುಗಿ ಒಂದು ಅಂಗಡಿಯ ಬಾಗಿಲಲ್ಲಿ ಸುಸ್ತಾಗಿ ನಿಂತೆ. ಅಲ್ಲಿದ್ದ ಪಠಾಣ 'ಅರೆ ಸಾಬ್ ಬನ್ನಿ ಒಳಗೆ' ಎಂದು ಹೇಳಿ ಕೂರಿಸಿ ಬಲು ತಣ್ಣನೆ ನೀರಿತ್ತ. ಆ ದೇಶ ಸೇರಿದ ಮರುದಿನವೇ ನನ್ನ ಗೆಳೆಯ ಶ್ರೀವತ್ಸನ ಭೇಟಿ ಆಗಿತ್ತು. ಅನೇಕ ಸಲ ಅವನ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಹೋಗಿದ್ದೆ. ನನ್ನ ಭಾವನವರು ಒಂದು ಕಾಲದಲ್ಲಿ ಮಸ್ಕತ್‌ನಲ್ಲಿ ಇದ್ದವರು. ಆಗ ಅವರ ಜೊತೆ ಕೆಲಸ ಮಾಡುತ್ತಿದ್ದ ಪ್ರಕಾಶ್ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಇಬ್ಬರು ಪುಟ್ಟ ಗಂಡು ಮಕ್ಕಳು ಮತ್ತು ಅವರ ಪತ್ನಿ ಬಹಳವೇ ಆದರದಿಂದ ಅನೇಕ ವಾರಾಂತ್ಯಗಳಲ್ಲಿ ಊಟ ನೀಡಿದ್ದಾರೆ. ನನ್ನ ಸಹೋದ್ಯೋಗಿಗಳೊಂದಿಗೆ ಶುಕ್ರವಾರ ಕೃಷ್ಣನ ಗುಡಿ, ಶನಿವಾರ ಮತ್ತು ಸೋಮವಾರ ಶಿವ+ಹ...

ಯತಿ ಸ್ವಂತೀ -264

22-09-2018 ಗುರುವಾರ ರಾತ್ರಿಗಳದು ಮತ್ತೊಂದು ರೊಟೀನ್. ಪ್ರವೀಣ್ ಬಹಳ ಗೆಳೆಯರನ್ನು ಹೊಂದಿದ್ದ. ಕಾರು ತೆಗೆದುಕೊಂಡು ಹೊರಗೆ ಹೋಗುತ್ತಿದ್ದ. ಕಾರಿಲ್ಲದ ನಾನು, ಸುರೇಶ್ ಮನೆಯಲ್ಲಿ ಬಂದಿಗಳು.  ಸುರೇಶ್ ವೀಡಿಯೋ ಕ್ಯಾಸೆಟ್‌‌ಗಳನ್ನು ತರುತ್ತಿದ್ದ. ನನಗೆ ಎಂತಹ ಸಿನಿಮಾ ಆದರೂ ಓಕೆ. ಆದರೆ ಹಾರರ್ ಚಿತ್ರ ಅಂದರೆ ಆಗದು. ನನಗೆ ರಾತ್ರಿ ನಿದ್ದೆ ಬರುವುದಿಲ್ಲ! ಆದರೆ ವಿಧಿಯೆಣಿಕೆ ಬೇರಿತ್ತು. ನನ್ನ ಒಬ್ಬನೇ ಫ್ಲ್ಯಾಟ್ ಮೇಟ್ ಸುರೇಶ್ ಹೆಚ್ಚಾಗಿ ಹಾರರ್ ಸಿನಿಮಾ ನೋಡುತ್ತಿದ್ದ. ವಿಧಿಯಿಲ್ಲದೇ ನೋಡತೊಡಗಿದೆ. ರೆಸಿಡೆಂಟ್ ಈವಿಲ್ ಇವತ್ತು ನೆನೆದರೆ ಕೂಡ ಮೈ ಝುಮ್ಮೆನ್ನುತ್ತದೆ. ಮತ್ತೊಂದು ಡಾಕ್ಯುಮೆಂಟರಿ ಸಾವಿನ ಬಗ್ಗೆ. ಜೀವಂತ ಕುರಿಯ ಚರ್ಮ ಸುರಿಯುವ ದೃಶ್ಯ... ಜೀವಂತ ಕೋತಿ ತಲೆ ಒಡೆದು ಮೆದುಳು ತಿನ್ನುವುದು... ಮನುಷ್ಯನ ತಲೆ ಕತ್ತರಿಸುವುದು.. ಗ್ರಾಫಿಕ್ಸ್ ಅಲ್ಲ.. ನಿಜವಾದವು. ಭೀಭತ್ಸ ಎಂದರೆ ಆ ಚಿತ್ರ. ಕೆಲವೊಮ್ಮೆ ಕೃಷ್ಣನ ಗುಡಿಗೆ ಹೋಗುತ್ತಿದ್ದೆವು. ಸಿನಿಮಾ ಕೂಡ ಕೆಲವು ಸಲ. ಎಲ್ಲ ಸಿನಿಮಾಗಳೂ ಸಬ್ ಟೈಟಲ್ ಅರಾಬಿಕ್ ಭಾಷೆಯಲ್ಲಿ ಹೊಂದಿರುತ್ತಿದ್ದವು. ಅಬ್ಜೆಕ್ಶನಬಲ್ ದೃಶ್ಯದ ಮೇಲೆ ಕರಿಬಣ್ಣ. ಸಿನಿಮಾ ಪತ್ರಿಕೆಗಳಲ್ಲಿ ಕೂಡ ತಾರೆಯರ ಮುಖ ಬಿಟ್ಟು ದೇಹದ ಬೇರೆ ಯಾವ ಭಾಗ ಕಾಣಿಸಿದರೂ ಕಪ್ಪು ಬಣ್ಣ ಬಳಿಯಲ್ಪಡುತ್ತಿತ್ತು. ಸಂಬಳ ಬಂದಾಗ ಆಫೀಸ್ ಹತ್ತಿರವೇ ಇದ್ದ ನ್ಯಾಶನಲ್ ಬ್ಯಾಂಕ್ ಆಫ್ ಒಮಾನ್‌ಗೆ ಹೋದೆ. ನನ್ನ ಸಹಿ ಬಗ್ಗೆ ಅನುಮಾನ ಇ...

yathi swantee -264

21-09-2018 ನಾನು ದಿನಾ ಮನೆಯಿಂದ ಆಫೀಸ್‌ಗೆ ನಡೆದು ಹೋಗಿ ಬಂದು, ಆ ಉರಿ ಬಿಸಿಲು ನನ್ನ ಮೈ ಬಣ್ಣವನ್ನು ಬದಲಾಯಿಸಿತು. ಒಂದು ದಿನ ನನ್ನ ಸರ್ದಾರ್ಜಿ ಬಾಸ್ 'ಹೇಗೆ ಬರ್ತಿದ್ದೀ ಆಫೀಸ್‌ಗೆ?' ಅಂದರು. 'ನಡೆದುಕೊಂಡು' ಅಂದೆ. 'ನೀನು ಡ್ರೈವಿಂಗ್ ಕಲಿಯೋದು ಯಾವಾಗ?' ಅಂದರು. 'ನಮ್ಮ ಜೀಯೆಮ್ ಇಂಡಿಯಾದಿಂದ ವಾಪಸ್ ಬಂದು ಅನುಮತಿ  ಕೊಟ್ಟ ಮೇಲೆ' ಅಂದೆ. ನನ್ನ ಫ್ಲ್ಯಾಟ್ ಮೇಟ್ ಪ್ರವೀಣನಿಗೆ ಫೋನ್ ಮಾಡಿ 'ಅರೆ ಪ್ರವೀಣ್.. ಮಧ್ಯಾಹ್ನ ಮನೆಗೆ ಹೋಗುವಾಗ ಇವನನ್ನು ಕರಕೊಂಡು ಹೋಗು. ಈ ಬಿಸಿಲಿಗೆ ಸತ್ತು ಗಿತ್ತು ಹೋದಾನು' ಎಂದರು. ಅಂದಿನಿಂದ ಪ್ರವೀಣ್ ಮಧ್ಯಾಹ್ನ ನನ್ನನ್ನು ಮನೆಗೆ ಕರೆದೊಯ್ಯತೊಡಗಿದ. ಒಮಾನ್ ಎಕ್ಸ್‌ಪ್ರೆಸ್ ಊಟ ಬೇರೆ ಬೇರೆ ಪ್ಲಾಸ್ಟಿಕ್ ಕವರುಗಳಲ್ಲಿ ಬರುತ್ತಿತ್ತು. ಅನ್ನ ಸಾರು ಸಾಂಬಾರು ಪಲ್ಯ ಹಪ್ಪಳ ಉಪ್ಪಿನಕಾಯಿ ಮತ್ತು ಮೊಸರು. ನಾನು ಪ್ರವೀಣ್ ಮತ್ತು ಸುರೇಶ್ ಒಟ್ಟಿಗೇ ಉಣ್ಣುತ್ತಿದ್ದೆವು. ಮೊದಮೊದಲು ನನಗೆ ಕವರ್ ಗಂಟುಗಳನ್ನು ಸುರೇಶ್ ತೆಗೆದುಕೊಡುತ್ತಿದ್ದ. ಎಲ್ಲವನ್ನೂ ಅರ್ಧ ಭಾಗ ತಿನ್ನುವುದು. ಮತ್ತೆ ಗಂಟು ಹಾಕಿ ಫ್ರಿಜ್‌ನಲ್ಲಿ ಇಡುವುದು. ಪ್ರವೀಣ್ ಏಳು ಗಂಟೆ ಸುಮಾರಿಗೆ ಮನೆಗೆ ಬಂದು ಎಲ್ಲರ ಊಟದ ಶೇಷವನ್ನೂ ಪಿಂಗಾಣಿ ತಟ್ಟೆ ಸಹಿತ ಹೊರಗಿಡುತ್ತಿದ್ದ. ನಾವು ತಿನ್ನುವ ವೇಳೆಗೆ ಫ್ರಿಜ್ ಕೋಲ್ಡ್ ಹೋಗಿ ರೂಂ ಟೆಂಪರೇಚರ್‌ಗೆ ಬಂದಿರುತ್ತಿತ್ತು ಆ ಊಟ. ಪ್ರವೀಣ್ ಗ್ರಾಹಕರ ಭೇ...

ಯತಿ ಸ್ವಂತೀ - ೨೬೩

೦-೦೯-೨೦೧೮ ಶುಕ್ರವಾರ ರಜಾ ದಿನ. ಇಡೀ ಮಸ್ಕತ್ ಮನೆ ಬಿಟ್ಟು ಹೊರಡುತ್ತಿರಲಿಲ್ಲ. ಮಧ್ಯಾಹ್ನದ ವರೆಗೆ ಇಡೀ ಊರು ಬಂದ್ ಆಗಿದೆಯೇನೋ ಎನ್ನುವ ಹಾಗೆ ಇರುತ್ತಿತ್ತು. ಆದರೆ ನಮಗೆ ಅಲ್ಲಿ ಮನೆಯಲ್ಲಿ ಹೊತ್ತು ಹೋಗುತ್ತಿರಲಿಲ್ಲ. ಬೆಂಗಳೂರಿನ ಮನೆಗೆ ಫೋನ್ ಮಾಡುತ್ತಿದ್ದುದು ಅಂದೇ. ಮಕ್ಕಳು ಇಲ್ಲಿ ಶಾಲೆಗೆ ಹೊರಡುವ ಮೊದಲು ಮಾಡಬೇಕಿತ್ತು. ಮಸ್ಕತ್ ಇಲ್ಲಿಗಿಂತ ಒಂದೂವರೆ ಗಂಟೆ ಹಿಂದೆ ಇದೆ. ಇಲ್ಲಿನ ಏಳು ಗಂಟೆ ಸುಮಾರಿಗೆ ಫೋನ್ ಮಾಡಲು ನಾನು ಐದೂವರೆ ಸುಮಾರಿಗೆ ಫೋನ್ ಮಾಡಲು ರಜಾ ದಿನ ಬೇಗ ಎದ್ದು ನಮ್ಮ ಕಟ್ಟಡದ ಮುಖ್ಯ ದ್ವಾರದ ಬೀಗ ತೆರೆದು ಅನತಿ ದೂರದ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ಬೂತ್‌ನಿಂದ ಡಯಲ್ ಮಾಡುತ್ತಿದ್ದೆ. ಆಮೇಲೆ ನಿದ್ದೆ ಬರುತ್ತಿರಲಿಲ್ಲ. ಎಂಟಕ್ಕೆ ಆಫೀಸ್‌ಗೆ ಇಳಿದು ಬರುತ್ತಿದ್ದೆ. ನಾನೊಬ್ಬನೇ ಅಲ್ಲ ನಿದ್ದೆ ಬರದವರೆಲ್ಲ ಹಾಜರ್. ಸುಮ್ಮನೆ ಟೈಮ್ ಪಾಸ್ ನನಗೆ. ಏಕೆಂದರೆ ಅದು ಹೆಡ್ಡಾಫೀಸ್. ಉಳಿದ ಅನೇಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಹೊರಗೆ ಹೋಗಿ ಊಟ ಮಾಡುವುದನ್ನು ನಿಲ್ಲಿಸಿದೆ. ಏಕೆಂದರೆ ಉಳಿದ ಫ್ಲ್ಯಾಟ್ ಮೇಟ್ಸ್ ಒಮಾನ್ ಎಕ್ಸ್‌ಪ್ರೆಸ್ ಹೊಟೇಲ್‌ನಿಂದ ಊಟ ತರಿಸುತ್ತಿದ್ದರು. ಒಂದು ಊಟಕ್ಕೆ ಹೆಚ್ಚು ಖರ್ಚಿಲ್ಲ. ಅಲ್ಲಿ ರಿಯಾಲ್ ಒಮಾನಿ ಅನ್ನೋ ನೋಟು. ಒಂದು ರಿಯಾಲ್ ಎಂದರೆ ಒಂದು ಸಾವಿರ ಬೈಸ. ಅಂದ ಹಾಗೆ ಶುದ್ಧ ಅರಾಬಿಕ್ ಭಾಷೆಯಲ್ಲಿ ಪ ಅಕ್ಷರ ಇಲ್ಲ. (ಅಂತೆ) ಪ ಗೆ ಬ ಹೇಳ್ತಾರೆ. 'ಐ ವಿಲ್ ಬಾರ್ಕ್ ಮೈ ಕಾರ್ ಆ್ಯ...

ಯತಿ ಸ್ವಂತೀ - 262

ಸಲ್ತನತ್ ಆಫ್ ಒಮಾನ್ - 3 ಕೆಲವು ದಿನಗಳ ನಂತರ ನನ್ನನ್ನು ಕಂಪೆನಿಯ ಲೈಟಿಂಗ್ ಶೋ ರೂಂನಲ್ಲಿ ಕೆಲಸ ಮಾಡಲು ಕಳಿಸಿದರು. ಒಬ್ಬರು ಸರ್ದಾರ್ಜಿ ನನ್ನ ದೊಡ್ಡ ಬಾಸ್. ಮಹಾನ್ ಸಂಗೀತಗಾರ ಚೆಂಬೈ ವೈದ್ಯನಾಥ ಭಾಗವತರ್ ಅವರ ಮಗನ ಮಗ ನನ್ನ ಇಮ್ಮೀಡಿಯೇಟ್ ಬಾಸ್. ಒಬ್ಬ ಒಮಾನೀ ಹುಡುಗಿ ಸೇಲ್ಸ್ ಕೆಲಸಕ್ಕೆ. ಹೊನ್ನಾವರ ಹುಡುಗನೊಬ್ಬ ನಮ್ಮ ಅಸಿಸ್ಟೆಂಟ್. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಒಂದು ಗಂಟೆ. ಮತ್ತೆ ಸಂಜೆ ನಾಲ್ಕರಿಂದ ಎಂಟು ಗಂಟೆ. 'ನನ್ನ ಮನೆ'ಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿತ್ತು ಶೋರೂಂ. ಏಳಕ್ಕೆ ರೂಮು ಬಿಡಬೇಕು. ಐದೂವರೆ ಗಂಟೆಗೆ ಎದ್ದು ಸ್ನಾನ ಮುಗಿಸಿ ಏಳಕ್ಕೆ ನಡೆದು ಒಮಾನ್ ಎಕ್ಸ್‌ಪ್ರೆಸ್ ಹೊಟೇಲ್ ತಲುಪುತ್ತಿದ್ದೆ. ಇಡ್ಲಿ, ದೋಸೆ ಯಾವುದಾದರೂ ತಿಂದು ಅಲ್ಲಿಂದ ಎರಡು ಫರ್ಲಾಂಗ್ ದೂರದ ಶೋರೂಂಗೆ ಹೋಗುತ್ತಿದ್ದೆ. ಕೆಲವು ದಿನ ಬಹಳ ಜನ. ಸಲಾಂ ವಾಲೇಕುಂ ಅಂದಾಗ ವಾಲೇಕುಂ ಸಲಾಂ ಎನ್ನಲು ಕಲಿತೆ. ಸರ್ದಾರ್ಜಿ ಬಾಸ್ ಈ ವಯಸ್ಸಿನಲ್ಲಿ ಈ ದೇಶಕ್ಕೆ ಯಾಕೆ ಬರಕ್ಕೆ ಹೋದೆ ಎಂದರು. ಅಷ್ಟರಲ್ಲಿ ನಮ್ಮ ತಮಿಳ್ ಮಲಯಾಳಂ ಬಾಸ್ ವಯಸ್ಸು ಕೇಳಿ ತಿಳಿದುಕೊಂಡಿದ್ದೆ. ಈ ವಯಸ್ಸಿನಲ್ಲಿ ಅಂದರೆ? ನಾನು ಅವರಿಗಿಂತ ಚಿಕ್ಕೋನು ಎಂದೆ. ಯೇ ಸಚ್ ಬೋಲ್ ರಹಾ ಹೈ ಕ್ಯಾ ಎಂದು ಆತನನ್ನು ಗುಟ್ಟಾಗಿ ಜೋರಾಗಿ ಕೇಳಿದ್ದರಿಂದ ನನಗೂ ಕೇಳಿಸಿತ್ತು! ನನ್ನ ಬಿಳಿಯ ಗುಂಡನೆಯ ಮೀಸೆ ಇಲ್ಲದ ಮುಖ ರಿಟೈರ್ಡ್ ವಯಸ್ಸು ತೋರಿಸುತ್ತಿತ್ತೇನೋ... ಅಂದೇ ಮೀಸೆ ಬೆಳೆಸಲು ...

ಯತಿ ಸ್ವಂತೀ - ೨೬೧

18-09-2018 ಸಲ್ತನತ್  ಆಫ್ ಒಮಾನ್ - 2 ಪರದೇಶದ ಒಂಟಿ ಕೊಠಡಿಯಲ್ಲಿ ಮಲಗಿದೆ. ನನಗೆ ಹಿಂದೀ ಹಾಡುಗಳನ್ನು ಕೇಳುವ ಹುಚ್ಚು... ಉಹೂಂ ಗೀಳು. ಹದಿನೈದು ವರ್ಷಗಳ ನಂತರ ಇವತ್ತು ಹಳೆಯ ಹಾಡುಗಳ ಸರಮಾಲೆಯಲ್ಲಿ 'ದುಃಖಿ ಮನ್ ಮೇರೆ ಸುನ್ ಮೇರ ಕೆಹನ ಜಹಾಂ ನಹೀ ಚೈನ ವಹಾ ನಹೀ ರೆಹನಾ' ಕೇಳಿ ಅಂದಿನ ರಾತ್ರಿ ನೆನಪಾಯಿತು. ಮೊದಲ ದಿನದ ರಾತ್ರಿ ಮಲಗುತ್ತಿದ್ದಾಗ ಈ ಹಾಡು ಕಿಶೋರ್ ಕುಮಾರ್ ಧ್ವನಿಯಲ್ಲಿ ಕೇಳಿ ನನ್ನ ಕಣ್ಣುಗಳು ಅಶ್ರುಧಾರೆ ಸುರಿಸಿದವು. ನನ್ನ ತಲೆದಿಂಬು ಒದ್ದೆಯಾಯಿತು. ನನಗಿಲ್ಲಿ ನೆಮ್ಮದಿ ಇಲ್ಲ. ಅವನೇನೋ ನೆಮ್ಮದಿ ಇರದೆಡೆ ಇರಬೇಡ ಅಂತಿದ್ದಾನೆ. ನಾನು ಹೊಟ್ಟೆ ಪಾಡಿಗೆ ಇಲ್ಲಿ ಬಂದು ಸಿಕ್ಕಿಕೊಂಡಾಗಿದೆ. ಅಬ್ಬಾ ನರಕ ದರ್ಶನ..! 365 ದಿನ ವಾಪಸ್ ಹೋಗಲು ಸಾಧ್ಯವಿಲ್ಲ. ಮರುದಿನ ಬೆಳಗ್ಗೆ ಆಫೀಸ್‌ಗೆ ಇಳಿದೆ. ನನ್ನ ರೂಮಿದ್ದ ಫ್ಲ್ಯಾಟ್ ಎರಡನೇ ಮಹಡಿಯಲ್ಲಿ. ಆಫೀಸ್ ಒಂದನೇ ಮಹಡಿ. ನನ್ನ ಫ್ಲ್ಯಾಟ್ ‍ನಲ್ಲಿ ಒಂದು ಕಾಮನ್ ಹಾಲ್. ಒಂದು ಕಿಚೆನ್. ಒಂದು ದೊಡ್ಡ ಬಾತ್‌ಟಬ್ ಇದ್ದ ಬಾತ್ ರೂಂ. ಇನ್ನೊಂದು ಸಣ್ಣ ರೂಂ. ಮೂರನೆಯ ರೂಮಿನಲ್ಲಿ ಪ್ರತ್ಯೇಕ ಟಾಯ್ಲೆಟ್ ಕಿಚೆನ್ ದೊಡ್ಡ ರೂಂ. ಆ ರೂಮಲ್ಲಿ ಇಬ್ಬರು. ನನ್ನ ಹಾಗೂ ಇನ್ನೊಂದು ರೂಂ ಸಿಂಗಲ್. ನಮ್ಮ ಜಿಎಂ ಭಾರತಕ್ಕೆ ಹೋಗಿದ್ದರು. ಅವರ ಗೈರಲ್ಲಿ ಆಫೀಸ್ ನೋಡುತ್ತಿದ್ದಾತ ನನ್ನನ್ನು ಗುರುದಾಸ್ ಅವರೊಂದಿಗೆ ಊರು ಸುತ್ತಿ ನೋಡೆಂದರು. ಆತನ ಕಾರಿನಲ್ಲಿ ಹೊರಗೆ ಹೋದಾಗ ಏನೋ ದಿಗ್ಭ್ರಮೆ. ...

ಯತಿ ಸ್ವಂತೀ -260

17-09-2018 ಫ್ಲ್ಯಾಷ್ ಫಾರ್ವರ್ಡ್ ಸಲ್ತನತ್ ಆಫ್ ಒಮಾನ್   ಏಪ್ರಿಲ್ 2002 ಅಂದರೆ ಸುಮಾರು ಹದಿನೈದು ತಿಂಗಳುಗಳ ನಂತರ ಉದ್ಯೋಗ ಮತ್ತೆ ಸಿಗುವ ಸುದ್ದಿ! ಕೊನೆಗೂ ನಾನು ಬೆಂಗಳೂರು ಬಿಟ್ಟು ಹೋದಾಗಲೇ ಉದ್ಯೋಗ ದೊರಕುವ ಸಮಾಚಾರ ಬಂದಿತ್ತು. ಮೇ ತಿಂಗಳಲ್ಲಿ ಅಪಾಯಿಂಟ್‌ಮೆಂಟ್ ಆರ್ಡರ್ ಬಂದಿತು. ಸಹಿ ಮಾಡಿ ಒಪ್ಪಿಗೆ ನೀಡಬೇಕು. ಅದರಲ್ಲಿ ಇದ್ದ ಒಂದು ಷರತ್ತು ನನ್ನ ತಲೆ ತಿರುಗುವ ಹಾಗೆ ಮಾಡಿತು. ಒಂದು ವರ್ಷ ಅಂದರೆ ಕನಿಷ್ಠ 365 ದಿನಗಳು ಮರಳಿ ಬರುವಂತಿಲ್ಲ. 78 ಕೆ. ಜಿ. ಇದ್ದ ದೇಹದ ತೂಕ , ನಾನು ಚೆನ್ನಾಗಿ ತಿನ್ನುತ್ತಿದ್ದರೂ ' ಒಂದು ವರ್ಷ ಒಂದು ವರ್ಷ ' ಜಪದಿಂದ ನಾಲ್ಕು ಕೆ. ಜಿ. ಇಳಿಯಿತು. ವೀಸಾ ಬಂದಿತ್ತು! ಅಮ್ಮನಿಗೆ ಹೇಳಿದೆ ಹುಷಾರು ತಪ್ಪಬೇಡ. ಬರಕ್ಕಾಗಲ್ಲ ಅಂತ. ನಕ್ಕರು. ನನ್ನ ಕೈಲಿಲ್ಲ. ಆದರೂ ಪ್ರಯತ್ನ ಮಾಡ್ತೀನಿ ಅಂದರು. ನನ್ನ ಡ್ರೆಸ್ ಕೋಡ್ ಏನೆಂದು ಕೇಳಿದ್ದಾಗ ಫಾರ್ಮಲ್ಸ್ ಪ್ಲಸ್ ಟೈ ಎಂದಿದ್ದರು. ನನಗೆ ಇಂಟರ್‌ನೆಟ್ ಬಗ್ಗೆ ಗೊತ್ತಿರಲಿಲ್ಲ. ಸೋ ಆ ದೇಶದ ಬಗ್ಗೆ , ನನ್ನ ಉದ್ಯೋಗದ ಬಗ್ಗೆ , ನನ್ನ ಕಂಪೆನಿಯ ಬಗ್ಗೆ ಏನೇನೂ ತಿಳಿಯದೇ ಹೊರಟಿದ್ದೆ. ಜೂನ್ 20, 2002. ಸಂಜೆ ಹೊರಟಿತು ಫ್ಲೈಟ್. ಮೂರೂವರೆ ಗಂಟೆ ಪ್ರಯಾಣ. ಗಗನ ಸಖಿ ಸೀಬ್ ವಿಮಾನ ನಿಲ್ದಾಣಕ್ಕೆ ನಿಮಗೆ ಸ್ವಾಗತ. ಹೊರಗಿನ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಎಂದಾಗ ನನ್ನ ಎದೆ ಧಸಕ್ಕೆಂದಿತು. ಆಗ ರಾತ್ರಿ ಎಂಟೂವರೆ. ಎಲ್ಲಿ ಬಂದು ಸಿಲುಕಿಕೊ...

ಯತಿ ಸ್ವಂತೀ -259

16-09-2018 ಪುಣೆಗೆ ಹೋಗೆಂದರು ನಮ್ಮ ಬಾಸ್. ನನ್ನ ಜೊತೆ ನನ್ನ ಮಾರ್ಗದರ್ಶಿ ಸಮಾನರಾದ ಶ್ರೀ ವಿಠಲ್ ಪ್ರಭು ಕೂಡ ಇದ್ದರು. ಇಬ್ಬರೂ ಮುಂಬೈಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ಏಷಿಯಾಡ್ ಬಸ್ ಹತ್ತಿ ಪುಣೆ ತಲುಪದೆವು. ನನಗೆ ಪ್ರಭು ಅವರೆಂದರೆ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಆಗಿದ್ದರು. (ಭೂತಕಾಲ ಏಕೆಂದರೆ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ) ಅವರೊಂದಿಗೆ ಪುಣೆಯ ಕಂಪೆನಿಯೊಂದರಲ್ಲಿ ಮೂರು ದಿನಗಳ ಕಾಲ ಲೆಕ್ಚರ್ ನೀಡಿದೆ. ಒಂದು ದಿನ ಅನಿರೀಕ್ಷಿತವಾಗಿ ನಾನಿರುವೆಡೆಯಲ್ಲಿಗೆ ನನ್ನ ಬಾಸ್ ಬಂದರು! ನನ್ನನ್ನು ಒಂದು ರೀತಿ ನೋಡಿ ಪ್ರಭು ಅವರನ್ನು ನಾನೆಲ್ಲಿದ್ದೆ ಈ ಮೂರು ದಿನ ಎಂದು ಕೇಳಿದರಂತೆ. ನಂತರ ಅವರು ಹೊರಟುಹೊದರು. ನಾನು, ಪ್ರಭು ಮರುದಿನ ಮುಂಬೈ ಮೂಲಕ ಬೆಂಗಳೂರು ತಲುಪಿದೆವು. ಮರುದಿನ ನನ್ನ ಟೂರ್ ಬಿಲ್ ಸಿದ್ಧಗೊಳಿಸಿ ನನ್ನ ಬಾಸ್ ಬಳಿಗೆ ಒಯ್ದೆ. ಅದನ್ನು ರೊಯ್ಯನೆ ಬಿಸಾಡಿ, ‘ನೀನು ಮೂರು ದಿನ ಮಜಾ ಮಾಡೋಕ್ಕಲ್ಲ ಕಳಿಸಿದ್ದು. ಇನ್ನೂ ಉಳಿದ ಕಸ್ಟಮರುಗಳನ್ನು ಭೇಟಿ ಆಗಬೇಕಿತ್ತು’ ಎಂದರು. ನಾನು ಹೊರಟಿದ್ದು ಯುಗಾದಿಯ ದಿನ. ಮನೆಯಲ್ಲಿ ಹಬ್ಬದ ದಿನ ಹೊರಟಿದ್ದಕ್ಕೆ ಬೈಯುತ್ತಲೇ ಇದ್ದರು ಅಮ್ಮ, ಹೆಂಡತಿ. ಹಾಗೆ ಹೋಗಿ, ಕೆಲಸ ಮುಗಿಸಿ ಬಂದರೆ ಈ ರೀತಿಯ ಟ್ರೀಟ್‍ಮೆಂಟ್! ನನಗೂ ರೇಗಿತು. ಆ ಪೇಪರುಗಳನ್ನು ತಂದು ನನ್ನ ಟೇಬಲ್ ಮೇಲೆ ಪೇರಿಸಲ್ಪಟ್ಟಿದ್ದ ಇನ್ನೂ ಉತ್ತರ ಬರೆಯದ ಪೇಪರುಗಳ ಅಡಿಗೆ ಇಟ್ಟುಬಿಟ್ಟೆ. ಕೆಲವು ದಿನಗಳು...

ಯತಿ ಸ್ವಂತೀ -258

15-09-2018 ನಮ್ಮ ಜಿಎಂ ಮತ್ತು ಅವರ ಮನೆಯ ಅನೇಕ ಸದಸ್ಯರು ಒಂದು ಅಪಘಾತದಲ್ಲಿ ಮಡಿದರು. ಅಬ್ಬಾ, ಭಯಾನಕ ಸಾವು! ನಾಲ್ಕು ಶವಗಳನ್ನು ಮಲಗಿಸಿದ್ದುದು ನೋಡಿ ಅನೇಕ ದಿನಗಳ ಕಾಲ ನಿದ್ರೆ ಮಾಡಿರಲಿಲ್ಲ ನಾನು. ಅವರ ನಿರ್ಗಮನದಿಂದ ನಮ್ಮ ಮೋಟರ್ ಡಿಸೈನ್ ಬಾಸ್ ಈಗ ಜನರೇಟರ್ ಡಿಸೈನ್‍ಗೂ ಬಾಸ್ ಆದರು. ನನಗೆ ಮೊದಲಿನಿಂದ ನನ್ನ ಕೆಲಸ ಆಗುವ ವರೆಗೂ ಸಾಕಷ್ಟು ಘರ್ಷಣೆ ಉಂಟುಮಾಡುತ್ತಿದ್ದೆ. ಕೆಲವು ಸಲ ನಾನು ಜಗಳವಾಡಿ ನನ್ನ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳುತ್ತಿದ್ದೆ. ಒಮ್ಮೆ ಹಾಲಿಡೇ ಇನ್ ಒ ಇ ಎಂ ಮೀಟ್‍ನಲ್ಲಿ ಕಸ್ಟಮರ್ ನಮ್ಮ ಮೂವರು ಬಾಸ್‍ಗಳನ್ನೂ ಅವನ ಜನರೇಟರುಗಳ ಬಗ್ಗೆ ಕೇಳಿದ. ಅವು ವಿಶೇಷ ಯಂತ್ರಗಳು. ಇಂದೇ ಹೋಗಬೇಕೆಂದರು ಬಾಸ್‍ಗಳು. ಏಕೆಂದರೆ ಎದುರಿಗೆ ಕಸ್ಟಮರ್ ಇದ್ದನಲ್ಲ! ನನ್ನೆದೆ ಧಸಕ್ಕೆಂದಿತು. ಅವು ಸಿದ್ಧವೇ ಆಗಿರಲಿಲ್ಲ. ನನ್ನ ಲೆಕ್ಚರ್ ಮುಗಿಸಿ ಹತ್ತು ಗಂಟೆಗೆ ಆಫೀಸಿಗೆ ಹಿಂದಿರುಗಿದೆ. ಮೊದಲು ಅವುಗಳ ‘ಬಾಡಿ’ಗಳನ್ನು ಸಿದ್ಧಮಾಡಲು ಶಾಪ್‍ನವರ ಬಳಿ ದುಂಬಾಲು ಬಿದ್ದೆ. ನಾನು ಜಗಳ ಆಡಿದರೂ ಅವರೇನೂ ತಪ್ಪು ತಿಳಿಯುತ್ತಿರಲಿಲ್ಲ. ಏಕೆಂದರೆ ನನ್ನ ಜಗಳವೇನಿದ್ದರೂ ಕೆಲಸ ಆಗಲೆಂದು. ಅಲ್ಲಿ ಅವು ಸಿದ್ಧ ಆದ ಮೇಲೆ ಅವಕ್ಕೆ ರೋಟರ್ ಕೂಡ ರೆಡಿ ಮಾಡಿಸಿ, ಅವನ್ನು ಅಸೆಂಬಲ್ ಮಾಡಿಸಿ ನಂತರ ಟೆಸ್ಟ್ ಮಾಡಿಸಿದೆ. ಎಲ್ಲವೂ ಆಗಿ ಪೆಯಿಂಟ್ ಆಗಿ ಜನರೇಟರುಗಳು ಸಂಜೆ ಸಿದ್ಧವಾದವು. ಡಿಸ್ಪ್ಯಾಚ್‍ನಲ್ಲಿ ಒಂದು ಸಮಸ್ಯೆ ಬಂದಿತು. ಕಸ್...

ಯತಿ ಸ್ವಂತೀ -257

14-09-2018 ಹೌದು, ಅವರ ಸವಾಲ್ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ನೀವು ಇಷ್ಟು ದಿನ ಇಲ್ಲದ್ದು ಈಗ ನಿಮ್ಮ ಜನರೇಟರ್ ಸಾಮರ್ಥ್ಯ ಹೆಚ್ಚಿಸಿದ್ದೀರಿ. ಅದಕ್ಕೆ ನಮಗೆ ಪುರಾವೆ ಬೇಕು. ನೀವೇಕೆ ಇದನ್ನು .... ಕಂಪೆನಿಯಿಂದ ಪ್ರಮಾಣೀಕರಿಸಬಾರದು? ಎಂದರು. ಈಗ ನನಗೆ ಪೀಕಲಾಟಕ್ಕೆ ಬಂದಿತು. ನನ್ನ ಬಾಸ್ ಗುರ್ ಎಂದರೂ, ಆಯಿತು ಅವರನ್ನು ಕರೆದು ತಾ ಎಂದರು. ಸಾರಕ್ಕಿಯಲ್ಲೆಲ್ಲೋ ಇದ್ದರು ಆ ಇನ್ಸ್‍ಪೆಕ್ಟರ್. ಅವರನ್ನು ಆಫೀಸಿಗೆ ಕರೆತಂದೆ. ಅವರ ಕಂಪೆನಿ ನಮ್ಮ ಜನರೇಟರುಗಳನ್ನು ಪರೀಕ್ಷಿಸಲು ಒಪ್ಪಿತು. ಸರಿ, ಸುಮಾರು ದಿನಗಳ ಕಾಲ ಟೆಸ್ಟ್‍ಗಳು ನಡೆದವು. ಜನರೇಟರ್‍ಗೆ ಬಹು ಮುಖ್ಯವಾಗಿ ಹೀಟ್‍ರನ್ ಟೆಸ್ಟ್ ಮಾಡಬೇಕು. ಅಂದರೆ ಒಂದೇ ಸಮನೆ ಕೆಲವು ಗಂಟೆಗಳ ಕಾಲ ಒಂದೇ ರೀತಿಯ ಲೋಡ್ ಜೊತೆ ಓಡಬೇಕು. ಆಗ ಅದರ ಮೇಲ್ಮೈ ಶಾಖ ಹೆಚ್ಚಾಗಕೂಡದು. ಈಗೆಲ್ಲಾ ನಮ್ಮ ಉಪಕರಣಗಳ ಮೇಲೆ 24 ಬೈ 7 ಬೈ 365 ಅಂತ ಬರೆಯೋಲ್ವೇ? ಹಾಗೆ! ಟೆಸ್ಟಿಂಗ್ ಮುಗಿಯುವ ವೇಳೆಗೆ ಆ ಇನ್ಸ್‍ಪೆಕ್ಟರ್ ಕೂಡ ನನಗೆ ಸಾಕಷ್ಟು ಪರಿಚಿತರಾದರು. ಹೊರಗಡೆ ಯಾವುದೋ ಅಂಗಡಿಯಲ್ಲಿ ಕಂಡಾಗ ಗುರುತು ಹಿಡಿಯುವಷ್ಟು! ಅಂತೂ ಟೆಸ್ಟ್‍ನಲ್ಲಿ ಪಾಸಾಗಿದ್ದವು ನಮ್ಮ ಜನರೇಟರುಗಳು. ಈ ವಿಷಯವೆಲ್ಲಾ ನನ್ನ ಸಹೋದ್ಯೋಗಿಗಳಿಗೆ ತಿಳಿದೇ ಇತ್ತು. ನಾನು ಮೊದಲೇ ಬಾಯಿಬಡುಕ. ಎಲ್ಲರಿಗೂ ಇದನ್ನೂ ಜೋಕ್‍ನಂತೆ ಹೇಳಿದ್ದೆ. ‘ಯತೀ, ನಿನಗೆ ಕಂಪೆನಿಯಿಂದ ಅವಾರ್ಡ್ ಗ್ಯಾರಂಟಿ’ ಎನ್ನುತ್ತಿದ್ದರು ಕೆಲವರು. ನಾನು ಸುಮ್...

ಯತಿ ಸ್ವಂತೀ -256

13-09-2018 ಅವರಂತೆಯೇ ಕಪ್ಪು ಪ್ಯಾಂಟ್, ಬಿಳಿಯ ಷರಟು ಧರಿಸಿ ಆಫೀಸಿಗೆ ಬರತೊಡಗಿದ್ದೆ. ಅನೇಕರು ನನ್ನನ್ನು ಬೆನ್ನ ಹಿಂದಿನಿಂದ ತಟ್ಟಿ, ನನ್ನ ಬಾಸ್ ಹೆಸರು ಕರೆದು, ನಾನು ತಿರುಗಿ ನೋಡಿದಾಗ ‘ಓ ನೀವಾ?’ ಎಂದು ಅಚ್ಚರಿ ಪಟ್ಟವರೂ ಉಂಟು. ‘ನೀವೇನೂ ಹೆದರಬೇಡ್ರೀ. ಯಾರನ್ನ ಬೇಕಾದರೂ ದಬಾಯಿಸಿ. ನಮ್ಮ ಕೆಲಸ ಏನು? ಗ್ರಾಹಕರ ಸಂತೃಪ್ತಿ. ಅದಕ್ಕೆ ಏನು ಬೇಕಾದ್ರೂ ಮಾಡಿ. ನಿಮ್ಮ ಹಿಂದೆ ನಾನಿದ್ದೇನೆ’ ಎನ್ನುತ್ತಿದ್ದರು ಬಾಸ್. ಇನ್ನೇನು ಬೇಕಿತ್ತು ಒಬ್ಬ ಜ್ಯೂನಿಯರ್‍ಗೆ? ಅವರು ಹೇಳುತ್ತಿದ್ದರು. ನಿಮ್ಮ ಕೆಲಸವನ್ನು ನಿಮ್ಮ ಬಾಸ್ ಮೆಚ್ಚಿಕೊಂಡರೆ ಇಡೀ ಕಂಪೆನಿಯೇ ನಿಮ್ಮ ಎದುರುಬಿದ್ದರೂ ಕಾಪಾಡುತ್ತಾನೆ. ಅದೇ, ನೀವು ಆತನಿಗೆ ಇಷ್ಟ ಆಗದಿದ್ದರೆ ಇಡೀ ಕಂಪೆನಿಯೇ ನಿಮ್ಮ ಬೆಂಬಲಕ್ಕಿದ್ದರೂ ನೀವು ಏಗಲಾರಿರಿ ಅಂತ. ಹಿಂದೊಮ್ಮೆ ಆಗಿದ್ದ ಘಟನೆ ಇಲ್ಲಿ ಹೇಳಬೇಕು. ಈ ಬಾಸ್ ಬರುವ ಮುಂಚಿನ ಕಥೆ. ಒಮ್ಮೆ ಪುಣೆಯ ನನ್ನ ಜಿಗಣೆ ಗ್ರಾಹಕರು ಎರಡು ಸ್ಪೆಷಲ್ ಜನರೇಟರ್ ಕೇಳಿದರು. ಯಾವುದೋ ಜ್ಞಾನ, ನನ್ನ ಉತ್ಸಾಹದಲ್ಲಿ ಮಾಮೂಲೀ ಜನರೇಟರುಗಳೆರಡನ್ನು ಇಲ್ಲಿಂದ ಪುಣೆಗೆ ಡಿಸ್ಪ್ಯಾಚ್ ಮಾಡಿಸಿಬಿಟ್ಟೆ! ನನಗೆ ಅದು ತಿಳಿದುಬಂದಿದ್ದು ಬಾಸ್‍ನಿಂದ. ಪುಣೆಯಿಂದ ಅವರಿಗೆ ಕರೆ ಬಂದಿತ್ತು. ನನ್ನನ್ನು ಕರೆದು ಬೆಂಡ್ ಎತ್ತಿದರು. ನನ್ನ ಒಂದು ಅಭ್ಯಾಸವಿತ್ತು. ಕಸ್ಟಮರುಗಳನ್ನು ನೋಡಿಕೊಳ್ಳುವುದು ನನ್ನ ಕೆಲಸದ ಭಾಗವಾದ್ದರಿಂದ, ಅವರುಗಳು ಟೆಸ್ಟಿಂಗ್ ಇಲಾಖೆಯಲ್ಲಿದ್ದಾಗ...

ಯತಿ ಸ್ವಂತೀ -255

12-09-2018 ನನ್ನ ಮತ್ತು ನನ್ನ ಬಾಸ್ ಮಧ್ಯೆ ಮಾತಿಲ್ಲದ ಕಮ್ಯೂನಿಕೇಶನ್ ಇತ್ತು. ಬೇರೆಯವರಿಗೆ ಗೊತ್ತಾಗದಂತೆ ಸುದ್ದಿ ಒಬ್ಬರಿಂದ ಒಬ್ಬರಿಗೆ ನಮ್ಮಿಬ್ಬರಿಗೆ ಮಾತ್ರ ತಿಳಿಯುತ್ತಿತ್ತು! ಅನೇಕ ಸಲ ಗ್ರಾಹಕರು ಅವರೆದುರಿಗೆ ಕುಳಿತಿದ್ದಾಗ ಸಡನ್ನಾಗಿ ನನ್ನನ್ನು ಒಳಗೆ ಕರೆದು ಜನರೇಟರ್ ಡೆಲಿವರಿ ಬಗ್ಗೆ ಕೇಳುತ್ತಿದ್ದರು. ನಾನು ಒಂದಿಷ್ಟೂ ಮುಖದ ಭಾವನೆ ಬದಲಿಸದೇ ಉತ್ತರ ಕೊಡಬೇಕು. ಅದು ಅವರು ಕಸ್ಟಮರ್‌ಗೆ ಹೇಳಿರುವ ಉತ್ತರವನ್ನು ಹೊಂದಿಕೊಳ್ಳಬೇಕಿತ್ತು. ಅದು ಕಷ್ಟದ ಕೆಲಸ ಅದು... ಒಮ್ಮೆ ಇದು ಬಹಳ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತ್ತು. ದೊಡ್ಡ ಒ ಇ ಎಂ ಮೀಟಿಂಗ್ ಹಾಲಿಡೇ ಇನ್ ಹೊಟೇಲ್‌ನಲ್ಲಿ ನಡೆಯುತ್ತಿತ್ತು. ನಾನು ಬೆಳಗ್ಗೆ ಬಂದು ನನ್ನ ಪಾಲಿನ ಲೆಕ್ಚರ್ ಮುಗಿಸಿ ಯಶವಂತಪುರದ ನಮ್ಮ ಫ್ಯಾಕ್ಟರಿಗೆ ಹಿಂದಿರುಗಿದ್ದೆ. ಆಗ ನಮ್ಮ ಬಾಸ್ ಅವರ ಬಾಸ್ ಅವರ ಬಾಸ್ ಜೊತೆಗೆ ಒ ಇ ಎಂ ಮುಚ್ಚಿದ ಬಾಗಿಲ ಮೀಟಿಂಗ್ ಶುರು ಮಾಡಿದರು. ನನಗೆ ಇದ್ದಕ್ಕಿದ್ದಂತೆ ಕರೆ ಬಂದಿತು ಬಾಸ್ ಕರೀತಿದ್ದಾರೆ ಅಂತ. ಏನಪ್ಪಾ ನನಗೆ ಕೆಲಸ ದೊಡ್ಡವರ ಮೀಟಿಂಗ್ ನಡೀವಾಗ ಅಂದ್ಕೊಂಡೆ. ಹೋದೆ. ಒಳಗೆ ಕರೆದರು. ಅವರ ಬಾಸ್ ಮತ್ತು ಅವರ ಬಾಸ್ ಮುಂದೆ ನನ್ನ ಬಾಸ್ 'ಯತಿರಾಜ್ ಆ ಜನರೇಟರ್ ಬಗ್ಗೆ ಹೇಳು' ಅಂದರು. ತಬ್ಬಿಬ್ಬಾದರೂ ಅವರ ಮಾತಿಗೆ ಅರ್ಥ ಏನಿರಬಹುದೂಂತ ಗೆಸ್ ಮಾಡಿ ಒಂದು ಹಸೀ ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಉರುಳಿಸಿದೆ. ನಂತರ ನನ್ನ ಬಾಸ್ ಕಡೆ ನೋಡಿದೆ. ನ...

ಯತಿ ಸ್ವಂತೀ -254

11-09-2018 ಯಾಕೋ ಈವತ್ತು ಸುಮಾರು ಹದಿನೆಂಟು ವರ್ಷಗಳ ಹಿಂದಕ್ಕೆ ಹೋಗೋಣ ಎನ್ನಿಸುತ್ತಿದೆ. ಎಂತಹ ದುರಂತ ನಡೆದಿತ್ತು ಈ ದಿನ ಹದಿನೇಳು ವರ್ಷಗಳ ಕೆಳಗೆ! ಹದಿನೆಂಟು ವರ್ಷಗಳ ಕೆಳಗೆ ಜುಲೈ 8.11.2000ದಂದು ನಾನು, ನನ್ನ ಗೆಳೆಯ/ಸಹೋದ್ಯೋಗಿ ಪ್ರಸಾದ್ ಮತ್ತು ಆತನ ಚಿಕ್ಕಪ್ಪನ ಮೊಮ್ಮಗಳು ಲಕ್ಷ್ಮಿ ಒಂದು ಟೂರ್ ಹೋಗಿದ್ದೆವು. ಎಲ್ಲಿಗೆ? ನ್ಯೂಯಾರ್ಕ್ ಸಿಟಿಯಲ್ಲಿ ನಮ್ಮದು ಅಂದು ಟೂರ್ ಇತ್ತು. ಹೌದು, 2000 ಇಸವಿಯಲ್ಲಿ ನಾನು ಕೆಲಸದ ನಿಮಿತ್ತ ವಾಷಿಂಗ್‍ಟನ್‍ಗೆ ಹೋಗಿದ್ದೆ. ಆಗ ಬಂದ ಮುಂದಿನ ವಾರಾಂತ್ಯದಲ್ಲಿ ನ್ಯೂಯಾರ್ಕ್ ನಗರಕ್ಕೆ ಹೋದೆವು. ವಾಷಿಂಗ್‍ಟನ್‍ನ ಸಿಲ್ವರ್ ಸ್ಪ್ರಿಂಗ್ಸ್‍ನಲ್ಲಿ ಬಸ್ ಹತ್ತಿ ಬೆಳಗ್ಗೆ ಆರಕ್ಕೆ ಹೊರಟೆವು. ಸುಮಾರು ಹತ್ತೂವರೆಗೆ ನ್ಯೂಯಾರ್ಕ್‍ನ ಪೋರ್ಟ್ ಅಥಾರಿಟಿಯಲ್ಲಿದ್ದೆವು. ಹೊರಗೆ ಬಂದರೆ ಏನೋ ಭಯ. ಮ್ಯಾನ್‍ಹಟನ್‍ನ ಪ್ರತಿಯೊಂದು ಕಟ್ಟಡವೂ ನಮ್ಮನ್ನು ಬಾಗಿ ನೋಡುತ್ತಿವೆಯೇನೋ ಎಂಬ ಕ್ರೀಪೀ ಭಾವನೆ. ಬೇರೆ ಎಲ್ಲ ವಿಷಯ ಆಮೇಲೆ ಹೇಳುವೆ. ಆದರೆ ಟಾಪ್‍ಲೆಸ್ ಡಬ್ಬಲ್‍ಡೆಕ್ಕರ್ ಬಸ್ ಹತ್ತಿ ಎಂಪೈರ್ ಸ್ಟೇಟ್ ಬಿಳ್ಡಿಂಗ್ ಬಳಿ ಇಳಿದೆವು. ವಿಪರೀತ ಜನಸಂದಣಿ ಇತ್ತು ಮೇಲೆ ಹೋಗೋಕ್ಕೆ. ಆಕಾಶ ನೋಡೋಕ್ಕೆ ನೂಕು ನುಗ್ಗಲಾ ಎನ್ನಿಸದಿರಲಿಲ್ಲ. ಹೋಗಲಿ ಬಿಡಿ, ನಾವು ವರ್ಲ್ಡ್ ಟ್ರೇಡ್ ಸೆಂಟರ್‍ಗೆ ಹೋಗೋಣ ಎಂದರು ನಮ್ಮೊಂದಿಗೆ ಬಂದ ಲಕ್ಷ್ಮಿ, ನಮ್ಮ ನಿರಾಶಾವದನಗಳನ್ನು ಕಂಡು. ಅಲ್ಲಿಂದ ಮತ್ತೆ ಬಸ್ ಹತ್ತಿದೆವು. ಒಮ್ಮೆ ...

ಯತಿ ಸ್ವಂತೀ -253

10-09-2018 ದಿನವೂ ಬೆಳಗ್ಗೆ ಒಂಬತ್ತು ಗಂಟೆಗೆ ನಾನೆಲ್ಲಿದ್ದರೂ ನನ್ನ ಸೀಟಿಗೆ ಬರಬೇಕು. ಅಲ್ಲಿ ನಾನು ಪುಣೆಯಿಂದ ಬರುವ ಕರೆಯನ್ನು ಸ್ವೀಕರಿಸಬೇಕು. ನಿನ್ನೆ ಯಾವ ಯಾವ ಜನರೇಟರ್ ಹೋಗಿದೆ ಅವರಿಗೆ ಎಂದು ಹೇಳಬೇಕು. ಇಂದು ಯಾವುದು ಹೋಗುವುದು ಎಂದು ಹೇಳಿ, ಮತ್ತೆ ಮರುದಿನ ಏನೇನು ಸಿದ್ಧ ಆಗಬಹುದು ಎಂದು ಕೂಡ ಹೇಳಬೇಕು. ಈ ಕರೆಗೆ ಎಫ್.ಟಿ.ಸಿ. ಎಂದು ಹೆಸರು. ಅಂದರೆ ಫಿಕ್ಸೆಡ್ ಟೈಂ ಕಾಲ್. ಇದೊಂದು ರೀತಿಯ ತಲೆನೋವು ನನಗೆ. ಈ ಕಂಪೆನಿ ಒಂದೇ ಅಲ್ಲ ನನ್ನ ಗ್ರಾಹಕ. ಅನೇಕ ಕಂಪೆನಿಯವರು ಇದೇ ಸೈಜಿನ ಜನರೇಟರ್ ಕೇಳುತ್ತಿದ್ದರು. ಎಲ್ಲರನ್ನೂ ಖುಷಿ ಪಡಿಸುವ ಒಂದು ವಿಶಿಷ್ಟ ಕೆಲಸ ನನ್ನದು! ಒಂದು ಸಲವಂತೂ ನನಗೆ ಅವರ ಕರೆ ತೆಗೆದುಕೊಳ್ಳಲು ಚಿಟ್ಟು ಹಿಡಿದಿತ್ತು. ಇನ್ನೊಂದು ವಿಷಯ. ಗುರುವಾರ ಪುಣೆಗೆ ರಜೆ. ನಮಗೆ ಭಾನುವಾರ ರಜೆ. ಅಬ್ಬಾ! ವಾರದಲ್ಲಿ ಐದೇ ದಿನ ಈ ಕರೆಯನ್ನು ಸ್ವೀಕರಿಸಬೇಕಾಗಿರುವುದು ಎನ್ನುವ ನಿರಾಳ ಭಾವವೂ ಇತ್ತು. ಸರಿ, ಒಂದು ದಿನ ಆ ಕರೆ ಬಂದಾಗ ನಾನು ನನ್ನ ಸೀಟಿನ ಎದುರು ಕುರ್ಚಿಯ ಮೇಲೆ ಕೂತೆ. ಕರೆ ಬಂದಿತು. ನನ್ನ ಶಿಷ್ಯ ಫೋನೆತ್ತಿ, ‘ಅವನು ಅವನ ಸೀಟಿನಲ್ಲಿಲ್ಲ’ ಎಂಬ ಸತ್ಯ ಹೇಳಿದ. ನಮಗೆಲ್ಲಾ ನಗುವೋ ನಗು. ಅಲ್ಲಿಂದ ಒಮ್ಮೆ ಆ ಮನುಷ್ಯ ನಮ್ಮ ಆಫೀಸಿಗೆ ಬಂದ. ಅದೇ... ದಿನವೂ ನನಗೆ ಫೋನ್ ಮಾಡುತ್ತಿದ್ದಾತ. ನೋಡಿದರೆ ನನಗಿಂತ ಚಿಕ್ಕವನು. ಒಮ್ಮೆ ಮುಖ ನೋಡಿದ ನಂತರ ಒಂದಿಷ್ಟು ಗೆಳೆತನ ಬೆಳೆಯಿತು. ಅವನೊಂದಿಗೆ ಮಧ್ಯಾಹ್ನದ ಊಟ...

ಯತಿ ಸ್ವಂತೀ -252

09-09-2018 ನಾನು ಏನೂ ಮಾತಾಡಲಿಲ್ಲ. ಅವರೇ ನಾನು ಮಿನಿಟ್ಸ್ ಆಫ್ ಮೀಟಿಂಗ್ ಫೈಲ್ ಮಾಡಿದ್ದ ಬಾಕ್ಸ್ ಫೈಲ್ ತರಿಸಿ, ನನ್ನನ್ನು ಕರೆದು, ‘ಪಾರ್ಟ್‍ಲೀ ಪ್ರೆಸೆಂಟ್ ಅಂತ ಬರೀರಿ ವಿ.ಪಿ.ಗಳ ಬಗ್ಗೆ’ ಎಂದರು. ಅಲ್ಲಿಗೆ ಆ ಕಥೆ ಮುಗಿಯಿತು. ಈ ಬಾಸ್ ಬಗ್ಗೆ ಮತ್ತೊಂದು ವಿಷಯ ಹೇಳಬೇಕು. ನನ್ನ ಕಂಡರೆ ಅವರಿಗೆ ಬಹಳ ಇಷ್ಟ. ನಾನು ಮದುವೆಯಾದ ಒಂದು ವರ್ಷದಲ್ಲಿ ಬಸವಣ್ಣನ ಗುಡಿ ರಸ್ತೆಗೆ ವಾಸ್ತವ್ಯ ಬದಲಾಯಿಸಿದ್ದು ಸರಿಯಷ್ಟೆ. ಅವರಿದ್ದುದು ಹನುಮಂತನಗರದಲ್ಲಿ. ದಿನವೂ ಸ್ಕೂಟರ್ ಅಥವಾ ಕಾರಿನಲ್ಲಿ ಆಫೀಸಿಗೆ ಹೋಗುತ್ತಿದ್ದರು. ನನ್ನನ್ನು ಅವರೊಂದಿಗೆ ಬಾ ಎನ್ನುತ್ತಿದ್ದರು. ನಾನು, ನನ್ನ ಪತ್ನಿ ಇಬ್ಬರೂ ಬುಲ್‍ಟೆಂಪಲ್ ರಸ್ತೆಯ ಸಾಯಿರಂಗ ಕಲ್ಯಾಣ ಮಂಟಪದ(ಈಗ ಇಲ್ಲ) ಕಾಂಪೌಂಡಿನ ಬಳಿ ಮಾತಾಡುತ್ತಾ ನಿಲ್ಲುತಿದ್ದೆವು ಅವರು ಬಂದು ನನ್ನನ್ನು ಕರೆದುಕೊಂಡು ಹೋಗುವ ವರೆಗೂ. ಅವರು ಬಸ್‍ನಲ್ಲಿ ಬಂದಾಗ ಇಬ್ಬರೂ ಬಸ್‍ನಲ್ಲಿ ಹೋದ ದಿನಗಳೂ ಇವೆ. ಅವರೊಂದಿಗೇ ಬರುವುದು, ಅವರ ಕೆಲಸವಾದೊಡನೆ ‘ಯತಿರಾಜ್’ ಎನ್ನುತ್ತಿದ್ದರು. ಇದ್ದಿದ್ದು ಇದ್ದ ಹಾಗೇ ಬಿಟ್ಟು ಹೋಗುವ ಪರಿಸ್ಥಿತಿ ನನಗೆ ಎದುರಾಯಿತು. ನನ್ನ ಸ್ಕೂಟರ್ ಕೊಳ್ಳುವೆನೆಂದಾಗ ‘ಸೈಟ್ ಕೊಂಡುಕೊಳ್ರೀ. ಮನೆ ಕಟ್ರೀ. ಅದು ಮುಖ್ಯ. ನಾನು ನಿಮ್ಮನ್ನ ಕರಕೊಂಡು ಹೋಗ್ತೀನಿ’ ಎನ್ನುತ್ತಿದ್ದರು. ನನ್ನ ಪೇಪರುಗಳ ಹೊರೆ ಜಾಸ್ತಿಯಾದ ಸಮಯ. ಏನು ಮಾಡಲೂ ತೋಚದ ಪರಿಸ್ಥಿತಿ. ಆಗ ನನ್ನ ಸೋದರತ್ತೆಯ ಮನೆಯಲ್ಲಿ ಇರಬೇಕಾದ...

ಯತಿ ಸ್ವಂತೀ -251

08-09-2018 ಯಾರನ್ನೂ ಡಿಸ್ಟರ್ಬ್ ಮಾಡಕೂಡದು ಎಂದ ದೊಡ್ಡ ಬಾಸ್ ನನ್ನನ್ನು ಅವರ ಆಫೀಸಿಗೇ ಕರೆಸಿದ್ದರು. ಇದೊಂದು ರೀತಿಯ ವಿಪರ್ಯಾಸ. ಬಹುಶಃ ನಾನು ಹೊಸ ಕೆಲಸ ಹುಡುಕಿಕೊಳ್ಳಬೇಕು ಎಂದುಕೊಂಡೆ. ನಾನು ಸಕ್ಕರೆ ಮೂಟೆಯ ಇರುವೆಯಂತಾಗಿದ್ದೆ. ಇದೇ ನನ್ನ ಬದುಕು. ಇಲ್ಲೇ ರಿಟೈರ್ ಆಗೋಣ ಎಂದೆಲ್ಲಾ ಕನಸು ಕಾಣುತ್ತಿದ್ದುದು ನೆನೆದು ನಗು ಬಂದಿತು. ಆದರೆ ವಿಷಾದವೂ ಇತ್ತು. ಅವರ ಆಫೀಸಿನೊಳಗೆ ಹೋದೆ. ಅವರ ಸೆಕ್ರೆಟರಿ ಇದ್ದರು. ‘ಯತಿರಾಜ್, ಬಾಸ್ ಇಲ್ಲಿಲ್ಲ. ಅಲ್ಲಿದ್ದಾರೆ’ ಎಂದು ಎಲ್ಲಿದ್ದಾರೆಂದು ಹೇಳಿದರು. ಅಂದರೆ ನನಗೆ ಡಬ್ಬಲ್ ಷಾಕ್! ನಮ್ಮ ಬಾಸ್‍ನ ಬಾಸ್ ಬಳಿ ನಮ್ಮ ಬಾಸ್‍ನ ಬಾಸ್‍ನ ಬಾಸ್ ಕೂತಿದ್ದಾರೆ! ಮುಗಿಯಿತು ನನ್ನ ಕತೆ ಎಂದುಕೊಂಡು ತಕ್ಷಣದ ಸಮಸ್ಯೆಯನ್ನು ನೋಡಲು ಆ ಷಿಪ್ಪಿಂಗ್ ಯಾರ್ಡ್ ಛೀಫ್‍ನ ಮಾತಾಡಿಸಿದೆ. ಅವರ ಕಾಫಿ ಸೇವನೆ ಆಗಿತ್ತು. ‘ನಮಸ್ಕಾರ ಸರ್. ಈ ಎಲ್ಲ ಸಮಸ್ಯೆಗಳಿಗೂ ನಾನೇ ಕಾರಣ. ಇನ್ನೊಂದು ಸ್ವಲ್ಪ ದಿನ ಅವಕಾಶ ಕೊಡಿ. ಎಲ್ಲವನ್ನೂ ನಾನು ಸರಿ ಮಾಡುತ್ತೇನೆ’ ಎಂದೆ ಬಲು ಧೈರ್ಯವಾಗಿ. ಹೇಗೆ ಎಂಬುದು ಆಗಿನ್ನೂ ನನಗೆ ತಿಳಿಯದು. ಆದರೆ ಗ್ರಾಹಕರಿಗೆ ಭರವಸೆ ನೀಡುವುದು ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಅರಿತಿದ್ದೆ. ‘ಸರಿ’ ಎಂದು ಅವರು ನಕ್ಕರು. ಅವರನ್ನು ಕರೆದೊಯ್ದು ನಮ್ಮ ಮಾರ್ಕೆಟಿಂಗ್ ಇಲಾಖೆಯ ಬಾಸ್‍ನ ಬಾಸ್ ರೂಮಲ್ಲಿ ಕೂರಿಸಿ, ಕಾನ್ಫರೆನ್ಸ್ ಹಾಲ್‍ಗೆ ಹೋದೆ. ಹೋಗಿ ಇವರು ಬಂದಿರುವ ವರದಿ ಮಾಡಿದೆ. ಆಗ ಒಂದು ವ...

ಯತಿ ಸ್ವಂತೀ -250

07-09-2018 ನನಗೆ ಉರಿದುಹೋಯಿತು. ನನಗೆ ಖುಷಿ ಆಯಿತು. ಇದನ್ನು ಸೆಲೆಬ್ರೇಟ್ ಮಾಡಬೇಕಾ ಅಥವಾ ಆ ನೋಟೀಸಿಗೆ ಸಿಟ್ಟು ಮಾಡಿಕೊಳ್ಳಬೇಕಾ ಎನ್ನುವ ದ್ವಂದ್ವದಲ್ಲಿ ಬಿದ್ದೆ. ಆಗ ಬಡ್ತಿ ಪಡೆದವರೆಲ್ಲ ಎಲ್ಲರಿಗೂ ಸಿಹಿ ಹಂಚಿದರು. ನಾನು ಯಾರಿಗೂ ಸ್ವೀಟು ಕೊಡಲಿಲ್ಲ. ವಿಷಯ ನಡೆದಿದ್ದು ಇದು. ನಾನು ಕೊಡೈಕೆನಾಲ್‍ಗೆ ಹೋದ ಸಮಯದಲ್ಲಿ ಗ್ರಾಹಕನೊಬ್ಬ ನಮ್ಮ ಬಾಸ್‍ನ ನೋಡಲು ಬಂದಿದ್ದಾನೆ. ಅವನದು ಒಂದು ವಿಶೇಷ ಜನರೇಟರ್. ಅಷ್ಟು ದಿನ ನಮ್ಮ ಕಾರ್ಖಾನೆಯಲ್ಲೇ ತಯಾರಾಗುತ್ತಿದ್ದಾಗ ನನಗೆ ಸುಲಭವಾಗಿ ಕೆಲಸ ಆಗುತ್ತಿತ್ತು. ಏಕೆಂದರೆ ನನ್ನ ಒಳ್ಳೆಯ ಸಂವಹನವಿತ್ತು ಇಡೀ ಫ್ಯಾಕ್ಟರಿಯಲ್ಲಿ. ಈ ಲೇಖನ ಓದುವ ಯಾವ ಕಿರ್ಲೋಸ್ಕರ್ ಸಹೋದ್ಯೋಗಿಯಾದರೂ ಇದಕ್ಕೆ  ವೌಚ್ ಮಾಡಬಲ್ಲರು. ಆದರೆ ಈ ನಿರ್ದಿಷ್ಟ ಸೈಜಿನ ಜನರೇಟರನ್ನು ನಮ್ಮ ಪೀಣ್ಯ ಯೂನಿಟ್ಟಿಗೆ ವರ್ಗಾಯಿಸಿದ್ದರು. ಅಲ್ಲಿ ನಮ್ಮ ನಿಯಂತ್ರಣವಿರಲಿಲ್ಲ. ಅಲ್ಲಿನ ಜನಕ್ಕೆ ನಮ್ಮ ಉತ್ಪನ್ನ ಮಲಮಗುವಿನ ತರಹ ಆಗಿತ್ತು. ಈ ಹಂತ ಹಂತದ ಚೆಕ್ ಮಾಡುವುದು ಅಷ್ಟು ಸುಲಭವಿರಲಿಲ್ಲ. ಎಂತಹ ಇಕ್ಕಟ್ಟಿನ ಪರಿಸ್ಥಿತಿ ಆ ಜನರೇಟರ್‍ದು. ಅದಕ್ಕಿಂತ ಇರುಕಿನ ಸ್ಥಿತಿಗೆ ಈಗ ನಾನು ಸಿಕ್ಕಿಕೊಂಡಿದ್ದೆ ಇದರಿಂದಾಗಿ. ಇದಾಗಿ ಒಂದು ವಾರದಲ್ಲಿ ಆ ಜನರೇಟರ್ ಕೊಳ್ಳುವ ಷಿಪ್ಪಿಂಗ್ ಯಾರ್ಡ್‍ನ ಛೀಫ್ ನಮ್ಮ ಅತಿ ದೊಡ್ಡ ಬಾಸ್ ಅವರನ್ನು ಕಾಣಲು ಬರುತ್ತಿದ್ದಾರೆ ಎಂಬ ಸುದ್ದಿ ಬಂತು. ಆಗೆಲ್ಲಾ ನಾನು ಬೇಗನೆ ಊಟ ಮಾಡಿ ಬಂದು ನನ್ನ ಸೀಟ...

ಯತಿ ಸ್ವಂತೀ -248

05-05-2018 ಈಗ ಉದಯನ ಮದುವೆ ವಿಷಯಕ್ಕೆ ಬರೋಣ. ಅವನ ಮದುವೆ ಆಗಿದ್ದು ಪ್ರೇಮಿಗಳ ದಿನದಂದು. ಯಶವಂತಪುರದ ತ್ರಿವೇಣಿ ರಸ್ತೆಯನ್ನು ನೋಡಿರದಿದ್ದರೆ ಅದರ ಬಗ್ಗೆ ಹೇಳುತ್ತೇನೆ. ಅತ್ಯಂತ ಕಿರಿದಾದ, ಆದರೆ ವಾಹನ ನಿಬಿಡ ರಸ್ತೆ ಅದು. ನನ್ನ ಕಿರ್ಲೋಸ್ಕರ್ ದಿನಗಳಲ್ಲಿ ನಾನು ಎಲ್ಲ ಡಿಪಾರ್ಟ್‍ಮೆಂಟಿಗೂ ಓಡಾಡುತ್ತಿದ್ದುದರಿಂದ ಎಲ್ಲರ ಪರಿಚಯವೂ ಇತ್ತು. ನನಗೆ ತಿಳಿದ ಮಟ್ಟಿಗೆ ನನ್ನ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮದುವೆಗಳಲ್ಲಿ ನಾನು ಬಾಗಿಲಲ್ಲಿ ನಿಂತು ಎಲ್ಲರನ್ನೂ ಸ್ವಾಗತಿಸಿದ್ದೇ ನನ್ನ ಕೆಲಸವಾಗಿತ್ತು. ಅದೇ ರೀತಿ ಉದಯನ ಮದುವೆಯಲ್ಲೂ ನಿಂತಿದ್ದೆ. ಸಂಜೆ ರಿಸೆಪ್ಷನ್. ಹಾಲ್ ಫುಲ್ ರಷ್ಷು. ಹೊರಗೆ ಆ ಕಿರಿದಾದ ತ್ರಿವೇಣಿ ರಸ್ತೆಯಲ್ಲಿ ಕಾರುಗಳ ಸಾಲು ಸಾಲು. ನಾನು ಹೊರಗೆ ನಿಂತು ಮುಗುಳ್ನಗುತ್ತಾ ಎಲ್ಲರನ್ನೂ ಸ್ವಾಗತಿಸುತ್ತಿದ್ದೆ. ಆಗ ಬಂದಿದ್ದರು ನಾಲ್ವರು ನಾಲ್ಕು ಬೈಕ್‍ಗಳಲ್ಲಿ. ಎಲ್ಲರೂ ನೇವಿ ಡ್ರೆಸ್‍ನಲ್ಲಿದ್ದರು. ಹೊರಗೆ ನಿಂತಿದ್ದ ನನ್ನ ಬಳಿಗೆ ಬಂದು, “ಇನ್ನೇನು ರಾಜ್ಯಪಾಲರು ಬರ್ತಾರೆ. ಹುಡುಗಿಯ ತಂದೆಗೆ ಹೇಳಿಬಿಡು” ಎಂದು ನನಗೆ ಹೇಳಿ ಹೊರಟುಹೋದರು. ನಾನು ಒಳಗೆ ಧಾವಿಸಿ ಹೋಗಿ ಉದಯನ ಮಾವನವರಿಗೆ ಹೇಳಿ ಹೊರಗೆ ಬಂದೆ. ಇಲ್ಲಿ ರಾಮಕೃಷ್ಣ ಪರಮಹಂಸರ ಒಂದು ಕಥೆಯನ್ನು ನಿಮಗೆ ನಾನು ಹೇಳಬೇಕು. ರಾಮಕೃಷ್ಣರು ಒಬ್ಬರ ಮನೆಯಲ್ಲಿ ಊಟಕ್ಕೆ ಹೋಗಿದ್ದರಂತೆ. ಅಲ್ಲಿ ಅವರಿಗೆ ಇನ್ನೇನೂ ತಿನ್ನಲಾಗದಷ್ಟು ತಿಂದಿದ್ದರಿಂದ ಇನ್ನೇನೂ ತ...

ಯತಿ ಸ್ವಂತೀ -247

04-09-2018 ಅದೇ ಮೊದಲು. ಆಮೇಲೆ ಬಹಳ ಸಲ ಏರೋಪ್ಲೇನಲ್ಲಿ ಹಾರಾಡಿದ್ದೇನೆ. ಹೆಚ್ಚು ನೆನಪಿರುವುದನ್ನು ಮಾತ್ರ ಇಲ್ಲಿ ಹೇಳಬಲ್ಲೆ. ಫೆಬ್ರವರಿ 1988ಕ್ಕೆ ನನ್ನ ಮನೆಯ ವಾಸ್ತವ್ಯವು ಜಯನಗರದಿಂದ ಬಸವನಗುಡಿಗೆ ಬದಲಾಯಿತು. ಪತ್ನಿ, ಅಮ್ಮ, ಅಯ್ಯ, ಅಜ್ಜಿ ಜೊತೆಗೆ ನನ್ನ ಅಂಕಲ್ ಆಂಟಿ ಕೂಡ ಅಲ್ಲಿಗೆ ಬಂದೆವು. ದೊಡ್ಡ ಮನೆ. ಎರಡೇ ರೂಮು. ಚಂದದ ಮನೆ ಎನ್ನಬೇಕು. ಬಾಡಿಗೆಗಲ್ಲ, ಸ್ವಂತದ ಮನೆ ಆಗಿದ್ದರೆ ಚೆನ್ನಿತ್ತು ಎನ್ನುವಂತಹ ಮನೆ ಅದು. ಗೇಟಿನಿಂದ ಮನೆಯ ಬಾಗಿಲಿಗೆ ಸುಮಾರು ದೂರ. ಆ ಜಾಗದಲ್ಲಿಯೇ ನಡುವೆ ಒಂದು ಬೆಟ್ಟದ ನೆಲ್ಲಿಕಾಯಿ ಮರ. ಸ್ವಲ್ಪ ದೂರ ಹೋದರೆ ಮುಂಬಾಗಿಲು. ಅದರೆದುರಿಗೆ ಬೇವಿನಮರದ ಕಟ್ಟೆ. ಎಂತಹ ಸುಂದರ ಕಲ್ಪನೆ ಅದು! ಜಾಗವಿದ್ದರೆ ಇಂದಿಗೂ ಅದನ್ನು ನಮ್ಮ ಸ್ವಂತ ಮನೆಯಲ್ಲಿ ಮಾಡಿಸಿರುತ್ತಿದ್ದೆನೇನೋ! ಸ್ವಚ್ಛ ಗಾಳಿ, ಆರೋಗ್ಯಕರ ವಾತಾವರಣ ಸೃಷ್ಟಿಸಬಲ್ಲದು ಬೇವಿನಮರ. ಮನೆಯ ಆ ಕಡೆ ಅನೇಕ ಗುಲಾಬಿ ಗಿಡಗಳು. ನಮ್ಮ ಆಂಟಿ ಜಯನಗರದಲ್ಲಿಯೂ ಹಲವು ಬಗೆಯ ಗುಲಾಬಿಗಳನ್ನು ಬೆಳೆಸಿದ್ದರು. ಇಲ್ಲಿಯೂ ನೆಲದಲ್ಲೇ ಹಾಕಿಸಿದರು. ಅಲ್ಲಿಯೂ ಒಂದು ನೆಲ್ಲಿಕಾಯಿ ಮರ, ಒಂದು ಗಂಧದ ಮರ... ನಿಜಕ್ಕೂ ಡ್ರೀಮೀ ಹೌಸ್. ನನ್ನ ಗೆಳೆಯ ಉದಯನಿಗೆ ಮದುವೆಯಾಯಿತು. ಆ ಮದುವೆ ನಡೆದದ್ದು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ. ಇದಕ್ಕೆ ಹಿಂದೆ ಒಂದು ವಿಶಿಷ್ಟ ಘಟನೆ ನಡೆದಿತ್ತು. ಒಬ್ಬರು ಸರ್ಕಾರೀ ಶಿಪ್ಪಿಂಗ್ ಕಂಪೆನಿ ಇನ್ಸ್‍ಪೆಕ್ಟರು ಆಫೀಸಿಗೆ ಬಂ...

ಯತಿ ಸ್ವಂತೀ -246

03-09-2018 ಶಾಲಿಮಾರ್ ಎಕ್ಸ್‍ಪ್ರೆಸ್ ಸ್ಟೇಷನ್ನಿಗೆ ಬಂದಾಗ ಅದನ್ನು ಏರಲೂ ಆಗದಷ್ಟು ಕಾಲ್ಗಳು ನೋಯುತ್ತಿದ್ದವು. ಕೊನೆಗೂ ದೆಹಲಿಯ ಸ್ಟೇಷನ್ ತಲುಪಿದೆವು. ಊಟ ಕೂಡ ಮಾಡದೇ ಬರೀ ಮಲಗಿದ್ದಷ್ಟೆ. ನಮ್ಮ ಬೆಂಗಳೂರು ರೈಲು ಕೆ.ಕೆ. ಎಕ್ಸ್‍ಪ್ರೆಸ್ ಹಜರತ್ ನಿಜಾಮುದ್ದೀನ್ ಸ್ಟೇಷನ್‍ನಿಂದ ಇತ್ತು. ಸರಿ ಹೊರಟೆವು. ಒಂದು ಸಮಸ್ಯೆ ಇತ್ತು. ನಾವು ಈಗ ಹತ್ತಿದ್ದ ಟ್ರೈನು ಹಜರತ್ ನಿಜಾಮುದ್ದೀನ್‍ನಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತಿತ್ತು. ಪತ್ನಿಯರನ್ನೂ, ಮಗುವನ್ನೂ ಒಂದು ಬಾಗಿಲಲ್ಲಿ ನಿಲ್ಲಿಸಿ, ಮತ್ತೊಂದು ಬಾಗಿಲಲ್ಲಿ ನಾವು ಮೂವರೂ ನಮ್ಮ ಲಗ್ಗೇಜುಗಳೊಂದಿಗೆ ಕಾದೆವು. ಎಲ್ಲರೂ ದಬದಬನೆ ಇಳಿದೆವು, ಲಗ್ಗೇಜು ಇಳಿಸಿಕೊಂಡೆವು. ರೈಲು ಹೊರಟುಹೋಯಿತು. ಕೆ.ಕೆ. ಎಕ್ಸ್‍ಪ್ರೆಸ್‍ನಲ್ಲಿ ಬೆಂಗಳೂರು ಬಂದು ತಲುಪಿದೆವು ಎಂಬಲ್ಲಿಗೆ ಈ ಟೂರು ಪುರಾಣ ಸಂಪನ್ನವಾಯಿತು. ಅನೇಕ ಊರುಗಳಿಗೆ ಹೋದೆ. ಒಮ್ಮೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ನಿಗೆ ಹೋದೆ. ಕೆಲಸ ಮುಗಿಸಿ ಬಸ್‍ಗೆ ಬಂದರೆ ಬಸ್ ಇಲ್ಲ ಅಂದು. ಅಲ್ಲೇ ಹತ್ತಿರದ ಊರು ಪಂಡ್ರೊಟ್ಟಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಬಸ್ಸಿದೆ ಎಂದರು. ಅಲ್ಲಿಗೆ ಬೇರೆ ಬಸ್ ಹಿಡಿದು ಹೋಗಿ  ಪಂಡ್ರೊಟ್ಟಿಯಿಂದ ಬೆಂಗಳೂರಿಗೆ ಬಸ್ ಹತ್ತಿದೆ. ನೇರವಾದ ಸೀಟುಗಳು. ಅಬ್ಬಾ... ಬೆನ್ನು ನೋವು ಬಂದುಬಿಟ್ಟಿತ್ತು. ನಂತರ ಬಂದದ್ದು ಚೆನ್ನೈ ಟ್ರಿಪ್ಪು. ಅದೊಂದು ರೀತಿ ಥ್ರಿಲ್ಲು ಅದು. ನಮ್ಮ ಬಾಸ್ ಕೇಳಿದರು. ‘ನೀನು...

ಯತಿ ಸ್ವಂತೀ -245

02-09-2018 ಅರ್ಧಕ್ವಾರಿಯಲ್ಲಿ ಎಲ್ಲರೂ ತಂಗಲು ಸ್ಥಳಾವಕಾಶ ಮಾಡಿಕೊಟ್ಟಿದ್ದರು. ಅಲ್ಲಿ ಸ್ವಲ್ಪ ಹೊತ್ತು ಮಲಗಿದ್ದು ನಂತರ ಇಳಿದು ಬಂದೆವು. ಕಾಟ್ರಾದಿಂದ ಬಸ್ಸು ಜಮ್ಮುವಿಗೆ ಬಂದಿತು. ಗುಪ್ತಾಜೀ ಅವರ ಮನೆ ತಲುಪಿದೆವು. ನಮಗೆ ಒಳ್ಳೆಯ ಬೆಳಗಿನ ಉಪಾಹಾರ ಅವರ ಮನೆಯಲ್ಲಿ ತಯಾರಾಗಿತ್ತು. ಟಿಕೆಟ್‍ಗಳನ್ನು ಪಡೆದು ಅವರಿಗೆ ಹಣದ ಲೆಕ್ಕ ನೀಡಿದೆವು. ಬಸ್ಸಿನಲ್ಲಿ ಶ್ರೀನಗರದಿಂದ ವಾಪ್ಸು ಬರುವಾಗ ನಾನು ಶಂಕರ ಮತ್ತು ಪ್ರಸನ್ನ ಒಂದೊಂದು ಕುಟುಂಬಕ್ಕೆ ಎಷ್ಟೆಷ್ಟು ಖರ್ಚಾಯಿತೆಂದು (ಅಲ್ಲಿಯವರೆಗೆ) ಲೆಕ್ಕ ಹಾಕಿ ಆಗಿತ್ತು. ಒಂದು ದಿನ ಶ್ರೀನಗರದ ಲೋಕಲ್ ಟೂರ್ ಮಾಡಿದ್ದನ್ನು ಹೇಳದಿದ್ದರೆ ಈ ಟೂರು ಸಂಪೂರ್ಣವಾಗದು. ಶ್ರೀನಗರದಲ್ಲಿ ಮೂರು ಪ್ರಸಿದ್ಧ ತೋಟಗಳಿವೆ. ಶಾಲಿಮಾರ್ ಗಾರ್ಡನ್ಸ್, ಚಷ್ಮೆ ಶಾಹಿ ಮತ್ತು ನಿಷಾತ್ ಬಾಗ್. ಚಷ್ಮೆ ಶಾಯಿಯಲ್ಲಿ ನೀರಿನ ಝರಿಯೊಂದು ಬೆಟ್ಟದ ಮೇಲಿನಿಂದ ಹರಿದು ಬರುತ್ತಿತ್ತು. ಅದನ್ನು ನಮ್ಮ ಬಳಿಯಿದ್ದ ದೊಡ್ಡ ಪ್ಲಾಸ್ಟಿಕ್ ಡಬ್ಬಾದಲ್ಲಿ ತುಂಬಿಕೊಂಡೆವು. ಅದನ್ನು ಆಗ ಅವರು ಮಿನರಲ್ ವಾಟರ್ ಎಂದಿದ್ದರು. ಈಗ ನಾವು ಹಣ ಕೊಟ್ಟು ಮಿನರಲ್ ವಾಟರ್ ಕೊಳ್ಳುತ್ತೇವೆ! ಅದರಲ್ಲಿ ಮಿನರಲ್ಸ್ ತುಂಬಿದ್ದೇವೆ ಎಂದು ಕೆಲವು ಬಾಟಲಿ ತಯಾರಕರು ಬರೆದುಕೊಂಡಿರುತ್ತಾರೆ. ನಿಷಾತ್ ಬಾಗಿಗೆ ಹೋದಾಗ ಅಲ್ಲಿ ಎಲ್ಲರೂ ಒಂದು ವಿಶಿಷ್ಟ ಪಟ ತೆಗೆದುಕೊಳ್ಳುತ್ತಿದ್ದರು. ನಾವೂ ಹೋದೆವು. ಕಶ್ಮೀರಿ ದಿರಿಸಿನಲ್ಲಿ ಪಟಗಳು. ನಾನು ನನ್ನ ಪತ್ನಿ ಇಬ...