Posts

Showing posts from August, 2018

ಯತಿ ಸ್ವಂತೀ -244

01-09-2018 ವೈಷ್ಣೋದೇವಿ ಒಂದು ಬೆಟ್ಟ. ಸುಮಾರು 16 ಕಿ.ಮೀ.ಯಷ್ಟು ನಡೆಯಬೇಕು. ಕುದುರೆ ಸವಾರಿ ಇತ್ತು. ಕುರ್ಚಿಗಳನ್ನು ಜೋಡಿಸಿ ಅವುಗಳ ನಡುವೆ ಕೂರಿಸಿಕೊಂಡು ಹೋಗಲು ಜನವಿದ್ದರು. (ಶ್ರವಣಬೆಳಗೊಳದಲ್ಲಿ ಇಂಥದ್ದು ಕಂಡಿದ್ದ ನೆನಪು). ಆದರೆ ದುರ್ಗಮವಾದ ರಸ್ತೆ. ನಡೆದೆವು ನಡೆದೆವು ನಡೆದೆವು. ಬಹಳ ತಡವಾಗಿ ನಮಗೆ ತಿಳಿದ ವಿಷಯವೇನೆಂದರೆ ರಾತ್ರಿ ಬೆಟ್ಟ ಹತ್ತಲು ಆರಂಭಿಸಿ, ಬೆಳಗಿನ ಝಾವ ಮೇಲೆ ತಲುಪಿ, ದೇವಿ ದರ್ಶನ ಮಾಡುವುದು ಅತ್ಯಂತ ಸೌಕರ್ಯಕರ ಎಂದು. ಆದರೆ ನಾವು ಹೊರಟಿದ್ದೇ ಹತ್ತು ಗಂಟೆ. ಎಲ್ಲರೂ ಸುಸ್ತು ಹೊಡೆಯುತ್ತಾ ಮೇಲೆ ತಲುಪಿದ್ದು ಸಂಜೆ ನಾಲ್ಕು ಗಂಟೆ. ಅಲ್ಲಿದ್ದ ಒಂದು ಉಚಿತ ಲಾಡ್ಜ್‍ನಲ್ಲಿ ಹೋಗಿ ಮಲಗಿದವರು ಸುಮಾರು ಎರಡು ಗಂಟೆ ಕಾಲ ಮಲಗಿದ್ದಿರಬೇಕು. ಅಷ್ಟು ಆಯಾಸ. ನಂತರ ಎದ್ದು ಅಲ್ಲಿ ವ್ಯವಸ್ಥೆ ಮಾಡಲ್ಪಟ್ಟಿದ್ದ ಮೇಲಿನಿಂದ ನೀರು ಸುರಿಯುವ ಜಾಗಕ್ಕೆ ಹೋಗಿ ನಿಂತೆವು. ಮೈ ಒದ್ದೆಯಾಯಿತು. ರೂಮಿಗೆ ಬಂದು ಬಟ್ಟೆ ಬದಲಿಸಿ ದೇವಿ ದರ್ಶನಕ್ಕೆ ಹೋದೆವು. ಎರಡು ಮೂರು ಬೆಟ್ಟಗಳ ನಡುವಿನ ಕಣಿವೆಯಲ್ಲಿದೆ ವೈಷ್ಣೋದೇವಿ ಮಂದಿರ. ಹತ್ತಿರ ಹೋದರೆ ಒಂದು ಸಣ್ಣ ಗುಹೆ. ಅದರೊಳಗೆ ತೂರಿಕೊಂಡು ಒಳಗೆ ಹೋದೆವು. ಕೇವಲ ನಾವು ತೂರುವಷ್ಟು ದೊಡ್ಡ ರಂಧ್ರವನ್ನು ಹೊಂದಿತ್ತು ಆ ಗುಹೆಯ ಬಾಗಿಲು. ಅಲ್ಲಿಂದ ಒಳಗೆ ಐಸ್‍ಕೋಲ್ಡ್ ನೀರಲ್ಲಿ ಸೊಟ್ಟವಾಗಿದ್ದ ಚುಚ್ಚುತ್ತಿದ್ದ ನೆಲದ ಮೇಲೆ ನಡೆದಾಗ ಗುಹೆ ಸ್ವಲ್ಪ ಎತ್ತರವಾಗಿತ್ತು. ಈಗ ಹೆಲಿಕಾಪ...

ಯತಿ ಸ್ವಂತೀ -೨೪೩

೩೧-೦೮-೨೦೧೮ ಗುಲ್ ಮಾರ್ಗ್ ಒಂದು ಸುಂದರ ತಾಣ. ನಾವು ಹೋದಾಗ ಸ್ನೋ ಇರಲಿಲ್ಲ. ನಾವು ಹೋದಾಗ ಫ್ರೂಟ್ಸ್ ಆಂಡ್ ಫ್ಲವರ್ಸ್ ಸೀಸನ್. ಸುಂದರ ವಾತಾವರಣದಲ್ಲಿ ಅಲ್ಲಿ ಇಲ್ಲಿ ಕೂತು ಪಟ ತೆಗೆಸಿಕೊಂಡೆವು. ಆಮೇಲೆ ಏನೇನೋ ಆಸೆ ನೆನಪು ನುಗ್ಗಿ ಬಂದಿತು.. ಏಕೆ ಗೊತ್ತೇ? ಜಯಮಾಲಾ ಮತ್ತು ಅಣ್ಣಾವ್ರು ಒಂದು ಟ್ರಾಲಿ ಮೇಲೆ ಕೂತು ಹಾಡುವರಲ್ಲಾ... ನೆನಪಾಯಿತಾ? ಅದೊಂದು ರೋಪ್ ವೇ. ಓವಲ್ ಶೇಪ್ ‌ನಲ್ಲಿ ಇತ್ತು. ಕುರ್ಚಿಯಲ್ಲಿ ಹತ್ತಿ ಕೂತರೆ ನಾಲ್ಕೈದು ರೌಂಡ್ ಹೊಡೆಸುತ್ತಾರೆ. ಕೆಳಗೆ ಆಳವಾದ ಕಣಿವೆ. ನಿಜಕ್ಕೂ ರುದ್ರ ರಮಣೀಯ ಆ ಜಾಗ. ಸಂಜೆಯಾಗುತ್ತಿದ್ದಂತೆ ಅಲ್ಲೆಲ್ಲಾ ಸುತ್ತಾಡಿ ಅದೇ ಟ್ಯಾಕ್ಸಿಯಲ್ಲಿ ಮಲಯಾಳಿ ಹೊಟೇಲ್‌ಗೆ  ಬಂದು ತಿಂದು ಬೋಟ್ ಹತ್ತಿ ದಾಲ್ ಲೇಕ್ ದಾಟಿ ಹೊಟೇಲ್ ತಲುಪಿದೆವು. ಮರುದಿನ ಬೆಳಗ್ಗೆ ಸೋನಾಮಾರ್ಗ್. ಬಹುದೂರದ ರಸ್ತೆ. ಹಾದಿಯಲ್ಲಿ ಅನೇಕಾನೇಕ ಭಾರತೀಯ ಯೋಧರ ಜೀಪುಗಳು, ಟ್ರಕ್ಕುಗಳನ್ನು ಕಂಡೆವು. ಸುಮಾರು ದೂರ ನಡೆದಾಗ ಕುದುರೆಯೊಂದನ್ನು ಹತ್ತಿ ಹೋಗುವ ಆಸೆ ಬಂದಿತು. ದುರದೃಷ್ಟವಶಾತ್ ಕುದುರೆ ಒಬ್ಬರನ್ನು ಎತ್ತಿ ಹಾಕಿತು. ಸೋನಾಮಾರ್ಗ್ ಬಹು ದೂರದಲ್ಲಿ ಇತ್ತು. ಒಂದು ಗಿರಿಯ ಮೇಲ್ಭಾಗದಲ್ಲಿ ಟೊಪ್ಪಿಗೆಯಂತೆ ಹಿಮವನ್ನು ಹೊಂದಿತ್ತು. ಅದನ್ನು ಗ್ಲೇಸಿಯರ್ ಎನ್ನುತ್ತಾರೆ. ಎಂದಿಗೂ ಕರಗದ ಹಿಮ. ಮುಕ್ಕಾಲು ದೂರ ಹೋಗುವ ವೇಳೆಗೆ ಎಲ್ಲರೂ ಸುಸ್ತು. ಶಂಕರ ಒಬ್ಬ ಹೊರಟ. ನಾನು ಅವನ ಹಿಂದೆ ಬಾಲ. ನಾನು ಆ ಗಿರಿಯ ಬುಡದಲ್...

ಯತಿ ಸ್ವಂತೀ -242

30-08-2018 ನಾವು ಇನ್ನೇನು ಒಂದು ಟನಲ್ ಪ್ರವೇಶಿಸುವುದರಲ್ಲಿದ್ದೆವು. ಅದು ಸುಮಾರು ಎರಡೂವರೆ ಕಿಮೀ ಉದ್ದದ ಸುರಂಗ. ಅದರ ಮೂಲಕ ಬಸ್ಸು ಹೋಗಬೇಕಿತ್ತು. ಸುರಂಗದ ಮೇಲ್ಭಾಗದಲ್ಲಿ ಅನೇಕಾನೇಕ ನೀರಿನ ಝರಿಗಳು ಹರಿಯುತ್ತಿದ್ದವು. ಅವು ನಮ್ಮ ಲಗ್ಗೇಜುಗಳನ್ನು ಒದ್ದೆ ಮಾಡುವ ಅವಕಾಶವಿತ್ತು. ಅದಕ್ಕೇ ಟಾರ್‍ಪಾಲಿನ್ ಹೊದಿಸಿದ್ದರು. ಬೆಳಗ್ಗೆ 9ಕ್ಕೆ ಜಮ್ಮುತವಿ ಬಿಟ್ಟವರು ಸಂಜೆ ಎಂಟಕ್ಕೆ ಶ್ರೀನಗರ್ ತಲುಪಿದೆವು. ಅಲ್ಲಲ್ಲಿ ಸೈನಿಕರು ಕಾವಲು ಕಾಯುತ್ತಿದ್ದರು. ಅವರು ವಿಶ್ವಸಂಸ್ಥೆಯಿಂದ ನೇಮಿಸಲ್ಪಟ್ಟ ಪಡೆಯವರು. ಯಾವಾಗ ಬೇಕಾದರೂ ಅಶಾಂತಿ ಅಲ್ಲಿ ಭುಗಲೇಳಬಹುದಿತ್ತು. ಒಮ್ಮೆ ಈ ಭಯ ಎಷ್ಟಕ್ಕೆ ಮುಟ್ಟಿತ್ತೆಂದರೆ ಇಡೀ ವರ್ಷಕ್ಕೆ ಕಾಶ್ಮೀರವನ್ನು ಸಂದರ್ಶಿಸಿದವರು ಕೇವಲ 3500 ಜನ. ಲಕ್ಷೋಪಲಕ್ಷ ಜನ ಇಲ್ಲಿಗೆ ಬರುತ್ತಿದ್ದರು ಇದಕ್ಕೆ ಮುಂಚೆ. ಬಹಳ ಹಿಂದೀ ಸಿನಿಮಾಗಳಲ್ಲಿ ಚಿತ್ರಿತವಾಗಿರುವ ಒಂದು ವಿಶಿಷ್ಟ ಸ್ಥಳ ಶ್ರೀನಗರ್. ಅಣ್ಣಾವ್ರ ಶಂಕರ್‍ಗುರು ಚಿತ್ರದ ಬಹುತೇಕ ಭಾಗವು ಈ ಜಾಗದಲ್ಲಿ ಶೂಟ್ ಆಗಿದೆ. ರಾತ್ರಿಯಾಗಿತ್ತು. ಹಸಿವೆ. ಅಲ್ಲೇ ಒಂದು ಮಲಯಾಳಿ ಹೊಟೇಲ್ ಇತ್ತು. ಅಲ್ಲಿ ಹೋಗಿ ಊಟ ಮಾಡಿದೆವು. ಕಶ್ಮೀರೀ ಅಕ್ಕಿ ಉದ್ದಕ್ಕೆ ಇರುತ್ತದೆ. ಬಲು ರುಚಿಯಾದ ಅನ್ನ. ಅಲ್ಲಿ ಉಂಡು ನಂತರ ದಾಲ್‍ಲೇಕ್ ಬಳಿಗೆ ಬಂದೆವು. ಅಲ್ಲಿ ಒಂದು ದೋಣಿ ಹತ್ತಿದೆವು. ಕಾಲಿಟ್ಟೊಡನೆ ಅಲುಗಾಡುವ ಈ ದೋಣಿಯಲ್ಲಿ ಕಾಲಿಟ್ಟೊಡನೆ ಕಿರ್ರ್ ಎಂದರು ನಮ್ಮ ಹೆಣ್ಮಕ್ಕಳು! ಹ...

ಯತಿ ಸ್ವಂತೀ -241

29-08-2018 ಅಲ್ಲೆಷ್ಟು ಛಳಿ ಇತ್ತೆಂದರೆ ಆ ರೈಲ್ವೈ ಎನ್‍ಕ್ವೈರಿ ಕೌಂಟರ್‍ನಲ್ಲಿದ್ದಾತ ಮೈ ತುಂಬಾ ಸ್ವೆಟರ್ ಧರಿಸಿ, ಕುತ್ತಿಗೆಗೆ ಮಫ್ಲರ್ ಸುತ್ತಿಕೊಂಡು ಗಾಜಿನ ಕೌಂಟರ್‍ನಲ್ಲಿ ಕೂತಿದ್ದ. ಅವನೊಂದಿಗೆ ಮಾತಾಡಲು ಈ ಕಡೆ ಒಂದು ಮೈಕು. ಆ ಕಡೆ ಒಂದು ಮೈಕು. ಅಮೆರಿಕನ್ ಧಾರಾವಾಹಿಗಳಲ್ಲಿ ಅಪರಾಧಿ ಮತ್ತು ಅವನ(ಳ)ನ್ನು ನೋಡಲು ಬರುವವರು ಟೆಲಿಫೋನ್ ರಿಸೀವರ್ ಎತ್ತಿ ಮಾತಾಡುವಂತೆ! ಅಲ್ಲಿ ಯಾವ ವೆಯ್ಟಿಂಗ್ ರೂಮ್ ಕೂಡ ಖಾಲಿ ಇಲ್ಲ ಎಂದ ಅವನು. ಏನು ಮಾಡುವುದು, ಹೆಣ್ಣುಮಕ್ಕಳು, ಮಗು ಇದ್ದಾರಲ್ಲಾ ಎಂದು ಆಲೋಚಿಸಿದಾಗ ಅಲ್ಲೊಬ್ಬ ಬಂದ. ಥೇಟ್ ಬ್ಲ್ಯಾಕ್ ಟಿಕೆಟ್ ಮಾಡಲು ಸಿನಿಮಾ ಥೇಟರಿನ ಮುಂದೆ ಸುತ್ತಾಡುವವನ ಹಾಗೇ ಇದ್ದ! ಬನ್ನಿ ಇಲ್ಲೇ ಒಂದು ಡಾರ್ಮಿಟರಿ ಇದೆ ಎಂದು ಕೌಂಟರಿನವನ ಕಡೆಗೆ ನೋಡಿದ. ಅವನಿಗೂ ಇವನಿಗೂ ಸಮ್‍ಥಿಂಗ್ ಸಂಥಿಂಗ್ ಇದೆ ಎಂದು ಅನ್ನಿಸಿತು. ಎಲ್ಲಾ ದಂಧೆ, ವ್ಯಾಪಾರ. ನಾವು ಕೊಡುವ ಹಣದಲ್ಲಿ ಅವನಿಗೂ ಪಾಲು ಹೋಗಬಹುದು. ಆದರೆ ಆ ವಿಷಯ ಆಲೋಚಿಸಲು ನಮಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ. ಅವನ ಹಿಂದೆ ಹೋದೆವು. ಒಂದು ದೊಡ್ಡ ರೂಮು. ಮೂರು ಮೂಲೆಗೆ ಮೂರು ಮಂಚಗಳು. ಅಂತೂ ಅಲ್ಲೇ ಅಡ್ಜೆಸ್ಟ್ ಮಾಡಿಕೊಂಡು ಅಡ್ಡಾದೆವು. ಭಯಾನಕ ಛಳಿ ಜಮ್ಮುವಿನಲ್ಲಿ. ಮರುದಿನ ಬೆಳಗ್ಗೆ ಉಳಿದವರು ಸಿದ್ಧವಾಗುವುದಕ್ಕೆ ಮೊದಲು ನಾನು ಶಂಕರ ಅಲ್ಲಿ ಒಬ್ಬರ ಮನೆಯನ್ನು ಹುಡುಕಿಕೊಂಡು ಹೊರಟೆವು. ಅವರ ಹೆಸರು ಗುಪ್ತ ಎಂದು ಇಟ್ಟುಕೊಳ್ಳೋಣ! (ಹೆಸರು ...

ಯತಿ ಸ್ವಂತೀ -240

28-08-2018 ಏಕಶಿಲೆಯ ಮಾನಸ್ ಮಂದಿರ್ ಅದ್ಭುತ. ಗೋಮಟೇಶ್ವರನ ವಿಗ್ರಹದ ನಂತರ ನಾನು ನೋಡಿದ ಮತ್ತೊಂದು ಅದ್ಭುತವಿದು. ಇಡೀ ಬೆಟ್ಟವನ್ನು ಕೊರೆದು ದೇವಾಲಯ ಕಟ್ಟಿ ಜೊತೆಯಲ್ಲಿ ದೇವರ ವಿಗ್ರಹವನ್ನೂ ಅದೇ ಕಲ್ಲಲ್ಲಿ ಕೆತ್ತಿದ್ದಾರೆ. ಮೋನೋಲಿತಿಕ್ ಶಿಲ್ಪಕ್ಕೆ ಒಂದು ಅದ್ಭುತ ಉದಾಹರಣೆ ಇದು! ಭಾರತದಲ್ಲಿನ ದ್ವಾದಶಲಿಂಗಗಳಲ್ಲಿ ಘೃಷ್ಣೇಶ್ವರ (ಘ್ರುಣೇಶ್ವರ!) ಒಂದು. ಇದರ ದರ್ಶನವನ್ನೂ ಮಾಡಿದೆವು. ಏನೋ ಒಂದು ರೀತಿಯ ಧನ್ಯತಾಭಾವ. ನಾನು ಇದಕ್ಕೆ ಮುಂಚೆ ಕೇವಲ ರಾಮೇಶ್ವರಂಗೆ ಹೋಗಿದ್ದೆ, 1964ರಲ್ಲಿ. ಅಲ್ಲಿಂದ ನಾವು ಅಜಂತಾಗೆ ಹೋದೆವು. ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾದಾಗ ಬೌದ್ಧರು ತಲೆಮರೆಸಿಕೊಂಡು ಗುಹೆಗಳಿವು. ಅದರ ಮುಖ್ಯದ್ವಾರವೇ ಬಹಳ ಚಾತುರ್ಯದಿಂದ ಕೂಡಿದೆ. ಒಂದು ದೊಡ್ಡ ಬೆಟ್ಟವನ್ನು ಕೊರೆದು ಒಳಗೆ ಜಾಗ ಮಾಡಿಕೊಂಡು ಅಲ್ಲಿ ಗುಹೆಗಳನ್ನು ಕೊರೆದಿದ್ದಾರೆ. ನಡುವೆ ಒಂದು ಕಣಿವೆ. ಅದರಲ್ಲಿ ಒಂದು ನದಿ ವಾಘುರೆ ಎಂಬ ಹೆಸರೆಂದು ನೆನಪು. ಪದ್ಮಪಾಣಿ ಎನ್ನುವ ಜಗತ್‍ಪ್ರಸಿದ್ಧ ಚಿತ್ರ ಒಂದು ಗುಹೆಯಲ್ಲಿದೆ. ಅಜಂತಾ ವಿಶ್ವವಿದ್ಯಾಲಯ ಎನ್ನುತ್ತಿದ್ದರಂತೆ ಆಗ. ಪಾಠಪ್ರವಚನಗಳು ನಡೆದ ಜಾಗವೆನ್ನುತ್ತಾರೆ. ಇಲ್ಲಿನ ಚಿತ್ರಗಳು ಕ್ರಮೇಣ ಮಸುಕಾಗುತ್ತಿದ್ದು ಅವನ್ನು ಪುನರುದ್ಧಾರ ಮಾಡಲು ಅನೇಕ ಕೆಲಸಗಳು ನಡೆಯುತ್ತಿದ್ದವು. ಮರುದಿನ ನಾಸಿಕ್‍ನ ಸೈರ್ ಮಾಡಿದೆವು. ಅಲ್ಲಿ ಭೀಮೇಶ್ವರನ ದರ್ಶನವಾಯಿತು. ಗೋದಾವರಿ ನದೀ ತೀರಕ್ಕೆ ಹೋದೆವೆಂದು ನೆನಪು. ...

ಯತಿ ಸ್ವಂತೀ -239

27-08-2018 ನನ್ನ ಅನೇಕ ಟೂರ್‍ಗಳಲ್ಲಿ ಬಲು ಮುಖ್ಯವಾದದ್ದು ನನ್ನ ಕಾಶ್ಮೀರ್ ಟ್ರಿಪ್. ಹೌದು, ಆಗ ಕಾಶ್ಮೀರಕ್ಕೆ ಜನ ಹೋಗುತ್ತಿದ್ದ ಸಮಯವದು. ಆ ಸಮಯದಲ್ಲಿ ಸ್ವಲ್ಪ ಟೆನ್ಷನ್ ಇದ್ದದ್ದು ಪಂಜಾಬ್‍ನಲ್ಲಿ. ತರನ್ ತಾರನ್ ಎನ್ನುವ ಊರಲ್ಲಿ ದಿನವೂ ಮಾರಣಹೋಮ ನಡೆಯುತ್ತಿದ್ದ ವಿಷಯವನ್ನು ಪೇಪರ್‍ನಲ್ಲಿ ಓದಿ ತಬ್ಬಿಬ್ಬಾಗುತ್ತಿದ್ದೆ. ಇದೇನು? ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? ನನ್ನ ಇಂಜಿನಿಯರಿಂಗ್ ಗೆಳೆಯರಲ್ಲಿ ಅನೇಕರು ಇಂದಿಗೂ ಸಂಪರ್ಕದಲ್ಲಿದ್ದಾರೆ. ಪದವಿಯ ಕೊನೆ ಕೊನೆಗೆ ಬಂದ ಶಂಕರ ಮತ್ತು ಪ್ರಸನ್ನ ಬಹಳವೇ ಕ್ಲೋಸ್ ಆದರು. ಶಂಕರನೊಂದಿಗೆ ಅವನ ಮನೆಯಲ್ಲಿ ಅನೇಕ ದಿನ ಕಂಬೈಂಡ್ ಸ್ಟಡೀಗೆ ಹೋಗಿದ್ದೇನೆ. ಮಾಧವರಾವ್ ಸರ್ಕಲ್ ಪ್ರಭುದೇವ ಥಿಯೇಟರ್ ಬಳಿ ಇದೆ. ಅಲ್ಲಿಂದ ಅರಮನೆಗೆ ಹೋಗುವ ದಾರಿಯಲ್ಲಿನ ಮೊದಲ ಬಲಗಡೆಯ ರಸ್ತೆ ವೀಣೆ ಶಾಮಣ್ಣ ಸ್ಟ್ರೀಟ್. ಅಲ್ಲಿ ಶಂಕರನ ಮನೆ ಇತ್ತು. ಪ್ರಸನ್ನ ಹೊಯ್ಸಳ ಕರ್ನಾಟಕ ಹಾಸ್ಟೆಲ್‍ನಲ್ಲಿದ್ದ. ಅದು ನಮ್ಮ ಸೋದರಮಾವನ ಮನೆಯಿದ್ದ ಹಾರ್ಡ್‍ವಿಕ್ ಸರ್ಕಲ್‍ನಿಂದ ನೇರ ಮೇಲಕ್ಕೆ ಬಂದು ಬಲಕ್ಕೆ ತಿರುಗಿದರೆ ಅಲ್ಲಿತ್ತು ಹಾಸ್ಟೆಲ್. ಅದೇ ಮುಖ್ಯರಸ್ತೆಯಲ್ಲಿ ಕೆಳಗೆ ಹೋದರೆ ಮಾಧವರಾವ್ ಸರ್ಕಲ್. ಶಂಕರನ ಅಣ್ಣ, ತಮ್ಮ, ಅಮ್ಮ ಇದ್ದರು. ಅವನ ಅಣ್ಣನ ಮಗ ಗಿರೀಶ್ ಇದ್ದ. ಸ್ಕೂಲಿನಲ್ಲಿ ಓದುತ್ತಿದ್ದ. ಅದೆಷ್ಟೋ ಸಲ ಶಂಕರನ ತಾಯಿ ನನಗೆ ಊಟ ಹಾಕಿದ್ದಾರೆ. ಅಲ್ಲೇ ಇದ್ದು ಓದುತ್ತಿದ್ದೆ. ಅತಿ ಪುಟ್ಟ ರಸ್ತೆ ಆ ವೀಣೆ ...

ಯತಿ ಸ್ವಂತೀ -238

26-08-2018 ಬಹಳ ಜನ ಗ್ರಾಹಕರು ಬಂದಾಗ ಅವರನ್ನು ಅಲ್ಲಿ ಇಲ್ಲಿ ಕರೆದೊಯ್ದಿದ್ದೇನೆ. ಒಮ್ಮೆ ಒಬ್ಬರು ದೆಹಲಿಯಿಂದ ಬಂದಿದ್ದರು. ಅವರನ್ನು ಎಂ.ಜಿ. ರಸ್ತೆ ಮೂಲೆಯ ತಾಜ್‍ನಲ್ಲಿ ಇಳಿಸಿ ಸಂಜೆ ಬರುವೆನೆಂದು ಆಫೀಸಿಗೆ ಹೊರಟುಹೋದೆ. ಸುಮಾರು ಆರುಗಂಟೆಗೆ ತಾಜ್‍ಗೆ ಹೋಗಿ ಅವರು ರೂಮ್‍ನಲ್ಲಿರುವರಾ ಎಂದೆ. ಇಲ್ಲ ಸರ್. ಅವರು ರೂಮು ಖಾಲಿ ಮಾಡಿಕೊಂಡು ಹೊರಟುಹೋದರು ಎಂದ ರಿಸೆಪ್ಷನಿಸ್ಟ್. ನನ್ನೆದೆ ಧಸಕ್ಕೆಂದಿತು. ಈಗಿನಂತೆ ಮೊಬೈಲ್ ಇಲ್ಲದ ಕಾಲವದು. ಹೇಗಪ್ಪಾ ಈಯಪ್ಪನನ್ನು ಸಂಪರ್ಕಿಸುವುದು ಎಂದು ಯೋಚಿಸುತ್ತಾ, ಎಲ್ಲಿಗೆ ಹೋದರು ಅವರು ಎಂದೆ. ಅವರು ಈ ಹೊಟೇಲ್ ಎದುರಿಗಿರುವ ಹೊಟೇಲ್‍ಗೆ ಶಿಫ್ಟ್ ಆಗಿದ್ದಾರೆ ಎಂದ! ಸರಿ, ಅಲ್ಲಿಗೆ ಹೋಗಿ ರಿಸೆಪ್ಷನ್‍ನಲ್ಲಿ ವಿಚಾರಿಸಿದರೆ ರೂಮಿನಲ್ಲೇ ಇದ್ದರು! ಅವರ ರೂಮಿಗೆ ಹೋಗಿ ಬಾಗಿಲು ತಟ್ಟಿ ಒಳಗೆ ಹೋದೆ. ಸಿದ್ಧವಾಗಿ ಕೂತಿದ್ದರು. ಯಾಕೆ ಸಾರ್ ಬಂದ್ಬಿಟ್ರಿ ತಾಜ್ ಇಂದ ಅಂದ್ರೆ ನನಗೆ ಅದು ಬಹಳ ದೊಡ್ಡ ಹೊಟೇಲ್. ಬಹಳ ಅನ್‍ಕಂಫರ್ಟಬಲ್ ಅನ್ನಿಸ್ತು ಅಂದುಬಿಡೋದೇ! ಅವರು ಅವರ ಕಂಪೆನಿಯಲ್ಲಿ ದೊಡ್ಡ ಪದವಿಯಲ್ಲಿದ್ದವರು. ಆದರೂ ಅಷ್ಟು ಸರಳ ಮನುಷ್ಯ! ಊಟಕ್ಕೆ ಎಲ್ಲಿ ಹೋಗೋಣ ಎಂದೆ. ನನ್ನದೊಂದು ಆಶೆ ಇದೆ ನಡೆಸಿಕೊಡ್ತೀರಾ ಎಂದರು. ಹೇಳಿ ಸರ್ ಎಂದೆ. ನಿಮ್ಮೂರಲ್ಲಿ ಹೊಸ ರಾಘವೇಂದ್ರಸ್ವಾಮಿ ಗುಡಿ ಆಗಿದೆಯಂತಲ್ಲಾ ಜಯನಗರದಲ್ಲಿ? ಅದಕ್ಕೆ ಕರಕೊಂಡು ಹೋಗ್ತೀರಾ ಎಂದರು! ಅದು ಇದ್ದದ್ದು ನಮ್ಮ ಮನೆಯಿಂದ ...

ಯತಿ ಸ್ವಂತೀ -237

25-08-2018 ನಮ್ಮ ಬಾಸ್ ನನ್ನನ್ನು ಕರೆದು, ‘ನೋಡ್ರೀ. ಸಾಯಿಬಾಬಾ ಎಲ್ಲಿ ಸಿಗ್ತಾರೋ ಗೊತ್ತಿಲ್ಲ. ಸೋ, ಒಂದು ದಿನದ ಬಟ್ಟೆಯೊಂದಿಗೆ ಹೋಗಿ. ಅವರಿಗೆ ಸಂತೋಷವಾದರೆ ಸಾಕು’ ಎಂದರು. ಸರಿ, ಕ್ಯಾಬ್‍ನಲ್ಲಿ ಗುಪ್ತಾಜೀ ಮತ್ತು ನಾನು ವ್ಹೈಟ್‍ಫೀಲ್ಡ್‍ನಲ್ಲಿನ ಬಾಬಾ ಅವರ ಆಶ್ರಮಕ್ಕೆ ಹೋದೆವು. ಆದರೆ ಅಲ್ಲಿ ನಮಗೆ ನಿರಾಶೆ ಕಾದಿತ್ತು. ಬಾಬಾ ಪುಟ್ಟಪರ್ತಿಯಲ್ಲಿದ್ದಾರೆಂದು ತಿಳಿಯಿತು. ಈಗ ಆ ಪುಟ್ಟಪರ್ತಿ ಸ್ಟೇಷನ್ ಇಲ್ಲ. ಅದೀಗ ಪ್ರಶಾಂತಿ ನಿಲಯ ಆಗಿದೆ. ಅತ್ಯಂತ ಸ್ವಚ್ಛ ರೈಲ್ವೇ ನಿಲ್ದಾಣವದು. ಈಗ ಬೆಂಗಳೂರಿನಿಂದ ಭುಬನೇಶ್ವರಕ್ಕೆ ಪ್ರಶಾಂತಿ ಎಕ್ಸ್‍ಪ್ರೆಸ್ ಇದೆ. ಬಹಳ ಸಲ ಇದರಲ್ಲಿ 2009ರಲ್ಲಿ ಪಯಣಿಸಿದ್ದೇನೆ. ಅಲ್ಲಿ ಸಾಕಷ್ಟು ಹೊತ್ತು ರೈಲು ಗಾಡಿ ನಿಲ್ಲುತ್ತದೆ. ಈಗ ಹಿಂದೆ ಹೋಗೋಣ. ಕ್ಯಾಬ್ ಈಗ ಅನಂತಪುರದತ್ತ ಧಾವಿಸುತ್ತಿತ್ತು. ಪುಟ್ಟಪರ್ತಿ ತಲುಪಿದಾಗ ಹನ್ನೊಂದು ಗಂಟೆ ಇರಬಹುದು. ಅಲ್ಲಿ ವಿಚಾರಿಸಿದಾಗ ಪ್ರಶಾಂತಿ ನಿಲಯದಲ್ಲಿ ಬಾಬಾ ಇದ್ದಾರೆಂದು ತಿಳಿಯಿತು. ಹತ್ತಿರ ಹೋದೆವು. ಪ್ರಶಾಂತಿ ನಿಲಯದ ಕಾಂಪೌಂಡು. ಅಲ್ಲಿಂದ ಒಳಗಿನ ದೊಡ್ಡ ಹಾಲ್ ಕಾಣಿಸುತ್ತಿತ್ತು. ಅಲ್ಲಿ ಅನೇಕ ಯುವಕ ಯುವತಿಯರು ಭಜನೆ ಮಾಡುತ್ತಿದ್ದರು. ಅವರ ನಡುವೆ ಕಾವಿ ಬಣ್ಣದ ನಿಲುವಂಗಿ ತೊಟ್ಟ ಬಾಬಾ ನಡೆದಾಡುತ್ತಿದ್ದರು. ನನಗೆ ಇನ್ನೂ ನೆನಪಿದೆ. ಬಹುಶಃ ನೆಗಡಿ ಆಗಿದ್ದಿರಬೇಕು. ಅವರ ಎಡಗೈಯಲ್ಲಿ ನೆಲದಲ್ಲಿ ಎಳೆಯುತ್ತಿದ್ದ ಅವರ ನಿಲುವಂಗಿಯನ್ನು ಎತ್ತಿ ಹಿಡಿದ...

ಯತಿ ಸ್ವಂತೀ -236

24-08-2018 ಮರುದಿನ ಸಂಜೆ ನನಗೆ ರೈಲು ಮದರಾಸಿಗೆ ಇತ್ತು. ಬೆಳಗ್ಗೆ ಗಂಗೆಯ ದರುಶನಕೆ ಹೊರಟೆ. ನೀರಲ್ಲಿ ಮುಳುಗಬಾರದು ಹೊಸದಾಗಿ ಮದ್ವಿ ಆದೋರು ಅಂತ ಯಾರೋ ಅಂದಿದ್ರಲ್ಲಾ, ಅದಕ್ಕೇ ಸುಮ್ಮನೆ ದರ್ಶನಕ್ಕೆ ಹೋದೆ. ಎಲ್ಲೋ ಒಂದು ಕಡೆ ಗಂಗಾಘಾಟ್ ಗಂಗಾಘಾಟ್ ಎಂದು ಆಟೋದವನು ಕೂಗಿಕೊಳ್ಳುತ್ತಿದ್ದ. ಸರಿ, ಹೋಗಿ ಕೂತೆ. ಹೊರಡಲಿಲ್ಲ ಅವ. ನನ್ನ ಆ ಕಡೆ ಈ ಕಡೆ ಇಬ್ಬರು. ಕಾಲ ಬಳಿ ಇಬ್ಬರು. ಡ್ರೈವರನ ಪಕ್ಕ ಇಬ್ಬರು ಕುಳಿತ ಮೇಲೆ ಹೊರಟಿತು ಆಟೋ. ಆಗೆಲ್ಲಾ ಎರಡು ರೂಪಾಯಿ ಬಾಡಿಗೆ ಎಂಬ ನೆನಪು. ಅದೋ, ನಮಾಮಿ ಗಂಗೇ ಪ್ರಸೀದ ಪ್ರಸೀದ ಎಂದು ಇಳಿದೆ. ಹಿಂದೆಯೇ ಬಂದನೊಬ್ಬ ಪಂಡಾ. ಈ ಪಂಡಾ ಎನ್ನುವ ಪೂಜಾರಿಗಳು ಶ್ರಾದ್ಧ ಮಾಡಿಸುವುದರಲ್ಲಿ ನಿಪುಣರು. ಯಾರ ಶ್ರಾದ್ಧ ಮಾಡಲಿ ಎಂದು ಒಬ್ಬ ನನ್ನನ್ನು ಪೀಡಿಸುತ್ತಾ ದಾರಿಯುದ್ದಕ್ಕೂ ಬಂದ. ಆಗ ನನ್ನ ತಾಯಿ ತಂದೆ ಇಬ್ಬರೂ ಬದುಕಿದ್ದರು. ’ನಾನು ಯಾರ ಶ್ರಾದ್ಧ ಕೂಡ ಮಾಡಬೇಕಿಲ್ಲ’ ಎಂದೆ. ಅವನು ಕೇಳಬೇಕಲ್ಲ! ಕೊನೆಗೆ ರೋಸಿ ಹೋಗಿ ನನ್ನದೇ ಮಾಡು ಬಾ ಎಂದೆ ನನಗೆ ತಿಳಿದ ಹಿಂದಿಯಲ್ಲಿ. ಅರೆ ಸಾಬ್ ಎಂದು ಕಣ್ಣುಗಳನ್ನು ಗರಗರನೆ ತಿರುಗಿಸಿ ನನ್ನನ್ನು ಬಿಟ್ಟು ಬೇರೆಯವರ  ಬಳಿ ಹೋದ! ದಡಕ್ಕೆ ಬಂದು ಕೊಂಚ ನೀರು ತೆಗೆದುಕೊಂಡು ತಲೆಗೆ ಪ್ರೋಕ್ಷಣೆ ಮಾಡಿಕೊಂಡೆ. ನಂತರ ಅಲ್ಲಿಯೇ ಹತ್ತಿರದ ಮಾರುಕಟ್ಟೆಗೆ ಹೋದೆ. ನನಗೆ ಮನೆಯಲ್ಲಿ ನವಪತ್ನಿ. ನನ್ನ ಚಿಕ್ಕ ತಂಗಿಗೆ ಇನ್ನೆರಡು ತಿಂಗಳಲ್ಲಿ ಮದುವೆ ಇತ್ತು. ಸರಿ...

ಯತಿ ಸ್ವಂತೀ -235

23-08-2018 ಅಲ್ಲಿನ ಸಾರ್ವಜನಿಕರನ್ನು ಸಾಗಿಸುವ ವಾಹನಗಳಲ್ಲಿ ಒಂದು ವಿಚಿತ್ರ ಕಂಡೆ. ನಮ್ಮ ಹೊಟೇಲ್‍ನಿಂದ ಗೋಲ್‍ಛೋರಾ ಅನ್ನೋ ಜಾಗದ ವರೆಗೆ ಒಂದು ಟೆಂಪೋದಲ್ಲಿ ಹೋಗಬೇಕು. ಅಲ್ಲಿ ಇಡೀ ಜನರ ಗುಂಪನ್ನು ಇಳಿಸಿ, ಮತ್ತೊಂದು ಟೆಂಪೋಗೆ ಹತ್ತಿಸುತ್ತಾರೆ. ಇಲ್ಲಿ ವರೆಗೆ ಬರೋಕ್ಕೆ ಇವನಿಗೆ ಬಾಡಿಗೆ ಕೊಟ್ಟೆವು. ಮುಂದಕ್ಕೆ ಅವನಿಗೆ ಕೊಡಬೇಕು. ಅಂದರೆ ಇಬ್ಬರಿಗೂ ಹೊಟ್ಟೆ ತುಂಬುತ್ತದೆ. ಸಾಮರಸ್ಯದ ಬದುಕು! ಅಲ್ಲಿಯೇ ಒಂದು ಕೃಷ್ಣನ ಗುಡಿ ಇದೆ. ಬಹಳ ಮುದ್ದಾದ ಕೃಷ್ಣ. ಇದನ್ನು ನೋಡಿ ಎಷ್ಟೋ ವರ್ಷಗಳಾಗಿದ್ದರೂ ನನ್ನ ಕಾದಂಬರಿ ಚಿರಸ್ಮಿತದಲ್ಲಿ ಈ ಗುಡಿಯನ್ನು ಬಳಸಿದೆ. ನಾಯಕಿ ಇಲ್ಲಿಗೆ ಒಂಟಿಯಾಗಿ ಬಂದಾಗ ಕಿಷನ್ ಎಂಬ ಹುಡುಗ ಅವಳಿಗೆ ಜೊತೆಯಾಗಿ ಅವಳನ್ನು ಗಮ್ಯಕ್ಕೆ ತಲುಪಿಸುತ್ತಾನೆ. ನನಗೆ ಲಕ್ನೋದಲ್ಲಿ ಕೆಲಸವಿತ್ತು. ಎಚ್.ಎ.ಎಲ್‍ಗೆ ಹೋಗಬೇಕಿತ್ತು. ಅಲ್ಲಿಂದ ಬಸ್ ಹತ್ತಿ ಎಚ್.ಎ.ಎಲ್ ತಲುಪಿದೆವು. ಲಕ್ನೋ ಕಾನ್‍ಪೂರ್ ನಡುವೆ ಹೆಚ್ಚು ದೂರವಿರಲಿಲ್ಲವೆಂದು ನೆನಪು. ಅಲ್ಲಿ ಕೆಲಸ ಮುಗಿಸಿ ಹೊರಗೆ ಬಂದಾಗ ಸುಮಾರು ಒಂದೂವರೆ ಗಂಟೆ. ಸೂರ್ಯ ಪ್ರಖರವಾಗಿ ಉರಿಯುತ್ತಿದ್ದ. ನಡೆದು ಬರುತ್ತಿದ್ದೆವು. ನಾನು ಇದ್ದಕ್ಕಿದ್ದಂತೆ ‘ಬ್ರಿಜ್, ನನಗ್ಯಾಕೋ ಕಣ್ಣು ಕಾಣಿಸ್ತಿಲ್ಲ’ ಎಂದೆ. ಬೆಚ್ಚಿದ ಅವನು. ತಕ್ಷಣವೇ ಹತ್ತಿರವೇ ಇದ್ದ ಹೊಟೇಲ್‍ಗೆ ಎಳೆದೊಯ್ದ. ನೀರು ಕುಡಿ ಎಂದ. ಕೆಲವು ನಿಮಿಷಗಳ ಕಾಲ ಸುಧಾರಿಸಿಕೊಂಡ ಮೇಲೆ ಕಣ್ಣು ಕಾಣಿಸತೊಡಗಿತು. ಏನಾಗಿದೆ...

ಯತಿ ಸ್ವಂತೀ -234

22-08-2018 ಯಾರೋ ಒಬ್ಬ ಕುಡುಕ ಆ ಎರಡು ಟಾಯ್ಲೆಟ್‍ಗಳ ನಡುವಿನ ಸಣ್ಣ ಓಣಿಯಲ್ಲಿ ಮಲಗಿದ್ದ. ನನ್ನ ಸೂಟ್‍ಕೇಸ್ ಮೇಲೆ ಕೂತು, ಏರ್‍ಬ್ಯಾಗ್ ತೂಗು ಹಾಕಿಕೊಂಡು ಬಹಳ ಹೊತ್ತು ಒಂದು ಕಾಲಿನ ಮೇಲೆ ನಿಲ್ಲುವ ಸರ್ಕಸ್ ಮಾಡಿದ್ದೆ. ಸ್ವಲ್ಪ ಹೊತ್ತು ಈ ಕಾಲು, ಸ್ವಲ್ಪ ಹೊತ್ತು ಮತ್ತೊಂದು ಕಾಲು. ಕೊನೆಗೆ ಯಾಕೋ ನಿದ್ರೆ ತಡೆಯಲಾಗಲಿಲ್ಲ. ಆ ಕುಡುಕನ ಪಕ್ಕದಲ್ಲಿ ಮಲಗಿಕೊಂಡೆ. ಯಾರೋ ಒಬ್ಬ ಹುಡುಗ ಕಾನ್ಪುರ ದಾಟಿ ಹೋಗುವೆನೆಂದಿದ್ದ. ಅವನನ್ನು ನಂಬಿ, ಅವನಿಗೆ ತನ್ನ ಸೂಟ್‍ಕೇಸ್ ಮೇಲೆ ಕೂರಲು ಬಿಟ್ಟು ನಾನು ಮಲಗಿಬಿಟ್ಟೆ. ಸುಮಾರು ಎರಡೂವರೆ ಹೊತ್ತಿಗೆ ಎಚ್ಚರವಾಯಿತು. ನನ್ನ ಲಗ್ಗೇಜು ಅಲ್ಲೇ ಇತ್ತು! ನಿಜಕ್ಕೂ ಆ ಹುಡುಗ ಇನ್ನೂ ಮುಂದಿನ ಊರಿಗೆ ಹೋಗುವವನೇ! ಕಿಟಕಿಯಿಂದ ದಿಟ್ಟಿಸಿದೆ. ದೂರದಲ್ಲಿ ದೀಪಗಳು ಕಾಣಲಾರಂಭಿಸಿದವು. ಸಾಕಷ್ಟು ದೊಡ್ಡ ದೊಡ್ಡ ದೀಪಗಳೇ. ಹೆಚ್ಚು ಹೆಚ್ಚು ದೀಪಗಳೇ. ಆಹಾ, ಇದೊಂದು ದೊಡ್ಡ ಊರು. 3 ಗಂಟೆಗೆ ಬರುವುದು ಕಾನ್ಪುರ. ಹಾಗಾದರೆ ಇದೇ ಕಾನ್ಪುರ ಎಂದು ಇಳಿಯಲು ಸಿದ್ಧನಾದೆ. ಹೌದು, ಅದು ಕಾನ್‍ಪೂರ್ ಸ್ಟೇಷನ್. ಇಳಿದು ಅಲ್ಲಿಯೇ ಇದ್ದ ಬೆಂಚೊಂದರ ಮೇಲೆ ಕುಳಿತೆ ಕಾಲುಗಳ ನಡುವೆ ಲಗ್ಗೇಜುಗಳನ್ನು ಇಟ್ಟುಕೊಂಡು ಹಾಗೆಯೇ ನಿದ್ರಿಸಿಬಿಟ್ಟೆ. ಸುಮಾರು ಐದೂವರೆ ಹೊತ್ತಿಗೆ ಕಣ್ಬಿಟ್ಟೆ. ಬೆಳಕು ಬಂದಿತ್ತು. ಹೊರಗೆ ಬಂದೆ. ಒಬ್ಬ ಮುದುಕ ಸೈಕಲ್ ರಿಕ್ಷಾ ಮೇಲೆ ಕುಳಿತಿದ್ದವನು ಎಲ್ಲಿಗೆ ಹೋಗ್ಬೇಕು ಸಾಬ್? ಎಂದ. ಯಾವ್ದಾದ್ರೂ ಹೊಟ...

ಯತಿ ಸ್ವಂತೀ -233

21-08-2018 ಆ ಲಾರಿ ಕೂಡ ಕೇವಲ ಅತ್ತಿಬೆಲೆವರೆಗೆ ಹೋಗುತ್ತಿತ್ತು. ಅಲ್ಲಿ ಇಳಿದು ಸಿಟಿ ಮಾರ್ಕೆಟ್ ಹೋಗುವ ಬಸ್ ಹತ್ತಿ ಮಾರ್ಕೆಟ್ ತಲುಪಿ, ಅಲ್ಲಿಂದ ಜಯನಗರಕ್ಕೆ ಹೋಗುವ ಬಸ್ ಹತ್ತಿ... ಉಫ್! ಎಂತಹ ವಿಶಿಷ್ಟ ಅನಗತ್ಯ ಪ್ರಯಾಣ! ಯಾಕೆ? ಯಾರೋ ಕಿಡಿಗೇಡಿಗಳು ನಮ್ಮ ಖ್ಯಾತ ನಟನನ್ನ ನಡೆಸಿಕೊಂಡ ರೀತಿ. ಪಾಪ... ಆ ನಟರು ಕೂಡ ಈ ರೀತಿ ಪಾಡು ಪಟ್ಟ ಅನೇಕಾನೇಕ ಪಯಣಿಗರ ಬಗೆಗೆ ತಿಳಿದು ನೊಂದುಕೊಂಡಿದ್ದಾರು. ಇನ್ನೂ ಅನೇಕ ಸಲ ನಾನು ಮದ್ರಾಸಿಗೆ ಹೋಗಿದ್ದುಂಟು.  ಹಿಂದೊಮ್ಮೆ ಓದಿ ಕಲಿತಿದ್ದ ತಮಿಳು ಅಕ್ಷರಗಳು ಈಗೆಲ್ಲಾ ಅಲ್ಲಿ ಕೆಲಸಕ್ಕೆ ಬಂದಿದ್ದವು. ಈಗ ಪ್ರಸ್ತುತಕ್ಕೆ ಹಿಂದಿರುಗೋಣ. ಸಾರನಾಥಕ್ಕೆ ನನ್ನೊಂದಿಗೆ ಹೊರಟ ಯುವಕನ ಹೆಸರು ಸುಭಾಷ್ ಕುಮಾರ್ ಶರ್ಮ. ಅವನು ಇಂದೋರ್ ಅಥವಾ ಭೋಪಾಲದವನು. ಈಗ ಸರಿಯಾಗಿ ನೆನಪಿಲ್ಲ. ನನಗೆ ಮದುವೆ ಆಗಿ ಎರಡು ತಿಂಗಳುಗಳಾಗಿದ್ದವು. ಅವನಿಗೆ ಇನ್ನೆರಡು ತಿಂಗಳುಗಳಿಗೆ ಮದುವೆಯಾಗಲಿತ್ತು. ಸಾರನಾಥದಲ್ಲಿ ಭಗವಾನ್ ಬುದ್ಧನ ಸ್ತೂಪವಿದೆ. ಅದನ್ನು ನೋಡಿ, ಬಾಯಿ ತುಂಬಾ ಹರಟುತ್ತಾ ಕಾಲ ಕಳೆದೆವು. ಭಾಷೆ ಇಂಗ್ಲೀಷ್ ಮತ್ತು ಹಿಂದೀ.  ಒಬ್ಬರ ಪಟ ಮತ್ತೊಬ್ಬರು ತೆಗೆದೆವು. ಆತನ ಬಳಿ ಕ್ಯಾಮೆರಾ ಇತ್ತು. ಆತ ತೆಗೆದ ಹಣೆಗೆ ಕುಂಕುಮ ಹಚ್ಚಿಕೊಂಡ  ನನ್ನ ಪಟವೊಂದು ಆ ಪಯಣದ ನೆನಪು ಕೊಡುತ್ತದೆ. ಬಹುಶಃ ಅವನ ಮದುವೆ ಆಮಂತ್ರಣ ಪತ್ರಿಕೆ ಬರುವವರೆಗೂ ನಾವು ಪರಸ್ಪರ ಪತ್ರ ವ್ಯವಹಾರ ನಡೆಸಿದೆವೆಂದು ನೆನ...

ಯತಿ ಸ್ವಂತೀ -232

20-08-2018 “ಛೇ... ಈವತ್ತು ಏನು ಮಾಡೋದೂ ಅಂತಾನೇ ತೋಚ್ತಿಲ್ಲ!” ಎಂದ ಅಲ್ಲಿದ್ದ ಸೌಮ್ಯಮುಖದ ಯುವಕ.  ನಾನೂ ಅದನ್ನೇ ಹೇಳಿದೆ. ಆ ರೌಡಿಯಂತಿದ್ದ ಯುವಕ, “ಅದಕ್ಯಾಕೆ ಅಷ್ಟು ಆಲೋಚನೆ ಮಾಡ್ತೀರಿ? ಹತ್ತಿರದಲ್ಲೇ ಸಾರನಾಥ್ ಇದೆ. ಅಲ್ಲಿಗೆ ಹೋಗಿ ಬನ್ನಿ” ಎಂದ. ಹಾಗೆ ನೋಡಿ, ನನಗೆ ಗುರುತೂ ಪರಿಚಯ ಏನೂ ಇಲ್ಲದ ಒಬ್ಬ ಯುವಕನೊಂದಿಗೆ ಎರಡನೇ ಸಲ ನಾನು ಟೂರ್ ಹೊರಟದ್ದು! ಹಿಂದೊಮ್ಮೆ ನಾನು ಈ ರೀತಿ ಮಾಡಿದ್ದುಂಟು. ನಾನು ಒಮ್ಮೆ ಚೆನ್ನೈಗೆ ಹೊರಟೆ. ಚೆನ್ನೈ ಎಂದರೆ ಬಸ್ಸೇ ಗತಿ ಆಗೆಲ್ಲ. ಹೆಚ್ಚು ರೈಲುಗಳು ಇರಲಿಲ್ಲ. ಅದೂ ಅಲ್ಲದೆ ನಮಗೆ ಚೆನ್ನೈಗೆ ಹೋಗೆಂದು ಹೇಳುತ್ತಿದ್ದುದು ಅತ್ಯಂತ ಕೊನೆಯ ಕ್ಷಣಗಳಲ್ಲಿ.  ‘ಯತಿರಾಜ್, ನೀನ್ಯಾಕೆ ಈವತ್ತು ರಾತ್ರಿ ಚೆನ್ನೈಗೆ ಹೋಗಿ, ನಾಳೆ ಕೆಲಸ ಮುಗಿಸಿ, ನಾಡಿದ್ದು ಬಂದುಬಿಡಿ. ಹೇಗೂ ರಜಾ ಇದೆ’ ಎಂದಿದ್ದರು ಬಾಸ್. ಹಾಗೆ ಹೊರಟಿದ್ದೆ ಆ ಸಲ. ಪಕ್ಕದಲ್ಲಿ ಕುಳಿತ ಯುವಕ ನನಗಿಂತ ಒಂದೆರಡು ವರ್ಷ ಕಿರಿಯನಿರಬಹುದು. ಹೀಗೇ ಮಾತುಕತೆ ಆಡುವುದು ನನ್ನ ಜಾಯಮಾನ ಆಗೆಲ್ಲಾ. ಈಗ ಸಾಮಾನ್ಯವಾಗಿ ಪಕ್ಕದವರು ಮಾತಾಡಿಸಿದರೆ ಮಾತಾಡುತ್ತೇನೆ ಅಷ್ಟೇ. ಹ್ಞಾಂ ಅಂದು ಸಿಕ್ಕ ಯುವಕ ಕೂಡ ಕೇವಲ ಒಂದು ದಿನದ ಕೆಲಸಕ್ಕೆ ಚೆನ್ನೈಗೆ ಹೊರಟಿದ್ದ. ಮದ್ರಾಸು ತಲುಪಿ ಒಂದೇ ರೂಮು ಮಾಡಿದೆವು. ಹೇಗೂ ನಿದ್ದೆ ಸಮಯ ಮೀರಿತ್ತು. ಬೆಳಕು ಹರಿದಿತ್ತು. ನಮ್ಮ ನಮ್ಮ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ನಮ್ಮ  ನಮ್ಮ ಕೆ...

ಯತಿ ಸ್ವಂತೀ -231

19-08-2018 ಈ ಅಡುಗೆಯಾಳಿನಲ್ಲಿ ಒಂದು ವಿಶೇಷ ಕಂಡೆ. ನಾವು ರೋಟಿ ತಿನ್ನುತ್ತಿರುವವರೆಗೂ ತವಾ ಮೇಲೆ ತಟ್ಟುತ್ತಲೇ ಇದ್ದರು. ನಾವು ಅಲ್ಲಿದ್ದ ಬ್ರೆಡ್, ಬೆಣ್ಣೆಗೆ ಕೈ ಹಾಕಿದೊಡನೆ ರೋಟಿ ಮಾಡುವುದನ್ನು ನಿಲ್ಲಿಸಿಬಿಟ್ಟರು. ನೀಟಾದ ಡ್ರೆಸ್‍ನೊಂದಿಗೆ ಹೊರಗೆ ಬಂದೆ. ಕಾಲುಗಳು ಧಸಕ್ಕೆಂದು ಅಲ್ಲಿನ ಲೂಸ್ ಮಣ್ಣಿನಲ್ಲಿ ಹೂತುಕೊಂಡವು. ನನ್ನ ಪ್ಯಾಂಟ್, ಶೂ ಎಲ್ಲವೂ ಧೂಳುಮಯವಾದವು. ಅಲ್ಲಿನವರಿಗೆ ಧೂಳಿಗಾಗಿ ವಿಶೇಷ ಭತ್ಯೆ ಕೊಡುವರೆಂದು ನಂತರ ಅರಿತೆ. ಅಷ್ಟು ಧೂಳು ಅಲ್ಲಿ! ನಾನು ಸ್ಟಡೀ ಮಾಡಬೇಕಾದ ಸಿಂಖ್ರೋನಸ್ ಮೋಟರ್ ಬಳಿ ಹೋದೆ. ಅದರ ಕೆಲಸವನ್ನು ನೋಡುತ್ತಿದ್ದೆ. ಅದರ ಮೇಲೆ ಹಾಕಿದ್ದ ನೇಂ ಪ್ಲೇಟ್ ಓದಿ ಆ ವಿವರ ಬರೆದುಕೊಂಡೆ. ನಂತರ ಅವರ ಡಿಸೈನ್ ಆಫೀಸಿಗೆ ಹೋಗಿ ಆ ಮೋಟರಿನ ವಿವರವನ್ನು ತಿಳಿದುಕೊಂಡೆ.  ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ ಪಟ ತೆಗೆದುಕೊಳ್ಳಲು!  ಇಂಗ್ಳೆ ನನ್ನನ್ನು ಅಲ್ಲೇ ಬಿಟ್ಟು ಅವನ ಮುಂದಿನ ಕೆಲಸಕ್ಕೆ ಹೊರಟುಹೋದ. ಮೂರುದಿನಗಳಿದ್ದು ಅಲ್ಲಿಂದ ನಾನು ಲಕ್ನೋ, ಕಾನ್ಪುರಗಳಿಗೆ ಹೋಗಬೇಕಿತ್ತು. ಅಲ್ಲಿಂದ ನನಗೆ ನೇರವಾದ ರೈಲುಗಾಡಿ ಇರುವ ವಿಷಯ ತಿಳಿದಿರಲಿಲ್ಲ. ನಮ್ಮ ದೊಡ್ಡ ಬಾಸ್ ಒಬ್ಬರು ಮೋಟರ್ಸ್ ಡಿಪಾರ್ಟ್‍ಮೆಂಟ್ ಛೀಫ್ ವಾರಾಣಸಿಗೆ ಹೋಗುವವರಿದ್ದರು. ಜೊತೆಗೆ ಆ ಸತ್ನಾದ ನನ್ನ ‘ಹಳೆ ಸಹೋದ್ಯೋಗಿ, ಹೊಸ ಗೆಳೆಯ’ ಕೂಡ ಇದ್ದ.  ಸರಿ, ಮೂವರೂ ಒಂದು ಕಪ್ಪುಬಣ್ಣದ ಕಾರಿನಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಹೊರಟೆವು....

ಯತಿ ಸ್ವಂತೀ -230

18-08-2018  ಸಿಂಗ್ರೌಲಿ ಕೋಲ್ ಮೈನ್ಸ್ ನನಗೆ ದಿಗ್ಭ್ರಮೆ ಹುಟ್ಟಿಸಿತು. ಎಲ್ಲೆಲ್ಲೂ ಬೆಟ್ಟಗಳು. ಕೆಲವು ದೇವ ನಿರ್ಮಿತ. ಕೆಲವು ಮಾನವ ನಿರ್ಮಿತ. ಅಚ್ಚರಿಯಲ್ಲವೇ?  ಕಲ್ಲಿದ್ದಲು ಇಲ್ಲಿ ನೆಲದ ಮೇಲೆ ಸಿಗುತ್ತದೆ. ಅದನ್ನು ಪಡೆಯಲು ದೊಡ್ಡ ದೊಡ್ಡ ಬೆಟ್ಟಗಳನ್ನು ಉರುಳಿಸಬೇಕು. ಅದನ್ನು ಉರುಳಿಸಲು ಡ್ರ್ಯಾಗ್‍ಲೈನ್ ಎನ್ನುವ ದೊಡ್ಡ ಸರ್ವತೋಮುಖವಾಗಿ ಚಲಿಸುವ ಯಂತ್ರದ ಸಹಾಯ ಪಡೆಯುತ್ತಾರೆ. ದೊಡ್ಡ ಕ್ರೇನ್‍ನ ತುದಿಯಲ್ಲಿ ಬಾಚಿಹಲ್ಲನ್ನು ಹೊಂದಿ ಅದಕ್ಕೆ ಹೊಂದಿಕೊಂಡಂತೆ ಒಂದು ‘ಪಾತ್ರೆ’ ಹೊಂದಿರುವ ಈ ಡ್ರ್ಯಾಗ್‍ಲೈನ್, ಬೆಟ್ಟವನ್ನು ಸ್ವಲ್ಪ ಸ್ವಲ್ಪವಾಗಿ ತನ್ನ ಹಲ್ಲಲ್ಲಿ ಕೆತ್ತಿ, ತನ್ನ ಪಾತ್ರೆಯಲ್ಲಿ ತುಂಬಿಕೊಂಡು ಮತ್ತೊಂದು ಕಡೆ ಸುರಿಯುತ್ತದೆ. ಹಾಗೆ ಸುರಿದೂ ಸುರಿದೂ ಒಂದು ಬೆಟ್ಟವೇ ನಿರ್ಮಾಣವಾಗುತ್ತದೆ. ಆಯಿತಲ್ಲ, ದೇವಬೆಟ್ಟ ಈಗ ಮಾನವಬೆಟ್ಟ! ಆ ದೇವ ನಿರ್ಮಿತ ಬೆಟ್ಟದಡಿಯಲ್ಲಿ ಹಾಯಾಗಿ ಶ್ರೀಮನ್ನಾರಾಯಣನಂತೆ ಮಲಗಿರುತ್ತದೆ ಕಲ್ಲಿದ್ದಲ ಹಾಸು. ಅದನ್ನು ಮತ್ತೆ ಬುಡಸಹಿತ ಎತ್ತುತ್ತದೆ ಡ್ರ್ಯಾಗ್‍ಲೈನ್. ಇದರ ಸಾಮರ್ಥ್ಯ ವಿಪರೀತ ಹೆಚ್ಚು. ಆ ಕಲ್ಲಿದ್ದಲನ್ನು ಅಲ್ಲಿಯೇ ಹತ್ತಿರದಲ್ಲಿರುವ ರೈಲಿನ ಕಂಬಿಯ ಮೇಲೆ ನಿಂತ ಗೂಡ್ಸ್‍ರೈಲಿನ ವ್ಯಾಗನ್ನುಗಳಿಗೆ ತುಂಬುತ್ತದೆ. ನಂತರ ಆ ರೈಲು ಕೂ ಝಗ್ ಝಗ್ ಎನ್ನುತ್ತಾ ಹತ್ತಿರದ ಪವರ್ ಸ್ಟೇಷನ್ ತಲುಪುತ್ತದೆ. ಅಲ್ಲಿ ಅದನ್ನು ಇಳಿಸಿ, ಮತ್ತೆ ಖಾಲಿ ರೈಲು ಇಲ್ಲಿ ಬಂದು ನಿಲ್ಲುತ್ತದೆ. ಆಗ ನ...

ಯತಿ ಸ್ವಂತೀ -229

17-08-2018 ಮಕ್ಕೀ ಕಾ ಮಕ್ಕೀ ಅನುವಾದ ಇಲ್ಲದಿದ್ದಾಗ ನನಗೆ ಕೆಲವು ತೆಲುಗು ಪದಗಳು ಅರ್ಥ ಆಗುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಕಕ್ಕಾಬಿಕ್ಕಿ ಆಗುತ್ತಿದ್ದೆ. ಆಗೆಲ್ಲಾ ಆನ್‍ಲೈನ್ ಡಿಕ್ಷನರಿ ಎಂದರೇನೆಂದು ಯಾರಿಗೂ ತಿಳಿಯದ ಸಮಯ. ಅವು ಅಸ್ತಿತ್ವದಲ್ಲೇ ಇರಲಿಲ್ಲವಲ್ಲ! ಒಂದು ಒಳ್ಳೆಯ ಶಬ್ದಕೋಶ ತೆಲುಗು – ಇಂಗ್ಲೀಷ್ ಕೊಳ್ಳಬೇಕೆಂದುಕೊಂಡೆ. ಆದರೂ ಹೆಚ್ಚು ಕಡಿಮೆ ಅರ್ಥ ಆಗುತ್ತಿತ್ತು. ಎಲ್ಲಿದ್ದೆ? ಹ್ಞಾಂ... ಸತ್ನಾದಲ್ಲಿ ಹೊಟೇಲ್ ನಟರಾಜ್ ರೂಮಲ್ಲಿ ಕೂತು ಯಾವುದೋ ಕಾದಂಬರಿ (ತೆಲುಗು) ಓದುತ್ತಾ ಕೂತಿದ್ದೆ. ಆಗ ಕೇಳಿಸಿತ್ತು ಕೆಳಗೆ (ನನ್ನದು ಮೊದಲ ಮಹಡಿ)... ‘ಯಾರಾದರೂ ಕಿರ್ಲೋಸ್ಕರ್‍ನವರು ಇಲ್ಲಿ ಇದ್ದಾರಾ?’ ಎಂಬ ಆಂಗ್ಲ ಭಾಷೆಯ ಮಾತು. ಧ್ವನಿ ಬಹಳವೇ ಚಿರಪರಿಚಿತ. ಬೇಸರವೆಂಬ, ಒಂಟಿತನವೆಂಬ ಸಮುದ್ರದಲ್ಲಿ ಮುಳುಗಿರುತ್ತಿದ್ದ ಈ ಸಮಯದಲ್ಲಿ ಈ ಪರಿಚಿತ ಧ್ವನಿಯ ಹುಲ್ಲುಕಡ್ಡಿ! ಅಬ್ಬಾ... ಹೇ ಒಂದು ನಿಮಿಷ... ಈ ಮನುಷ್ಯನನ್ನು ಕಂಡರೆ ನಿನಗಾಗುತ್ತಿರಲಿಲ್ಲವಲ್ಲ? ಅರೆ ಹೌದು, ಇವನ ತಲೆ ಕಂಡರೆ ಯಾಕೋ ಬೇಸರವಿತ್ತು ಬೆಂಗಳೂರಿನಲ್ಲಿ. ಆದರೆ ಈಗ... ಈತನೇ ನನ್ನ ಅತ್ಯಂತ ಪರಮಾಪ್ತ  ಗೆಳೆಯನಂತೆ ತೋರಿದ. ನಿಜವೇನು ಗೊತ್ತೇ? ಬಹಳ ಜನರನ್ನು ನಾವು ತಪ್ಪಂದಾಜು ಮಾಡ್ತೇವೆ. ಅವರೊಂದಿಗೆ ನಾವು ನೇರವಾಗಿ ಮಾತೇ ಆಡಿರುವುದಿಲ್ಲ. ಅವರ ಬಗ್ಗೆ ನಮ್ಮದೇ ಆದ ಒಂದು ಪೂರ್ವಗ್ರಹ ಅಂದಾಜು ಮಾಡಿಬಿಟ್ಟಿರುತ್ತೇವೆ. ಈಗ ವಿಷಯಕ್ಕೆ ಬಂದರೆ... ಪುಸ್ತಕವನ್ನು...

ಯತಿ ಸ್ವಂತೀ -228

16-08-2018 ಅಕ್ಷರಾಭ್ಯಾಸ ಮಾಡುತ್ತಿದ್ದಾಗ ನಾವಿದ್ದುದು ಜಯನಗರ ಟಿ ಬ್ಲಾಕ್‍ನ ಹದಿಮೂರನೇ ಮುಖ್ಯರಸ್ತೆಯ ಔಟ್‍ಹೌಸಿನಲ್ಲಿ. ಒಂದು ಫೋಲ್ಡಿಂಗ್ ಟೇಬಲ್ ಹರಡಿಕೊಂಡು ಒಂದೊಂದೇ ತೆಲುಗು ಅಕ್ಷರವನ್ನು ಕಲಿಯಲಾರಂಭಿಸಿದೆ. ಹಿಂದೆ ಮೈಸೂರಿನಲ್ಲಿದ್ದಾಗ ತಮಿಳಿನ ಒಂದನೇ ತರಗತಿ ಪಠ್ಯಪುಸ್ತಕ ಹಿಡಿದು ಹೀಗೇ ತಮಿಳು ಅಕ್ಷರಗಳನ್ನು ಕಲಿತಿದ್ದ ನೆನಪು ಬಂದಿತ್ತು. ಅಂತೂ 60 ದಿನಗಳಲ್ಲಿ ತೆಲುಗಿನ ಅಕ್ಷರಗಳನ್ನು ಕಲಿತಾಗಿತ್ತು. ಇನ್ನೂ ಶಬ್ದಕೋಶ ಕೊಂಡಿರಲಿಲ್ಲ. ಬಳೇಪೇಟೆ ಬುಕ್‍ಹೌಸ್ ಇತ್ತು ಕಿಲಾರಿ ರಸ್ತೆಯಲ್ಲಿ. ಅಲ್ಲಿ ಹೋಗಿ ಯಂಡಮೂರಿ, ಮಲ್ಲಾದಿ ಇವರಿಬ್ಬರ ಅನೇಕ ಹಳೆಯ ಕಾದಂಬರಿಗಳನ್ನು ಕೊಂಡು ತಂದೆ. ಜೊತೆಗೆ ಅವುಗಳ ಕನ್ನಡ ಅನುವಾದಗಳನ್ನೂ ಕೊಂಡೆ. ಯಾವ ಮಟ್ಟದಲ್ಲಿ ಆಗ ಯಂಡಮೂರಿಯವರ ಪುಸ್ತಕಗಳು ಕನ್ನಡಕ್ಕೆ ಬಂದುವೆಂದರೆ, ಅವರ ಒಂದೆರಡು ನಾಟಕಗಳೂ ಕಾದಂಬರಿ ರೂಪದಲ್ಲಿ ಕನ್ನಡದಲ್ಲಿ ಬಂದವು. ಇದನ್ನು ಓದಿದವರು ಯಂಡಮೂರಿಯವರ ಬರವಣಿಗೆಯ ಅಭಿಮಾನಿಗಳಾದರೆ ಕಂಡು ಹಿಡಿಯಿರಿ ನೋಡೋಣ! ನನ್ನ ಪುಸ್ತಕ ಕೊಂಡಾಟ ಶುರುವಾಗಿದ್ದು ಬಹಳ ಹಿಂದೆ. ನನ್ನ ಮೊದಲ ವರ್ಷ ಇಂಜಿನಿಯರಿಂಗ್‍ನಲ್ಲಿ, 1974ರಲ್ಲಿ. ನನ್ನ ಗೆಳೆಯ ಪ್ರಸನ್ನ (ಅವನಿಗೆ ಅಡ್ಡ ಹೆಸರು  ಗಾಂಧಿ!) ಅವನ ಬಳಿ ಮೈಸೂರಿನ ಗೀತಾ ಬುಕ್ ಹೌಸ್‍ನ ನೂರು ರೂಪಾಯಿಗಳ ವೌಚರ್ ಇದೆ ಎಂದ, ಬೇಕಾ ಎಂದ. ಖುಷಿಯಾಗಿ ಅದನ್ನು ಪಡೆದು ಗೀತಾ ಬುಕ್ ಹೌಸ್‍ಗೆ ಹೋದೆ. ಕೆ.ಆರ್. ಸರ್ಕಲ್ಲಿನಲ್ಲಿದೆ ಅದು. ಯ...

ಯತಿ ಸ್ವಂತೀ -227

15-08-2018 ನಮ್ಮಲ್ಲಿ ಅನೇಕ ಊಹೋಪೋಹಗಳಿರುತ್ತವೆ. ಉದಾಹರಣೆಗೆ ಒಬ್ಬ ಮನುಷ್ಯನನ್ನು ಕೇವಲ ದೂರದಿಂದ ಪರಿಶೀಲಿಸಿದಾಗ, ಅವನ ಮಾತುಗಳನ್ನು ಕೇಳಿಸಿಕೊಂಡಾಗ, ಇವನು ಹೀಗೇ ಎಂಬ ನ್ಯಾಯತೀರ್ಮಾನ ನಾವೇ ಅವನ ಬಗೆಗೆ ಮಾಡಿಕೊಂಡುಬಿಡುತ್ತೇವೆ. ಇದು ನಮ್ಮನ್ನು ಕೆಲವೊಮ್ಮೆ ತಪ್ಪುಹಾದಿಯಲ್ಲಿ ನಡೆಸುವುದುಂಟು. ಉದಾಹರಣೆಗೆ 1987ರ ನನ್ನ ಸತ್ನಾ ಪ್ರವಾಸವನ್ನೇ ತೆಗೆದುಕೊಳ್ಳೋಣ. ಹೊಟೇಲ್ ನಟರಾಜ್‍ನಲ್ಲಿ ಇಳಿದೆ. ರವಿ ಇಂಗ್ಳೆ ಪತ್ತೆಯೇ ಇರಲಿಲ್ಲ. ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ! ಆತನ ಕರೆಗೆ ನಾನು ಕಾಯುತ್ತಾ ಇದ್ದೆ. ಬೇಕಾದಷ್ಟು ತೆಲುಗು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದೆ. ಹ್ಞಾಂ... 1985ರ ಕೊನೆಯ ಹೊತ್ತಿಗೆ ನಾನು ಅಷ್ಟಾವಕ್ರ ಎನ್ನುವ ಕಾದಂಬರಿ ಓದಿದೆ. ಅದಕ್ಕೆ ಮುಂಚೆ ನನ್ನ ಅಮ್ಮ ಪ್ರಜಾಮತ ವಾರಪತ್ರಿಕೆಯಲ್ಲಿ ತುಳಸೀದಳ, ತುಳಸಿ ಓದುತ್ತಿದ್ದರೆಂದು ನೆನಪು. ಯಾರಮ್ಮಾ ಇದು ಯಂಡಮೂರಿ ವೀರೇಂದ್ರನಾಥ್ ಅಂದ್ರೆ ಅಂದಿದ್ದೆ. ಬಹಳ ಚೆನ್ನಾಗಿ ಬರೀತಾರೆ ಕಣೋ ಅಂದಿದ್ದರು ಅಮ್ಮ. ಆಗೆಲ್ಲಾ ಟಿ.ಕೆ. ರಾಮರಾವ್, ಅಶ್ವಿನಿ, ಉಷಾ ನವರತ್ನರಾಮ್ ಮುಂತಾದ ಜನಪ್ರಿಯ ಕನ್ನಡ ಲೇಖಕರ ಕಾದಂಬರಿಗಳನ್ನು ಮಾತ್ರ ಓದುತ್ತಿದ್ದ ಕಾಲ. ‘ಛೇ ಆ ಕಾದ್ರಾ ಈ ವಾರ ತುಳಸೀಗೆ ಏನು ಹಿಂಸೆ ಮಾಡ್ತಾನೋ!’ ಎಂದು ಉದ್ಗರಿಸುತ್ತಿದ್ದರು ನನ್ನ ಅಮ್ಮ. ಅಬ್ಬಾ... ಇಷ್ಟೊಂದು ಪ್ರಭಾವ ಅಮ್ಮನ ಮೇಲೆ ತೋರಿಸಬೇಕಾದರೆ ನಿಜಕ್ಕೂ ಬಹಳ ಪವರ್‍ಫುಲ್ ರೈಟರ್ ಎಂದು ಮಾತ...

ಯತಿ ಸ್ವಂತೀ -226

14-08-2018 ಒಂದು ರೀತಿಯ ಒಣಹಮ್ಮು ನನ್ನೊಳಗೆ ಮನೆ ಮಾಡಿತ್ತು. ನಾನೇನಾದರೂ ಮಾಡಬಲ್ಲೆ ಎನ್ನುವ ಕೊಬ್ಬು ಅದು. ಡಿಸೈನ್ ಡಿಪಾರ್ಟ್‍ಮೆಂಟಿನಲ್ಲಿ ಜಿ.ಎಂ.ರಿಂದ ಹಿಡಿದು ಎಲ್ಲರೊಂದಿಗೂ ಗೌರವ ಮತ್ತು ಪ್ರೀತಿಯಿಂದ ವಿನಂತಿಸಿಕೊಳ್ಳುವಂತೆ ಮಾತಾಡುತ್ತಿದ್ದೆ. ನನಗೆ ಬಲಗಣ್ಣು ಎಡಗಣ್ಣು ಆಗಿದ್ದರು ಜಿನಿ ಮತ್ತು ರಾಮ. ಜೆಟಿ ಅವರು ನನ್ನನ್ನು ಮೆಲ್ಲನೆ ಕೇಳಿದರು “ನೀವಿಲ್ಲಿ ಮೂರು ವರ್ಷದ ಮೇಲ್ಪಟ್ಟು ಇದ್ದೀರಿ ಅಲ್ವಾ? ಎಲ್ಲರ ಸ್ವಭಾವದ ಬಗೆಗೆ ಹೇಳಿ.” ಆಗ ನಾನು ಎಚ್ಚೆತ್ತುಕೊಳ್ಳಬೇಕಿತ್ತು. ನನಗೆ ಯಾವ ಅಧಿಕಾರವಿತ್ತು ಇತರರ ಬಗೆಗೆ ಮಾತನಾಡೋಕ್ಕೆ? ಆದರೆ ಊಹೂಂ. ಆ ಧಿಮಾಕು ಕೆಲಸ ಮಾಡಿತು. ಅವರು ಹೀಗೆ, ಇವರು ಹಾಗೆ ಎಂದು ಇದ್ದದ್ದು ಇದ್ದಂಗೆ ಹೇಳಿದೆ. ಎದೆಯ ಮೇಲೆ ಯಾರೂ ಎದ್ಬಂದು ಒದೆಯಬಾರದಲ್ವಾ? ನನಗೆ ಬೇಕಾದವರೊಬ್ಬರು ಬೇರೆ ಡಿಪಾರ್ಟ್‍ಮೆಂಟಿಗೆ ಕಳಿಸಲ್ಪಟ್ಟಿದ್ದರು. ಅವರ ಜಾಗಕ್ಕೆ ಬಂದವರನ್ನು ಅವರ ಸಹೋದ್ಯೋಗಿಗಳ ಎದುರಿಗೆ ಕ್ಯಾಂಟೀನಿನಲ್ಲಿ ಅವಮಾನ ಮಾಡಿದ (ಅಪ)ಕೀರ್ತಿಯೂ ನನ್ನ ತಲೆಯ ಮೇಲಿತ್ತು. ಆ ಮನುಷ್ಯ ಹೇಳಿದ್ದರು. ನಿನಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ ಅಂತ.  ಈಗ ನನ್ನ ತಲೆ ಕೆಲಸ ಮಾಡಿತ್ತು. ಆ ಮನುಷ್ಯನಿಗಿಂತ ಹಿಂದೆ ಇದ್ದವರೇ ವಾಸಿ ಎಂದುಬಿಟ್ಟೆ. ನಂಬಿ, ಬಿಡಿ, ಆ ವರ್ಗಾವಣೆ ಆಗಿಬಿಟ್ಟಿತು! ಮತ್ತೊಬ್ಬ ಯುವಕ ಬೇರೆ ಡಿಪಾರ್ಟ್‍ಮೆಂಟಿನಿಂದ ಅಕೌಂಟ್ಸ್‍ಗೆ ಬಂದ. ಅವನೊಬ್ಬ ಜಗಳಗಂಟ ಎಂದು (ಕು)ಪ್ರಸಿದ್ಧನಾಗಿದ್ದ. ಅಯ್ಯೋ ನಮ್ಮ...

ಯತಿ ಸ್ವಂತೀ -225

13-08-2018 ವೃತ್ತಿ ಜೀವನ ಅದರ ಪಾಡಿಗೆ ಸಾಗುತ್ತಿತ್ತು. ನನ್ನ ಬಾಸ್ ಜೆಟಿ ಅವರ ಮಾತುಕತೆ ಅವರ ಚೇಂಬರ್‍ನಲ್ಲಿ ಮುಂದುವರೆದಿತ್ತು. ಅವರ ಚೇಂಬರ್ ಎದುರಿಗೆ ಎರಡು ಸಾಲು ಟೇಬಲ್ಲುಗಳು. ಅವರ ಟೇಬಲ್‍ಗೆ ಒಂದು ಕರೆಗಂಟೆ ಇತ್ತು. ಅದನ್ನೊಮ್ಮೆ ಒತ್ತಿ ಕಿರ್ರ್ ಎನ್ನಿಸಿ ಗಾಜಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದರು. ಅವರಾರನ್ನು ನೋಡುತ್ತಿರುವರೋ ಆ ವ್ಯಕ್ತಿ ಅವರ ಬಳಿಗೆ ಹೋಗಬೇಕು. ಇಂಟರ್‍ಕಾಮ್ ನಮ್ಮೆಲ್ಲರ ಟೇಬಲ್ ಮೇಲಿತ್ತು. ಜೊತೆಗೆ ಮಾರ್ಕೆಟಿಂಗ್ ಕಟ್ಟಡಕ್ಕೆ ಒಂದು ಟೆಲಿಫೋನ್ ಎಕ್ಸ್ ಚೇಂಜ್ ಇತ್ತು. ನಾವು ನಮ್ಮ ಟೇಬಲ್ ಮೇಲಿನ ರಿಸೀವರ್ ಎತ್ತಿದೊಡನೆ ಕೆಳಗಿನ ಫ್ಲೋರ್‍ನಲ್ಲಿದ್ದ ಮೇಡಂ ಒಬ್ಬರು ‘ನಂಬರ್ ಹೇಳ್ರೀ’ ಅನ್ನುತ್ತಿದ್ದರು. ನಾವು ನಂಬರ್ ಕೊಟ್ಟು ಫೋನಿಟ್ಟುಬಿಡಬೇಕು. ಕೆಲವು ಸಮಯದ ನಂತರ ನಮ್ಮ ಟೇಬಲ್ ಮೇಲಿನ ಟೆಲಿಫೋನ್ ರಿಂಗ್ ಆಗುತ್ತಿತ್ತು. ಅವರು ಕನೆಕ್ಟ್ ಮಾಡಿದ್ದಾರೆ ಎಂದರ್ಥ. ಅಥವಾ ಹೊರಗಿನಿಂದ ನಮಗೆ ಕರೆ! ಒಮ್ಮೊಮ್ಮೆ ಆ ಮೇಡಂ ಫೋನೆತ್ತಿದೊಡನೆ ‘ಲೈನ್ಸ್ ಇಲ್ಲಾರೀ’ ಎಂದು ಫೋನ್ ಕುಕ್ಕುತ್ತಿದ್ದರು. ನಮಗೆ ಮೈ ಉರಿದುಹೋಗುತ್ತಿತ್ತು. ಅವರ ಮಜಬೂರಿ ಏನೆಂದು ನಮಗೇನು ಗೊತ್ತಿರುತ್ತೆ?  ನಮ್ಮ ಮರಿ ಬಾಸ್ ‘ಛೇ ಈ ಮೇಡಂನ ಕಟ್ಕೊಂಡು ಸಾಕಾಗಿದೆ!’ ಎಂದು ಉದ್ಗರಿಸಿದರು ಒಮ್ಮೆ. ಏಕೆಂದರೆ ಆಕೆ ಬಹಳ ಸಲ ಕೇಳಿದರೂ ಹೊರಗಿನ ಒಂದು ನಂಬರ್‍ಗೆ ಕನೆಕ್ಟ್ ಮಾಡಿರಲಿಲ್ಲ. ‘ನೀವ್ಯಾಕೆ ಕಟ್ಕೋತೀರಿ ಸಾರ್, ಅವರ ಗಂಡ ಕಟ್ಕೊ...

ಯತಿ ಸ್ವಂತೀ -224

12-08-2018 ನನ್ನ ಗೆಳೆಯರು ಮಹಾ ತರಲೆಗಳು. ಉಷಾಳನ್ನು ಛತ್ರದ ಬಾಗಿಲಿಗೆ ಕರೆಸಿದರು. ತಮ್ಮನ್ನು ತಾವು ಪರಿಚಯಿಸಿಕೊಂಡು, ‘ರೀ ಉಷಾ, ನೀವು ನಿಮ್ಮ ಗಂಡನಿಗೆ ಎರಡನೇ ಹೆಂಡ್ತಿ ಅಂತ ಹೇಳಿದ್ದಾನೇನ್ರೀ ಯತೀ?’ ಅಂದುಬಿಡೋದೇ! ಪಾಪ, ಅವಳು ನಕ್ಕರೂ ಮನದೊಳಗೆ ಕಸಿವಿಸಿಗೊಂಡಿರುತ್ತಾಳೆ. ನಂತರ ರವಿಯನ್ನು ಪರಿಚಯಿಸಿ ‘ಇವನೇ ಯತಿಯ ಮೊದಲ್ನೇ ಹೆಂಡ್ತಿ. ಸದಾ ಅವನಿಗೆ ಇಷ್ಟು ದಿನ ಅಂಟಿಕೊಂಡೇ ಇದ್ದ’ ಎಂದು ಹೇಳಿದರು. ರಾತ್ರಿ ಎಲ್ಲರೂ ಮನೆಗೆ ಹೊರಟುಹೋದರೂ, ನನ್ನ ಶಿಷ್ಯರಾದ ರಾಮ ಮತ್ತು ಜಿನಿ ನನ್ನೊಂದಿಗೆ ನನ್ನ ರೂಮಿನಲ್ಲಿಯೇ ಮಲಗಿದ್ದರು. ಬಹುಶಃ ಬೆಳಗಿನ ಜಾವ, ಪೀ.................ಢುಂ ಢುಂ ಅಂತ ಜೋರಾಗಿ ಗಟ್ಟಿಮೇಳ ಕೇಳಿಸಿತ್ತು.  ಜಿನೇಂದ್ರ ‘ಯತೀ, ಯಾರೋ ನಿನ್ ಹೆಂಡ್ತಿಗೆ ತಾಳಿ ಕಟ್ತಿದಾರೆ’ ಅಂತ ನನ್ನನ್ನು ಎಬ್ಬಿಸಿದ. ಬೆಚ್ಚಿ ಎದ್ದು ಕುಳಿತೆ.  ನನಗೆ ನನ್ನ ಪತ್ನಿ(ಆಗುವವಳ)ಮನೆಯ ಕಡೆ ಶಾಸ್ತ್ರಗಳು ತಿಳಿದಿರಲಿಲ್ಲ. ತಾಯಿ ಕಟ್ಟಿದ ತಾಳಿ ಅಂತ ನಾನು ಕಟ್ಟೋ ತಾಳಿಗೆ ಮೊದಲು ಅವಳ ತಾಯಿ ಅವಳಿಗೆ ಒಂದು ತಾಳಿ ಕಟ್ಟುವುದು ಶಾಸ್ತ್ರ ಅಂತೆ! ನಂತರ ಒಂದೊಂದೇ ಶಾಸ್ತ್ರಗಳು ಶುರುವಾದವು. ನನ್ನ ಭಾವಮೈದುನರಲ್ಲಿ ಒಬ್ಬರು ನನ್ನ ಕಾಶಿಯಾತ್ರೆ ಸಮಯದಲ್ಲಿ ನನಗೆ ಕೊಡೆ ಹಿಡಿಯಬೇಕಿತ್ತು. ಆದರೆ ಅವರು ಬಿಜಿ ಇದ್ದಿದ್ದರಿಂದ ನನ್ನ ಜ್ಯೂನಿಯರ್ ಜಿನೇಂದ್ರ ನನಗೆ ಛತ್ರಿ ಹಿಡಿದಿದ್ದ! ಸಂಬಂಧಮಾಲೆ, ಉಯ್ಯಾಲೆ ಮುಗಿಸಿ ಅತ್ತೆಯರಿಬ್ಬರೂ ಅವರವರ ಸೊಸೆ,...

ಯತಿ ಸ್ವಂತೀ -223

11-08-2018 ಇಂದು ನನ್ನ ಜನುಮ ದಿನ! ಹಿಂದಿನ ಯಾವುದೋ ವರ್ಷಕ್ಕೆ ಹೋಗಿದ್ದೇನೆ. ಹ್ಞಾಂ... ಏನು ಹೇಳುತ್ತಿದ್ದೆ? ಟ್ರೇಯಲ್ಲಿ ಸ್ಟೀಲ್ ಲೋಟಗಳಲ್ಲಿ ಕಾಫಿ, ಟೀ ತರಲು ಆರಂಭಿಸಿದ್ದರು ಆಗ ನಮ್ಮ ಕಂಪೆನಿಯಲ್ಲಿ. ಎಂತಹ ಒಳ್ಳೆಯದಾಯಿತೂ ಅಂತೀರಿ. ಷಾಪ್‍ನಿಂದ ಯಾರೋ ಸಹೋದ್ಯೋಗಿ ನನಗೆ ಇಂಟರ್‍ಕಾಂನಲ್ಲಿ ಕರೆ ಮಾಡಿದ. ಮೊಬೈಲ್ ಇರಲಿಲ್ಲ ಸ್ವಾಮೀ ಆಗ! ಏನೋ ಅನಾಹುತ ಆಗಿದೆಯೇನೋ ಎಂಬಂತೆ ಸರ್ರೆಂದು ಓಡಿದ. ಬಾಗಿಲ ತಿರುವಿನಲ್ಲಿ ಕಾಫಿ, ಟೀ ಟ್ರೇ ಹಿಡಿದು ಕ್ಯಾಂಟೀನ್ ಸಹೋದ್ಯೋಗಿ ಬರುವುದಕ್ಕೂ ನಾನು ಅಲ್ಲಿ ಬಾಗಿಲ ಕಡೆ ತಿರುಗುವುದಕ್ಕೂ ಸಮಯ ಏಕವಾಯಿತು. ಅಷ್ಟೇ! ಢಾಂ ಎಂದು ಅವನಿಗೆ ಢಿಕ್ಕಿ ಹೊಡೆದಿದ್ದೆ.  ಸೋಮವಾರ ಅಂದು. ಅಮ್ಮ ನಾನು ಹೊಸ ಖಾಕಿ ಕಲರ್ ಪ್ಯಾಂಟ್ ಹಾಕಿದ್ದನ್ನು ವಿರೋಧಿಸಿದರು. ಅವರ ಪ್ರಕಾರ ಸೋಮವಾರ ಹೊಸದು ಹಾಕಿಕೊಂಡರೆ ಸದಾ ಒದ್ದೆ. ಮಂಗಳವಾರ ಬೇಡ. ಬುಧ, ಗುರು, ಶುಕ್ರ ಓಕೆ. ಶನಿವಾರ ಹಾಕಿಕೊಂಡರೆ ಕೊಚ್ಚೆ ಆಗುತ್ತೆ. ಭಾನುವಾರ ಹೊಸತು ಧರಿಸಿದರೆ ಬೇಗ ಹರಿದುಹೋಗುತ್ತೆ. ನಾನು ಇದನ್ನೆಲ್ಲಾ ನಂಬದವನು. ಹೋಗಮ್ಮ, ಇದನ್ನು ಯಾರು ನಂಬ್ತಾರೆ ಅಂತ ಹೊಸ ಖಾಕಿ ಕಲರ್ ಪ್ಯಾಂಟ್ ಧರಿಸಿ ಬಂದಿದ್ದೆ. ಇಡೀ ಟ್ರೇಯ ಇಡೀ ಕಾಫಿ, ಟೀ ಲೋಟಗಳ ಪೇಯಗಳು ಅಷ್ಟೂ ನನಗೆ ಅಭಿಷೇಕ ಆಗಿದ್ದವು! ಆಮೇಲೆ ಹೋಗಿ ಟಾಯ್ಲೆಟ್‍ನಲ್ಲಿ ಪ್ಯಾಂಟು ತೊಳೆದುಕೊಂಡು ಒದ್ದೆ ಮಾಡಿಕೊಂಡಾಗ ಸೋಮವಾರ ಸದಾ ಒದ್ದೆ ಎಂದು ಅಮ್ಮ ರೇಗಿಸಿದಂತಾಗಿತ್ತು! ಅನೇಕ ಊರುಗಳಿಗೆ ಇದುವರ...

ಯತಿ ಸ್ವಂತೀ -222

10-08-2018 ಹೊಸ ಬಾಸ್ ಬಂದರಲ್ಲ. ಅವರ ಹೆಸರು ಜೆಟಿ ಎಂದುಕೊಳ್ಳೋಣ. ಅವರನ್ನು ನಾವು ಕರೆಯುತ್ತಿದ್ದುದೇ ಹಾಗೆ. ಬಂದವರೇ ಎಲ್ಲರನ್ನೂ ಕರೆದು ಯಾರು ಯಾರು ಯಾವ ಯಾವ ಕೆಲಸ ಮಾಡುವರೆಂದು ಅರಿತರು. ಮಹಾನ್ ಚಾಣಾಕ್ಷ ಈ ಜೆಟಿ. ನನ್ನನ್ನು ಕರೆದರು. ನನಗೋ ಥ್ರಿಲ್. ಸರಕಾರ್‍ನೇ ಆಕೆ ಮೆರಾ ಹಾಲ್ ತೋ ಪೂಛಾ ಅನ್ನೋ ಹಾಗೆ ಬಾಸ್ ನನ್ನನ್ನು ವಿಚಾರಿಸುತ್ತಿದ್ದಾರೆ! ಈ ಭಾಗ್ಯಕ್ಕೆ ಎಣೆಯುಂಟೇ! ನನಗೆ ಮದುವೆ ನಿಶ್ಚಯವಾಗಿರುವ ವಿಷಯವೂ ಅವರಿಗೆ ತಿಳಿಯಿತು. ಅದಕ್ಕೇ ನನಗೆ ‘ಯತಿರಾಜ್, ನೀನು ಈಗ ಕೇವಲ ದೈಹಿಕವಾಗಿ ಇಲ್ಲಿದ್ದೀ. ಮಾನಸಿಕವಾಗಿ ಮೈಸೂರಿಗೆ ಹೋಗಿಬಿಟ್ಟಿದ್ದೀ’ ಎಂದು ರೇಗಿಸುತ್ತಿದ್ದರು ಬಾಸ್. ಒಂದು ತಿಂಗಳಿತ್ತು ನನ್ನ ಮದುವೆಗೆ. ನನ್ನನ್ನು ದಿನಾ ಬೆಳಗ್ಗೆ ಅವರೆದುರಿಗೆ ಕೂತುಕೊಳ್ಳಲು ಹೇಳುತ್ತಿದ್ದರು. ಡಿಪಾರ್ಟ್‍ಮೆಂಟಿಗೆ ಬಂದ ಕಾಗದಗಳನ್ನೆಲ್ಲಾ ನನ್ನ ಮುಂದಿಟ್ಟು ‘ಯಾವ ಯಾವ ಕಾಗದ ಯಾರು ಯಾರಿಗೆ ಹೇಳು’ ಎನ್ನುತ್ತಿದ್ದರು. ನನಗೆ ಥ್ರಿಲ್ಲೋ ಥ್ರಿಲ್. ಮಾರ್ಚ್ 83ರಿಂದ ಡಿಸೆಂಬರ್ 86ರ ವೇಳೆಗೆ ಸಾಕಷ್ಟು ಅನುಭವ ಪಡೆದಿದ್ದೆ. ನಿಜ ಹೇಳಬೇಕೆಂದರೆ ನಮ್ಮ ಡಿಪಾರ್ಟ್‍ಮೆಂಟಿನ ಬಾಸ್‍ನಿಂದ ಆಫೀಸ್‍ಬಾಯ್ ವರೆಗೆ ಅವರಿಲ್ಲದಿದ್ದಾಗ ಅವರುಗಳ ಕೆಲಸ ಮಾಡಿದ ಅನುಭವವಿತ್ತು! ನಮ್ಮ ಆಫೀಸ್‍ಬಾಯ್‍ಗೆ ಮದುವೆ ಆದಾಗ ಆಫೀಸ್‍ನಲ್ಲಿ ಮುಕ್ಕಾಲು ಜನಕ್ಕೆ ಲೀವ್ ಕೊಟ್ಟರು ಆಗಿನ ಬಾಸ್. ನಾನೂ ಹೋಗುವೆ ಎಂದಾಗ ಅರ್ಧ ಜನಕ್ಕೆ ಲೀವ್ ಇಲ್ಲ ಎಂದರು. ನಾನೊಬ್ಬ ಹೋಗದಿದ...

ಯತಿ ಸ್ವಂತೀ -221

09-08-2018 ಅವರ ಮನೆಯಲ್ಲಿ ಮತ್ತೆ ತಿಂಡಿ, ಕಾಫಿ ಮುಗಿಸಿ, ಉಷಾ ಮತ್ತು ನನ್ನ ಕಸಿನ್ ಇಬ್ಬರೂ ಒಂದೊಂದು ಕೀರ್ತನೆ ಹಾಡಿದ ನಂತರ ಬೆಂಗಳೂರಿಗೆ ಹೊರಟೆವು. ಎದೆಯಲ್ಲಿ ಡವಡವ. ಯಾವ ಕ್ಷಣದಲ್ಲಿ ಯಾವ ರೀತಿಯ ಆಕ್ರಮಣ ನಮ್ಮ ಮೇಲೆ ನಡೆಯುವುದೋ ಎಂದು. ದೇವರ ದಯೆ! ಏನೂ ತೊಂದರೆ ಆಗದೇ ಬೆಂಗಳೂರು ತಲುಪಿದೆವು. ಅದರ ಮುಂದಿನ ಭಾನುವಾರ ಅವರ ಮನೆಗೆ ಪತ್ರ ಬರೆದೆ. ಅದರ ಮುಂದಿನ ಭಾನುವಾರ ಮೈಸೂರಿಗೆ ಹೋದೆ. ಚೆನ್ನಾಗಿ ಮಾತನಾಡಿಸಿದರು ಎಲ್ಲರೂ. ನನ್ನಾಕೆಯಾಗುವವಳೊಂದಿಗೆ ಹೊರಗೆ ಸುತ್ತಾಡಿ ಮಾತಾಡಿ ಬಂದೆ. ಏನು ಮಾತನಾಡುವುದು? ನನ್ನ ಬಗ್ಗೆ ಆಕೆಗೆ ಹೇಳುವುದು, ಆಕೆ ಆಕೆಯ ಬಗ್ಗೆ ನನಗೆ ಹೇಳುವುದು. ಅಷ್ಟೇ. ಅದರ ಮುಂದಿನ ಭಾನುವಾರ ಅವಳೇ ನಮ್ಮೂರಿಗೆ ಬಂದಳು.  ವಧುಪರೀಕ್ಷೆಗೆ ಅವರುಗಳು ಬಂದ ದಿನ ಅದು ನಡೆದದ್ದು ನನ್ನ ಸೋದರತ್ತೆಯ 40 ಬೈ 60 ಸೈಟಿನ ದೊಡ್ಡ ಮನೆಯಲ್ಲಿ. ನಾನು ಅಮ್ಮನಿಗೆ ಹೇಳಿದೆ. ನಿನ್ನ ಭಾವೀ ಸೊಸೆಗೆ ಅವಳಿರಲಿರುವ ಮನೆಯನ್ನು ತೋರಿಸೆಂದೆ.  ನಾವಿದ್ದುದು ಒಂದು ಪುಟ್ಟ ಹಾಲ್, ರೂಮ್, ಅಡಿಗೆಮನೆ, ಸ್ನಾನದ ಮನೆ ಮತ್ತು ಕಕ್ಕಸು ಇದ್ದ ಮನೆಯಲ್ಲಿ. ಬಹಳ ಇಕ್ಕಟ್ಟಿನ ಮನೆಯಲ್ಲಿ ನಾವಾಗಲೇ ಐವರಿದ್ದೆವು. ನಾನು, ನನ್ನ ಅಮ್ಮ, ನನ್ನ ಅಯ್ಯ, ಅಯ್ಯನ ಅಮ್ಮ ಮತ್ತು ನನ್ನ ಕಸಿನ್. ಅದೊಂದು ಔಟ್‍ಹೌಸ್. ಹ್ಞಾಂ... ಮುಂದಿನ ಭಾನುವಾರ ನಮ್ಮೂರಿಗೆ ಬಂದಾಗ ಎಲ್ಲರೂ ವಿಮಾನ ನಿಲ್ದಾಣಕ್ಕೆ ಹೋದೆವು. ಹೆಚ್ ಎ ಎಲ್ ಏರ್‍ಪೋರ್ಟ್ ಆಗ ಇದ್ದದ್ದು. ಉಷ...