ಯತಿ ಸ್ವಂತೀ -91
01-04-2018 ಕಿರ್ಲೋಸ್ಕರ್ ಬಿಟ್ಟು ಸ್ವಂತ ಬ್ಯುಸಿನೆಸ್ ಮಾಡಬೇಕೆಂದು ಪುಸ್ತಕ ಪ್ರಕಾಶನವನ್ನು ಆರಂಭಿಸಿದೆ. ಸುರಭಿ ಪ್ರಕಾಶನ ಮತ್ತು ಸುಘೋಷ ಸಾಹಿತ್ಯ ಎನ್ನುವ ಎರಡು ಪ್ರಕಾಶನ ಸಂಸ್ಥೆಗಳಿಗೆ ಎರಡು ಬ್ಯಾಂಕುಗಳಿಂದ ಓವರ್ಡ್ರಾಫ್ಟ್ ಪಡೆದು ಪುಸ್ತಕಗಳನ್ನು ಸಿದ್ಧಗೊಳಿಸಲು ಪ್ರಾರಂಭಿಸಿದೆ. ಕೊಮ್ಮನಾಪಲ್ಲಿ ಗಣಪತಿರಾವ್ ಅವರ ಸ್ನೇಹಗಾನ ನಮ್ಮ ಪ್ರಕಾಶನದಿಂದ ಪ್ರಕಟವಾದ ಮೊದಲ ಪುಸ್ತಕ. ಆ ನಂತರ ನನ್ನದೇ ಕಾದಂಬರಿಗಳು ಬಂದವು. ಮೊಟ್ಟಮೊದಲು ನನ್ನದೇ ಪುಸ್ತಕ ಬಂದಿದ್ದು ವೀರಾಂಬುಧಿ ಜೋಕ್ಸ್. ಹತ್ತು ರೂಪಾಯಿಗಳಿಗೆ 300+ ಜೋಕುಗಳು. ಅವುಗಳಲ್ಲಿ ಅಶ್ಲೀಲತೆಯ ಸೋಂಕು ಕೂಡ ಇರಕೂಡದು ಎನ್ನುವುದು ನನ್ನ ಆಸೆಯಾಗಿತ್ತು. ನನ್ನ ಹೆಸರನ್ನು ಅದುವರೆಗೆ ಪತ್ರಿಕೆಗಳಲ್ಲಿ ಎಂ.ವಿ.ಯತಿರಾಜ್ ಎಂದು ಪ್ರಕಟಿಸುತ್ತಿದ್ದರು. ಜೋಕ್ ಬುಕ್ ಬರೆಯುವಾಗ ಏನಾದರೂ ಒಂದು ಬ್ರ್ಯಾಂಡ್ ಹೆಸರು ಇಟ್ಟುಕೊಳ್ಳಬೇಕೆನ್ನಿಸಿತು. ಏಕೆಂದರೆ ಜೋಕ್ ಬುಕ್ಗಳ ಸರಮಾಲೆ ಬರೆಯುವಾಗ ಒಂದೇ ಹೆಸರಿದ್ದರೆ ಚೆನ್ನವೆನಿಸಿತು. ಖುಷ್ವಂತ್ ಸಿಂಗ್ ಅವರ ಜೋಕ್ ಬುಕ್ಗಳಂತೆ ಸರಣಿ ತರುವ ಆಸೆಯಿತ್ತು. ಆಗ ಬೇರೆ ಯಾವುದಾದರೂ ಹೆಸರೇಕೆ, ನನ್ನ ಮನೆಯ ಹೆಸರನ್ನೇ ಏಕೆ ಇಟ್ಟುಕೊಳ್ಳಬಾರದು ಎನಿಸಿ ವೀರಾಂಬುಧಿ ಜೋಕ್ಸ್ ಎಂದು ಪುಸ್ತಕಕ್ಕೆ ಹೆಸರಿಟ್ಟೆ. ಆಗ ನನ್ನ ಹೆಸರನ್ನು ಯತಿರಾಜ್ ಎಂ ವೀರಾಂಬುಧಿ ಎಂದಿಟ್ಟುಕೊಂಡೆ. ನಂತರ ಎಂ ಕತ್ತರಿಸಿ ಯತಿರಾಜ್ ವೀರಾಂಬುಧಿ ಎಂದು ಮಾತ್ರ ಇಟ್ಟುಕೊಂಡೆ. ಈ ಜೋಕ...