Posts

Showing posts from July, 2018

ಯತಿ ಸ್ವಂತೀ -213

01-08-2018 ದಿನಗಳು ಉರುಳುತ್ತಿದ್ದವು.    ನನ್ನ ಉದಯನ ಸ್ಕೂಟರ್ ಸವಾರಿ ಒಂದೆರಡು ವರ್ಷ ನಡೆಯಿತು.   ನಾವು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ನಮ್ಮ ಫ್ಯಾಕ್ಟರಿಯ ಸಸ್ಪೆನ್ಷನ್ ಆಫ್ ಆಪರೇಷನ್ ಆಗಿಬಿಟ್ಟಿತು. ಅದ್ಯಾಕೋ ಅದಕ್ಕೆ ಲಾಕೌಟ್ ಎನ್ನಲಿಲ್ಲ ಅವರು. ನಮಗೆ ಎಂತಹ ವಿಚಿತ್ರ ಪರಿಸ್ಥಿತಿ ಎಂದರೆ ಇಲ್ಲೇ ಇರಬೇಕಾ? ಅಥವಾ ಬೇರೆ ಕೆಲಸ ಹುಡುಕಬೇಕಾ ತೋಚಲಿಲ್ಲ. ಏಕೆಂದರೆ ಅನಿರ್ದಿಷ್ಟ ಕಾಲ ಮುಚ್ಚಲಾಗಿದೆ ಎಂದಿತ್ತು ನಮ್ಮ ಫ್ಯಾಕ್ಟರಿ ಗೇಟಿನ ಮುಂದಿದ್ದ ನೊಟೀಸ್.  ಎಂತಹ ಡೋಲಾಯಮಾನ ಸ್ಥಿತಿ... ಬಿಟ್ಟರೆ ಮತ್ತೆ ಹೊಸ ಕೆಲಸ ಸಿಗುವ ಭರವಸೆ ಇರಲಿಲ್ಲ. ಇಲ್ಲೇ ಇದ್ದರೆ ಸಂಬಳ ಇಲ್ಲ. ಫ್ಯಾಕ್ಟರಿ ತೆರೆದಿದ್ದರೆ ತಾನೇ. ನಮಗೆ ಸಿನಿಮಾ ನೋಡುವ ಹುಚ್ಚು. ಆಗೇನೂ ಈಗಿನಂತೆ ಐನೂರು ಸಾವಿರ ಇರುತ್ತಿರಲಿಲ್ಲ ಟಿಕೆಟ್ ಬೆಲೆ. ಆದರೂ ಕಾಸಿಗೆ ತಕ್ಕ ಕಜ್ಜಾಯ! ನನಗೆ ನೆನಪಿದೆ. ಬ್ಯಾಂಕಿಗೆ ಹೋಗಿ ಹಣವನ್ನು ಡ್ರಾ ಮಾಡಲು ವಿತ್‍ಡ್ರಾವಲ್ ಸ್ಲಿಪ್ ಕೊಟ್ಟೆ. ಬ್ಯಾಂಕಿನವರು ಆಗಲ್ಲಾರೀ ಎಂದಿದ್ದರು. ನಾನು ಏಳು ರೂಪಾಯಿ ಬಿಟ್ಟು ಅಲ್ಲಿದ್ದ ಐವತ್ತು ರೂಪಾಯಿ ಡ್ರಾ ಮಾಡಲಿಚ್ಛಿಸಿದ್ದೆ. ‘ಏನು ಆಗಲ್ಲ? ನೀವೇನು ನಮಗೆ ಸಂಬಳ ಕೊಟ್ಟು ಸಾಕ್ತೀರಾ? ನಮ್ಮ ಫ್ಯಾಕ್ಟರಿ ಬೇರೆ ಮುಚ್ಚಿದೆ’ ಎಂದು ಗಲಾಟೆ ಮಾಡಿದ್ದೆ. ಈಗಲೂ ನಾನು ಆಗಾಗ ಅಂಬರೀಷ್ (ರೆಬೆಲ್)ಆಗುವುದು ಬ್ಯಾಂಕಿನಲ್ಲಿ ಉಂಟು.  ಬಾಯಿ ಮುಚ್ಚಿ ಹಣ ಕೊಟ್ಟಿದ್ದ ಆಗ. ಅದನ್ನು ತ...

ಯತಿ ಸ್ವಂತೀ -212

31-07-2018 ದಿನಗಳು ಓಡುತ್ತಿದ್ದವು. ನಮಗೆ ಸವಾಲಾಗುತ್ತಿದ್ದುದು ತಿಂಗಳ ಕೊನೆ. ಗುರಿ ಮುಟ್ಟುವ ಕೆಲಸ. ಆಗೆಲ್ಲಾ ಮಳೆಯಿಲ್ಲದೆ ಹಾಹಾಕಾರ. ಎಲ್ಲರಿಗೂ ಜನರೇಟರ್ ಬೇಕು. ಸೋ, ಸೆಲ್ಲರ್ಸ್ ಮಾರ್ಕೆಟ್‍ನಲ್ಲಿದ್ದೆವು. ಹ್ಞಾಂ... ಇನ್ನೊಂದು ವಿಷಯ ಮರೆತೆ. ನಾನು ಸೇಲ್ಸ್ ಜನರೇಟರ್ಸ್ ಡಿಪಾರ್ಟ್‍ಮೆಂಟ್ ಸೇರಿದ್ದು 17-3-1983. ಆ ವಾರ ಬಂದ ಭಾನುವಾರವೇ ನಮ್ಮ ಡಿಪಾರ್ಟ್‍ಮೆಂಟು ಟೂರು ಹೊರಟಿದ್ದರು. ಹೊಗೆನಕ್ಕಲ್ ಜಲಪಾತಕ್ಕೆ. ಎಲ್ಲರೊಂದಿಗೆ ಸೇರಿ ಮಾತನಾಡುತ್ತಾ ಹೋದೆ. ಎಲ್ಲರೂ ಹೊಸಬರೇ. ನನ್ನ ಜೊತೆ ಟ್ರೈನಿಂಗ್ ಮಾಡಿದ್ದ ಜಿನ್ ಮತ್ತು ರಮ್ ಬಿಟ್ಟು! ಹೊಗೆನಕ್ಕಲ್‍ನಲ್ಲಿ ಎಣ್ಣೆ ಮಾಲಿಶ್ ಮಾಡುತ್ತಿದ್ದರು. ನಾವೂ ಎಲ್ಲರೂ ನಮ್ಮ ಕನಿಷ್ಠ ಉಡುಪುಗಳಲ್ಲಿ ಮೈಗೆ ಎಣ್ಣೆ ಬಡಿಸಿಕೊಂಡೆವು. ಅಕ್ಷರಶಃ ಅವನು ಮೈ ಮೇಲೆ ಬಡಿದಿದ್ದ! ನಂತರ ಅಲ್ಲೇ ಮೇಲಿನಿಂದ ಧುಮುಕುತ್ತಿದ್ದ ನೀರಿನಡಿಯಲ್ಲಿ ನಿಂತೆವು. ಅಬ್ಬಾ! ಮೂಟೆಗಳು ಮೈ ಮೇಲೆ ಬಿದ್ದಂತಾಯಿತು. ಆ ರಭಸಕ್ಕೋ ಏನೋ ಸೋಪು, ಸೀಗೇಕಾಯಿ ಇಲ್ಲದೆ ನಮ್ಮ ಮೈ ಮೇಲಿನ ಎಣ್ಣೆಯೆಲ್ಲಾ ಮಂಗಮಾಯ! ನಂತರ ಅಲ್ಲಿ ಒಂದು ಹರಿಗೋಲನ್ನು ಬಾಡಿಗೆಗೆ ಪಡೆದು ಎಲ್ಲರೂ ನದಿಯಲ್ಲಿ ಹೋದೆವು. ಕಾವೇರಿ ಅಲ್ಲಿ ಕಪ್ಪುಶಿಲೆಗಳನ್ನು ಚುಂಬಿಸಿ, ಅಪ್ಪಿ, ಚಿತ್ತಾರಗಳನ್ನು ಮೂಡಿಸಿದ್ದಾಳೆ. ಎಷ್ಟಿರಬಹುದು ಆಳ ಎಂದು ಹರಿಗೋಲಿನ ಅಂಬಿಗನನ್ನು ಕೇಳಿದಾಗ ಅವನು ಐವತ್ತು ಅಡಿ ಎಂದಾಗ ನಾವು ಬೆವರಿ, ಬೆದರಿ ಕುಳಿತಿದ್ದೆವು. ನಂತರ ಅಲ್ಲಿಯೇ ಮರಳ ದ...

ಯತಿ ಸ್ವಂತೀ -211

30-07-2018 ದಿನವೂ ಕೆಲವು ಫೋನ್ ಕಾಲ್‍ಗಳನ್ನು ಅಟೆಂಡ್ ಮಾಡುವುದು. ನಂತರ ಷಾಪ್‍ಥ್ರೀಗೆ ಹೋಗುವುದು. ಅಲ್ಲಿ ನಾವು ಹೋಗುವ ವೇಳೆಗೆ ನಮ್ಮ ಕಂಪೆನಿಯ ದೊಡ್ಡ ಬಾಸ್ ಅಲ್ಲಿಗೆ ಬರುತ್ತಿದ್ದರು. ಅವರ ಬಳಿ ಮಾತುಕತೆ. ಈ ನಡುವೆ ಮನೆಯ ಬಳಿ ಒಂದು ಹೊಸ ಡೆವೆಲಪ್‍ಮೆಂಟ್ ಆಯಿತು. ನಮ್ಮ ಮನೆಯ ಬಳಿ ಇದ್ದ ಉದಯ್‍ಗೆ ಕೂಡ ಕಂಟ್ರೋಲ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಸಿಕ್ಕಿತ್ತು. ಅವನು ಒಂದು ಸ್ಕೂಟರ್ ಇಟ್ಟುಕೊಂಡಿದ್ದ. ಅವನು ನನ್ನನ್ನು ‘ನೀನೇಕೆ ನನ್ನ ಜೊತೆ ಬರಬಾರದು?’ ಎಂದ. ಅಬ್ಬಾ, ಈ ಬಸ್ಸಿಗೆ ಓಡುವ ದುಃಸ್ಥಿತಿ(!) ತಪ್ಪುವುದೆಂದು ಒಪ್ಪಿಕೊಂಡೆ. ಅಷ್ಟರಲ್ಲಿ ನಮ್ಮ ತಾಯಿಯವರಿಗೆ ಆರೋಗ್ಯ ಹೆಚ್ಚುಕಮ್ಮಿ ಆಗಿತ್ತು. ಸುಮಾರು ಎರಡು ಮೂರು ವಾರ ದಿನವೂ ಮ್ಯಾಗಿ ನೂಡಲ್ಸ್ ತಿಂದು ತಲೆ ಕೆಟ್ಟಿತ್ತು. ಅಮ್ಮನಿಗೆ ತೊಂದರೆ ಕೊಡುವುದು ಬ್ಯಾಡ ಅಂತ ಆ ಕೆಲಸ ಮಾಡಿಕೊಂಡೆ. ಉದಯ್ ಮನೆಗೆ ಹೋದಾಗ ನನ್ನ ತಿಂಡಿಯ ಬಗೆಗೆ ಅವನ ತಾಯಿ ಕೇಳಿದರು. ಮ್ಯಾಗ್ಗಿ ಅಂದೆ. ನಮ್ಮ ತಾಯಿಗೆ ತಿಂಡಿ ಮಾಡಲಾಗುತ್ತಿಲ್ಲ ಎಂದೆ. ಅಯ್ಯೋ ಅದಕ್ಯಾಕೆ ಯೋಚ್ನೆ? ಇಲ್ಲಿಗೇ ದಿನಾ ಬಾ ತಿಂಡಿಗೆ ಎಂದರು. ನನಗೋ ಮೊದಲೇ ಸಂಕೋಚ, ನಾಚಿಕೆ ಎಲ್ಲಾ ಹೊಳೆಯಿಂದಾಚೆಗೆ. ಮರುದಿನದಿಂದ ಬೆಳಗ್ಗೆ ಅವರ ಮನೆಗೆ ಅವನ ತಿಂಡಿಯ ಹೊತ್ತಿಗೇ ಹಾಜರ್. ನಮ್ಮ ಮನೆಯಿಂದ ಹೊರಗೆ ಬಂದು ಬಲಕ್ಕೆ ತಿರುಗಿ 11ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿ ಮೊದಲ ರಸ್ತೆಯಲ್ಲಿ ಎಡಕ್ಕೆ ತ...

ಯತಿ ಸ್ವಂತೀ -210

29-07-2018 ನನಗೆ ಇಬ್ಬರು ಅಸಿಸ್ಟೆಂಟುಗಳು. ಜಿನೇಂದ್ರ ಮತ್ತು ರಾಮರತ್ನ. ಬಹಳ ಚುರುಕು ಹುಡುಗರು. ಜಿನ್ ಆಂಡ್ ರಮ್ ಅಂತ ಪ್ರೀತಿಯಿಂದ ಕರೆಯುತ್ತಿದ್ದೆ. ನಮ್ಮಲ್ಲಿ ಎರಡು ಪ್ರೊಡಕ್ಷನ್ ಶಾಪ್‍ಗಳಿದ್ದವು. ಒಂದು ಶಾಪ್ 2 ಮತ್ತೊಂದು ಶಾಪ್ 3. ಮೀಡಿಯಂ ಸೈಜಿನ ಜನರೇಟರುಗಳು ಶಾಪ್ ಟೂನಲ್ಲೂ, ಲಾರ್ಜ್ ಸೈಜು ಜನರೇಟರುಗಳು ಶಾಪ್ ಥ್ರೀನಲ್ಲೂ ಉತ್ಪಾದನೆಗೊಳ್ಳುತ್ತಿದ್ದವು. ಶಾಪ್‍ಟೂಗೆ ನನ್ನ ಜೂನಿಯರ್ ರಾಮರತ್ನ. ಶಾಪ್‍ಥ್ರೀಗೆ ಜಿನೇಂದ್ರ. ಬೆಳಗ್ಗೆ ಏಳೂವರೆ ಇತ್ತು ಪಂಚಿಂಗ್ ಟೈಮು. ಆಮೇಲೆ ಎಂಟಾಯಿತು. ಜಯನಗರದಲ್ಲಿದ್ದೆ ನಾನು. ಬೆಳಗ್ಗೆ ಆರು ಗಂಟೆಗೆ ನಾಲ್ಕನೇ ಬ್ಲಾಕ್ ಕಾಂಪ್ಲೆಕ್ಸ್‍ನಿಂದ ಬಸ್ಸು. ಟಿ ಬ್ಲಾಕ್‍ನಿಂದ ನಡೆದು ಬಸ್ ಸ್ಟಾಪಿಗೆ ಬಂದು ನಂಬರ್ 1 ಯಶವಂತಪುರದ ಬಸ್ಸು ಹತ್ತುತ್ತಿದ್ದೆವು. ಇನ್ನೊಂದು ಬಸ್ಸು 1ಬಿ. ಅದು ಟಾಟಾ ಇನ್ಸ್‍ಟಿಟ್ಯೂಟ್ ಕಡೆಯಿಂದ ಹೋಗುತ್ತಿತ್ತು. ಯಶವಂತಪುರ ಸರ್ಕಲ್ಲಿನಲ್ಲಿಳಿದು ಮೂಲೆಯಲ್ಲಿರುವ ಗಾಯತ್ರಿ ಹೊಟೇಲ್‍ನಲ್ಲಿ ಇಡ್ಲಿ ವಡೆ ತಿಂದು ನಂತರ ಕಾರ್ಖಾನೆ ತಲುಪುತ್ತಿದ್ದೆವು. ಈಗ ಕಾರ್ಖಾನೆ ಅಲ್ಲಿ ಇಲ್ಲ. ಕೇವಲ ಒಂದು ಆಫೀಸ್ ಇದೆ. ಆ ಜಾಗದಲ್ಲೀಗ ಮೆಟ್ರೋ (ರೈಲು ಅಲ್ಲ ಕಣ್ರೀ, ವಸ್ತುಗಳನ್ನು ಮಾರುವ ಮೆಟ್ರೋ), ಬ್ರಿಗೇಡ್ ಮಿಲೇನಿಯಮ್ ಮತ್ತು ಕೊಲಂಬಿಯಾ ಏಸಿಯಾ ಆಸ್ಪತ್ರೆ ಇವೆಲ್ಲವೂ ಇವೆ. ಮೈಸೂರು ಲ್ಯಾಂಪ್ಸ್ ಫ್ಯಾಕ್ಟರಿ ಇತ್ತು. ಅದರ ಹಿಂದೆ ರೈಲ್ವೇ ಗೇಟ್. ಅದನ್ನು ದಾಟಿದರೆ ಕಿರ್ಲೋಸ್ಕರ್ ಗೇ...

ಯತಿ ಸ್ವಂತೀ -209

28-07-2018 ನನಗೆ ಸೇಲ್ಸ್ ಕೆಲಸ. ಇದೊಂದು ರೀತಿಯ ಹೊಸ ರೀತಿಯ ಸೇಲ್ಸ್ ಎನ್ನಿಸಿತೆನಗೆ. ನನ್ನ ಕೆಲಸವೇನೆಂದರೆ ಗ್ರಾಹಕರಿಂದ ಬಂದ ಆರ್ಡರುಗಳನ್ನು ನೋಡುವುದು. ಅವು ರೆಗ್ಯುಲರ್ ಯಂತ್ರಗಳೋ ಅಥವಾ ವಿಶೇಷ ಯಂತ್ರಗಳೋ ಎಂದು ನೋಡುವುದು. ಅವು ರೆಗ್ಯುಲರ್ ಎಂದರೆ, ನಮ್ಮ ಪ್ರೊಡಕ್ಷನ್ ಶಾಪ್‍ಗೆ ಆರ್ಡರ್ ಕೊಡುವುದು. ಒಂದು ವೇಳೆ ಅವು ವಿಶೇಷ ಎಂದು ಗೊತ್ತಾದರೆ, ಅವುಗಳ ಸ್ಪೆಸಿಫಿಕೇಶನ್ ತೆಗೆದುಕೊಂಡು ಹೋಗಿ ನಮ್ಮ ಡಿಸೈನ್ ಡಿಪಾರ್ಟ್‍ಮೆಂಟಿಗೆ ಕೊಡುವುದು. ಅವರು ಅದಕ್ಕೆ ತಕ್ಕ ಡಿಸೈನ್ ಮಾಡುತ್ತಿದ್ದರು. ಡಿಸೈನ್ ಎಂದರೆ ಜನರೇಟರ್‍ನಲ್ಲಿ ಇರಬೇಕಾದ ತಾಮ್ರ, ಕಾರ್ಬನ್ ಸ್ಟೀಲ್ ಎಲ್ಲದರ ಅಳತೆಯನ್ನೂ ಡಿಸೈನ್ ಡಿಪಾರ್ಟ್‍ಮೆಂಟಿನವರು ನೋಡಿ, ಅದಕ್ಕೆ ತಕ್ಕ ಸೈಜಿನ ಜನರೇಟರ್ ಡಿಸೈನ್ ಕೊಡುತ್ತಿದ್ದರು. ಅದರ ವಿವರಗಳನ್ನು ಅಂದರೆ ಡಿಸೈನ್ ಮತ್ತು ಡ್ರಾಯಿಂಗುಗಳನ್ನು ಪ್ರೊಡಕ್ಷನ್ ಷಾಪ್‍ಗೆ ಒಯ್ದು ಅಲ್ಲಿ ಆ ಮೆಟೀರಿಯಲ್ಲುಗಳನ್ನು ಪ್ಲ್ಯಾನ್ ಮಾಡಿಸಬೇಕಿತ್ತು. ಒಮ್ಮೆ ಅದು ಪ್ಲ್ಯಾನ್ ಆದಾಗ ಪರ್ಚೇಸ್ ಡಿಪಾರ್ಟ್‍ಮೆಂಟ್ ಅದನ್ನು ತರಿಸಿಕೊಡುತ್ತಿತ್ತು. ಅದು ಪ್ರೊಡಕ್ಷನ್ ಷಾಪ್ ತಲುಪಿ ಕೆಲಸ ಶುರುವಾಗುತ್ತಿತ್ತು. ಅಲ್ಲಿ ಅದು ಸಿದ್ಧ ಆದ ಮೇಲೆ ಅದನ್ನು ಟೆಸ್ಟ್ ಮಾಡಿ, ಅದಕ್ಕೆ ಪೆಯಿಂಟ್ ಮಾಡಿ ಅದನ್ನು ರವಾನೆಗೆ ಸಿದ್ಧಗೊಳಿಸುತ್ತಿದ್ದರು. ಆಗ ಆ ಜನರೇಟರ್ ಯಾರಿಗೆ ತಲುಪಬೇಕೋ ಅವರಿಗೆ ಕಳಿಸಬೇಕಿತ್ತು. ಅವರದೇನಾದರೂ ವಿಶೇಷ ಟರ್ಮ್ಸ್ ಆಫ್ ಪೇಮೆಂ...

ಯತಿ ಸ್ವಂತೀ -208

27-07-2018 ಇನ್ನೇನು ನನ್ನ ಟ್ರೈನಿಂಗ್ ಮುಗಿಯಬೇಕು ಆಗ ನಡೆದಿತ್ತು ಆ ಘಟನೆ. ಅಂದ ಹಾಗೆ ನನಗೆ ರೂ.650/- ಸ್ಟೈಪಂಡ್ ಬರುತ್ತಿದ್ದುದು ಮೂರು ತಿಂಗಳಿಗೆ ರೂ.750/- ಆಯಿತು. ಮನೆಗೆ ಅಷ್ಟೋ ಇಷ್ಟೋ ನನ್ನಿಂದ ಮನೆಗೆ ಸಹಾಯ ಆಗತೊಡಗಿತು. ನನ್ನ ಇನ್ನೊಂದು ಸಮಸ್ಯೆ ಇತ್ತು. ನಮ್ಮ ಟ್ರೈನಿಂಗ್ ಸಮಯದಲ್ಲಿ ನಾವು ಹಾಕುತ್ತಿದ್ದ ಗ್ರೇ ಬಣ್ಣದ ಶರ್ಟು ನನ್ನ ತಲೆಯಲ್ಲಿ ಎಷ್ಟು ನಿಂತಿತ್ತೆಂದರೆ ನಾನು ಮತ್ತೊಮ್ಮೆ ಆ ಕಲರ್ ಷರಟು ಕೊಂಡುಕೊಳ್ಳಲಿಲ್ಲ! ನನ್ನ ಕೆಲವು ಸಹೋದ್ಯೋಗಿಗಳು ನನ್ನನ್ನು ಬೈಯುತ್ತಿದ್ದರು. ಏಕೆಂದರೆ ನಾನು ಅವರನ್ನು ಅವರ ಬೇರೆ ಉಡುಪುಗಳಲ್ಲಿ ಕಂಡು ಹಿಡಿಯಲು ವಿಫಲನಾಗುತ್ತಿದ್ದೆ! ‘ಸಾರಿ, ನೀನು ಯೂನಿಫಾರಂ ಹಾಕಿಲ್ಲ ನೋಡು, ಅದಕ್ಕೇ ನನಗೆ ಗುರ್ತು ಸಿಗಲಿಲ್ಲ’ ಎಂದು ಕುರಿಯಂತೆ ನಗುತ್ತಿದ್ದೆ. ಹ್ಞಾಂ... ಒಂದು ಘಟನೆ ಎಂದೆನಲ್ಲಾ... ನನ್ನನ್ನು ಸೇಲ್ಸ್ ಡಿಪಾರ್ಟ್‍ಮೆಂಟಿನ ಬಿ.ಎಸ್. ಜಗನ್ನಾಥ್ ಕರೆಸಿದರು. ಕಳೆದ ಒಂದು ವರ್ಷ ಎಂದೂ ಅಲ್ಲಿಗೆ ಹೋಗಿರಲಿಲ್ಲ ನಾನು. ಬಿಎಸ್‍ಜೆ ನನಗೆ, ‘ನಿನ್ನನ್ನು ನಮ್ಮ ಡಿಪಾರ್ಟ್‍ಮೆಂಟ್‍ಗೆ ಅಪಾಯಿಂಟ್ ಮಾಡಿಕೊಳ್ಳಬೇಕೆಂದಿದ್ದೇವೆ. ಯಾವಾಗ ನಿನಗೆ ಅಪಾಯಿಂಟ್‍ಮೆಂಟ್ ಆರ್ಡರ್ ಬರುವುದೋ ಆಗ ಬಂದು ಸೇರು’ ಎಂದರು. ನನಗೆ ತಬ್ಬಿಬ್ಬು, ಖುಷಿ ಎಲ್ಲಾ. ಅಬ್ಬಾ, ತರಬೇತಿ ಮುಗಿದ ನಂತರ ಸಧ್ಯ, ಕೆಲಸ ಸಿಗಲಿದೆ ಎಂದುಕೊಂಡೆ. ಫೆಬ್ರುವರಿ 7 1983ರಂದು ಟ್ರೈನಿಂಗ್ ಮುಗಿದುಹೋಯಿತು. ಕೆಲವು ಸಹೋದ್ಯೋಗಿಗಳ ಜೊತೆ ಒಂ...

ಯತಿ ಸ್ವಂತೀ -207

26-07-2018 “ನಿನಗೆ ಟ್ರೈನಿಂಗ್ ಪಡೆಯಲು ರಹದಾರಿ ಪತ್ರ ಸಿಕ್ಕಿದೆ” ಎಂಬ ಪತ್ರ ಮನೆಗೆ ಬಂದಿತು. ಖುಷಿಯೋ ಖುಷಿ. 650 ರೂಗಳ ಸಂಬಳ... ಉಹೂಂ ಸ್ಟೈಪಂಡ್! ಈ ನಡುವೆ ನಾನು ಮೈಸೂರು ಬಿಟ್ಟು ಬರುವಾಗ ದಾಸ್‍ಪ್ರಕಾಶ್ ಹೊಟೇಲ್‍ನಲ್ಲಿ ನನಗೆ ನನ್ನ ಹನ್ನೆರಡು ಗೆಳೆಯರು ಸೆಂಡಾಫ್ ನೀಡಿದರು. ಒಂದು ಪಟ ತೆಗೆಸಿಕೊಂಡೆವು. ಅದೊಂದು ಚರಿತ್ರಾರ್ಹ ಪಟ. ಏಕೆಂದರೆ ಈಗ ಅದರಲ್ಲಿನ ಮೂವರು ಇಲ್ಲ... ಎಲ್ಲರಿಗೂ ಪತ್ರ ಬರೆಯುತ್ತಿದ್ದೆ. ಎಲ್ಲರೂ ಉತ್ತರ ಬರೆಯುತ್ತಿದ್ದರು. ಆಗಿನ್ನೂ ನಾನು ನನ್ನ ಮೊದಲ ಕೆಲಸಕ್ಕೂ ಸೇರಿರಲಿಲ್ಲ. ಪೋಸ್ಟ್‍ಮ್ಯಾನ್ ನಗುತ್ತಿದ್ದ. ಯತಿರಾಜ್ ಎನ್ನುವ ಹೆಸರಿನ ಕಾಗದ ಬೇರೆ ಯಾವುದೋ ಬ್ಲಾಕ್‍ನದೂ ಇದ್ದರೂ ನನಗೇ ತಂದು ಒಪ್ಪಿಸುತ್ತಿದ್ದ. ಅಂತೂ ಅದೊಂದು ಗೋಲ್ಡನ್ ಎಕ್ಸ್‍ಪೀರಿಯೆನ್ಸ್. ದುರದೃಷ್ಟವಶಾತ್ ಆ ಪತ್ರಗಳು ಇಂದು ನನ್ನ ಬಳಿ ಇಲ್ಲ. ಹೂಂ. ಸ್ಟೈಪಂಡ್ ಸಿಕ್ಕಿತು. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯ ಟ್ರೈನಿಂಗ್ ಸೆಂಟರ್‍ಗೆ ಡಾರ್ಕ್ ಗ್ರೇ ಬಣ್ಣದ ಸಮವಸ್ತ್ರ. ಪ್ಯಾಂಟಿನ ಕಲರ್ ಕಡ್ಡಾಯವಿರಲಿಲ್ಲ. ಆದರೆ ಇನ್‍ಸರ್ಟ್ ಮಾಡಬೇಕು. ನನಗಂತೂ ಅದು ಅಭ್ಯಾಸವೇ ಇರಲಿಲ್ಲ. ಈಗ ವಿಧಿಯಿಲ್ಲ. ವಿಂಗ್ ಕಮ್ಯಾಂಡರ್ ಒಬ್ಬರು ನಮ್ಮ ಟ್ರೈನಿಂಗ್ ಮ್ಯಾನೇಜರ್. ಸ್ಮಿತ್ತಿ, ಲೇತ್‍ವರ್ಕ್, ಕಾರ್ಪೆಂಟರಿ ಕಲಿಸಿದರು. ಜೊತೆಗೆ ಲೆಕ್ಚರ್‍ಗಳು ಬಹಳವೇ ಇರುತ್ತಿದ್ದವು. ಕಂಪೆನಿಯ ದೊಡ್ಡ ಅಧಿಕಾರಿಗಳು ಮತ್ತು ಹೊರಗಿನಿಂದ ಬಂದವರೂ ಭಾಷಣ ಮಾಡುತ್ತಿದ್ದರು...

ಯತಿ ಸ್ವಂತೀ -206

25-07-2018 ಈ ಕಂಪೆನಿಯಲ್ಲಿ ನಾನು ಮಾತನಾಡುವುದನ್ನು ಕಲಿತುಕೊಂಡೆ. ಅದಕ್ಕೆ ಮೊದಲು ನೆಂಟರು, ಗೆಳೆಯರು, ಮೇಷ್ಟರು, ಮೇಡಮ್ಮುಗಳು, ಸಿನಿಮಾ ಟಿಕೆಟ್ ಕೌಂಟರ್ ಮನುಷ್ಯರು, ಲೇಟಾಗಿ ಸಿನಿಮಾಗೆ ಹೋದರೆ ‘ಶುರುವಾಗಿ ಎಷ್ಟೊತ್ತಾಯ್ತು?’ ಅಂತ ಪಕ್ಕದವರನ್ನು ಕೇಳೋದು ಬಿಟ್ಟರೆ ಸಂಪೂರ್ಣ ಅಪರಿಚತರನ್ನು ಮಾತಾಡಿಸಿದ್ದೇ ಇಲ್ಲ. ಈಗ ತ್ರಿವೇಂದ್ರಂ, ಸುಳ್ಳೂರು ಪೇಟ, ಕೆ.ಜಿ.ಎಫ್ ಊರುಗಳಲ್ಲಿ ಮಾತ್ರವಲ್ಲದೆ ಇಡೀ ಬೆಂಗಳೂರಿನಲ್ಲಿ ಸೈಕಲ್‍ನಲ್ಲಿ ಓಡಾಡಿ ಭಾವೀ ಗ್ರಾಹಕರನ್ನು ಹಿಡಿಯುತ್ತಿದ್ದೆ. ಇದು ನನಗೆ ಮಾತು ಕಲಿಸಿತು, ಬೆಂಗಳೂರಿನ ನಕ್ಷೆ ಪರಿಚಯಿಸಿತು. ಈಗಲೂ ನನಗೆ ಹೆಚ್ಚು ಕಡಿಮೆ ಹಳೆಯ ಬೆಂಗಳೂರು ಚೆನ್ನಾಗಿ ಪರಿಚಯ ಇದೆ. ಬಹುಶಃ ನನಗೆ ಇಂದಿಗೂ ತಿಳಿಯದಿರುವ ಜಾಗಗಳೆಂದರೆ ಫ್ರೇಜರ್ ಟೌನ್, ಬೆನ್ಸನ್ ಟೌನ್ ಇತ್ಯಾದಿಗಳು. ಹೋಗಿಲ್ಲವೆಂತಲ್ಲ, ಹೆಚ್ಚು ಸಲ ಹೋಗಿಲ್ಲ. ಈ ಕೆಲಸವು ಒಂದು ವರ್ಷದೊಳಗೆ ಬೋರ್ ಹೊಡೆಸಿತು. 300 ರೂಪಾಯಿ ಮಾತ್ರವೇ ಸಂಬಳ ಎಂದೂ ಇರಬಹುದು. ಆಗೆಲ್ಲಾ ಒಬ್ಬ ಇಂಜಿನಿಯರಿಂಗ್ ಪದವೀಧರನಿಗೆ ಎಷ್ಟು ಸಂಬಳ ಕೊಡುತ್ತಿದ್ದರೆಂಬುದನ್ನು ತಿಳಿಯುವುದೂ ಕಷ್ಟವಿತ್ತು. ಕೆಲವರು ವಯಸ್ಸಾದವರು ಮುಲಾಜಿಲ್ಲದೆ, “ಎಷ್ಟು ನಿಂಗೆ ಸಂಬ್ಳ?” ಅಂತಾರೆ. ನನಗೆ ಹಾಗೆ ಕೇಳಲು ಬರೋದಿಲ್ಲ.  ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಗ್ರ್ಯಾಜುಯೇಟ್ ಇಂಜಿನಿಯರ್ ಟ್ರೈನೀ ಪೋಸ್ಟ್‍ಗೆ ಅಪ್ಲೈ ಮಾಡು ಎಂದರು ನನ್ನ ಅಂಕಲ್. ಅವರೀಗ ಮತ್ತೆ ಬೆಂಗಳೂರಿನಲ್...

ಯತಿ ಸ್ವಂತೀ -205

24-07-2018 ಆಗೆಲ್ಲಾ ಕಂಪ್ಯೂಟರ್ ಇರಲಿಲ್ಲ. ನಾನೇ ನಮ್ಮ ಬೆಂಗಳೂರು ಕಂಪೆನಿಯ ಪರಿಚಯ ಪತ್ರವನ್ನು ಟೈಪ್‍ರೈಟರ್‍ನಲ್ಲಿ ಟೈಪ್ ಮಾಡಿಕೊಂಡು ಜೊತೆಗೆ ಪ್ರಾಡಕ್ಟ್ ಕೆಟಲಾಗ್ ಲಗತ್ತಿಸಿ ಭಾವೀ ಗ್ರಾಹಕರಿಗೆ ಕೊಟ್ಟು ಬರುತ್ತಿದ್ದೆ. ಯಾವುದಾದರೂ ಕಂಪೆನಿಗೆ ಹೋದಾಗ “ನಾನು ಯತಿರಾಜ್, ಜೈಭಾರತ್ ಇಂಡಸ್ಟ್ರೀಸ್ ಕಲ್ಕತ್ತಾದಿಂದ ಬರ್ತಿದ್ದೀನಿ” ಎಂದೊಡನೆ ಒಳಗೆ ಸೇರಿಸುತ್ತಿದ್ದರು. ಆಮೇಲೆ ನಾನು ಕಲ್ಕತ್ತಾ ಕಂಪೆನಿಯ ಬೆಂಗಳೂರು ಪ್ರತಿನಿಧಿ ಎನ್ನುತ್ತಿದ್ದೆ! ಈ ಟ್ರಿಕ್ ಚೆನ್ನಾಗಿ ಕೆಲಸ ಮಾಡಿತು. ಇಲ್ಲಿದ್ದಾಗಲೇ ನಾನು ಬಿ.ಇ.ಎಮ್.ಎಲ್, ಕೋಲಾರ್ ಗೋಲ್ಡ್ ಫೀಲ್ಡ್ಸ್‍ಗೆ ಹೋಗಲಾರಂಭಿಸಿದೆ. ಬೆಳಗ್ಗೆ ಬೇಗ ಹೊರಟು ಜಯನಗರದಿಂದ ಬೆಂಗಳೂರು ರೈಲ್ವೇ ಸ್ಟೇಷನ್ ತಲುಪಿ (ಈಗಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಆರು ಹತ್ತಕ್ಕೆ ಹೊರಡುತ್ತಿದ್ದ ಕುಪ್ಪಂ ಪ್ಯಾಸೆಂಜರ್ ಹತ್ತುತ್ತಿದ್ದೆ. ಕೆ.ಜಿ.ಎಫ್. ರೈಲು ನಿಲ್ದಾಣ ತಲುಪಿ ಅಲ್ಲಿಂದ ನಡೆದು ನನ್ನ ಸಹಪಾಠಿ ಮಿಸ್. ವಿಜಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ಅವರ ಮನೆಯವರೆಲ್ಲಾ ಆದರಿಸುತ್ತಿದ್ದರು. ವಿಜಯ ನನ್ನ ಐದು ವರ್ಷಗಳ ಇಂಜಿನಿಯರಿಂಗ್ ಸಹಪಾಠಿ. ನನ್ನ ದೊಡ್ಡ ತಂಗಿಗೂ, ವಿಜಯಾಗೂ ಒಂದಿಷ್ಟು ಗೆಳೆತನ ಬೆಳೆದಿತ್ತು. ವಿಜಯ ಕೆ.ಇ.ಬಿ.ಗೆ ಅಪ್ಲೈ ಮಾಡಿದ್ದರೆಂದು ನೆನಪು. ವಿಜಯಾ ಮನೆಯಲ್ಲಿ ಆಕೆಯ ಅಮ್ಮ ಮಾಡಿದ ರುಚಿಯಾದ ತಿಂಡಿ ತಿಂದು (ಒಂದು ವರ್ಷದಲ್ಲಿ ಅನೇಕ ಸಲ ಹೋಗಿದ್ದೇನೆ) ನಂತರ  ಅಲ್ಲಿಂದ ಬಸ್ ಹ...

ಯತಿ ಸ್ವಂತೀ -204

23-07-2018 ಒಮ್ಮೆ ನನ್ನ ಸಹಪಾಠಿಗಳ ಜೊತೆಗೆ ಬೆಳಗ್ಗೆ ಏಳೂವರೆಗೆ ಗಣೇಶ ಟಾಕೀಸ್‌ನಲ್ಲಿ ಚಾರ್ಲಿ ಚಾಪ್ಲಿನ್ ಸಿನಿಮಾ ದ ಗೋಲ್ಡ್ ರಶ್ ನೋಡಲು ಹೋದೆ. ಹೊಟ್ಟೆ ತುಂಬಾ ನಕ್ಕ ನಂತರ ಅವರನ್ನು ನನ್ನ ದೊಡ್ಡಮ್ಮನ ಮನೆಗೆ ಕರೆದುಕೊಂಡು ಬಂದೆ. ಔತಣ ಮಾಡಿದರು ದೊಡ್ಡಮ್ಮ. ಅಂದು ನಾವೆಲ್ಲರೂ ನಮಗೆ ಬರುವ ಹಾಡು ಹೇಳಿದೆವು. ಕೆಲವು ದಿನಗಳ ನಂತರ ಬೆಂಗಳೂರಿಗೆ ಬಂದೆ. ಕೈಗೆ ಪದವಿ ಬಂತು. ಸೆಕೆಂಡ್ ಕ್ಲಾಸ್! ಕೆಲಸದ ಬೇಟೆ ಶುರು ಆಯಿತು. ನನ್ನ ಹಿರಿಯರೊಬ್ಬರು ಸಲಹೆ ನೀಡಿದರು. 'ನೀನೇ ಕೆಲಸ ಹುಡುಕಿಕೊ. ಅವಮಾನ, ನಿರಾಕರಣ ಎಲ್ಲ ಅಭ್ಯಾಸ ಆಗಬೇಕು ಜೀವನದಲ್ಲಿ' ಎಂದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವಾಂಟೆಡ್ ಕಾಲಂ ನೋಡತೊಡಗಿದೆ. ಒಂದು ದಿನ ಒಂದು ಜಾಹೀರಾತು ನೋಡಿದೆ. ವಾಂಟೆಡ್ ಸೇಲ್ಸ್ ಇಂಜಿನಿಯರ್. ಫೋನ್ ನಂಬರ್ ಇತ್ತು. ಫೋನ್ ಮಾಡಿದೆ. ಬಾ ಎಂದರು. ಎನ್ನಾರ್ ಕಾಲೋನಿ ಎರಡನೇ ಮುಖ್ಯ ರಸ್ತೆಯಲ್ಲಿ ಇತ್ತು ಒಂದು ಮನೆ. ಅದರ ಮುಂದಿನ ರೂಂ ಆಫೀಸ್. ನನ್ನ ಇಂಟರ್ವ್ಯೂ ಮಾಡಿದರು ಹರಿ ಎನ್ನುವ ಮಾಲೀಕರು. 300 ರೂಪಾಯಿ ಸಂಬಳ. ವಾಹ್... ಅದು 1980. ಖುಷಿ ಆಯಿತು. ಮರುದಿನ ಬೆಳಗ್ಗೆ ಅಮ್ಮ ಚಪಾತಿ ಮಾಡಿ ಕೊಟ್ಟರು. ಅದರ ಬುತ್ತಿ ಕಟ್ಟಿಕೊಂಡು ಹೊರಟೆ. ಮೊದಲ ಕೆಲಸ! ಅನೇಕ ಬ್ರೋಶರ್‌ಗಳನ್ನು ಓದಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಉತ್ಪಾದನೆ ಆಗುವ ಇಂಜಿನಿಯರಿಂಗ್ ವಸ್ತುಗಳ ಮಾರಾಟ ದಕ್ಷಿಣ ಭಾರತದಲ್ಲಿ. ಓಹ್ ಮತ್ತೆ ಸುತ್ತಾಟ...

ಯತಿ ಸ್ವಂತೀ -203

೨೨-೦೭-೨೦೧೮ ಬಾಂಬೆಯಲ್ಲಿ ಒಂದು ದಿನವಿದ್ದು ನಂತರ ರಾತ್ರಿ ಸಿಕಂದರಾಬಾದ್‍ಗೆ ರೈಲು ಹಿಡಿದೆವು. ಸಿಕಂದರಾಬಾದ್‍ನಲ್ಲಿ ನಮಗೆ ನೋಡಲು ಅನೇಕ ಸ್ಥಳಗಳಿದ್ದವು. ಬಿರ್ಲಾ ಮಂದಿರ್‍ಗೆ ಹೋದೆವು. ಬೆಟ್ಟದ ಮೇಲಿನ ವೇಂಕಟೇಶ್ವರ. ಸಾಲಾರ್‍ಜಂಗ್ ಮ್ಯೂಸಿಯಂ ನೋಡಿದೆವು. ಎಂತಹ ಅದ್ಭುತ ಸಂಗ್ರಹ ಅನೇಕಾನೇಕ ವಸ್ತುಗಳದ್ದು. ಒಂದು ಗಡಿಯಾರ, ಅಮೃತಶಿಲೆಯ ಪುರುಷ ಮತ್ತು ಸ್ತ್ರೀ ಬೆನ್ನು ಬೆನ್ನಿಗೆ ಅಂಟಿಕೊಂಡಿದ್ದ ವಿಗ್ರಹ ಇಂದಿಗೂ ನೆನಪಿದೆ. ಇಲ್ಲಿ ಬಾಲಚಂದ್ರನಿಗೆ ಆರೋಗ್ಯ ಕಮ್ಮಿಯಾಯಿತು. ಅವನನ್ನು ನೋಡಿಕೊಳ್ಳಲು ಕಲ್ಪನಾ ನಿಂತಳು. ಬಾಂಬೆಯಲ್ಲಿ ಆರೋಗ್ಯ ತಪ್ಪಿದ್ದ ಬಾಲಕೃಷ್ಣನ ಗೊಣಗೊಣ ಕೇಳಿಸಿತ್ತು. ‘ಛೇ, ನಂಗೆ ಉಷಾರಿಲ್ಲ ಅಂದ್ರೆ ನನ್ನ ನೋಡ್ಕೊಳ್ಳೋಕ್ಕೆ ಯತಿ, ಪ್ರಸನ್ನ. ಬಾಲಚಂದ್ರನಿಗೆ ಹುಡುಗೀನಾ ಅಂತ.  ಎಲ್ಲರೂ ನಕ್ಕೆವು. ಬಹಳವೇ ಕಾಮಿಕಲ್ ಮಾತುಗಳನ್ನು ಆಡುತ್ತಿದ್ದ ಬಾಲಕೃಷ್ಣ. ಅವನು ಕೂಡ ಐದನೇ ವರ್ಷಕ್ಕೆ ಹಾಸನದಿಂದ ನಮ್ಮ ಕಾಲೇಜಿಗೆ ಬಂದವನು. ಬೆಂಗಳೂರಿನಲ್ಲಿ ಸ್ವಾಗತ್ ಥಿಯೇಟರ್‍ನಲ್ಲಿ ಜಾನ್ವರ್ ಎಂಬ ಶಮ್ಮಿಕಪೂರ್ ಸಿನಿಮಾಗೆ ಹೋದೆವು. ಅದರಲ್ಲಿ ಮೆರಿ ಮೊಹಬ್ಬತ್ ಜವಾ ರಹೀಹೈ ಎನ್ನುವ ರಫಿ ಹಾಡನ್ನು ನೋಡಿ, ‘ಏ ಖುಫ್ರಿ!’ ಎಂದು ಎಲ್ಲರೂ ಕಂಡುಹಿಡಿದೆವು. ಟೂರ್‍ನಲ್ಲಿ ಕೂಡ ಶಿಮ್ಲಾದಲ್ಲಿ ರಾಜೇಶ್‍ಖನ್ನಾ, ರೇಖಾ, ಮೌಸಮಿ ಅಭಿನಯದ ಪ್ರೇಂ ಬಂಧನ್ ನೋಡಿದ ನೆನಪು. ಚಂಡೀಗಢದಲ್ಲಿ ಸ್ವರ್ಗ್ ನರಕ್ ನೋಡಿದ ಜ್ಞಾಪಕ. ಕಾಲೇಜಿಗೆ ಮರಳಿದಾಗ ಮೇಷ್ಟರ...

ಯತಿ ಸ್ವಂತೀ -202

21-07-2018 ಆಗ್ರಾದ ರೈಲ್ವೇ ಸ್ಟೇಷನ್ನಿನಲ್ಲಿ ಒಂದು ದೊಡ್ಡ ಕ್ಯೂ. ಅಲ್ಲಿನ ಟಾಯ್ಲೆಟ್‍ಗಳ ಮುಂದೆ. ನಮ್ಮ ಇಡೀ ತಂಡದ ಬಹುತೇಕ ಸದಸ್ಯರದು! ಅದಕ್ಕೆ ಕಾರಣ ಉಂಟು. ತಾಜ್‍ಮಹಲ್ ನೋಡಿ, ಸಂಜೆ ಯಾವುದೋ ಒಂದು ಹೊಟೇಲ್‍ಗೆ ಹೋದೆವು. ಅಲ್ಲಿ ಅನ್ನ ಕಂಡು ಎಂತಹ ಖುಷಿ ಆಯಿತೆಂದರೆ ಎಲ್ಲರೂ ತಿಂದಿದ್ದೂ ತಿಂದಿದ್ದೇ! ಬಹುಶಃ ಅಷ್ಟೊಂದು ಜನ ಒಟ್ಟಿಗೆ ಅನ್ನ ಕೇಳುವವರು ಇಷ್ಟು ದಿನ ಆ ಹೊಟೇಲ್‍ಗೆ ಬಂದೇ ಇರಲಿಲ್ಲವೇನೋ! ತಾಂಬಾಣದಲ್ಲಿ ತಂದು ಅಕ್ಷರಶಃ ಅನ್ನವನ್ನು ನಮ್ಮ ತಟ್ಟೆಗಳಿಗೆ ತಳ್ಳುತ್ತಿದ್ದರು ಮಾಣಿಗಳು. ಅರೆ ಬೆಂದ ಅನ್ನವೋ ಏನೋ... ತಿನ್ನುವಾಗ ನಮಗೆ ತಿಳಿಯಲಿಲ್ಲ. ನಂತರ ಹೊಟ್ಟೆನೋವು. ರೈಲ್ವೇ ಸ್ಟೇಷನ್ನಿನ ಟಾಯ್ಲೆಟ್‍ಗಳ ಮುಂದೆ ಕ್ಯೂನಲ್ಲಿದ್ದೆವು. ರಾತ್ರಿ ಆಗ್ರಾ ಬಿಟ್ಟು ಬೆಳಗ್ಗೆ ಭೋಪಾಲಕ್ಕೆ ಬಂದೆವು. ಈ ಊರಿಗೆ ನಂತರ ಒಂದೆರಡು ಸಲ ಹೋದ ನೆನಪಿದೆ. ಸುಂದರವಾದ ಲೆಯ್ಡ್‍ಬ್ಯಾಕ್ ಸಿಟಿ. ಮಧ್ಯಪ್ರದೇಶದ ರಾಜಧಾನಿ. ಅಲ್ಲಿ ನಾವು ಒಂದು ಇಂಡಸ್ಟ್ರೀ ವ್ಹಿಜಿಟ್ ಮಾಡಿದೆವು. ಬಿ.ಎಚ್.ಇ.ಎಲ್‍ನಲ್ಲಿ ದೊಡ್ಡ ದೊಡ್ಡ ಜನರೇಟರ್‍ಗಳ ತಯಾರಿಕೆಯನ್ನು ನಾನಾ ಹಂತಗಳಲ್ಲಿ ಕಂಡೆವು. ಇಲ್ಲಿ ತಯಾರಿಸಲ್ಪಟ್ಟ ಎರಡು ಜನರೇಟರುಗಳು ನಮ್ಮ ಶರಾವತಿಯ ಆನೆಬೈಲು ಸೈಟ್‍ನಲ್ಲಿ ಇದ್ದದ್ದು ನೆನಪಾಯಿತು. ಬಿ.ಎಚ್.ಇ.ಎಲ್ ಬಿಟ್ಟರೆ ಆ ಊರಲ್ಲಿ ಇದ್ದ ಒಂದು ಕೆರೆಯನ್ನು ನೋಡಿದ ನೆನಪು. ರಾತ್ರಿ ಅಲ್ಲಿಂದ ರೈಲು ಹಿಡಿದು ಅಮ್ಚೀ ಮುಂಬೈಗೆ ಬಂದೆವು! ಬಾಂಬೆ, ಮುಂಬೈ... ವಾಹ್! ...

ಯತಿ ಸ್ವಂತೀ -201

20-07-2018 ಆಲ್ವರ್‍ನಿಂದ ಎರಡು ಗಂಟೆಗಳ ಬಸ್ ಪ್ರಯಾಣ ಜೈಪೂರ್‍ಗೆ. ದಾರಿಯಲ್ಲಿ ಕಂಡ ಒಂದು ದೃಶ್ಯ ಬಲು ಮುದ ಕೊಟ್ಟಿತು.  ನಮ್ಮೂರಲ್ಲಿ ಹಿಂದೆ ಗುಬ್ಬಿಗಳು, ಈಗ ಕಾಗೆಗಳು, ಪಾರಿವಾಳಗಳು ರಸ್ತೆಯಲ್ಲಿ ಓಡಾಡುವ ಹಾಗೆ, ಹಿಂಡು ಹಿಂಡು ನವಿಲುಗಳನ್ನು ನೋಡಿದ್ದು ಇಂದಿಗೂ ನೆನಪು. ಕೊನೆಗೂ ಜೈಪೂರ್ ಸೇರಿದೆವು. ಅಲ್ಲಿ ಒಂದು ಕಿತ್ತಳೆ ಬಣ್ಣದ ಕೋಟೆ. ಹೆಸರು ಪಿಂಕ್ ಸಿಟಿ. ಗುಲಾಬಿ ನಗರ. ಆದರೆ ಕಿತ್ತಳೆ/ಕೇಸರಿ ಬಣ್ಣಗಳ ಬೆರಕೆಯ ಬಣ್ಣವನ್ನು ಬಳಿದಿದ್ದರು. ಬಣ್ಣಬಣ್ಣದ ಲಂಗ, ದಾವಣಿಯ ಹೆಂಗಸರು, ಬಿಳಿಯ ಕಚ್ಚೆ, ಜುಬ್ಬಾ ಧರಿಸಿದ, ಬಣ್ಣಬಣ್ಣದ ಪಗಡಿ ಧರಿಸಿದ ಗಂಡಸರು ಕಂಡರು. ಪಗಡಿ ಎನ್ನುವುದು ಹೆಚ್ಚು ಕಡಿಮೆ ಒಂದು ಪಂಚೆಯಷ್ಟು ದೊಡ್ಡ ಪೇಟ. ಅಂಬರ್ (ಅಮೇರ್) ಪ್ಯಾಲೇಸ್ ಬೆಟ್ಟದ ಮೇಲಿತ್ತು. ಅದನ್ನು ದರ್ಶಿಸಿದೆವು. ನಂತರ ಅಲ್ಲೊಂದು ಕಡೆ ತರಕಾರಿ ವರ್ಣಗಳನ್ನು ಬಳಸಿ ಸೀರೆಗಳ ಮೇಲೆ ಪ್ರಿಂಟ್ ಮಾಡುವುದನ್ನು ಕಂಡೆವು.  ಜೈಪೂರ್‍ನಲ್ಲಿ ಟೈ ಆ್ಯಂಡ್ ಡೈ ಸೀರೆಗಳು ಮಾಡಲ್ಪಡುತ್ತವೆ. ಜಗತ್ಪ್ರಸಿದ್ಧ ಇವು. ಒಂದು ವಿಶಿಷ್ಟ ರೀತಿಯಲ್ಲಿ ಈ ಸೀರೆಗಳನ್ನು ತಯಾರಿಸುತ್ತಾರೆ. ಬಿಳಿಯ ಸೀರೆಯ ಮೇಲೆ ದಾರ ತೆಗೆದುಕೊಂಡು ಅಲ್ಲಲ್ಲಿ ಸೀರೆಗೆ ಗಂಟುಗಳನ್ನು ಹಾಕುತ್ತಾರೆ. ನಂತರ ಆ ಸೀರೆಯನ್ನು ಬಣ್ಣದಲ್ಲಿ ಅದ್ದುತ್ತಾರೆ. ನಂತರ ಸೀರೆಯನ್ನು ಒಣಗಿಸಿ, ಆ ದಾರಗಳನ್ನು ತೆಗೆದರೆ ಅಲ್ಲೆಲ್ಲಾ ಬಿಳಿ ಬಿಳಿಯ ಚೌಕಗಳು ಉಳಿದುಕೊಳ್ಳುತ್ತವೆ. ಸೀರೆಗಳನ್ನು ರೇಷ್ಮೆ...

ಯತಿ ಸ್ವಂತೀ -200

19-07-2018 ಡೆಹ್ರಾಡೂನ್‍ಗೆ ಬಂದವರು ತೀರ್ಥಯಾತ್ರೆ ಮಾಡಿದೆವು ಎಂದರೆ ಅಚ್ಚರಿಯಾಗುತ್ತದೆ. ಡೆಹ್ರಾಡೂನ್ ಹತ್ತಿರ ಇದ್ದ ಮಸ್ಸೂರಿಗೆ ನಾವು ಹೋಗಲೇ ಇಲ್ಲ! ಬೆಳಗ್ಗೆ ಬಸ್ ಹಿಡಿದು ಹರಿದ್ವಾರಕ್ಕೆ ಹೋದೆವು. ಹೃಷೀಕೇಶಕ್ಕೆ ಹೋದೆವು. ಲಚ್‍ಮನ್ ಝೂಲಾ ಮೇಲೆ ನಡೆದೆವು. ಗಂಗಾ ನದಿಯು ಇಲ್ಲಿ ಮೋಟರ್ ಬೋಟಿನಂತೆ ವೇಗವಾಗಿ ಹರಿಯುತ್ತದೆ. ನೀರಿಗೆ ಇಳಿಯಲು ಸಾಧ್ಯವೇ ಇಲ್ಲ. ಅದಕ್ಕೇ ದಂಡೆಯಲ್ಲಿ ಸರಪಳಿಗಳನ್ನು ಒಂದು ಕಡೆ ಕಟ್ಟಿದ್ದಾರೆ. ಅದನ್ನು ಹಿಡಿದು ನೀರಿಗಿಳಿದು ಒಂದು ಮುಳುಗು ಹಾಕಬಹುದು ಅಷ್ಟೇ. ನಮ್ಮ ಹುಡುಗರಂತೂ ಜಲದಲ್ಲಿ ಜಳಕ ಮಾಡುತ್ತಿರುವ ‘ಜನ’ರನ್ನು ಕಂಡು ಕಣ್ತುಂಬಿಕೊಂಡರು! ನಂತರ ಅಲ್ಲಿಯೇ ಇದ್ದ ಯೋಗಾ ಸೆಂಟರ್‍ಗೆ ಹೋದೆವು. ಹೋಗುವ ಮುನ್ನ ಸುಮಾರು ನೂರು ರೂಪಾಯಿಗಳಿಗೆ ಐದು ಪೈಸೆಗಳನ್ನು ಪಡೆದ ನೆನಪು. ಆ ಯೋಗಾ ಸೆಂಟರ್‍ನಲ್ಲಿ ನಾಲ್ಕೈದು ಮಹಡಿಗಳು. ಒಂದೊಂದು ಮಹಡಿಯಲ್ಲಿ ಅನೇಕಾನೇಕ ದೇವರ ವಿಗ್ರಹಗಳು. ಎಲ್ಲದರ ಮುಂದೆಯೂ ಹಣವನ್ನು ಇಡುತ್ತಾ ಹೋದೆವು. ಬಸ್ ಹಿಡಿದು ಮರಳುವಾಗ ಬಸ್‍ಕೋ ಖಡೋ ಖಡೋ ಎಂದು ನಮಗೆ ತಿಳಿದ ಹಿಂದಿಯಲ್ಲಿ ಕಿರುಚಿಕೊಂಡೆವು. ಎಲ್ಲರಿಗೂ ಮೂತ್ರಕ್ಕೆ ಅವಸರವಾಗಿತ್ತು. ಅಲ್ಲಿ ಹೋಗಿ ನಮ್ಮನ್ನು ನಾವು ರಿಲೀವ್ ಮಾಡಿಕೊಂಡಾಗ ಸುತ್ತಲೂ ಇದ್ದ ದಟ್ಟವಾದ ಮರಗಳನ್ನು ಕಂಡು ಬಾಲು, “ಈಗ ಗೊತ್ತಾಯ್ತು ಇಲ್ಲಿ ಯಾಕೆ ಇಷ್ಟೊಂದು ಮರ ಇದೆ ಅಂತ” ಎಂದು ಎಲ್ಲರನ್ನೂ ನಗಿಸಿದ. ಮುಂದಿನ ಊರು ದೆಹಲಿ. ಬಸ್ ಪ್ರಯಾಣ ಮಾಡಿ ದೆಹಲಿ ತಲುಪಿ...